ಹೆಚ್‌ಐವಿ ಸೋಂಕಿತರಲ್ಲಿ ಕಾನೂನಿನ ಅರಿವು, ಮಾಹಿತಿನೀಡುವುದು ಬಹಳ ಮುಖ್ಯವಾಗಿದೆ-ನ್ಯಾಪ್ರಕಾಶ ಬನಸೂಡೆ


ಬೀದರ, ಡಿಸೆಂಬರ್.3 :- ಹೆಚ್.ಐ.ವಿ ಸೋಂಕಿತರಲ್ಲಿ ಕಾನೂನಿನ ಅರಿವು, ಮಾಹಿತಿಯನ್ನು ನೀಡುವುದು ಬಹಳ ಮಹತ್ವದಾಗಿದೆ. ಆದ್ದರಿಂದ ಪ್ರತಿಯೊಬ್ಬರು ಹೆಚ್.ಐ.ವಿ ಸೋಂಕಿತರಿಗೆ ತಾರತಮ್ಯ ಮಾಡದೇ, ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಮತ್ತು ಆರೋಗ್ಯ ಸಿಬ್ಬಂದಿಯವರು ಗ್ರಾಮೀಣ ಪ್ರದೇಶದಲ್ಲಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು, ಜನರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕೆಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಬನಸೂಡೆ ಹೇಳಿದರು.


ಅವರು ಇಂದು ವಿಶ್ವ ಏಡ್ಸ್ ದಿನ ಅಂಗವಾಗಿ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ. ಅನೀಲಕುಮಾರ ಚಿಂತಾಮಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲ್ಲೆಯಲ್ಲಿ ಹೆಚ್.ಐ.ವಿ/ಏಡ್ಸ್ ಕುರಿತು ನೀಡುವ ಸೇವಾ-ಸೌಲಭ್ಯಗಳು, ಅಂಕಿ-ಅAಶ, ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಹಮ್ಮಿಕೊಳ್ಳುತ್ತಿರುವ ಐಇಸಿ ಕಾರ್ಯಕ್ರಮಗಳ ಕುರಿತು, ಎನ್‌ಜಿಒ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.


ಕ್ಷಯರೋಗ ನೋಡಲ್ ಅಧಿಕಾರಿಗಳಾದ ಡಾ. ಮಹೇಶ ತೋಂಡಾರೆ ಮಾತನಾಡಿ, 2024ರ ಘೋಷವಾಕ್ಯವಾದ – “ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ: ನನ್ನ ಆರೋಗ್ಯ, ನನ್ನ ಹಕ್ಕು” ಕುರಿತು ಹೆಚ್.ಐ.ವಿ ಸೋಂಕಿತರು ಸರಕಾರದ ವತಿಯಿಂದ ಸಿಗುವ ಆರೋಗ್ಯ ಸೇವೆಗಳನ್ನು ಯಾವುದೇ ರೀತಿಯಿಂದ ಕಳಂಕ ಮತ್ತು ತಾರತಮ್ಯವಾಗದೇ ಪಡೆಯಬೇಕು ಎಂಬುದು ಈ ವರ್ಷದ ಘೋಷವಾಕ್ಯವಾಗಿದೆಂದು ಮಾಹಿತಿ ನೀಡಿದರು. ಹಾಗೂ ರಾಷ್ಟç , ರಾಜ್ಯ ಮತ್ತು ಜಿಲ್ಲೆಯ ಪ್ರಸ್ತುತ ಹೆಚ್.ಐ.ವಿ ಸ್ಥಿತಿ-ಗತಿ ಕುರಿತು ಮಾಹಿತಿಯನ್ನು ನೀಡಿದರು.


ಬ್ರಿಮ್ಸ್ ಆಸ್ಪತ್ರೆಯ ಐಸಿಟಿಸಿ(ಎ) ಕೇಂದ್ರದ ಪ್ರಯೋಗ ಶಾಲಾ ತಂತ್ರಜ್ಞಾರಾದ ಶ್ರೀ.ಅರವಿಂದ ಕುಲಕರ್ಣಿಯವರು ಪ್ರತಿಜ್ಞಾ ವಿಧಿಯನ್ನು ಬೊಧಿಸಿದರು. ಹಾಗೂ ಡ್ಯಾಪ್ಕು ಅಡಿಯಲ್ಲಿ ಅತ್ಯುತ್ತಮವಾಗಿ ಕರ್ತವ್ಯನಿರ್ವಹಿಸಿರುವ ಬ್ರಿಮ್ಸ್ ಆಸ್ಪತ್ರೆಯ ಐಸಿಟಿಸಿ(ಎ) ಕೇಂದ್ರದ ಆಪ್ತ ಸಮಾಲೋಚಕರಾದ ವಾಣಿ, ಬ್ರಿಮ್ಸ್ ಆಸ್ಪತ್ರೆಯ ಪಿಪಿಟಿಸಿಟಿ ಕೇಂದ್ರದ ಆಪ್ತ ಸಮಾಲೋಚಕರಾದ ಸುನೀತಾ, ಜಿಎಚ್ ಔರಾದ್(ಬಿ)ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕರಾದ ಪುಷ್ಪಾಂಜಲಿ, ಬ್ರಿಮ್ಸ್ ಆಸ್ಪತ್ರೆಯ ಐಸಿಟಿಸಿ(ಎ) ಕೇಂದ್ರದ ಪ್ರಯೋಗ ಶಾಲಾ ತಂತ್ರಜ್ಞಾರಾದ ಅರವಿಂದ ಕುಲಕರ್ಣಿ, ಜಿಎಚ್ ಬಸವಕಲ್ಯಾಣ ಐಸಿಟಿಸಿ ಕೇಂದ್ರದ ವಿಶ್ವನಾಥರವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿಕ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.


ಹೆಚ್.ಐ.ವಿ ಸಮುದಾಯಕ್ಕೆ ಬೆಂಬಲ ನೀಡಿರುವ ಮ/ಎಸ್ ಶ್ರೀವನ ಫಾರ್ಮಾ ಬೀದರನ ಚಿಫ ಪ್ರಮೋಟರ್ ಮತ್ತು ಡೈರೆಕ್ಟರ್ ದೇವೇಂದ್ರಪ್ಪಾ ಜೆಗಪ್ಪಾ, ಎಲ್.ಬಿ.ಇ.ಎಸ್ ಎನ್‌ಜಿಒದ ಲಿಂಕ ವರ್ಕರ ಕಾರ್ಯಕ್ರಮದ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಆನಂದ ಮತ್ತು ಸಿಎಸ್‌ಸಿ ಬೆಳದಿಂಗಳು ನೆಟವರ್ಕ ಎನ್‌ಜಿಒದ ಕೋಆರ್‌ಡಿನೆಟರ್ ಸಂದೀಪಾ ಅವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿಕ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಅತ್ಯುತ್ತಮ ರೆಡ್ ರಿಬ್ಬನ್ ಕಾಲೇಜುಗಳಾಗಿ ಹುಮನಾಬಾದ್‌ನ ವೀರಭದ್ರೇಶ್ವರ ಪದವಿ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರವೀಣ ಕಲಬುರ್ಗಿ, ಬೀದರ ನಗರದ ನಾನಕ ಝೀರಾ ಸಾಹೇಬ ಕಾಲೇಜ್ ಆಫ ನರ್ಸಿಂಗ್‌ನ ಪ್ರಾಚಾರ್ಯರಾದ ಮಹಾಂತೇಶ ಮಿರ್ಜಿ, ನಗರದ ಅಕ್ಕಮಹಾದೇವಿ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಅಧಿಕಾರಿಗಳಾದ ಮೀನಾ ಗಾಯಕವಾಡರವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿಕ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತ್ತು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಧ್ಯಾನೇಶ್ವರ ನಿರಗುಡೆ ಅವರು ವಿಶ್ವ ಏಡ್ಸ್ ದಿನದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಜಾಥಾ ಕಾರ್ಯಕ್ರಮವನ್ನು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಜಾಥಾ ಪಥಚಲನಕ್ಕೆ ಚಾಲನೆಯನ್ನು ನೀಡಿದರು. ಜಾಥಾ ಕಾರ್ಯಕ್ರಮದಲ್ಲಿ ನಗರದ ಸರಕಾರಿ ಎ.ಎನ್.ಎಂ ನರ್ಸಿಂಗ್ ಕಾಲೇಜಿನ, ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ ಮತ್ತು ಸಿದ್ದಾರ್ಥ ಮಹಾವಿದ್ಯಾಲಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಡ್ಯಾಪ್ಕು ಎಲ್ಲಾ ಸಿಬ್ಬಂದಿಯವರು, ಹೆಚ್.ಐ.ವಿ ಕ್ಷೇತ್ರದಲ್ಲಿ ಕೆಸಲನಿರ್ವಹಿಸುತ್ತಿರುವ ಟಿಐ ಪ್ರವರ್ಧ, ಶರಣ ತತ್ವ, ಎಲ್‌ಬಿಇಎಸ್, ಬೆಳದಿಂಗಳು ನೆಟವರ್ಕ ಎನ್‌ಜಿಒ ಸಿಬ್ಬಂದಿಯರುವ ಪಾಲ್ಗೊಂಡಿದರು.


ಕಾರ್ಯಕ್ರಮದ ನಿರೂಪಣೆಯನ್ನು ಬ್ರಿಮ್ಸ್ ಆಸ್ಪತ್ರೆಯ ಐಸಿಟಿಸಿ(ಎ) ಕೇಂದ್ರದ ಪ್ರಯೋಗ ಶಾಲಾ ತಂತ್ರಜ್ಞಾರಾದ ಅರವಿಂದ ಕುಲಕರ್ಣಿರವರು ಮಾಡಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಜಿಲ್ಲಾ ಮೇಲ್ವಿಚಾರಕರಾದ ಶ್ರೀ.ಸೂರ್ಯಕಾಂತರವರು ನೇರವೇರಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಐಸಿಟಿಸಿ, ಎಆರ್‌ಟಿ, ಡಿಎಸ್‌ಆರ್‌ಸಿ, ಬ್ಲಡ್ ಬ್ಯಾಂಕ, ಶರಣ ತತ್ವ, ಪ್ರವರ್ಧ, ಎಲ್‌ಬಿಇಎಸ್, ಬೆಳದಿಂಗಳೂ ನೆಟವರ್ಕ, ಜಿಲ್ಲಾ ಕ್ಷಯರೋಗ ಸಿಬ್ಬಂದಿಯವರು ಹಾಗೂ ಡ್ಯಾಪ್ಕು ಕಾರ್ಯಾಲಯದ ಸಿಬ್ಬಂದಿಯವರು ಉಪಸ್ಥಿತರಿದ್ದರು.

prajaprabhat

Recent Posts

ಇತರ ಧರ್ಮಗಳಿಗೆ ಮತಾಂತರಗೊಳ್ಳುವ ಬುಡಕಟ್ಟು ಜನಾಂಗದವರಿಗೆ ಮೀಸಲಾತಿ ಹಿಂಪಡೆಯಬೇಕೆಂದು ಚಂಪೈ ಸೊರೆನ್ ಆಗ್ರಹ.

ನವದೆಹಲಿ.18.ಏಪ್ರಿಲ್.25;- ವಿವಾದಾತ್ಮಕ ಹೇಳಿಕೆಯೊಂದರಲ್ಲಿ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಚಂಪೈ ಸೊರೆನ್ ಅವರು ಬೇರೆ ಧರ್ಮಕ್ಕೆ…

1 hour ago

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ರಾಜ್ಯ ಸರ್ಕಾರಿ ನೌಕರರಿಗೆ ವಿಷೇಶ ಮಾಹಿತಿ

ಬೆಂಗಳೂರು.18.ಏಪ್ರಿಲ್.25:- ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳು  2024-25ನೇ ಸಾಲಿನ. ನಿರ್ವಹಿಸಬೇಕಾದ…

2 hours ago

ಭುಜದ ಮೇಲೆ ಸ್ವಯಂಚಾಲಿತ ರೈಫಲ್, ಪಾದಗಳ ಮೇಲೆ ಚಪ್ಪಲಿ, ಛೇದಕದ ಮಧ್ಯದಲ್ಲಿ ರಸ್ತೆಯಲ್ಲಿ ಕುಡಿದು ಬಿದ್ದಿರುವ  ವೈರಲ್ ವಿಡಿಯೊ.

ವೈರಲ್ ವಿಡಿಯೋ: ಉತ್ತರ ಪ್ರದೇಶದ ಪೊಲೀಸರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಎಚ್ಚರಿಕೆಯ ಹೊರತಾಗಿಯೂ, ಅವರ ಇಮೇಜ್ ಅನ್ನು ಸುಧಾರಿಸಲು…

3 hours ago

ಔರಾದ|ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಶ್ರೀ ಸಂಜಯ್ ಬಾನ್ಸೂಡೆ ಅವರಿಗೆ ಆಹ್ವಾ

ಔರಾದ್.18.ಏಪ್ರಿಲ್.25:- ಔರಾದ ನಗರದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸುವ ಉದ್ದೇಶದಿಂದ, ದಿನಾಂಕ 22 ಎಪ್ರಿಲ್…

4 hours ago

HOME GUARD, ಗೃಹರಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಜಿಲ್ಲೆಯ ಗೃಹರಕ್ಷಕರ ಸ್ವಯಂಸೇವಕ ಸ್ಥಾನಗಳನ್ನು ಭರ್ತಿ ಮಾಡಲು ಸಂಡೂರು, ಸಿರುಗುಪ್ಪ, ಕುರುಗೋಡು, ಕುಡುತಿನಿ, ತೆಕ್ಕಲಕೋಟೆ, ಮತ್ತು ತೋರಣಗಲ್ಲು ಘಟಕಗಳಲ್ಲಿ ಖಾಲಿ…

4 hours ago

UGC: ವರ್ಷಕ್ಕೆ ಎರಡು ಬಾರಿ ಅಡ್ಮಿಷನ್‌ಗೂ ಅವಕಾಶ, ಹೊಸ ಅಧಿಸೂಚನೆ

ವಿಶ್ವವಿದ್ಯಾಲಯ ಧನಸಹಾಯ ಅಯೋಗ್ ಅಧಿಸೂಚನೆ: ಹೊಸ ದೆಹಲಿ.18.ಏಪ್ರಿಲ್.25:- UGC: ವರ್ಷಕ್ಕೆ ಎರಡು ಬಾರಿ ಅಡ್ಮಿಷನ್‌ಗೂ ಅವಕಾಶ, ಹೊಸ ಅಧಿಸೂಚನೆ ಭಾರತದ…

6 hours ago