Categories: ರಾಜ್ಯ

ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ

ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ

ಬೀದರ, ನವೆಂಬರ್.15 :- ಬೀದರ ಜಿಲ್ಲೆಯಲ್ಲಿನ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನ್ಯಾಯಸಮ್ಮತ ಹಾಗೂ ನಿಸ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಹಾಗೂ ಚುನಾವಣೆ ಸಮಯದಲ್ಲಿ ಯಾವುದೇ ರೀತಿಯಾದಂತಹ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಬೇಕಾಗಿರುವುದರಿಂದ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ-10(ಬಿ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2020ರ ಕಲಂ 308(ಎಸಿ) ರಂತೆ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನಾಂಕ: 21-11-2024 ರ ಸಂಜೆ 5 ಗಂಟೆಯಿAದ ದಿನಾಂಕ: 23-11-2024ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ವಿಧದ ಅಬಕಾರಿ ಸನ್ನದುಗಳನ್ನು ಮುಚ್ಚಲು ಹಾಗೂ ಮಧ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ಮಾಡುವುದನ್ನು ನಿಷೇಧಿಸಿ “ಶುಷ್ಕ ದಿನ” ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಆದೇಶ ಹೊರಡಿಸಿದ್ದಾರೆ.
ಬೀದರ ಜಿಲ್ಲೆಯಲ್ಲಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸ್ಥಾನಗಳ ವಿವರ: ಔರಾದ ತಾಲ್ಲೂಕಿನ 5-ಸಂತಪೂರ ಗ್ರಾಮ ಪಂಚಾಯತಿಯ 01 ಸ್ಥಾನ, 15-ಏಕಂಬಾ ಗ್ರಾಮ ಪಂಚಾಯತಿಯ 04 ಸ್ಥಾನ, ಹುಮನಾಬಾದ ತಾಲ್ಲೂಕಿನ ನಂದಗಾAವ ಗ್ರಾಮ ಪಂಚಾಯತಿಯ 07 ಸ್ಥಾನ, 6-ಹುಡಗಿ ಗ್ರಾಮ ಪಂಚಾಯತಿಯ 01 ಸ್ಥಾನ, 18-ಹಳ್ಳಿಖೇಡ (ಕೆ) ಗ್ರಾಮ ಪಂಚಾಯತಿಯ 01 ಸ್ಥಾನ, ಬೀದರ ತಾಲ್ಲೂಕಿನ 01-ಗಾದಗಿ ಗ್ರಾಮ ಪಂಚಾಯತಿಯ 01 ಸ್ಥಾನ, 8-ನಾಗೋರಾ ಗ್ರಾಮ ಪಂಚಾಯತಿಯ 01 ಸ್ಥಾನ, 10-ಬರೂರ ಗ್ರಾಮ ಪಂಚಾಯತಿಯ 01 ಸ್ಥಾನ, ಭಾಲ್ಕಿ ತಾಲ್ಲೂಕಿನ 3-ಮೆಹಕರ ಗ್ರಾಮ ಪಂಚಾಯತಿಯ 2 ಸ್ಥಾನ, 28-ಅಂಬೇಸಾAಗವಿ ಗ್ರಾಮ ಪಂಚಾಯತಿಯ 01 ಸ್ಥಾನ, 38-ಅಟ್ಟರ್ಗಾ ಗ್ರಾಮ ಪಂಚಾಯತಿಯ 1 ಸ್ಥಾನ, ಹುಲಸೂರ ತಾಲ್ಲೂಕಿನ 4-ಮಿರಖಲ್ ಗ್ರಾಮ ಪಂಚಾಯತಿಯ 01 ಸ್ಥಾನ, 5-ಬೇಲೂರ ಗ್ರಾಮ ಪಂಚಾಯತಿಯ 1 ಸ್ಥಾನ, ಬಸವಕಲ್ಯಾಣ ತಾಲ್ಲೂಕಿನ 4-ನಾರಾಯಣಪೂರ ಗ್ರಾಮ ಪಂಚಾಯತನ 01 ಸ್ಥಾನ, 8-ತಡೋಳಾ ಗ್ರಾಮ ಪಂಚಾಯತಿಯ 01 ಸ್ಥಾನ, ಹಾರಕೂಡ ಗ್ರಾಮ ಪಂಚಾಯತ 01 ಸ್ಥಾನ, ಚಿಟ್ಟಗುಪ್ಪಾ ತಾಲ್ಲೂಕಿನ 11-ಮಂಗಲಗಿ ಗ್ರಾಮ ಪಂಚಾಯತನ 01 ಸ್ಥಾನ, 12-ತಾಳಮಡಗಿ ಗ್ರಾಮ ಪಂಚಾಯತನ 01 ಸ್ಥಾನ ಹಾಗೂ ಕಮಲನಗರ ತಾಲ್ಲೂಕಿನ 6-ಸೋನಾಳ ಗ್ರಾಮ ಪಂಚಾಯತನ 01 ಸ್ಥಾನ, 8-ಡಿಗ್ಗಿ ಗ್ರಾಮ ಪಂಚಾಯತನ 01 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.

prajaprabhat

Recent Posts

ದೆಹಲಿ ಸಿಎಂ ರೇಖಾ ಗುಪ್ತಾ ಅವರು ‘ಏಕ್ ಪೆಡ್ ಮಾ ಕೆ ನಾಮ್ 2.0’ ಬಿಡುಗಡೆ ಮಾಡಿದರು

ಹೊಸ ದೆಹಲಿ.09.ಜೂನ್.25:- ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ನಗರದ ಪರಿಸರವನ್ನು ಸುಧಾರಿಸಲು ಈ ಋತುವಿನಲ್ಲಿ 70 ಲಕ್ಷ ಮರಗಳನ್ನು…

3 hours ago

ಬೀದರ: ಪತ್ರಿಕಾ ಗೋಷ್ಟಿಗೆ ಅವ್ಹಾನ

ಬೀದರ.09.ಜೂನೆ.25:- ನಾಳೆ ದಿನಾಂಕ 10. ಜೂನ್ ಬೆಳಿಗ್ಗೆ 10.00 ಗಂಟೆಗೆ ಪತ್ರಿಕಾ ಗೋಷ್ಟಿಗೆ ಅವ್ಹಾನ ನಾಳೆ(10/06/2025) ಮಂಗಳವಾರ ಬೆಳಿಗ್ಗೆ 10.00…

4 hours ago

೨೧ ದಿನಗಳ ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ<br>

ಬೀದರ.09.ಜೂನ್.25:- ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ ಕ್ರೀಡೆಗಳಿಂದ ದೈಹಿಕ, ಬೌದ್ಧಿಕ ಬೆಳವಣಿಗೆಯಾಗುತ್ತದೆ - ರಾಜಶೇಖರ ಜವಳೆ ಕ್ರೀಡೆಗಳಿಂದ…

4 hours ago

ಆಧುನಿಕ ಕೋಳಿ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ

ಬೀದರ.09.ಜೂನ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ, ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡ ರಸ್ತೆ, ಬೀದರನಲ್ಲಿ ಎರಡು ದಿವಸ…

4 hours ago

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಬೀದರ.09.ಜೂನ್.25:- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಬೆಸ್ತ, ಅಂಬಿಗ/ಅAಬಿ, ಗಂಗಾಮತ, ಕಬ್ಬಲಿಗೆ, ಕೋಲಿ, ಮತ್ತು ಇದರ ಉಪಜಾತಿಗಳ ಅಭಿವೃದ್ಧಿಗಾಗಿ…

4 hours ago

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಬೀದರ.09.ಜೂನ್.25:- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ…

4 hours ago