ವಿವಿಧ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶ: ಅರ್ಜಿ ಆಹ್ವಾನ


ಬೀದರ 19ಜನವರಿ.25:- ಕರ್ನಾಟಕ ವಸತಿ ಶೀಕ್ಷಣ ಸಂಸ್ಥೆಗಳ ಸಂಘದ ಅಧೀನದ ಬೀದರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್ ಅಂಬೇಡ್ಕರ ಹಾಗೂ ಶ್ರೀಮತಿ ಇಂದಿರಾಗಾAಧಿ ವಸತಿ ಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಸ್ಥಾನಗಳನ್ನು ಭರ್ತಿ ಮಾಡಲು ಆನ್ ಲೈನ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೀದರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬೀದರ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಪ್ರಸ್ತುತ ವರ್ಷದಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಈ ಶಾಲೆಗೆ ಅರ್ಜಿ ಸಲ್ಲಿಸುವ ಹಿಂದುಳಿದ ವರ್ಗದ 2ಎ,2ಬಿ,3ಎ ಮತ್ತು 3ಬಿ ಪ್ರವರ್ಗಗಳಿಗೆ ಸೇರಿರುವ ವಿದ್ಯಾರ್ಥಿಗಳ ವಾರ್ಷಿಕ ವರಮಾನ ರೂ. 1,00,000 ಒಳಗಿರಬೇಕು. ಎಸ್.ಸಿ, ಎಸ್.ಟಿ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 2,50,000 ಒಳಗಿರಬೇಕು. ಅರ್ಜಿಗಳನ್ನು ಹತ್ತಿರದ ವಸತಿ ಶಾಲೆಯಿಂದ ಅಥವಾ  www.kreis.kar.nic.in    ಈ ವೆಬ್‌ಸೈಟ್‌ನಲ್ಲಿ ಪಡೆಯಬಹುದು.

Qಅರ್ಜಿಗಳನ್ನು ತುಂಬಿ ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರಿಗೆ ದಿನಾಂಕ: 25-01-2025ರ ಸಂಜೆ 5:30 ರ ಒಳಗೆ ಸಲ್ಲಿಸುವುದು. ನಂತರ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲಾ.


ಪ್ರವೇಶ ಪರೀಕ್ಷೆಯು ಆಯಾ ತಾಲ್ಲೂಕಾ ಕೇಂದ್ರಗಳಲ್ಲಿ ದಿನಾಂಕ: 15-02-2025 ರಂದು ಮಧ್ಯಾಹ್ನ 2.30 ಗಂಟೆಗೆ ನಡೆಸಲಾಗುತ್ತದೆ. ಪರೀಕ್ಷೆಗೆ 5ನೇ ತರಗತಿಯ ಹಿಂದಿ ವಿಷಯ ಹೊರತು ಪಡಿಸಿ ಉಳಿದ 5 ವಿಷಯಗಳಿಗೆ ತಲಾ 20 ಅಂಕಗಳ ಪ್ರಶ್ನೆಗಳು ಇರುತ್ತವೆ.

ಅನ್‌ಲೈನ್ ಮೂಲಕ ತಾವು ಅಯ್ಕೆ ಮಾಡಿಕೊಂಡ ಶಾಲಾ ಆದ್ಯತೆಯಂತೆ ಮೇರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರೀಯೆ ನಡೆಯುವುದರಿಂದ ಯಾವುದೇ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ವಸತಿ ಶಾಲೆ ಇಲ್ಲವೇ 7899998755, 9945196115, 9986850550 ಈ ಮೊಬೈಲ್ ನಂಬರಗಳಿಗೆ ಸಂಪರ್ಕಿಸಬಹುದುದಾಗಿದೆ ಎಂದು ಅವರು ತಿಳಿಸಿದ್ದಾರೆ.

prajaprabhat

Recent Posts

ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು-ವಿದ್ಯಾರ್ಥಿಗಳಿಗೆ ‘AI’ ಆಧಾರಿತ ಹಾಜರಾತಿ ಜಾರಿ : ಶಿಕ್ಶಣ ಸಚಿವ ಮಧು ಬಂಗಾರಪ್ಪ

ಬಾಗಲಕೋಟ.11.ಜೂನ್.25:- ಸರ್ಕಾರಿ ಶಾಲಾ ದಾಖಲಾತಿ ಮತ್ತು ಶಿಕ್ಷಕರ ನೇಮಕ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಗ್ ಅಪ್ಡೇಟ್ ನೀಡಿದ್ದಾರೆ.…

2 hours ago

ಕೆಸ್ತೂರಿನಲ್ಲಿ ರೈತರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ.

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಯಳಂದೂರು  ಕೃಷಿ ಇಲಾಖೆ ಹಾಗೂ ಭಾ.ಕೃ.ಸಂ.ಪ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ…

2 hours ago

ಸರ್ಕಾರಿ ಕಾಲೇಜುಗಳಲ್ಲಿ ನೇಮಕಾತಿಗಾಗಿ ಯುಜಿಸಿ ನಿರ್ದಿಷ್ಟಪಡಿಸಿದ ಅರ್ಹತೆಗಳನ್ನು ಪೂರೈಸಬೇಕು ಎಂದು ತೀರ್ಪು ನೀಡಿದೆ.

ಬೆಂಗಳೂರು.ಯುಜಿಸಿ ಅತಿಥಿ ಅಧ್ಯಾಪಕರ ಕುರಿತಾದ ಇತ್ತೀಚಿನ ಸುತ್ತೋಲೆಗಳು ಸಾಮಾನ್ಯವಾಗಿ ಅವರ ನೇಮಕಾತಿ, ಅರ್ಹತೆಗಳು ಮತ್ತು ಗೌರವ ಧನಕ್ಕೆ ಸಂಬಂಧಿಸಿದ ವಿಷಯಗಳನ್ನು…

2 hours ago

ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷಾ ಕಾರ್ಯಾವಧಿ ವಿಸ್ತರಣೆ

ದಾವಣಗೆರೆ.11.ಜೂನ್.25:- ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ಕಾರ್ಯದ ವೈಜ್ಞಾನಿಕ ದತ್ತಾಂಶವನ್ನು ಸಂಗ್ರಹಿಸಲು ಮೇ.5 ರಿಂದ ಮನೆ ಮನೆ ಭೇಟಿ…

4 hours ago

ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೂ ಫೇಶಿಯಲ್ ಅಟೆಂಡೆನ್ಸ್ :ಶಿಕ್ಷಣ ಸಚಿವರು ಹೇಳಿದ್ದೇನು.

ಬಾಗಲಕೋಟ.11.ಜೂನ್.25:- ರಾಜ್ಯ ಸರ್ಕಾರ ಇನ್ಮುಂದೆ ಫೆಸಿಯಲ್ ಅಟೆಂಡೆನ್ಸ್ ಮಾಡೋಕೆ ನಿರ್ಧರಿಸಿದೆ. ಡಿಜಿಟಲ್ ಯುಗ ಆಗಿರುವ ಕಾರಣ ಸರ್ಕಾರಿ ಶಾಲೆಗಳ ಮಕ್ಕಳಿಗೂ…

4 hours ago

ರಾಜ್ಯದ ಸರ್ಕಾರ ಈ ಇಲಾಖೆಯ ನೌಕರರಿಗೆ ‘OPS ಜಾರಿ

ಬೆಂಗಳೂರು.11.ಜೂನ್.25:- ರಾಜ್ಯದ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಲ್ಲಿ ಎನ್ ಪಿ ಎಸ್ ರದ್ದುಗೊಳಿಸಿ, ಓಪಿಎಸ್ ಜಾರಿ ಮಾಡುವುದಾಗಿದೆ. ರಾಜ್ಯ…

4 hours ago