ಮಂಗಳೂರು.26.ಮಾರ್ಚ್.25:-ಸಂವಿಧಾನ” ಪಠ್ಯವನ್ನು ಕಡ್ಡಾಯವಾಗಿ ರಾಜ್ಯಶಾಸ್ತ್ರ ಅಥವಾ ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರರಾದವರು ಮಾತ್ರ ಬೋಧಿಸುವುದನ್ನು. ವಿಶ್ವವಿದ್ಯಾಲಯ ವ್ಯಾಪ್ತಿಯ ಶೈಕ್ಷಣಿಕ ಮಂಡಳಿ ಸಭೆ ಮಂಗಳವಾರ ನಿರ್ಧರಿಸಿದೆ.
ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ|ಪಿ.ಎಲ್. ಧರ್ಮ ಅಧ್ಯಕ್ಷತೆಯಲ್ಲಿ ಆನ್ಲೈನ್ ಮೂಲಕ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಮಾಜಿ (ಪ್ರಭಾರ) ಕುಲಪತಿ ಪ್ರೊ| ಜಯರಾಜ್ ಅಮೀನ್ ಅವರು ಪ್ರಸ್ತಾವಿಸಿ ರಾಜ್ಯಶಾಸ್ತ್ರ ಉಪನ್ಯಾಸ ಕರು ಇಲ್ಲದ ಕಾಲೇಜುಗಳಲ್ಲಿ ಇತರೆ ಉಪನ್ಯಾಸಕರು ಸಂವಿಧಾನ ಪಠ್ಯವನ್ನು ಬೋಧಿಸುತ್ತಿದ್ದಾರೆ. ಇದು ನಿಯಮ ಉಲ್ಲಂಘನೆ ಎಂದರು.
ಕುಲಪತಿಯವರು ಉತ್ತರಿಸಿ, ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 150 ಪದವಿ ಕಾಲೇಜು ಗಳಿವೆ. 8 ಮಂದಿ ರಾಜ್ಯಶಾಸ್ತ್ರ ಉಪನ್ಯಾ ಸಕರ ಪೈಕಿ ಇಬ್ಬರು ಡೀಮ್ಡ್ ವಿಶ್ವವಿದ್ಯಾಲಯ ತೆರಳಿದ್ದಾರೆ.
ಉಳಿದದ್ದು ಆರು ಮಂದಿ ಮಾತ್ರ. ಹೀಗಿರುವಾಗ ಇತರೆ ಉಪನ್ಯಾಸಕರು ಸಂವಿಧಾನ ಬಗ್ಗೆ ತರಗತಿಯಲ್ಲಿ ಪಾಠ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಂವಿಧಾನ ವಿಷಯ ತಿಳಿದವರೇ ಅದನ್ನು ಬೋಧಿಸಬೇಕು. ಶೀಘ್ರವೇ ಕಾಲೇಜುಗಳಿಗೆ ನೋಟಿಸ್ ಕಳುಹಿಸುವುದಾಗಿ ತಿಳಿಸಿದರು.
ವಿದೇಶಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಲ್ಲಿ ಪಿಎಚ್.ಡಿ ಅನಂತರದ ಕಲಿಕೆಗೆ ಅನುಮತಿ ಕೋರಲಾಗಿದೆ. ಆದರೆ ವಿಶ್ವವಿದ್ಯಾಲಯ ಆರ್ಥಿಕ ಹೊರೆಯಾಗದಂತೆ ವಿದ್ಯಾರ್ಥಿಗಳ ಸ್ವಂತ ಖರ್ಚಿನಲ್ಲಿ ಕಲಿಕೆಗೆ ಅನುಮತಿ ಸಲು ನಿರ್ಧರಿಸಲಾಯಿತು.
ಇತರ ವಿದೇಶಿ ವಿದ್ಯಾರ್ಥಿಗಳಿಗೂ ಇದೇ ರೀತಿ ಅವರದೇ ಖರ್ಚಿನಲ್ಲಿ ಅಧ್ಯಯನ ನಡೆಸಲು ಅವಕಾಶ ನೀಡಲು ತಾಂತ್ರಿಕ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು. ಕುಂದಾಪುರ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೆ
ಬೇಡಿಕೆ ಬಂದಿದೆ.
ಅದಕ್ಕಾಗಿ ಅನುದಾನ ಮೀಸಲಿಡಲು ಪ್ರಸ್ತಾಪಿಸಲಾಯಿತು. ಆಡಳಿತ ವಿಭಾಗದ ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ವಿಭಾಗ ಕುಲಸಚಿವ ಪ್ರೊ|ಸಂಗಪ್ಪ ಉಪಸ್ಥಿತರಿದ್ದರು.
ಎನ್ಇಪಿ ಪೂರ್ಣಗೊಳಿಸಿದ ಮಕ್ಕಳಿಗೂ ರ್ಯಾಂಕ್
2021-22ನೇ ಸಾಲಿನಲ್ಲಿ ಎನ್ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ)ಯಲ್ಲಿ ಪದವಿ ಕಾರ್ಯಕ್ರಮ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಗ್ರೇಡ್ ನೀಡುವ ಕ್ರಮ ಎಂದು ಹೇಳಲಾಗಿತ್ತು.
ಈಗ ಎಸ್ಇಪಿ ಬಂದಿದೆ. ಹೀಗಾಗಿ ರ್ಯಾಂಕ್ ಘೋಷಣೆ ಮಾಡಬೇಕಿದೆ. ಇದಕ್ಕೆ ಮಾರ್ಗಸೂಚಿ ತಯಾರಿಸಲು ಸಮಿತಿ ರಚಿಸಲಾಗಿತ್ತು. ಅದರಂತೆ ಎನ್ಇಪಿಯಲ್ಲಿ “ಎ’ ಗ್ರೇಡ್ ಹಾಗೂ ಅದಕ್ಕಿಂತ ಅಧಿಕ ಸ್ಥಾನ ಪಡೆದವರಿಗೆ ರ್ಯಾಂಕ್ ನೀಡಲು ತೀರ್ಮಾನಿಸಲಾಯಿತು.
ವಿಶ್ವವಿದ್ಯಾಲಯಲ್ಲಿ “ಹಾರ್ಟ್ಫುಲ್ನೆಸ್ ಪೀಠ’
ಮೈಸೂರಿನ ಸಹಜ್ ಮಾರ್ಗ್ ಸ್ಪಿರಿಚುವಾಲಿಟಿ ಫೌಂಡೇಷನ್ ವತಿಯಿಂದ ಧ್ಯಾನ ಮತ್ತು ಎಲ್ಲರೊಡನೆ ಪ್ರೀತಿಯನ್ನು ಉತ್ತೇಜಿಸಲು ವಿಶ್ವವಿದ್ಯಾಲಯಲ್ಲಿ “ಹಾರ್ಟ್ಫುಲ್ನೆಸ್ ಪೀಠ’ ಸ್ಥಾಪಿಸಲು ಕೋರಿದೆ. ಈ ಪೀಠ ಸ್ಥಾಪನೆಗೆ 25 ಲಕ್ಷ ರೂ. ಠೇವಣಿ ಇರಿಸುವುದಾಗಿ ತಿಳಿಸಿದೆ.
ಇದು ಈಗಾಗಲೇ ರಾಜ್ಯದ ಇತರೆ ಆರು ವಿಶ್ವವಿದ್ಯಾಲಯಗಳಲ್ಲಿ ಇಂತಹ ಪೀಠ ಸ್ಥಾಪಿಸಿದ ಬಗ್ಗೆ ಮಾಹಿತಿ ನೀಡಿದೆ. ವಿಶ್ವವಿದ್ಯಾಲಯಲ್ಲಿ ಯಾವುದೇ ಆರ್ಥಿಕ ಹೊರೆ ಇಲ್ಲದ ಕಾರಣ ಇದಕ್ಕೆ ಸಮ್ಮತಿಸಬಹುದು ಎಂದು ಕುಲಪತಿ ಪ್ರೊ|ಪಿ.ಎಲ್.ಧರ್ಮ ತಿಳಿಸಿದರು.
ಬೆಂಗಳೂರು.13.ಜೂನ್.25:- ರಾಜ್ಯದ ಡಿಸಿಆರ್ಇ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವ ಮತ್ತು…
ಹೊಸ ದೆಹಲಿ.13.ಜೂನ್.25:- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2025-26ರ ಹಣಕಾಸು ವರ್ಷದ ನೇಮಕಾತಿಯ ಭಾಗವಾಗಿ 4,500 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ.…
ಬೆಂಗಳೂರು.12.ಜೂನ್.25:-ರಾಜ್ಯದ ಖಾಸಗಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ನಿವೃತ್ತಿ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ…
ಬೀದರ.12.ಜೂನ್25:- ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಅವರು ಜೂನ್.15 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ…
ಬೀದರ.12.ಜೂನ್.25:- ಚಿದ್ರಿ ಉಪ ಕೇಂದ್ರದಿoದ ಸರಬರಾಜು ಆಗುವ ಫೀಡರನ ಮೇಲೆ ತುರ್ತು ಕಾರ್ಯ ಇರುವುದರಿಂದ 11ಕೆವಿ ಫೀಡರಗಳಾದ 11ಕೆವಿ ಗುಂಪಾ,…
ಬೀದರ.12.ಜೂನ್.25:- ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಬೀದರ…