ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಕುರಿತು ನಿಖರವಾದ ದತ್ತಾಂಶವನ್ನು ಕಲೆಹಾಕಿ ಒಳಮಿಸಲಾತಿ ಒದಗಿಸಲು ಮನವಿ.

ಬೆಂಗಳೂರು.23.ಮಾರ್ಚ್.25: – ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಯಾಗಬೇಕೆಂದು ಹಲವು ವರ್ಷಗಳಿಂದ ಕೆಲವು ಸಂಘಟನೆಗಳು ಹೋರಾಟ ಮಾಡುತ್ತಿರುವುದು ತಮಗೆ ಗೊತ್ತು.

ಆದರೆ ಇತ್ತೀಚಿಗೆ ಒಳ ಮೀಸಲಾತಿ ಕುರಿತು ಮಾನ್ಯ ಸುಪ್ರೀಂ ಕೊರ್ಟಿನ ತೀರ್ಪಿನಂತೆ ಕೆಲವು ಗೊಂದಲಗಳ ಸೃಷ್ಟಿಯಾಗಿದ್ದು ಇದರಲ್ಲಿ ಪರಿಶಿಷ್ಟ ಜಾತಿ ಬಲಗೈ ಸಂಬಂಧಿತ ಸಮುದಾಯಕ್ಕೆ ಅನ್ಯಾಯವಾಗುತ್ತಿರುವುದನ್ನು ನಾವು ಖಂಡಿಸುತ್ತೇವೆ, ఒళ ಮೀಸಲಾತಿಯನ್ನು ಹೊಸ ಜನಗಣತಿಯನ್ನು ಮಾಡಿ ಅದರ ಮೇಲೆ ಒಳ ಮೀಸಲಾತಿ ನೀಡಬೇಕೆಂದು ಈ ಕೆಳಗಿನ ಹಕ್ಕೊತ್ತಾಯಗಳನ್ನು ಮಂಡಿಸುತಿದ್ದೇವೆ.

ಹಕ್ಕೋತ್ತಾಯಗಳು

1) ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಮತ್ತು ಶ್ರೀ ಮಾಧುಸ್ವಾಮಿ ಆಯೋಗದ ವರದಿ ಸಂಪೂರ್ಣವಾಗಿ ತಿರಸ್ಕರಿಸಿ ತೆಲಂಗಾಣ ಮಾದರಿಯಲ್ಲಿ ಶೀಘ್ರವಾಗಿ ಪರಿಶಿಷ್ಟ ಜಾತಿ ಒಳಪಂಗಡಗಳ ಮರು ಸಮೀಕ್ಷೆ ನಡೆಸಿ 101 ಜಾತಿಗಳಿಗೆ ಅನ್ಯಾಯವಾಗದಂತೆ ಒಳ ಮೀಸಲಾತಿ ಕಲ್ಪಿಸಬೇಕು.

2) ಕಲ್ಯಾಣ ಕರ್ನಾಟಕ ಭಾಗದ ಬಲಗೈ ಸಮುದಾಯಗಳಲ್ಲಿ ಪ್ರಮುಖ ಉಪಜಾತಿಗಳಾದ ಹೋಲೆಯ, ಹೊಲೆಯಾರ, ಹೊಲೆಯದಾಸರ, ಚನ್ನ ದಾಸರ, ಮತ್ತು ನವ ಬೌದ್ಧರು ಮುಂತಾದ ಉಪಜಾತಿಗಳನ್ನು ಹಿಂದಿನ ಬಿಜೆಪಿ ಸರ್ಕಾರ ನೇಮಿಸಿರುವ ಶ್ರೀ ಮಾಧುಸ್ವಾಮಿ ಆಯೋಗ ಉದ್ದೇಶ ಪೂರ್ವಕವಾಗಿ ಬಲಗೈ ಸಂಬಂಧಿತ ಸಮುದಾಯಗಳ ಜನಸಂಖ್ಯೆಯನ್ನು ಕಡಿಮೆಗೊಳಿಸಲು ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಇವರನ್ನು ಮೂಲೆ ಗುಂಪು ಮಾಡಲು ಬಲಗೈ ಸಂಬಂದಿಸಿದ ಜಾತಿಗಳನ್ನು ಮುಂದುವರೆದ ಜಾತಿಗಳ ಪಟ್ಟಿಯಲ್ಲಿ ಸೇರಿಸಿ ಘೋರ ಅನ್ಯಾಯ ಎಸೆಗಿದ್ದಾರೆ.

ಆದ್ದರಿಂದ ಶ್ರೀ ಮಾಧುಸ್ವಾಮಿ ವರದಿಯನ್ನು ತಿರಸ್ಕರಿಸಬೇಕು ಮತ್ತು 2% ಮೀಸಲಾತಿ ಹೆಚ್ಚಳವಾಗುವುದರಲ್ಲಿ 1% ಮೀಸಲಾತಿ ಬಲಗೈ ಪಂಗಡಕ್ಕೆ ನೀಡಬೇಕು.

3) ಕರ್ನಾಟಕದ ಉದ್ದಗಲಕ್ಕೂ ಹೋಲೆಯ ಸಂಬಂಧಿತ ಜಾತಿಗಳು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರಭಲವಾದಿ, ನವ ಬೌದ್ಧ, ಹೋಲೆಯ, ಮಹಾರ, ಈ ಮುಂತಾದ ಉಪಜಾತಿಗಳಲ್ಲಿ ಹಂಚಿ ಹೋಗಿದ್ದಾರೆ. ಆದುದರಿಂದ ನೇರವಾಗಿ ಹೊಲೆಯ ಅಥವಾ ಛಲವಾದಿ ಅಥವಾ ಆದಿ ಕರ್ನಾಟಕ. ಹೊಲೆಯ, ಹೊಲೆಯಾರ ಎಂದು ನಮೂದಿಸಲು ಅವಕಾಶ ಮತ್ತು ಕಾಲವಕಾಶ ಮಾಡಿಕೊಡಬೇಕು ಈ ಸಂಬಂಧವಾಗಿ ಕೆ.ಪಿ.ಎಸ್.ಸಿ ಮಾಜಿ ಸದಸ್ಯರಾದ ದಾಸಯ್ಯನವರ ಮನವಿ ಮತ್ತು ಕರ್ನಾಟಕದ ಸಂಘದ ಅಧ್ಯಕ್ಷರಾದ ಶ್ರೀ ಕೆ. ಚಂದ್ರಶೇಖರ್ ಅವರ ಮನವಿಗಳನ್ನು ಪರಿಗಣಿಸಬೇಕು.

4) ಸದಾಶಿವ ಆಯೋಗದ ವರದಿಯಲ್ಲಿ ಉಪಜಾತಿಗಳ ಹೆಸರನ್ನು ನೋಂದಾಯಿಸದೆ ಇರುವ ಸುಮಾರು ಅಂದಾಜು 6 ಲಕ್ಷ 50 ಸಾವಿರ ಜನರ ನಿಖರವಾದ ಉಪಜಾತಿಗಳ ಮರು ಸಮೀಕ್ಷೆಗೆ ಒಳಪಡಿಸಿ ನ್ಯಾಯ ಸಮ್ಮತವಾಗಿ ಮಾಹಿತಿ ಅಂಕೆ ಅಂಶ ನೀಡಬೇಕು.

5) ಕರ್ನಾಟಕ ರಾಜ್ಯಾದಂತ್ಯ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿರುವ ಮಾದಿಗ ಮತ್ತು ಇತರೆ ಉಪಜಾತಿಗಳನ್ನು ಎಸ್.ಸಿ. ಒಳ ಮೀಸಲಾತಿ ಪಟ್ಟಿಯಿಂದ ಕೈ ಬೀಡಬೇಕು.

6) ವಿಶೇಷವಾಗಿ ಬೀದ‌ರ್ ಮತ್ತು ಕಲಬುರ್ಗಿ ಹಾಗೂ ಕಲ್ಯಾಣ ಕರ್ನಾಟಕದ ಇನ್ನುಳಿದ ಜಿಲ್ಲೆಗಳಲ್ಲಿ ಭಾಗದಲ್ಲಿ ನವಬೌದ್ದರೆಂದು ವಿಶೇಷವಾಗಿ ಬೀದರ ಜಿಲ್ಲೆಯಲ್ಲೇ ಒಂದರಲ್ಲಿಯೇ 2011ರಲ್ಲಿ ಜನಗಣತಿಯಂತೆ ಸುಮಾರು ಒಂದು ಲಕ್ಷ ಹನ್ನೊಂದು ಸಾವಿರ ಜನ ನವಾಬೌದ್ದರೆಂದು ನಮೋದಿಸಿದ್ದಾರೆ. ಆದುದ್ದರಿಂದ ಈ ಎಲ್ಲಾ ಮೇಲ್ಕಂಡ ಅಂಶಗಳನ್ನು ತಾವು ಸಹನುಭೂತಿಯಿಂದ ಪರಿಶೀಲಿಸಿ 101 ಉಪಜಾತಿಗಳಲ್ಲಿ 100 ಉಪಜಾತಿಗಳು ನಮಗೆ ಅನ್ಯಾಯವಾಗಿದೆ ಎಂದು ತಮ್ಮ ಆಯೋಗಕ್ಕೆ ಅಂದಾಜು 3500 ಅರ್ಜಿಗಳು ಮೂರು ಸಾವಿರದ ಐದುನೂರಕ್ಕೂ, ಹೆಚ್ಚು ಅರ್ಜಿಗಳ ಮುಖಾಂತರ ಮನವಿ ಸಲ್ಲಿಸಿದ್ದಾರೆ ಆದರೆ ಒಂದೇ ಒಂದು ಉಪಜಾತಿಯಾದ ಮಾದಿಗ ಸಮುದಾಯವು ಯಥಾವತ್ತಾಗಿ ಒಳಮೀಸಲಾತಿ ಜಾರಿಯಾಗಬೇಕೆಂದು ಪಟ್ಟು ಹಿಡಿದಿರುವುದು ಕಾನೂನು ಬಹಿರವಾಗಿದೆ ಹಾಗೂ ಮೀಸಲಾತಿ ಜಾರಿಯಾಗಿದ್ದರಿಂದ ಅವರವರ ಶೈಕ್ಷಣಿಕ ಅರ್ಹತೆಗಳ ಮೇಲೆ ಮೀಸಲಾತಿ ಪಾಲನ್ನು ಪಡೆದಿರುತ್ತಾರೆ.

ಇಲ್ಲಿ ಯಾರು ಯಾರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಶ್ನೆಗೆ ಉದ್ಭವಿಸುವುದಿಲ್ಲ ಆದುದರಿಂದ ಈ ಬಗ್ಗೆ ಯಾವುದೇ ಒತ್ತಡಕ್ಕೆ ಮಣಿಯದೇ ತಮ್ಮ ನೇತೃತ್ವದಲ ಆಯೋಗ ಮಾನ್ಯ ಸುಪ್ರೀಂ ಕೋರ್ಟ್‌ ತೀರ್ಪಿನಂತೆ 6 ತಿಂಗಳೊಳಗಾಗಿ ನಿಖರವಾದ ಬಲಗೈ ಪಂಗಡದ ಉಪಜಾತಿಗಳ ದತ್ತಾಂಶಗಳನ್ನು ಕಲೆಹಾಕಿ ಒಳಮಿಸಲಾತಿ ಒದಗಿಸಲು ಈ ಒಕ್ಕೂಟದ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.

prajaprabhat

Recent Posts

2025-26 ಸಾಲಿನ ಪ್ರತಿಷ್ಠತ ಶಾಲೆಗಳಿಗೆ ಆಂಗ್ಲ ಮಧ್ಯಮದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವ ಕುರಿತು ಬೀದರ ಜಿಲ್ಲೆಯ ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ದ ದೂರು.

ಬೀದರ.16.ಜೂನ್.25:- ಈ ಮೇಲ್ಕಂಡ ವಿಷಯಕ್ಕೆ ಸಂಭಂದಿಸಿದಂತೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ದಲಿತ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಷ್ಠ ಶಿಕ್ಷೆಣ ಯೋಜನೆ ಅಡಿಯಲ್ಲಿ…

26 minutes ago

ಲಡಾಖ್‌ನ ಬೇಸಿಗೆ ಕಾರ್ನೀವಲ್ 2025 ಡ್ರಾಸ್‌ನಲ್ಲಿ ಅದ್ಧೂರಿ ಆಚರಣೆಯೊಂದಿಗೆ ಮುಕ್ತಾಯಗೊಂಡಿತು.

ಲಡಾಖ್‌ನಲ್ಲಿ, ಒಂದು ವಾರದ ಬೇಸಿಗೆ ಕಾರ್ನೀವಲ್ 2025 ಇಂದು ಡ್ರಾಸ್‌ನಲ್ಲಿರುವ ಮೇಜರ್ ವಿಶ್ವನಾಥನ್ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ಈ ತಿಂಗಳ 9…

15 hours ago

ಕಳೆದುಹೋದ, ಕಳುವಾದ ಮೊಬೈಲ್ ಫೋನ್‍ಗಳ ಬಗ್ಗೆ CEIR ಪೋರ್ಟಲ್‍ನಲ್ಲಿ ದೂರು ದಾಖಲಿಸಿ-ಎಸ್ಪಿ ಪ್ರದೀಪ ಗುಂಟಿ

ಬೀದರ.15.ಜೂನ್.25:- ಸಾರ್ವಜನಿಕರು ತಮ್ಮ ಮೊಬೈಲ್ ಪೋನ್‍ಗಳು ಕಳೆದುಹೋದ ಅಥವಾ ಕಳ್ಳತನವಾದ್ದಲ್ಲಿ ಅನ್‍ಲೈನ್ ಮೂಲಕವೇ ಕೆಎಸ್‍ಪಿ ವೆಬ್‍ಸೈಟ್‍ನಲ್ಲಿ ಹೋಗಿ e-Lost Reports…

17 hours ago

ಜೂ.15 ರಂದು ಸಮಾಜ ಕಲ್ಯಾಣ ಸಚಿವ<br>*ಡಾ.ಹೆಚ್.ಸಿ.ಮಹಾದೇವಪ್ಪ ಅವರ ಬೀದರ ಜಿಲ್ಲಾ ಪ್ರವಾಸ

ಬೀದರ.15.ಜೂನ್25:- ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಅವರು ಜೂನ್.15 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ…

18 hours ago

ಅಮೆರಿಕ ಸೇನೆಯು 250ನೇ ವಾರ್ಷಿಕೋತ್ಸವ.

ಮೆರವಣಿಗೆಯೊಂದಿಗೆ ಆಚರಿಸುತ್ತದೆ ಅಮೆರಿಕವನ್ನು ಬಲಪಡಿಸುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ಶನಿವಾರ ವಾಷಿಂಗ್ಟನ್, ಡಿಸಿಯಲ್ಲಿ ಯುಎಸ್ ಸೈನ್ಯವು ತನ್ನ 250 ನೇ…

20 hours ago

ಕೇಂದ್ರ ಸಚಿವ ಅಮಿತ್ ಶಾ ಅವರಿಂದ 60,000 ಕ್ಕೂ ಹೆಚ್ಚು ಹೊಸ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ನೇಮಕಾತಿ ಪತ್ರ ವಿತರಣೆ

ಇಂದು ಮಾರ್ಚ್ 31, 2026 ರ ವೇಳೆಗೆ ಭಾರತವು ನಕ್ಸಲ್ ವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ…

20 hours ago