ಬಸವಕಲ್ಯಾಣ.20.ಮೇ.25:- ಇಂದು ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ಪ್ರೌಢಶಾಲಾ ವಿಭಾಗ ಬಸವ ಕಲ್ಯಾಣದಲ್ಲಿ ಇಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿದರು.
ಬೇಸಿಗೆ ಶಿಬಿರ ಹಾಗೂ ಮೇ /ಜೂನ್-2025ರ ಎಸ್ ಎಸ್ ಎಲ್ ಸಿ ಪರೀಕ್ಷೆ -2 ಗೆ ನೊಂದಣಿಯಾದ ಮಕ್ಕಳ ವಿಶೇಷ ತರಗತಿ ವೀಕ್ಷಣೆ ಮಾಡುತ್ತಾ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ನ್ಯೂಟನ್ ಮೋದಲನೇ, ಎರಡನೇ ಮತ್ತು ಮೂರನೇ ನಿಯಮಗಳ ಕುರಿತು ಮಕ್ಕಳಿಗೆ ಪ್ರಶ್ನೆ ಕೇಳಿದರು.
ಹಾಜರಿದ್ದ ವಿದ್ಯಾರ್ಥಿ ಉತ್ತರ ನೀಡಿದರು .ಮಕ್ಕಳು ಈ ಶಿಬಿರ ಮುಖಾಂತರ ಹೆಚ್ಚಿನ ಜ್ಞಾನವನ್ನು ಪಡೆದುಕೋಳ್ಳಬೇಕೆಂದು ನುಡಿದರು.. ತದನಂತರ ಪ್ರಾಯೋಗಿಕವಾಗಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಯಿಂದ ರಾಕೇಟ್ ಹಾರಿಸುವುದನ್ನು ವೀಕ್ಷಿಸಿದರು .
ಬಸವಕಲ್ಯಾಣ ತಾಲೂಕಿನ ಸಹಾಯಕ ಆಯುಕ್ತರು ಹಾಗೂ ವಿಭಾಗಿಯ ದಂಡಾಧಿಕಾರಿಗಳಾದ ಶ್ರೀ ಮುಕುಲ್ ಜೈನ್ ಮಕ್ಕಳು ತಯ್ಯಾರಿಸಿದ ರಾಕೇಟ್ ಗಳು , ಕೀರಿಟ್ ಗಳನ್ನು ವೀಕ್ಷಿಸಿದರು.
ಈ ಭೇಟೀಯಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಆಯುಕ್ತರಾದ ಶ್ರೀ ಜಗನ್ನಾಥ ರೆಡ್ಡಿ, ಬಸವಕಲ್ಯಾಣ ತಾಲೂಕಿನ ತಹಶೀಲ್ದಾರರು ಹಾಗೂ ದಂಡಾಧಿಕಾರಿಗಳಾದ ಡಾ.ದತ್ತಾತ್ರೇ ಗಾದಾ , ನಗರ ಸಭೆಯ ಪೌರಾಯುಕ್ತರಾದ ರಾಜು ಬಣಕರ್, ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ದಿಲೀಪ ಕುಮಾರ ಉತ್ತಮ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ದವೀರಯ್ಯಾ ರುದನೂರ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪ್ರಭಾಕರ ಕಳಮಾಸೆ, ನಗರ ವೈದ್ಯಾಧಿಕಾರಿ ಗಳಾದ ಡಾ.ಅಪರ್ಣಾ, ಪ್ರಭಾರಿ ಉಪ ಪ್ರಾಂಶುಪಾಲರಾದ ಸಂಜೀವಕುಮಾರ ನಡುಕರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಾಲಿವಾನ ಬಿರಾದಾರ, ಸಮೂಹ ಸಂಪನ್ಮೂಲ ವ್ಯಕ್ತಿ ಗಿರಿಧರ ಧನ್ನೂರೆ, ಅಜೀಂ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಮಹೇಶ ಬೂವಿ, ಶಿಕ್ಷಕರಾದ ವಿರೇಶ ಹೆಗ್ಗೆ,ರಾಮ ಪಾಟೀಲ್, ಎಂಡಿ ಶರೀಫ್, ಪ್ರವೀಣ ಸೊಮವಂಶಿ, ವಿಜ್ಞಾನ ಸಹಾಯಕರಾದ ಮಹಾದೇವ ಅಲದೇಪ್ಪ , ದ್ವಿತೀಯ ದರ್ಜೆ ಸಹಾಯಕರಾದ ಮಂಗಲಾ, ಸುನೀತಾ ಕುಪ್ಪೆ ಹಾಗೂ ವಿವಿಧ ಶಾಲೆಗಳ ಮಕ್ಕಳು ಉಪಸ್ಥಿತರಿದ್ದರು.
ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…
ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…
ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…
ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…
ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್ಎಎಲ್…
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…