ಶರಣರಿಗೆ ಕಾಯಕವೇ ಜೀವಾಳವಾಗಿತ್ತು – ಸುರೇಖಾ ಕೆ.ಎ.ಎಸ್.


ಬೀದರ.10.ಫೆಬ್ರುವರಿ.25:-ಸಮಾಜದಲ್ಲಿ ಕಾಯಕನಿಷ್ಠೆಯ ಆದರ್ಶವನ್ನು ತಿಳಿಸಿಕೊಟ್ಟವರು ಶರಣರು. ತಮ್ಮ ಕಾಯ ಹಾಗೂ ಕಾಯಕದಲ್ಲಿಯೇ ಕೈಲಾಸವನ್ನು ಕಂಡು ಬಾಳಿದ ಮಹಾನುಭಾವರು ಬಸವಾದಿಶರಣರು ಎಂದು ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ಅವರು ಹೇಳಿದರು.


ಅವರು ಇಂದು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿಯ ಕಾರ್ಯಕ್ರಮದಲ್ಲಿ ಪೂಜೆಸಲ್ಲಿಸಿ ಮಾತನಾಡಿದರು.


ವೃತ್ತಿ ಮನುಷ್ಯನಿಗೆ ಶೋಭೆ, ಗೌರವ ತರುತ್ತದೆ. ಸತ್ಕರ್ಮದ ಕಾಯಕದಿಂದ ವ್ಯಕ್ತಿ ಉದಾತ್ತನಾಗುತ್ತಾನೆ. ಜೀವನದಲ್ಲಿ ಸದಾ ಕಾಯಕನಿರತರಾಗಬೇಕೆಂಬುದು ಶರಣರ ಧ್ಯೇಯ ಹಾಗೂ ಆದರ್ಶವಾಗಿತ್ತು. ಯಾವ ಕಾಯಕವೂ ದೊಡ್ಡದಲ್ಲ, ಚಿಕ್ಕದಲ್ಲ.

ಮನಸ್ಸಿನಿಂದ ಮಾಡುವ ಕಾಯಕವೇ ದೊಡ್ಡದೆಂದು ನಂಬಿದವರು ಶರಣರು. ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಮಾದಾರ ಧೂಳಯ್ಯರವರಂತಹ ಮುಂತಾದ ಮಹಾನ್ ಶರಣರು ತಮ್ಮ ಕಾಯಕದ ಆದರ್ಶದಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದವರು. ಯಾರೂ ದುಡಿಯದೇ ಪ್ರಸಾದ ಸೇವಿಸಬಾರದೆಂಬ ಮೌಲ್ಯವನ್ನು 12ನೆಯ ಶತಮಾನದಲ್ಲಿಯೇ ಹೇಳಿದಂತಹ ಮಹನೀಯರಾಗಿದ್ದರೆಂದು ಕುಲಸಚಿವರು ಹೇಳಿದರು.


     ಸಮಾರಂಭದಲ್ಲಿ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿರ ಅವರು ಮಾತನಾಡಿ, ಶರಣರು ತಾವು ಮಾಡುವ ಕಾಯಕನಿಷ್ಠೆ ಹಾಗೂ ತಮ್ಮ ವಚನಗಳಿಂದಲೇ ಇಂದಿಗೂ ಜೀವಂತವಾಗಿದ್ದಾರೆ, ಮಾದರಿಯಾಗಿದ್ದಾರೆ. ಶರಣರ ಸಮಾನತೆಯ ಸಿದ್ಧಾಂತ ಸಾರ್ವಕಾಲಿಕ  ಮೌಲ್ಯವಾಗಿದೆ. ಶರಣರು ಎಲ್ಲರನ್ನೂ ಸಮಾನವಾಗಿ ಕಂಡರು. ಇವನಾರವನೆನ್ನದೆ, ಇವನಮ್ಮವನೆಂದರು. ಶರಣರು ಆರೋಗ್ಯಕರ ಸಮಾಜಕ್ಕಾಗಿ ಹಂಬಲಿಸಿದರು ಎಂದರು.


      ಕನ್ನಡ ಉಪನ್ಯಾಸಕರಾದ ರಾಮಚಂದ್ರ ಗಣಾಪೂರ ಅವರು ಮಾತನಾಡಿ, ಶರಣರು ಕಾಯಕ ಪರಂಪರೆಗೆ ಮೌಲ್ಯವನ್ನು, ಅರ್ಥವನ್ನು ತಂದುಕೊಟ್ಟವರು. ಆ ಮೂಲಕ ತಮ್ಮ ನಡೆ-ನುಡಿಯಿಂದ, ಕಾಯಕನಿಷ್ಠೆಯಿಂದ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಮಹತ್ವದ ಕೊಡುಗೆಯನ್ನು ನೀಡಿದರು. ಶರಣರು ಮೊದಲು ನಡೆದರು, ನಂತರ ನುಡಿದರು. ಹೀಗಾಗಿ ನಮಗೆ ನಡೆನುಡಿಯ ಆದರ್ಶಗಳ ಅವಶ್ಯಕತೆಯಿದೆ ಎಂದರು.


ಈ ಸಮಾರಂಭದಲ್ಲಿ ಬೀದರ ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

prajaprabhat

Recent Posts

UGC-NET ಜೂನ್ 2025 ರ ಪರೀಕ್ಷಾ ವೇಳಾಪಟ್ಟಿ ಮತ್ತು  ನೋಂದಣಿ

ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…

3 hours ago

ಬೀದರ್‌’ನಲ್ಲಿ ಮೀನು ನುಂಗಿ ರೋಗ ಗುಣಮುಖ ವಿಶಿಷ್ಟ ಆಚರಣೆ

ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…

4 hours ago

ಉತ್ತರಾಖಂಡದಲ್ಲಿ ಸೇನಾ ಸನ್ನದ್ಧತೆಯನ್ನು ಪರಿಶೀಲಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಐಬೆಕ್ಸ್ ತರಾನಾ 88.4 ಎಫ್‌ಎಂ ಅನ್ನು ಉದ್ಘಾಟಿಸಿದರು.

ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…

7 hours ago

ಮಿಥಿ ನದಿ ಹೂಳೆತ್ತುವ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ.

ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…

7 hours ago

ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ಪ್ರಾರಂಭಿಸಿದೆ

ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…

7 hours ago

ಭೂಕುಸಿತದಿಂದ ಹಾನಿಗೊಳಗಾದ ಚಾಟೆನ್‌ನಿಂದ ಸಿಕ್ಕಿಬಿದ್ದ ಸ್ಥಳೀಯರು ಮತ್ತು ಟ್ಯಾಕ್ಸಿ ಚಾಲಕರನ್ನು ಸಿಕ್ಕಿಂ ಸರ್ಕಾರ ವಿಶೇಷ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ

ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…

7 hours ago