ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ.
Social Media’ದಲ್ಲಿ ಸುಳ್ಳು ಸುದ್ದಿ ಹರಡುವವರಿಗೆ ರಾಜ್ಯ ಸರಕಾರ ಗರಿಷ್ಠ ಏಳು ವರ್ಷ ಜೈಲು, 10 ಲಕ್ಷ ರೂ. ದಂಡ ವಿಧಿಸುವ ಮಸೂದೆಯು ಸಚಿವ ಸಂಪುಟದಲ್ಲಿ ಮುಂದೆ ಮಂಡನೆಯಾಗಿದೆ.
ಸುಳ್ಳು ಸುದ್ದಿ ಹಬ್ಬಿಸಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ
ಗುರುವಾರ ನಡೆದ ಸಚಿವ ಸಂಪುಟದಲ್ಲಿ “ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ನಿಷೇಧ ಮಸೂದೆ’ ಮಂಡನೆಯಾಗಿದ್ದು, ಒಬ್ಬರ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖೀಸುವುದು, ತಿರುಚುವುದು ಅಥವಾ ಒಬ್ಬರ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡುವುದು, ಆಡಿಯೋ ಅಥವಾ ವೀಡಿಯೋವನ್ನು ಸತ್ಯ ಅಥವಾ ಸಂದರ್ಭಕ್ಕೆ ಚ್ಯುತಿ ಬರುವ ಹಾಗೆ ಎಡಿಟ್ ಮಾಡುವುದು ಅಥವಾ ಸಂಪೂರ್ಣವಾಗಿ ಕಪೋಲ ಕಲ್ಪಿತ ಮಾಹಿತಿಯನ್ನು ಹಂಚಿಕೊಳ್ಳುವುದು ಈ ಕರಡು ಮಸೂದೆಯ ಪ್ರಕಾರ ಸುಳ್ಳು ಸುದ್ದಿಯ ವ್ಯಾಪ್ತಿಗೆ ಬರಲಿದೆ.
ಈ ಮಸೂದೆ ಪ್ರಕಾರ ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಸುರಕ್ಷೆ, ಸಾರ್ವಜನಿಕ ಶಾಂತಿ ಮತ್ತು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಧಕ್ಕೆ ತರುವ ಸುದ್ದಿಯನ್ನು ರಾಜ್ಯದ ವ್ಯಕ್ತಿಯೊಂದಿಗೆ ಹಂಚಿಕೆ ಮಾಡಿದರೆ 2-5 ವರ್ಷಗಳ ಜೈಲು ಶಿಕ್ಷೆಯಾಗಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಧ್ಯಕ್ಷತೆಯಲ್ಲಿ ಆರು ಮಂದಿ ಸದಸ್ಯರನ್ನು ಒಳಗೊಂಡ ಸಾಮಾಜಿಕ ಮಾಧ್ಯಮ ಸುಳ್ಳು ಸುದ್ದಿ ನಿಯಂತ್ರಣ ಪ್ರಾಧಿಕಾರ ರಚನೆಯಾಗಲಿದೆ. ಸುಳ್ಳು ಸುದ್ದಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ನ್ಯಾಯಾಲಯಗಳನ್ನು ರಚಿಸುವ ಪ್ರಸ್ತಾವ ಕರಡು ಮಸೂದೆಯಲ್ಲಿದೆ.
ಮಹಿಳಾ ವಿರೋಧಿ, ಸನಾತನ ಚಿಹ್ನೆ ಮತ್ತು ನಂಬಿಕೆಗಳ ಬಗ್ಗೆ ಅಗೌರವ ತರುವ ವಿಷಯಗಳನ್ನು ನಿಷೇಧಿಸುವ ಬಗ್ಗೆಯೂ ಕರಡು ಮಸೂದೆಯಲ್ಲಿ ಪ್ರಸ್ತಾವವಿದೆ ಎಂದು ತಿಳಿದುಬಂದಿದೆ. ವಿಜ್ಞಾನ, ಇತಿಹಾಸ, ಧರ್ಮ, ತತ್ವಶಾಸ್ತ್ರ ಮತ್ತು ಸಾಹಿತ್ಯದ ಬಗ್ಗೆ ಅಧಿಕೃತ ಸಂಶೋಧನೆಯ ಆಧಾರಿತ ಮಾಹಿತಿ, ದತ್ತಾಂಶ ಹಂಚಿಕೆಗೆ ಅವಕಾಶ ನೀಡಲಾಗುತ್ತದೆ.
ಇವೆಲ್ಲ ಸುಳ್ಳು ಸುದ್ದಿ
-ಒಬ್ಬರ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸುವುದು, ತಿರುಚುವುದು
– ಒಬ್ಬರ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡುವುದು
-ಆಡಿಯೋ, ವೀಡಿಯೋವನ್ನು ಸತ್ಯ ಅಥವಾ ಸಂದರ್ಭಕ್ಕೆ ಚ್ಯುತಿ ಬರುವಂತೆ ತಿರುಚುವುದು
– ಸಂಪೂರ್ಣವಾಗಿ ಕಪೋಲ ಕಲ್ಪಿತ ಮಾಹಿತಿಯನ್ನು ಹಂಚಿಕೊಳ್ಳುವುದು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ., ವಿಜನ್ ಕರ್ನಾಟಕ ಫೌಂಡೇಶನ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್, ಕೊಪ್ಪಳ ರವರ ಸಹಯೋಗದೊಂದಿಗೆ…
ಬೀದರ.22.ಜೂನ್.25:- ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಸೆರಬ್ರಲ್ ಪಾಲ್ಸಿ, ಮಸ್ಕುö್ಯಲರ್ ಡಿಸ್ಟೊçoಫಿ, ಪಾರ್ಕಿನ್ಸನ್ಸ್ ಮತ್ತು ಮಲ್ಟಿಪಲ್ ಸ್ಕೆ÷್ಲರೊಸಿಸ್, ಆಂಟಿಸA, ಬೌದ್ದಿಕ ವಿಕಲತೆ…
ಬೀದರ.22.ಜೂನ್.25:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ವತಿಯಿಂದ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ…
ಬೀದರ.22.ಜೂನ್.25:- ಅಂತರರಾಷ್ಟ್ರೀಯ ಯೋಗ ದಿನವನ್ನು ವಿಶ್ವ ಯೋಗ ದಿನ ಎಂದು ಕರೆಯುತ್ತಾರೆಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹೇಳಿದರು.…
ಬೀದರ.22.ಜೂನ್.25:-ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು ನವದೆಹಲಿ ಇವರು ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ…
ಬೀದರ.22.ಜೂನ್.25:- ಜಿಲ್ಲಾ ಉದ್ಯೋಗ ವಿನೀಮಯ ಕಛೇರಿ ಬೀದರದಲ್ಲಿ ಜೂನ್.24 ರಂದು ಬೆಳಿಗ್ಗೆ 10 ರಿಂದ 3 ಗಂಟೆಯವರೆಗೆ ನೇರ ಸಂದರ್ಶನ…