ವಿಧಾನ ಪರಿಳತ್ ಮಾಜಿ ಸಭಾಪತಿ ಮಲ್ಕಾಪುರೆ ಹೇಳಿಕೆ ಕೇಂದ್ರದ ಜಾತಿಗಣತಿ ನಿರ್ಧಾರ ಕಾಂಗ್ರೆಸ್ ಬುಡ ಅಲ್ಲಾಡಿಸಿದೆ



ೆಬೀದರ.04.ಮೇ .25:- ಕೇಂದ್ರ ಸರ್ಕಾರ ಮುಂಬರುವ ವರ್ಳ ಜನಗಣತಿ ಜೊತೆಯಲ್ಲೇ  ಜಾತಿ ಗಣತಿ ಸಹ ಮಾಡಲು £ರ್ಧರಿಸಿದ ಕ್ರಮ ಐತಿಹಾಸಿಕವಾಗಿದೆ. ಪ್ರಧಾ£ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ವಿಳಯದಲ್ಲಿ ಇರಿಸಿದ ದಿಟ್ಟ ಹೆಜ್ಜೆ ಕಾಂಗ್ರೆಸ್ ಬುಡವನ್ನೇ ಅಲ್ಲಾಡಿಸಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ, ವಿಧಾನ ಪರಿಳತ್ ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ ಹೇಳಿದ್ದಾರೆ.ದೇಶದ ಸ್ವಾತಂತ್ರ‍್ಯ ಬಳಿಕ :(೧೯೩೧ರ ನಂತರ)  ಜಾತಿ ಗಣತಿ ನೆಡೆದಿಲ್ಲ. ಸುದೀರ್ಘ ಅವಧಿ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಯಾವತ್ತೂ ಈ ಕಾರ್ಯ ಮಾಡಿಲ್ಲ. ಇದೀಗ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುವ £ರ್ಧಾರ ಕೈಗೊಂಡು ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಹೊರಟಿದೆ. ಸಾಮಾಜಿಕ ಅವಶ್ಯಕತೆಯ ನೈಜ ದತ್ತಾಂಶ ಸಂಗ್ರಹವನ್ನು ಮಾಡಲಿರುವುದರಿಂದ ಎಲ್ಲ ವರ್ಗದ ಜನರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಇಲ್ಲಿ ಹೊರಡಿಸಿದ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


೧೯೫೧ರಿಂದ ಪ್ರತಿ ಹತ್ತು ವರ್ಳಕ್ಕೊಮ್ಮೆ ಜನಗಣತಿ ನೆಡದಿದೆ . ೧೯೫೧ , ೧೯೬೧ , ೧೯೭೧, ೧೯೮೧, ೧೯೯೧ ಮತ್ತು ೨೦೧೧ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿತ್ತು. ಆರು ಸಲ ಅವಕಾಶ ಸಿಕ್ಕರೂ ಏನೇನೂ ಮಾಡಿಲ್ಲ. ಸದಾ ಜಾತಿ ಗಣತಿಗೆ ವಿರೋಧಿಸುತ್ತಲೇ ಬಂದಿದೆ. ಇದು ಕಾಂಗ್ರೆಸ್ ಪಕ್ಷದ ಮನಸ್ಥಿತಿ ಹಾಗೂ ಜನ ವಿರೋಧಿ £Ãತಿಗೆ £ದರ್ಶನ ಎ£ಸಿದೆ. ಇದೀಗ ಕೇಂದ್ರ ಸರ್ಕಾರ ಜಾತಿ ಗಣತಿಗೆ ಮುಂದಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಸಹಿಸಲಾಗುತ್ತಿಲ್ಲ.ಒಬಿಸಿ ಹಿನ್ನೆಲೆಯ ಪ್ರಧಾ£ ನರೇಂದ್ರ ಮೋದಿಯವರ ಸರ್ಕಾರದ ಈ £ರ್ಧಾರ ದೇಶದ ಇತಿಹಾಸದಲ್ಲಿ ಕ್ರಾಂತಿಕಾರಿ ಹೆಜ್ಜೆ ಎ£ಸಿದೆ. ಹೀಗಾಗಿ ಜಾತಿಗಣತಿ ನೆಪದಲ್ಲಿ ಹಿಂದುಳಿದ ವರ್ಗಗಳನ್ನು ಎತ್ತಿ ಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ವಿಫಲ ಪ್ರಯತ್ನ ನೆಡಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂವಿಧಾನದ ೨೪೬ನೇ ವಿಧಿಯ ಅನ್ವಯ ಜನಗಣತಿ ಅಥವಾ  ಜಾತಿ ಗಣತಿ ಮಾಡುವ ಅಧಿಕಾರ  ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಹೀಗಾಗಿ ಕೇಂದ್ರ ಸರ್ಕಾರ ಬರುವ ವರ್ಳ ಜನಗಣತಿಯೊಂದಿಗೆ ಜಾತಿ ಗಣತಿಯನ್ನು ಸಾಂವಿಧಾ£ಕ ಮಾನ್ಯತೆಯೊಂದಿಗೆ ನಡೆಸಲು ಮುಂದಾಗಿದೆ. ಇದು ಸಮಾಜದ ಸಾಮಾಜಿಕ ಮತ್ತು ಆರ್ಥಿಕ ರಚನೆ  ಬಲಪಡಿಸುವ ಜೊತೆಗೆ ರಾಳ್ಟ್ರದ ವಿಕಾಸಕ್ಕೆ ಮತ್ತಳ್ಟು ವೇಗ ಸಹ £Ãಡಲಿದೆ. ಬಿಜೆಪಿ ಯಾವಾಗಲೂ ಸಮಾಜ ಮತ್ತು ದೇಶದ ಮೌಲ್ಯ, ಜನರ  ಹಿತಾಸಕ್ತಿಗಳಿಗೆ ಬದ್ಧವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.


ರಾಜ್ಯದಲ್ಲಿ ಸಿದ್ಧರಾಮಯ್ಯ  ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಮಾಡಿದ ಜಾತಿ ಗಣತಿಯು ಗೊಂದಲದ ಗೂಡಾಗಿದೆ . ಪ್ರವರ್ಗ ೧ರಲ್ಲಿದ್ದ ಅತಿ ಹಿಂದುಳಿದ ಜಾತಿಗಳಿಗಿದ್ದ ಆರ್ಥಿಕ ಮಾನದಂಡ ಕಿತ್ತು ಹಾಕಿ ಅನ್ಯಾಯ ಮಾಡಿದೆ.

ನೂರಾರು ಸಣ್ಣ ಜಾತಿಗಳು ತಮ್ಮ ಸಂಖ್ಯೆ ಬಗ್ಗೆ ತಕರಾರು ಎತ್ತಿದ್ದು, ಇದು ಅವೈಜ್ಞಾನಿಕ್ ಎಂದು ಹೇಳಿವೆ. ಕಾಂಗ್ರೆಸ್ ನ ಅನೇಕ ನಾಯಕರು ಬಹಿರಂಗವಾಗಿಯೇ ಇದಕ್ಕೆ  ವಿರೋಧಿಸಿದ್ದಾರೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಅವರು ಸಿದ್ಧರಾಮಯ್ಯ ಜಾತಿ ಗಣತಿ ವಿಳಯ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. ಕರ್ನಾಟಕದ ಜಾತಿ ಗಣತಿ ವರದಿಗೆ ಪರ್ಯಾಯವಾಗಿ ಕೇಂದ್ರ ಸರ್ಕಾರದ ಜಾತಿ ಗಣತಿ ವರದಿ ಸಮಗ್ರ ದತ್ತಾಂಶ, ವಾಸ್ತವ ಅಂಕಿ ಅಂಶಗಳೊoದಿಗೆಬರಲಿದೆ. 

ಗೊಂದಲ ಹಾಗೂ ಅವೈಜ್ಞಾ£ಕವಾದ ರಾಜ್ಯದ  ವರದಿಗೆ ಪರ್ಯಾಯ ದಾರಿ ತೋರಿಸಿ ರಾಜ್ಯ ಸರ್ಕಾರದ £ಜಬಣ್ಣವನ್ನು ಕೇಂದ್ರದ ವರದಿ ಬಯಲು ಮಾಡಲಿದೆ. ಹಿಂದುಳಿದ ವರ್ಗಗಳ ಎಲ್ಲ ರೀತಿಯ ಸಾಮಾಜಿಕ ನ್ಯಾಯದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಒದಗಿಸಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿದ್ದಾರೆ.

prajaprabhat

Recent Posts

ದಕ್ಷಿಣ ಭಾರತದಲ್ಲಿ ಭಾರೀ ಮಳೆ, ಪೂರ್ವ-ಮಧ್ಯ ಭಾರತದಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ: ಐಎಂಡಿ ಮುನ್ಸೂಚನೆ

ಹೊಸ ದೆಹಲಿ.10.ಜೂನ್.25:- ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ಒಳನಾಡು, ಕೇರಳ, ಮಾಹೆ, ಒಡಿಶಾ, ರಾಯಲಸೀಮಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್…

31 minutes ago

ಹಣಕಾಸು ಸಚಿವ ಸೀತಾರಾಮನ್ ಅಧ್ಯಕ್ಷತೆಯಲ್ಲಿ 6ನೇ NIIF ಜಿಸಿ ಸಭೆ.

ಹೊಸ ದೆಹಲಿ.10.ಜೂನ್.25:- ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ…

37 minutes ago

ಭಾರತೀಯ ಯುವಕರು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಸೃಷ್ಟಿಕರ್ತರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ, ಐಐಟಿಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ: ಲೋಕಸಭಾ ಸ್ಪೀಕರ್

ಹೊಸ ದೆಹಲಿ.10.ಜೂನ್.25:- ಭಾರತವು ತನ್ನ ಯುವ ಪ್ರತಿಭೆ ಮತ್ತು ತಾಂತ್ರಿಕ ನಾವೀನ್ಯತೆಗಳ ಬಲದ ಮೂಲಕ ಸಮಕಾಲೀನ ಸವಾಲುಗಳನ್ನು ಎದುರಿಸುವಲ್ಲಿ ಜಾಗತಿಕ…

41 minutes ago

ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದ ಶೆಲ್ ದಾಳಿಯಿಂದ ಹಾನಿಗೊಳಗಾದ 2060 ಮನೆಗಳಿಗೆ ಸರ್ಕಾರ 25 ಕೋಟಿ ನೆರವು ನೀಡಲಿದೆ.

ಹೊಸ ದೆಹಲಿ.10.ಜೂನ್.25:- ಗಡಿ ಪ್ರದೇಶಗಳಲ್ಲಿ ಹಾನಿಗೊಳಗಾದ 2,060 ಮನೆಗಳಿಗೆ ಸರ್ಕಾರ ಹೆಚ್ಚುವರಿ 25 ಕೋಟಿ ರೂಪಾಯಿಗಳನ್ನು ಒದಗಿಸಲಿದೆ. ಆಪರೇಷನ್ ಸಿಂಧೂರ್…

53 minutes ago

ಸಿಂಗಾಪುರದ ಹಡಗು MV ವಾನ್ ಹೈ 503 ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಭಾರತೀಯ ನೌಕಾಪಡೆ 18 ಸಿಬ್ಬಂದಿಯನ್ನು ರಕ್ಷಿಸಿದೆ.

ಹೊಸ ದೆಹಲಿ.10.ಜೂನೆ.25:- ಭಾರತೀಯ ನೌಕಾಪಡೆಯು, ಕರಾವಳಿ ರಕ್ಷಣಾ ಪಡೆಗಳೊಂದಿಗೆ ನಿಕಟವಾಗಿ ನಡೆಸಿದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ, ಸಿಂಗಾಪುರದ ಧ್ವಜಾರೋಹಣ…

56 minutes ago

20 ಶಿಕ್ಷಕರ ಹುದ್ದೆಗಳು ಖಾಲಿ ಇಂದೆ  ಅರ್ಜಿ ಸಲ್ಲಿಸಿ.

2025-26ನೇ ಶೈಕ್ಷಣಿಕ ಸಾಲಿಗೆ ತಾಲೂಕುಗಳಲ್ಲಿ ಖಾಲಿಯಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ವಿಭಾಗ ತಲಾ 02 ರಂತೆ ವಿಶೇಷ ಸಂಪನ್ಮೂಲ…

1 hour ago