ಇದೇ ಬರುವ ಜುಲೈ 2ಕ್ಕೆ 38ನೇ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿರುವ ಮಲೆನಾಡು ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಹಲವು ದಶಕಗಳಿಂದ ಹೆಸರುವಾಸಿಯಾಗಿರುವ ಕುವೆಂಪು ವಿಶ್ವವಿದ್ಯಾಲಯವು ಯುಜಿಸಿ ನ್ಯಾಕ್ ತಂಡದ ಭೇಟಿಯ ನಂತರದ ಕೆಲವೇ ದಿನಗಳಲ್ಲಿ ಪಿ.ಎಚ್ಡಿ ಮಾತ್ರವಲ್ಲದೆ ಸ್ನಾತಕೋತ್ತರ ಪದವಿಯ ಪ್ರವೇಶಾತಿ ಹಾಗೂ ಬೋಧನಾ ಶುಲ್ಕವನ್ನು ಶೇ.100ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿರುವುದು ಸರ್ಕಾರಿ ವಿಶ್ವವಿದ್ಯಾಲಯವೊಂದನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರವೆಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
-ಅನಿಕೇತನ, ಜ್ಞಾನ ಸಹ್ಯಾದ್ರಿ
ಇದೇ ಬರುವ ಜುಲೈ 2ಕ್ಕೆ 38ನೇ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿರುವ ಮಲೆನಾಡು ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಹಲವು ದಶಕಗಳಿಂದ ಹೆಸರುವಾಸಿಯಾಗಿರುವ ಕುವೆಂಪು ವಿಶ್ವವಿದ್ಯಾಲಯವು ಯುಜಿಸಿ ನ್ಯಾಕ್ ತಂಡದ ಭೇಟಿಯ ನಂತರದ ಕೆಲವೇ ದಿನಗಳಲ್ಲಿ ಪಿ.ಎಚ್ಡಿ ಮಾತ್ರವಲ್ಲದೆ ಸ್ನಾತಕೋತ್ತರ ಪದವಿಯ ಪ್ರವೇಶಾತಿ ಹಾಗೂ ಬೋಧನಾ ಶುಲ್ಕವನ್ನು ಶೇ.100ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿರುವುದು ಸರ್ಕಾರಿ ವಿಶ್ವವಿದ್ಯಾಲಯವೊಂದನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರವೆಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದ್ದ ಕುವೆಂಪುರವರ ತತ್ವಗಳನ್ನೇ ತನ್ನ ಮೂಲಧ್ಯೇಯವನ್ನಾಗಿಸಿಕೊಂಡಿರುವ ವಿಶ್ವವಿದ್ಯಾಲಯವು ಈಗ ಏಕಾಏಕಿ ಶುಲ್ಕ ಹೆಚ್ಚಳ ಮಾಡಿರುವುದು ಪಿ.ಎಚ್ಡಿ. ಸಂಶೋಧನಾ ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಅದರಲ್ಲೂ ಅನ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಪ್ರವೇಶಾತಿ ಶುಲ್ಕಗಳೂ ಬರೋಬ್ಬರಿ ಏರಿಕೆ ಕಂಡಿವೆ.2022-2023ನೇ ಸಾಲಿನಲ್ಲಿ ಶುಲ್ಕ ಪರಿಷ್ಕರಿಸಿ ಸ್ವಲ್ಪ ಪ್ರಮಾಣದ ಶುಲ್ಕ ಹೆಚ್ಚಳ ಮಾಡಲಾಗಿತ್ತು ಹಾಗೂ ಅದನ್ನು ಯಥಾವತ್ತಾಗಿ
2023-24 ನೇ ಶೈಕ್ಷಣಿಕ ಸಾಲಿನಲ್ಲೂ ಮುಂದುವರಿಸಿ ಆದೇಶ ಹೊರಡಿಸಲಾಗಿತ್ತು.
ಆದರೆ 2024-25ನೇ ಸಾಲಿನಲ್ಲಿ ಶುಲ್ಕವನ್ನು ಅವೈಜ್ಞಾನಿಕವಾಗಿ ಬರೋಬ್ಬರಿ ಪ್ರತಿಶತ 100ರಂತೆ ಹೆಚ್ಚು ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಸ್ನೇಹಮಯ ವ್ಯಕ್ತಿತ್ವ ಹೊಂದಿರುವ ಮಾನ್ಯ ಉಪಕುಲಪತಿಗಳಾದ ಡಾ.ಶರತ್ ಅನಂತಮೂರ್ತಿಯವರಿಗೆ ಈ ನಡೆ ಕಪ್ಪುಚುಕ್ಕೆ ತರುವುದಲ್ಲದೆ ವಿದ್ಯಾರ್ಥಿಗಳು, ಸಂಶೋಧಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.
ಶೈಕ್ಷಣಿಕ ವರ್ಷ 2023-24ರಲ್ಲಿ ಪರೀಕ್ಷಾ ವಿಭಾಗಕ್ಕೆ ಪಿ.ಎಚ್.ಡಿ ಬೋಧನಾ ಶುಲ್ಕವಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ವಾರ್ಷಿಕ 6,000/- ರೂ.ಶುಲ್ಕವನ್ನು ಹಾಗೂ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1ರ, ವಿದ್ಯಾರ್ಥಿಗಳಿಂದ 4,200/- ರೂ. ಹಾಗೂ ವಿದೇಶಿ ವಿದ್ಯಾರ್ಥಿಗಳಿಂದ 7,200/-ಶುಲ್ಕವನ್ನು ಪಡೆಯಲಾಗುತ್ತಿತ್ತು. ಅದನ್ನು ಕ್ರಮವಾಗಿ 12,000/-ರೂ., 8400/- ರೂ. ಹಾಗೂ 15,000/-ರೂ.ಗಳಿಗೆ ಹೆಚ್ಚಿಸಿ ಅವೈಜ್ಞಾನಿಕ ಹಾಗೂ ಅತಾರ್ಕಿಕವಾಗಿ ಶುಲ್ಕವನ್ನು ದುಪ್ಪಟ್ಟು ಹೆಚ್ಚಳ ಮಾಡಲಾಗಿದೆ.ಅಲ್ಲದೆ, ಕೋರ್ಸ್ ವರ್ಕ್ ಶುಲ್ಕ ಜೊತೆಗಿನ ಬೋಧನಾ ಶುಲ್ಕವನ್ನು ಮೊದಲ ವರ್ಷ ಅನುಕ್ರಮವಾಗಿ 14,400/-ರೂ. ,10,080/-ರೂ., 22,200/-ರೂ.ಗೆ ಹೆಚ್ಚಿಸಲಾಗಿದೆ.
ಸಂಶೋಧನಾ ಶೀರ್ಷಿಕೆ ಬದಲಾವಣೆಗೆ ಸಾಮಾನ್ಯ ವರ್ಗದವರಿಗೆ ನಿಗದಿಪಡಿಸಿದ್ದ 4000/-ರೂ.ಗಳನ್ನು ಮನಸ್ಸಿಗೆ ತೋರಿದಂತೆ ಗಣನೀಯವಾಗಿ 10,000/-ರೂ.ಗಳಿಗೆ ಹೆಚ್ಚಿಸಲಾಗಿದೆ.ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ರ ಸಂಶೋಧನಾ ವಿದ್ಯಾರ್ಥಿಗಳಿಗೆ ಇದನ್ನು 2500/-ರೂ.ಗಳಿಂದ 6250/-ರೂ.ಗಳಿಗೆ ಹೆಚ್ಚಿಸಿದ್ದರೆ ವಿದೇಶಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ್ದ 5000/-ರೂ.ಗಳನ್ನು 15000/-ರೂ.ಗಳಿಗೆ ಹೆಚ್ಚಿಸಲಾಗಿದೆ.
ಇನ್ನು 6000/-ರೂ.ಇದ್ದ ಸಂಶೋಧನಾ ಮಾರ್ಗದರ್ಶಕರ ಬದಲಾವಣೆಯ ಶುಲ್ಕವನ್ನು 10,200/- ರೂ.ಗಳಿಗೆ, ವ್ಯಾಕರಣ ತಿದ್ದುಪಡಿಯ ಶುಲ್ಕವನ್ನು 500/-ರೂ.ಯಿಂದ 1,500/-ರೂ.ಗೆ , ಸಂಶೋಧನಾ ಪ್ರಬಂಧ ಪ್ರಕಟಣೆಯ ಶುಲ್ಕವನ್ನು 500/-ರೂ.ಯಿಂದ 2,000/- ರೂ.ವರೆಗೆ ಹೆಚ್ಚಿಸಲಾಗಿದೆ. ಸಂಶೋಧನಾ ಅವಧಿ ವಿಸ್ತರಣೆ ಶುಲ್ಕಗಳಲ್ಲೂ ಶೇ.100ರಷ್ಟು ಶುಲ್ಕವನ್ನು ಹೆಚ್ಚಿಸಲಾಗಿದೆ.ಮೊದಲ ವಿಸ್ತರಣೆಯ ಶುಲ್ಕವನ್ನು 10,000/-ರೂ.ಯಿಂದ 20,000/-ರೂ.ಗೆ, ಎರಡನೆಯ ಅವಧಿಯ ವಿಸ್ತರಣೆಯ ಶುಲ್ಕವನ್ನು 15000/-ದಿಂದ 30,000/-ರೂ.ಗೆ, ಮೂರನೆಯ ಅವಧಿ ವಿಸ್ತರಣಾ ಶುಲ್ಕವನ್ನು 20,000/-ರೂ.ಯಿಂದ 40,000/-ರೂ.ಗೆ ಹೆಚ್ಚಿಸಲಾಗಿದೆ.
ಅಡ್ಜಡಿಕೇಶನ್ ಶುಲ್ಕವನ್ನು 20,000/-ರೂ.ಗಳಿಂದ 25,000/-ರೂ.ಗಳಿಗೆ ಹೆಚ್ಚಿಸಿರುವುದಲ್ಲದೆ ಪ್ರಯೋಗಾಲಯ ಶುಲ್ಕವನ್ನು 4,500/-ರೂ.ಯಿಂದ 7,650/-ರೂ.ಗೆ ಹಾಗೂ 2,250/-ರಿಂದ 4,050/-ರೂ.ಗೆ ಹೆಚ್ಚಿಸಲಾಗಿದೆ.ಸ್ನಾತಕೋತ್ತರ ವಿದ್ಯಾರ್ಥಿಗಳ ಶುಲ್ಕವೂ ಸೇರಿದಂತೆ ಬಹುತೇಕ ಶುಲ್ಕವನ್ನು ಅವೈಜ್ಞಾನಿಕವಾಗಿ ಹೆಚ್ಚಳಗೊಳಿಸಿರುವ ವಿಶ್ವವಿದ್ಯಾಲಯದ ಕೆಲಸ ಅಸಹನೀಯವಾದುದು.
ಕುವೆಂಪು ವಿಶ್ವವಿದ್ಯಾಲಯ ಮೊದಲಿನಿಂದಲೂ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಕಾಶಿ.ಇತ್ತೀಚೆಗಂತೂ ಬೇರೆ ಜಿಲ್ಲೆಗಳಿಂದ,ಹೊರ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನೆಗೆ ಹಲವು ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದಾರೆ.ಕುವೆಂಪು ವಿ.ವಿ. ತನ್ನ ಹಸಿರು ಕ್ಯಾಂಪಸ್ ನಿಂದಲೇ ಹೆಸರುವಾಸಿ.ವಿಶ್ವವಿದ್ಯಾಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ,ಹೆಚ್ಚಿನ ಶುಲ್ಕ ಪಡೆದು ಅವ್ಯವಸ್ಥೆಯಿಂದ ಕೂಡಿರುವ ವಸತಿನಿಲಯಗಳು, ನಾಮಕಾವಸ್ಥೆಗೆ ಮಾತ್ರ ಇರುವ ಹಸಿರು ಗ್ರಂಥಾಲಯ,ಸಂಶೋಧಕರಿಗೆ ಪ್ರತ್ಯೇಕ ಹಾಸ್ಟೆಲ್ ಇಲ್ಲದಿರುವುದು, ಅತಿಥಿ ಶಿಕ್ಷಕರಿಗೆ ಯುಜಿಸಿ ಮಾನದಂಡದಂತೆ ವೇತನ ನೀಡದಿರುವುದು ಹಾಗೂ ಇನ್ನೂ ಅನೇಕ ತೊಂದರೆಯಿಂದ ಕುಗ್ಗಿದೆ.ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯಲ್ಲಿ ಊಟ,ಉಪಾಹಾರ ಒದಗಿಸುವ ಕಾಲೇಜ್ ಕ್ಯಾಂಟೀನ್ ನಲ್ಲೂ ದರ ಹೆಚ್ಚಿಸಿ ಕಾಫಿ,ಚಹಾ ಹಾಗೂ ಚಾಟ್ಸ್ ಗೆ ಪರ್ಯಾಯವಾಗಿ ಕ್ಯಾಂಪಸ್ನಲ್ಲಿರುವ ಕ್ಯಾಂಟೀನ್ ನಲ್ಲಿ ಚಹಾ-ಕಾಫಿ ಮಾರದಂತೆ ಆದೇಶ ತಂದು ಎಲ್ಲ ವಿದ್ಯಾರ್ಥಿಗಳಿಂದ ಹೆಚ್ಚಿನ ದರದ ಚಹಾ-ಕಾಫಿಯನ್ನು ಕೊಳ್ಳುವಂತೆ ಮಾಡಲಾಗಿದೆ.
ಖಾಸಗಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದ್ದ ಕುವೆಂಪು ವಿಶ್ವವಿದ್ಯಾಲಯವನ್ನು ಮುಚ್ಚುವ ಹುನ್ನಾರವೇ ವಿಶ್ವವಿದ್ಯಾಲಯದ ಈ ಶುಲ್ಕ ಹೆಚ್ಚಳಕ್ಕೆ ಕಾರಣ ಹಾಗೂ ಕಾಲಕಾಲಕ್ಕೆ ಅನುದಾನ ನೀಡದ ಹಾಗೂ ಪ್ರಾಧ್ಯಾಪಕರ ನೇಮಕಾತಿ ಕೈಗೊಳ್ಳದ ಉನ್ನತ ಶಿಕ್ಷಣ ಇಲಾಖೆ ಹಾಗೂ ಸರ್ಕಾರವೇ ಕುವೆಂಪು ವಿ.ವಿ. ಮಾತ್ರವಲ್ಲದೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ದುಃಸ್ಥಿತಿಗೆ ಕಾರಣವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
-ಅನಿಕೇತನ,ಜ್ಞಾನ ಸಹ್ಯಾದ್ರಿ.
Ph.D fee Revised
ಬೀದರ.28.ಜೂನ್.25:- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರುಗಳಾದ ಶಶಿಧರ್ ಕೋಸಂಬೆ, ಶೇಖರ್ಗೌಡ ಜಿ.ರಾಮತ್ನಾಳ್ ಹಾಗೂ ಡಾ.ತಿಪ್ಪೇಸ್ವಾಮಿ ಕೆ.ಟಿ.…
ಬೀದರ.28.ಜೂನ್.25:- ಬೀದರನ ಮುಲ್ತಾನಿ ಕಾಲೋನಿಯ ನಿವಾಸಿಯಾದ ಶೇಖ ಅಜಿರೋದ್ದಿನ್ ತಂದೆ ಶೇಖ ಬೂಲಬುಲ (25) ಇತನು ದಿನಾಂಕ:27-05-2025 ರಂದು ಮನೆಯಿಂದ…
ಬೀದರ.28.ಜೂನ್.25:- ಭಾರತ ಸಂಸ್ಕೃತಿಯಲ್ಲಿ ಮಾದಕ ವಸ್ತುಗಳಿಗೆ ನೆಲೆಯಿಲ್ಲ ಆದರು ನಮ್ಮ ಈಗಿನ ಯುವ ಪಿಳಿಗೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಇದರಿಂದ…
ಬೀದರ.28.ಜೂನ್.25:-ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಕೃಷಿ ಕ್ಷೇತ್ರವು ಕಲುಷಿತಗೊಂಡಿರುತ್ತದೆ ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ನೈಸರ್ಗಿಕ…
ಬೀದರ.28.ಜೂನ್.25:- ಹುಟ್ಟುವ ಮಗುವಿನಿಂದ ಸಾಯುವ ವಯೋವೃದ್ಧದವರೆಗೂ ಸ್ವಚ್ಚಂದ ಜೀವನ ನಡೆಸಲು ನಮ್ಮ ಸಂವಿಧಾನದಲ್ಲಿ ಕಾನೂನು ರಚಿಸಲಾಗಿದೆ ಎಂದು ಹಿರಿಯ ಸಿವಿಲ್…
ಬೀದರ.28ಜೂನ್.25:- ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿ ದಲಿತ ಸಾಹಿತ್ಯ: ಅರ್ಧಶತಮಾನ ಎಂಬ ಹೆಸರಿನಲ್ಲಿ 3 ದಿನಗಳ ಅಧ್ಯಯನ…