ವಿಶ್ವವಿದ್ಯಾಲಯ ಬೋಧಕರ ಹುದ್ದೆ ತುಂಬಿಸುತ್ತೇವೆ, ಕೇಂದ್ರ ಸರಕಾರ ಕನಿಷ್ಠ 3 ವರ್ಷ ಶೇ. 50 ವೇತನ ನೀಡಲಿ

ರಾಜ್ಯದ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದುಃಸ್ಥಿತಿಯಲ್ಲಿವೆ. ವೇತನ, ಪಿಂಚಣಿಗಷ್ಟೇ ಹಣಕಾಸು ನೆರವು ಬಳಕೆ ಆಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ, ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮರೀಚಿಕೆಯಾಗಿದೆ. ಎನ್‌ಇಪಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸುವ ಮೂಲಕ ಹಳೇ ಮತ್ತು ಹೊಸ ವಿಶ್ವವಿದ್ಯಾಲಯಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ರಾಜ್ಯದ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಗೆ “ಮೇಜರ್‌ ಸರ್ಜರಿ’ ಆಗಬೇಕಿದೆ.

ಇನ್ನು ಹಳೇ ವಿಶ್ವವಿದ್ಯಾಲಯಗಳು ನಷ್ಟದ ಸುಳಿಗೆ ಸಿಲುಕಲು ಅವೈಜ್ಞಾನಿಕವಾಗಿ ಸ್ಥಾಪಿಸಿದ ಹೊಸ ವಿಸ್ಗಳೇ ಕಾರಣ’…ಇದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಅವರ ಅಭಿಪ್ರಾಯ.

ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರ ಈಗ ಶೈಕ್ಷಣಿಕ ವಲಯದಲ್ಲಿ ಭಾರೀ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆಗೆ “ನೇರಾನೇರ’ ಸಂದರ್ಶನದಲ್ಲಿ ಹಲವು ಸಂಗತಿಗಳನ್ನು ಸಚಿವರು ಹಂಚಿಕೊಂಡಿದ್ದಾರೆ.

ಎಲ್ಲ ವಿಶ್ವವಿದ್ಯಾಲಯಗಳ ಪರಿಸ್ಥಿತಿ ಹದಗೆಡಲು ಏನು ಕಾರಣ?
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-2020 ಜಾರಿಗೆ ತಂದ ಸಂದರ್ಭದಲ್ಲಿ ದೇಶದಲ್ಲಿ 1,600 ವಿಶ್ವವಿದ್ಯಾಲಯಗಳು ಇರಬೇಕು ಎಂದು ಹೇಳಲಾಗಿತ್ತು. ಆಗ ಇದ್ದ ಬಿಜೆಪಿ ಸರಕಾರವು ರಾಜ್ಯ ಶಿಕ್ಷಣ ರಂಗದಲ್ಲಿ ಬಹಳ ಸುಧಾರಣೆ ಮಾಡುತ್ತಿದೆ ಎಂಬ ಹೆಗ್ಗಳಿಕೆ ಪಡೆಯಬೇಕು ಎಂದು ಎನ್‌ಇಪಿಯ ಸಾಧಕ -ಬಾಧಕಗಳನ್ನು ಸಮಗ್ರವಾಗಿ ತಿಳಿದುಕೊಳ್ಳದೆ ಉನ್ನತ ಶಿಕ್ಷಣದಲ್ಲಿ ಎನ್‌ಇಪಿ ಜಾರಿಗೊಳಿಸಿತು.

ಜಿಲ್ಲೆ ಗೊಂದು ವಿಶ್ವವಿದ್ಯಾಲಯ . ಮಾಡಬೇಕು ಎಂದು ಹೊರಟಿತು. ಹಿಂದೆ ಇದ್ದ ಪದ್ಧತಿಯಲ್ಲಿ ಒಂದು ವಿಶ್ವವಿದ್ಯಾಲಯ . ಸ್ಥಾಪನೆ ಆಗಬೇಕಿದ್ದರೆ ವಿಶೇಷಾಧಿಕಾರಿಯೊಬ್ಬರನ್ನು ನೇಮಿಸಿ ಅವರಿಂದ ವರದಿ ಪಡೆದು ತೀರ್ಮಾನ ಕೈಗೊಳ್ಳಲಾಗುತ್ತಿತ್ತು. ಆದರೆ ಇದನ್ನು ಮಾಡದೆ ವಿಶ್ರಾಂತ ಕುಲಪತಿ ಹೇಮಂತ್‌ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಪಡೆದು ವಿಶ್ವವಿದ್ಯಾಲಯ .ಸ್ಥಾಪಿಸಲಾಯಿತು. ಅವರು ತಮ್ಮ ವರದಿಯಲ್ಲಿ ನೂತನ ವಿಶ್ವವಿದ್ಯಾಲಯಗಳಿಗೆ ಕನಿಷ್ಠ 20 ಕೋಟಿ ರೂ. ಮೂಲ ಬಂಡವಾಳ ಕೊಡಬೇಕು. ಅನಂತರ ಅಭಿವೃದ್ಧಿ ಮತ್ತು ಶೈಕ್ಷಣಿಕ ಚಟುವಟಿಕೆಗೆ ಬೇಕಾದ ಅನುದಾನವನ್ನು ನಿರಂತರವಾಗಿ ನೀಡಬೇಕು ಎಂದು ಹೇಳಿದ್ದಾರೆ. ಆದರೆ ಅದನ್ನು ಬದಿಗಿಟ್ಟು, ನಾನಾ ಷರತ್ತು ವಿಧಿಸಿ, 2 ಕೋಟಿ ರೂ. ನೀಡುತ್ತೇವೆ ಎಂದು ಹೇಳಿ, ಕುಲಪತಿಗಳನ್ನು ನೇಮಿಸಿ  ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರು. ಇದು ಹಳೆಯ ಮತು ಹೊಸ ವಿಶ್ವವಿದ್ಯಾಲಯಗಳೆರಡೂ ಹಾದಿ ತಪ್ಪಲು ಕಾರಣವಾಗಿದೆ.

ಉನ್ನತ ಶಿಕ್ಷಣದ ಸಮಸ್ಯೆ ಪರಿಹಾರಕ್ಕಿರುವ ಮಾರ್ಗಗಳ ಬಗ್ಗೆ ಸಂಪುಟ ಉಪ ಸಮಿತಿಯಲ್ಲಿ ಏನು ಚರ್ಚೆ ನಡೆದಿದೆ?
100ಕ್ಕಿಂತ ಕಡಿಮೆ ಇರುವ ಕಾಲೇಜುಗಳಿರುವ ವಿವಿಗಳನ್ನು ಮೂಲ ವಿಶ್ವವಿದ್ಯಾಲಯಗೆ ವಿಲೀನ ಮಾಡಬಹುದಾ? ಬೇರೆ ರೀತಿಯಲ್ಲಿ ಪುನಶ್ಚೇತನಕ್ಕೆ ಅವಕಾಶವಿದೆಯೇ? ಆರ್ಥಿಕ ಇಲಾಖೆ ಸಹಮತ ನೀಡಿದರೆ ಹೆಚ್ಚಿನ ಅನುದಾನ ನೀಡುವ, ಬೋಧಕರ ಹುದ್ದೆ ತುಂಬುವ ಪ್ರಯತ್ನ, ಪಿಂಚಣಿ ವ್ಯವಸ್ಥೆ ಬಗ್ಗೆ ಚರ್ಚೆ ನಡೆದಿದೆ. ವಿವಿಗಳನ್ನು ಬೇರ್ಪಡಿಸುವ ಸಂದರ್ಭದಲ್ಲಿ ಲಾಭ ಮತ್ತು ನಷ್ಟದ ಹಂಚಿಕೆ ಆಗಬೇಕು. ಆದರೆ, ಇಲ್ಲಿ ನಷ್ಟದ ಹಂಚಿಕೆ ಆಗಿಲ್ಲ. ಪೂರ್ಣ ಹೊರೆ ಮೂಲ ವಿಶ್ವವಿದ್ಯಾಲಯ ಮೇಲೆ ಬಿದ್ದಿದೆ. ಮುಕ್ತ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಸಾಧ್ಯವಾಗದಿರುವುದರಿಂದ ವಿವಿಗಳ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಹೊಡೆತ ನೀಡಿದೆ. ವಿವವಿಶ್ವವಿದ್ಯಾಲಯ ಬೋಧಕರ ಹುದ್ದೆಗಳಿಗೆ ಸ್ವಾಯತ್ತತೆ ನೀಡಿರುವುದೇ ಅವುಗಳು ಸ್ವಾವಲಂಬಿ ಆಗಬೇಕು ಎಂಬ ಕಾರಣಕ್ಕೆ.

ಈ ಬಗ್ಗೆ ನಾವು ಅಂತಿಮ ವರದಿಯನ್ನು ಕ್ಯಾಬಿನೆಟ್‌ನಲ್ಲಿ ತರುತ್ತೇವೆ.

ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತೀರಾ, ವಿಲೀನ ಮಾಡುತ್ತೀರಾ?
ವಿವಿಗಳನ್ನು ಮುಚುªವುದು, ವಿಲೀನ ಮಾಡುವುದು ಎಲ್ಲ ಮಾಧ್ಯಮಗಳಲ್ಲಿ ಚರ್ಚೆ ಆಗಿದೆ. ಉಪ ಮುಖ್ಯಮಂತ್ರಿಗಳು ವಿಲೀನ ಮಾಡುವ ಆಲೋಚನೆ ಇದೆ ಎಂದಿದ್ದಾರೆ. ಹಾಗಾದಾಗ ಪಿಜಿ ಸೆಂಟರ್‌ ಇದ್ದೇ ಇರುತ್ತದೆ. ಅಲ್ಲೇ ಎಲ್ಲ ಕೆಲಸ ನಡೆಯುತ್ತದೆ.

ರಾಜ್ಯದ ಅತ್ಯಂತ ಹಳೆಯ ವಿವಿಗಳಲ್ಲೇ ಭಾರಿ ಸಮಸ್ಯೆಗಳಿವೆಯಲ್ಲ?
ಮೈಸೂರು ವಿವಿ ದಕ್ಷಿಣ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ. ಇಂತಹ ವಿವಿ ಈಗ ಹರಿದು ಹಂಚಿ ಹೋಗಿದೆ. ಬೆಂಗಳೂರು ವಿವಿ 1964ರಲ್ಲಿ, ಮಂಗಳೂರು ವಿಶ್ವವಿದ್ಯಾಲಯ 1980ರಲ್ಲಿ ಆರಂಭಗೊಂಡಿತು.

ಈ ರೀತಿ ವಿಭಜನೆ ನಡೆದರೂ ಮೈಸೂರು ವಿಶ್ವವಿದ್ಯಾಲಯ ತನ್ನ ವೈಶಿಷ್ಟéವನ್ನು ಉಳಿಸಿಕೊಂಡು ಬಂದಿತ್ತು. ಆದರೆ ಏಕಾಏಕಿ ಚಾಮರಾಜನಗರ, ಮಂಡ್ಯ ಮತ್ತು ಹಾಸನ ವಿಶ್ವವಿದ್ಯಾಲಯ ಮಾಡಿದಾಗ ಮೈಸೂರು ವಿಶ್ವವಿದ್ಯಾಲಯಲ್ಲಿದು ಸಂಯೋಜಿತ ಕಾಲೇಜುಗಳ ಸಂಖ್ಯೆ 270 ರಿಂದ 115-120ಕ್ಕೆ ಕುಸಿಯಿತು. ವಿಶ್ವವಿದ್ಯಾಲಯ ಬಳಿ 800 ಎಕ್ರೆಗಿಂತ ಹೆಚ್ಚು ಜಾಗ ಇದೆ. ಪುರಾತತ್ವ ಇಲಾಖೆ ಗುರುತಿಸಿದ ಕಟ್ಟಡಗಳಿವೆ. ಆದರೆ ಅದು ಸಮಸ್ಯೆಗಳ ಆಗರವಾಗಿದೆ. ಈಗ ಪಿಂಚಣಿ ಕೊಡಲಿಕ್ಕೂ ವಿಶ್ವವಿದ್ಯಾಲಯ ಬಳಿ ದುಡ್ಡಿಲ್ಲ.

ಚಾಮರಾಜನಗರ ವಿಶ್ವವಿದ್ಯಾಲಯಲ್ಲಿ 18 ಸಂಯೋಜಿತ ಕಾಲೇಜು, ಮಂಡ್ಯ ವಿಶ್ವವಿದ್ಯಾಲಯಲ್ಲಿ 48, ಹಾಸಸ ವವಿಶ್ವವಿದ್ಯಾಲಯ ಬಳಿ 56 ಕಾಲೇಜುಗಳನ್ನು ಇಟ್ಟುಕೊಂಡು ವಿವಿಗಳ ಸ್ಥಾಪನೆ ಮಾಡಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಈ ವಿಶ್ವವಿದ್ಯಾಲಯಲ್ಲಿ 1,700ಕ್ಕಿಂತ ಹೆಚ್ಚು ಪಿಂಚಣಿಗೆ ಅರ್ಹತೆ ಇರುವ ಸಿಬಂದಿಯಿದ್ದರೆ. ಆ ವಿಶ್ವವಿದ್ಯಾಲಯ ಅವರು ಪಿಂಚಣಿ ಕೊಡಲಿಕ್ಕೆ 140 ಕೋಟಿ ರೂ. ಬೇಕು ಎಂದು ನಮಗೆ ಬೇಡಿಕೆ ಇಡುತ್ತಿದ್ದಾರೆ.

ನಾವು ಈ ವರ್ಷ 70 ಕೋಟಿ ರೂ. ಹಣ ಪಿಂಚಣಿಗೆಂದು ನೀಡಿದ್ದೇವೆ. ಮಂಗಳೂರು ವಿಶ್ವವಿದ್ಯಾಲಯದ್ದು ಕೂಡ ಇಂಥದ್ದೆ ಸಮಸ್ಯೆ. ಅಲ್ಲಿಯೂ ಪೆನ್ಶನ್‌ ಕೊಡಲು, ಅತಿಥಿ ಉಪನ್ಯಾಸಕರಿಗೆ ಸಂಬಳ ಕೊಡುವ ವಿಚಾರದಲ್ಲಿ ಸಮಸ್ಯೆಯಿದೆ. ಅವರು ಹಣಕಾಸು ಇಲಾಖೆಯ ಅನುಮತಿ ಪಡೆಯದೆ 4 ಘಟಕ ಕಾಲೇಜು ಸ್ಥಾಪಿಸಿ ಈಗ ಈ ಕಾಲೇಜುಗಳನ್ನು ಸರಕಾರ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಆರಂಭಿಸುವಾಗ ನಮ್ಮ ಅನುಮತಿ ಪಡೆದಿಲ್ಲ, ಈಗ ವಹಿಸಿಕೊಳ್ಳಿ ಎಂದರೆ ಹೇಗೆ ಎಂದು ಹಣಕಾಸು ಇಲಾಖೆಯವರು ಹೇಳುತ್ತಿದ್ದಾರೆ. ಹೀಗೆ ಒಂದೊಂದು ವಿವಿಯಲ್ಲಿ ಒಂದೊಂದು ಸಮಸ್ಯೆಯಿದೆ.

ಈಗ ವಿಶ್ವವಿದ್ಯಾಲಯಗಳ ಸಮಸ್ಯೆ ಪರಿಹಾರಕ್ಕೆ ಅವುಗಳನ್ನು ಮುಚ್ಚುವುದೇ ಪರಿಹಾರವೇ?
ಈಗ ಯಾವುದೇ ವಿಶ್ವವಿದ್ಯಾಲಯ ಸ್ಥಾಪನೆ ಆಗಿರುವುದಕ್ಕೆ ವಿರೋಧ ಸರಕಾರದ ಉದ್ದೇಶವಲ್ಲ. ಗುಣಮಟ್ಟದ ಉನ್ನತ ಶಿಕ್ಷಣ ಕೊಡುವುದು ನಮ್ಮ ಆದ್ಯತೆ. ಯಾವುದೇ ವಿಶ್ವವಿದ್ಯಾಲಯ ಸ್ಥಾಪನೆಯಾದ ತತ್‌ಕ್ಷಣ ಅವರಿಗೆ ಪದವಿ ಪ್ರದಾನ ಮಾಡಲು ಯುಜಿಸಿ ತತ್‌ಕ್ಷಣವೇ ಅನುಮತಿ ನೀಡುತ್ತದೆ. ಆದರೆ ಯುಜಿಸಿ ಕೇಂದ್ರ ಪುರಸ್ಕೃತ ಯೋಜನೆಗಳಿಂದ ನೆರವು ಪಡೆಯುವುದು ಅಷ್ಟು ಸುಲಭವಲ್ಲ. ರಾಜ್ಯದಲ್ಲಿ ಕೇವಲ 15 ವಿಶ್ವವಿದ್ಯಾಲಯಗಳಿಗೆ ಮಾತ್ರ 12ಬಿ ಮಾನ್ಯತೆ ಬಂದಿದೆ. ಇದರ ಜತೆಗೆ 2014ರ ಬಳಿಕ ಸಂಶೋಧನೆಗೆ ಯುಜಿಸಿ UGC ನೇರವಾಗಿ ನೀಡುತ್ತಿದ್ದ ಅನುದಾನವನ್ನು ನಿಲ್ಲಿಸಿದೆ.

ಖಾಸಗಿ ವಿಶ್ವವಿದ್ಯಾಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಅಲ್ಲವೇ?
ಬಿಜೆಪಿ ಸರಕಾರ ಈ ಹಿಂದೆ ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳನ್ನು ಆರಂಭಿಸಲು ಅನುಮತಿ ನೀಡಿದ್ದ ಪರಿಣಾಮ ವಿದ್ಯಾರ್ಥಿಗಳು ಸಹ ಖಾಸಗಿ ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಹಿಂದಿನ ಬಿಜೆಪಿ ಸರಕಾರ ಎಡವಟ್ಟು ಮಾಡಿದೆಯೇ?
ನೀತಿ ಆಯೋಗದ ವರದಿಯೊಂದರ ಪ್ರಕಾರ, ಕರ್ನಾಟಕದಲ್ಲಿ 1 ಲಕ್ಷ ಜನರಿಗೆ 69 ಕಾಲೇಜುಗಳಿವೆ. ಅದೇ ರಾಷ್ಟ್ರೀಯ ಸರಾಸರಿ 30. ಆದರೆ, ಉನ್ನತ ಶಿಕ್ಷಣದ ನೋಂದಣಿ ಯ ಲ್ಲಿ ನಮ್ಮ ರಾಜ್ಯದಲ್ಲಿ ಶೇ. 36 ಇದೆ. ಜಿಲ್ಲೆಗೆ ಎಷ್ಟು ವಿಶ್ವವಿದ್ಯಾಲಯಗಳಿವೆ ಎಂಬುದನ್ನು ನೋಡಿದರೆ ನಮಲ್ಲಿ 22-23 ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳಿವೆ. ಐದಾರು ಜಿಲ್ಲೆಗಳಲ್ಲಿ ಇಲ್ಲ. ಎನ್‌ಇಪಿಯಲ್ಲಿ ಪ್ರಸ್ತಾವನೆ ಆಗಿದ್ದನ್ನು ಅಧ್ಯಯನ ಮಾಡದೆ ಬಹುಶಿಸ್ತೀಯ ವಿವಿಯನ್ನು ನಿರ್ಮಾಣ ಮಾಡಿದ್ದಾರೆ.

ಕಲೆ, ವಾಣಿಜ್ಯ, ವೈದ್ಯಕೀಯ, ತಾಂತ್ರಿಕ, ಕಾನೂನು ಎಲ್ಲವೂ ಒಂದೇ ವಿಶ್ವವಿದ್ಯಾಲಯೊಳಗಡೆ ಇರಬೇಕಾಗುತ್ತದೆ. ಈಗಿನ ಸ್ಥಿತಿಯಲ್ಲಿ ದೇಶದಲ್ಲಿ ಬಹು ಶಿಸ್ತೀಯ ವಿವಿ ಮಾಡಲು ಸಾಧ್ಯವೇ?

ಬೋಧಕರ ತೀವ್ರ ಕೊರತೆ ಇರುವ ಬಗ್ಗೆ?
ಉನ್ನತ ಶಿಕ್ಷಣ ಇಲಾಖೆಯ ಎಲ್ಲ ವಿಶ್ವವಿದ್ಯಾಲಯಗಳ ಮಂಜೂರಾಗಿರುವ ಬೋಧಕರ ಸಂಖ್ಯೆ 5 ಸಾವಿರ ಹತ್ತಿರ ಹತ್ತಿರ ಇದೆ. ಈ ಪೈಕಿ 2,800 ಹುದ್ದೆ ಖಾಲಿಯಿದೆ. ಶೇ. 60 ಬೋಧಕರ ಹುದ್ದೆಗಳು ಖಾಲಿ ಇವೆ. ನಮ್ಮ ಉನ್ನತ ಶಿಕ್ಷಣದ ಸ್ಥಿತಿಗತಿ ಇದು. ಆದರೆ ನಾವು ಬೋಧಕರ ಹುದ್ದೆ ಭರ್ತಿಗೆ ಆದ್ಯತೆ ನೀಡುತ್ತೇವೆ.

ಯುಜಿಸಿ ಪಾತ್ರ ಹೇಗಿರಬೇಕೆಂಬುದು ನೀವು ಬಯಸುತ್ತೀರಿ?
ಯುಜಿಸಿ ಗಮನ ಕೊಡಬೇಕಾಗಿರುವುದು ಉನ್ನತ ಶಿಕ್ಷಣದಲ್ಲಿನ ಲೋಪಗಳು ಏನಿವೆ? ಅದನ್ನು ಹೇಗೆ ಸುಧಾರಣೆ ಮಾಡಬೇಕು ಎಂಬುದರತ್ತ. ಎಲ್ಲ ರಾಜ್ಯಗಳಲ್ಲಿ ಅತಿಥಿ ಶಿಕ್ಷಕರಿದ್ದಾರೆ. ಅವರ ಹೋರಾಟ, ಕಾಯಂ ಮಾಡಲು ಸುಪ್ರೀಂಕೋರ್ಟ್‌ನ ತೀರ್ಪಿನ ಅಡ್ಡಿ ಇರುವ ಹಿನ್ನೆಲೆ ಯಲ್ಲಿ ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬೇಕು ಎಂಬುದರ ಚರ್ಚೆ ಮಾಡಬೇಕಿತ್ತು. ಕೇಂದ್ರ ಸರಕಾರವು ವಿಶ್ವವಿದ್ಯಾಲಯಗಳಿಗೆ ಶೇ. 60 ಅನುದಾನ ಕೊಡುವ ರೀತಿಯಲ್ಲಿಯೇ ಮುಂದಿನ 3 ವರ್ಷದಲ್ಲಿ ನಿಮ್ಮಲ್ಲಿರುವ ಖಾಲಿ ಹುದ್ದೆಗಳನ್ನು ತುಂಬಿ, ಈ ಹುದ್ದೆಗಳ ಸಂಬಳದಲ್ಲಿ ಶೇ. 50ರಷ್ಟನ್ನಾ ದರೂ 3 ವರ್ಷ ಕಾಲ ನಾವು ಭರಿಸುತ್ತೇವೆ ಎಂಬ ಅಭಯ ನೀಡಬೇಕು. ಆ ಮೇಲಿನ ಜವಾಬ್ದಾರಿಯನ್ನು ರಾಜ್ಯ ಸರಕಾರದ ಮೇಲೆ ಹೊರಿಸಲಿ.

ವಿಶ್ವವಿದ್ಯಾಲಯಗಳಲ್ಲಿನ ಅಭಿವೃದ್ಧಿ ಚಟುವಟಿಕೆಗೆ ಅನುದಾನ ಸಾಲುತ್ತಿಲ್ಲ ಎಂಬ ಆರೋಪದ ಬಗ್ಗೆ?
ಬಿಎ ಕೋರ್ಸ್‌ಗೆ ಕೆಲವು ಕಾಲೇಜುಗಳಲ್ಲಿ 1,200 ರೂ. ಶುಲ್ಕವಿದೆ. ಕೆಲ ಹೊಸ ಕೋರ್ಸ್‌ಗಳಿಗೆ 25 ಸಾವಿರ ರೂ.ನಿಂದ 30 ಸಾವಿರ ರೂ. ಇದೆ. ಅದೇ ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ ರೂ.ಗಳಿವೆ. ಇಷ್ಟು ಕಡಿಮೆ ಶುಲ್ಕ ತೆಗೆದುಕೊಂಡು ವಿಶ್ವವಿದ್ಯಾಲಯಗಳು ಸ್ವಾವಲಂಬಿಗಳಾಗಲೂ ಸಾಧ್ಯವಿ ದೆಯೇ? ಶೈಕ್ಷಣಿಕ ಸ್ವಾಯತ್ತತೆ, ಆಡಳಿತ ಸ್ವಾಯತ್ತತೆ ಇದೆ. ಇಷ್ಟು ಕಡಿಮೆ ಶುಲ್ಕ ಇಟ್ಟುಕೊಂಡು ಅಭಿವೃದ್ಧಿ ಹೊಂದಲು ಸಾಧ್ಯವೇ? ಸಿಎಸ್‌ಆರ್‌ ನಿಧಿ ಎಷ್ಟು ತರಬಹುದು? ಸರಕಾರ ಎಲ್ಲ ವಿಶ್ವವಿದ್ಯಾಲಯಗಳಿಗೆ ಸಂಬಳಕ್ಕೆಂದು ವರ್ಷಕ್ಕೆ 950 ಕೋಟಿ ರೂ. ನೀಡುತ್ತಿದೆ. ಅಭಿವೃದ್ಧಿ ಎಂಬುದು ಮರೀಚಿಕೆ ಯಾಗಿದೆ. ಈ ಹಿಂದೆ ಕೆಲ ಕುಲಪತಿಗಳು ಮಾಡಿದ ಆಡಳಿತದ ವೈಖರಿ, ದುಂದುವೆಚ್ಚ, ವಿಶ್ವವಿದ್ಯಾಲಯಗಳ ಆರ್ಥಿಕ ಶಿಸ್ತನ್ನು ಗಾಳಿಗೆ ತೂರಿ ಆಡಳಿತ ನಡೆಸಿದ್ದಾರೆ.

ಈಗಲೂ ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಸಮಸ್ಯೆ ಉಲ್ಬಣಿಸಲಿದೆ. ಇದೆಲ್ಲದರ ಬಗ್ಗೆ ಉಪ ಸಮಿತಿಯ ಮುಂದೆ ಚರ್ಚೆ ಮಾಡಿದ್ದೇವೆ. ಇದಕ್ಕೆ ಏನು ಪರಿಹಾರ ಎಂದು ಸಮಾಲೋಚಿಸಿದ್ದೇವೆ.

ರಾಜ್ಯದ ಉನ್ನತ ಶಿಕ್ಷಣ ಪರಿಸ್ಥಿತಿ ಹೇಗೆ ವಿಶ್ಲೇಷಿಸುವಿರಿ?
ರಾಜ್ಯದಲ್ಲಿ 32 ವಿಶ್ವವಿದ್ಯಾನಿಲಯಗಳು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿವೆ. ಇದರಲ್ಲಿ ಕೆಲವು ವಿಶೇಷ ವಿವಿಗಳಿವೆ. ಜತೆಗೆ ಕಳೆದ 8 -10 ವರ್ಷಗಳಲ್ಲಿ ಕೇಂದ್ರ ಸರಕಾರದ ರುಸಾ ಯೋಜನೆಯಡಿ ನ್ಯಾಕ್‌ನಲ್ಲಿ ಉತ್ತಮ ಶ್ರೇಯಾಂಕದೊಂದಿಗೆ ಮಾನ್ಯತೆ ಪಡೆದು ಸಾಲಿಟರಿ ವಿವಿಯಾಗಿರುವ ಸಂಸ್ಥೆಗಳಿವೆ. ಆರಂಭದಲ್ಲಿ ಮಂಡ್ಯ, ಮಹಾರಾಣಿ, ನೃಪತುಂಗ ವಿವಿಗೆ 55 ಕೋಟಿ ರೂ. ಅನುದಾನ ಪ್ರಕಟಿಸಲಾಯಿತು. ಈ 55 ಕೋಟಿ ರೂ.ಗಳಲ್ಲಿ ಕೇಂದ್ರದ ಪಾಲು ಶೇ.60 ಮತ್ತು ರಾಜ್ಯದ ಪಾಲು ಶೇ. 40 ಇದೆ. ಮಂಡ್ಯದಲ್ಲಿ ಒಂದೇ ಕಾಲೇಜಿಗೆ ವಿಶ್ವವಿದ್ಯಾಲಯ ಸ್ಥಾನಮಾನ ಕೊಡು ವುದು ಸರೀಯಾ ಎಂಬ ಪ್ರಶ್ನೆ ಎದ್ದಿದ್ದಕ್ಕೆ ಹಿಂದಿನ ಸರಕಾರದ ಅವಧಿಯಲ್ಲಿ ಮಂಡ್ಯದಲ್ಲಿನ ಇತರ ಕಾಲೇಜುಗಳನ್ನು ಆ ವಿಶ್ವವಿದ್ಯಾಲಯಗೆ ಸಂಯೋಜಿಸಲಾಯಿತು. ಇದೀಗ ಮಂಡ್ಯ ವಿವಿ ಅಧೀನದಲ್ಲಿ 48 ಕಾಲೇಜುಗಳಿವೆ. ಈ ಎಲ್ಲ ಹೊಸ ವಿವಿಗಳು ಆರಂಭದಿಂದಲೂ ಸಮಸ್ಯೆಯಿಂದ ಕೂಡಿವೆ.

ಹಳೆ ಅಥವಾ ಮೂಲ ವಿಶ್ವವಿದ್ಯಾಲಯಗಳ ಸ್ಥಿತಿ ಹೇಗಿದೆ?
ಹೊಸ ವಿಶ್ವವಿದ್ಯಾಲಯಗಳ ಜತೆಗೆ ಹಳೆ ವಿಶ್ವವಿದ್ಯಾಲಯಗಳು ಸಮಸ್ಯೆಯಲ್ಲಿ ಸಿಲುಕಿವೆ. ಹೊಸ ವಿಶ್ವವಿದ್ಯಾಲಯಗಳಿಗೆ ಮೂಲ ವಿವಿಗಳಿಂದ ಬೋಧಕರ ನೇಮಕಾತಿಯ ಸಮಸ್ಯೆಯಿದೆ. ಉದಾಹರಣೆಗೆ ಮಹಾರಾಣಿ ಕ್ಲಸ್ಟರ್‌ ವಿವಿ ಮೊದಲು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿತ್ತು. ಅಲ್ಲಿ ಮಂಡ್ಯ ವಿಶ್ವವಿದ್ಯಾಲಯ ಜತೆ ಆಪ್ಟ್ ಇನ್‌-ಆಪ್ಟ್ ಔಟ್‌ ಎಂಬ ಅವಕಾಶ ನೀಡಲಾಯಿತು.

ಬೋಧಕರಿಗೆ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಮುಂದುವರಿಯುತ್ತೀರಾ? ಇಲ್ಲವೇ ವಿಶ್ವವಿದ್ಯಾಲಯಗೆ ಸೇರಿಕೊಳ್ಳುತ್ತೀರಾ ಎಂಬ ಸಮಸ್ಯೆ ಉದ್ಭವವಾಗಿ ಅದು ಈಗ ನ್ಯಾಯಾಲಯದಲ್ಲಿದೆ. ಅವರ ಹಿರಿತನದ ಸಮಸ್ಯೆಯಿದೆ. ಗುತ್ತಿಗೆ ಆಧಾರದ ಸಮಸ್ಯೆಯಿದೆ.

-ರಾಕೇಶ್‌ ಎನ್‌.ಎಸ್

prajaprabhat

Recent Posts

ಕಳೆದುಹೋದ, ಕಳುವಾದ ಮೊಬೈಲ್ ಫೋನ್‍ಗಳ ಬಗ್ಗೆ CEIR ಪೋರ್ಟಲ್‍ನಲ್ಲಿ ದೂರು ದಾಖಲಿಸಿ-ಎಸ್ಪಿ ಪ್ರದೀಪ ಗುಂಟಿ

ಬೀದರ.15.ಜೂನ್.25:- ಸಾರ್ವಜನಿಕರು ತಮ್ಮ ಮೊಬೈಲ್ ಪೋನ್‍ಗಳು ಕಳೆದುಹೋದ ಅಥವಾ ಕಳ್ಳತನವಾದ್ದಲ್ಲಿ ಅನ್‍ಲೈನ್ ಮೂಲಕವೇ ಕೆಎಸ್‍ಪಿ ವೆಬ್‍ಸೈಟ್‍ನಲ್ಲಿ ಹೋಗಿ e-Lost Reports…

2 hours ago

ಜೂ.15 ರಂದು ಸಮಾಜ ಕಲ್ಯಾಣ ಸಚಿವ<br>*ಡಾ.ಹೆಚ್.ಸಿ.ಮಹಾದೇವಪ್ಪ ಅವರ ಬೀದರ ಜಿಲ್ಲಾ ಪ್ರವಾಸ

ಬೀದರ.15.ಜೂನ್25:- ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಅವರು ಜೂನ್.15 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ…

3 hours ago

ಅಮೆರಿಕ ಸೇನೆಯು 250ನೇ ವಾರ್ಷಿಕೋತ್ಸವ.

ಮೆರವಣಿಗೆಯೊಂದಿಗೆ ಆಚರಿಸುತ್ತದೆ ಅಮೆರಿಕವನ್ನು ಬಲಪಡಿಸುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ಶನಿವಾರ ವಾಷಿಂಗ್ಟನ್, ಡಿಸಿಯಲ್ಲಿ ಯುಎಸ್ ಸೈನ್ಯವು ತನ್ನ 250 ನೇ…

5 hours ago

ಕೇಂದ್ರ ಸಚಿವ ಅಮಿತ್ ಶಾ ಅವರಿಂದ 60,000 ಕ್ಕೂ ಹೆಚ್ಚು ಹೊಸ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ನೇಮಕಾತಿ ಪತ್ರ ವಿತರಣೆ

ಇಂದು ಮಾರ್ಚ್ 31, 2026 ರ ವೇಳೆಗೆ ಭಾರತವು ನಕ್ಸಲ್ ವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ…

5 hours ago

ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಸೈಪ್ರಸ್ ತಲುಪಿದರು

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಸೈಪ್ರಸ್‌ಗೆ ಆಗಮಿಸಿದ್ದಾರೆ. ಅವರನ್ನು ಲಾರ್ನಾಕಾ ಅಂತರಾಷ್ಟ್ರೀಯ…

5 hours ago

ಅಹಮದಾಬಾದ್ ವಿಮಾನ ಅಪಘಾತದಲ್ಲಿ 32 ಡಿಎನ್‌ಎ ಹೊಂದಾಣಿಕೆ ದೃಢಪಟ್ಟಿದೆ; 14 ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ಗುಜರಾತ್‌ನ ಅಹಮದಾಬಾದ್ ವಿಮಾನ ಅಪಘಾತದಲ್ಲಿ, ಇಲ್ಲಿಯವರೆಗೆ ಒಟ್ಟು 32 ಮೃತರ ಡಿಎನ್‌ಎ ಮಾದರಿಗಳನ್ನು ಹೊಂದಾಣಿಕೆ ಮಾಡಲಾಗಿದ್ದು, 14 ಮೃತದೇಹಗಳನ್ನು ಅವರ…

5 hours ago