ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ‘ಕಲಿಕೆ ಜೊತೆ ಕೌಶಲ್ಯ 2.0’ ಕಾರ್ಯಕ್ರಮ

ಬೆಂಗಳೂರು.30.ಜೂನ್.25:- ರಾಜ್ಯ ಸರಕಾರವು ಪ್ರಸಕ್ತ ವರ್ಷದಲ್ಲಿ 2.0′ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದ್ದು,  ರಾಜ್ಯದ ಏಳು ಸರಕಾರಿ ವಿಶ್ವವಿದ್ಯಾಲಯಗಳಿಗೆ ಸಂಯೋಜನೆ ಹೊಂದಿರುವ 168 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಘಟಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನೆ ಪಡೆಯಲಿದ್ದಾರೆ.

ಹಿಂದಿನ ವರ್ಷ ಪ್ರಾಯೋಗಿಕವಾಗಿ ದಾವಣಗೆರೆ, ತುಮಕೂರು, ರಾಯಚೂರು ಮತ್ತು ಕಲಬುರಗಿ ವಿಶ್ವವಿದ್ಯಾಲಯಗಳಡಿ ಬರುವ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ‘ಕಲಿಕೆ ಜೊತೆ ಕೌಶಲ್ಯ’ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿಯಾಗಿ ವಿಜಯನಗರ ಶ್ರೀಕೃಷ್ಣ ದೇವರಾಯ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ.

ಕಾರ್ಯಕ್ರಮದಡಿ ಬಿ.ಎ/ಬಿ.ಕಾಂ/ಬಿ.ಬಿ.ಎ/ಬಿ.ಎಸ್.ಸಿ ಹಾಗೂ ಇತರ ಸ್ನಾತಕ ಕೋರ್ಸ್‍ಗಳ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇಂಟರ್ನ್‍ಶಿಪ್, ಎಂಪ್ಲಾಯಬಿಲಿಟಿ ಸ್ಕಿಲ್ಸ್, ಸೈಬರ್ ಸೆಕ್ಯೂರಿಟಿಗೆ ಬದಲಾಗಿ ಕೌಶಲ್ಯ ಆಧಾರಿತ ವೃತ್ತಿಪರ ಕೋರ್ಸ್‍ಗಳಗೆ ಒಟ್ಟು 50 ಗಂಟೆಗಳ ಕೌಶಲ್ಯ ಕೋರ್ಸ್‍ಗಳ ತರಬೇತಿಯನ್ನು ಅನುಷ್ಠಾನಗೊಳಿಸಲಾಗಿದೆ.

ತರಬೇತಿಗೆ ಕ್ರೆಡಿಟ್‍ಗಳನ್ನು ನಿಗದಿಪಡಿಸಲಾಗಿದ್ದು, ಇವುಗಳನ್ನು ತರಬೇತುಗೊಂಡ ವಿದ್ಯಾರ್ಥಿಯ ಅಂಕಪಟ್ಟಿಯಲ್ಲಿ ನೇರವಾಗಿ ಯುಯುಸಿಎಂಎಸ್ ಮೂಲಕ ಸೇರ್ಪಡೆಗೊಳಿಸಲಾಗುವುದು. ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಎಲ್ಲ ಖರ್ಚು ವೆಚ್ಚಗಳನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಭರಿಸುತ್ತಿದ್ದು, ವಿದ್ಯಾರ್ಥಿಗಳು ಮತ್ತು ಕಾಲೇಜುಗಳಿಂದ ಯಾವುದೇ ಬಗೆಯ ಶುಲ್ಕವನ್ನು ಸಂಗ್ರಹಿಸುವಂತಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.

ವಿಶ್ವವಿದ್ಯಾಲಯಗಳಿಗೆ ಸಂಯೋಜನೆ ಹೊಂದಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಘಟಕ ಕಾಲೇಜುಗಳಲ್ಲಿ, ‘ಕಲಿಕೆ ಜೊತೆ ಕೌಶಲ್ಯ 2.0’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಸಂಬಂಧವಾಗಿ ಯಾವುದೇ ಅನುದಾನ ಕೋರಬಾರದು ಎಂದು ರಾಜ್ಯ ಸರಕಾರ ತಿಳಿಸಿದೆ.

prajaprabhat

Recent Posts

ರ್ಯಾಗಿಂಗ್ ವಿರೋಧಿ ನಿಯಮಗಳ ಕುರಿತು ಐಐಟಿಗಳು, ಐಐಎಂಎಸ್, ಎಎಂಯು ಸೇರಿದಂತೆ 89 ಸಂಸ್ಥೆಗಳಿಗೆ ಯುಜಿಸಿ ನೋಟಿಸ್

ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC), ನಾಲ್ಕು IITಗಳು, ಮೂರು IIMಗಳು ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಸೇರಿದಂತೆ ದೇಶಾದ್ಯಂತ 89…

1 minute ago

ಶಸ್ತ್ರಾಸ್ತ್ರ ಹಿಡಿದಿರುವ ಮಾವೋವಾದಿಗಳೊಂದಿಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಮಾವೋವಾದಿಗಳೊಂದಿಗೆ ಮಾತುಕತೆಯನ್ನು ತಳ್ಳಿಹಾಕಿದ್ದಾರೆ. ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಡೆದ ಕಿಸಾನ್…

12 minutes ago

ಆಯುಷ್ ಶೆಟ್ಟಿಗೆ ಚೊಚ್ಚಲ ಯುಎಸ್ ಓಪನ್ ಪ್ರಶಸ್ತಿ; ತನ್ವಿ ಶರ್ಮಾಗೆ ರನ್ನರ್ ಅಪ್

ಬ್ಯಾಡ್ಮಿಂಟನ್‌ನಲ್ಲಿ, 20 ವರ್ಷದ ಆಯುಷ್ ಶೆಟ್ಟಿ 2025 ರ ಯುಎಸ್ ಓಪನ್ ಗೆಲ್ಲುವ ಮೂಲಕ ಈ ಋತುವಿನಲ್ಲಿ ಬಿಡಬ್ಲ್ಯೂಎಫ್ ವಿಶ್ವ…

14 minutes ago

ಧರ್ಮಶಾಲಾದಲ್ಲಿ ಡಿಜಿಟಲ್ ಯುಗದಲ್ಲಿ ಉತ್ತಮ ಆಡಳಿತ

ಧರ್ಮಶಾಲಾದ ತಪೋವನದಲ್ಲಿ ಇಂದು ನಡೆಯಲಿರುವ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA) ನ ವಲಯ-2 ರ ವಾರ್ಷಿಕ ಸಮ್ಮೇಳನವನ್ನು ಲೋಕಸಭಾ ಸ್ಪೀಕರ್…

16 minutes ago

ತೆಲಂಗಾಣ ರಾಜ್ಯ ಅಧ್ಯಕ್ಷ, ರಾಷ್ಟ್ರೀಯ ಮಂಡಳಿ ಚುನಾವಣೆಗೆ ಬಿಜೆಪಿ ಅಧಿಸೂಚನೆ ಹೊರಡಿಸಿದೆ.

ಬಿಜೆಪಿ ತನ್ನ ತೆಲಂಗಾಣ ರಾಜ್ಯ ಅಧ್ಯಕ್ಷ ಮತ್ತು ರಾಷ್ಟ್ರೀಯ ಮಂಡಳಿಯ ಚುನಾವಣೆಗೆ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ, ಇಂದು ಮಧ್ಯಾಹ್ನ…

19 minutes ago

ಭಾರತೀಯ ಮಹಿಳಾ ಹಾಕಿ ತಂಡವು ಎಫ್‌ಐಎಚ್ ಪ್ರೊ ಲೀಗ್ ಅಭಿಯಾನವನ್ನು ಸತತ 8 ನೇ ಸೋಲಿನೊಂದಿಗೆ ಕೊನೆಗೊಳಿಸಿದೆ

ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ, ಭಾರತೀಯ ಮಹಿಳಾ ಹಾಕಿ ತಂಡವು ನಿನ್ನೆ ರಾತ್ರಿ ಬರ್ಲಿನ್‌ನಲ್ಲಿ ಚೀನಾ ವಿರುದ್ಧ 2-3 ಅಂತರದಿಂದ ಸೋಲುವುದರೊಂದಿಗೆ…

21 minutes ago