ಕೊಪ್ಪಳ.07.ಆಗಸ್ಟ್.25: ಜೆ.ಸಿ.ಬಿ ಕ್ರೆನ್ ಸರಪಳಿ ಜಾರಿ ತೆಲೆ ಮೇಲೆ ಬಿದ್ದಿರುವುದರಿಂದ ಲೈನ್ಮ್ಯಾನ್ ಮೃತ ಪಟ್ಟಿರುವ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ.
ಕೊಪ್ಪಳ ನಗರ ಪೊಲೀಸ್ ಠಾಣೆಯ ಸಿ.ಸಿ ಸಂಖ್ಯೆ: 71/2020 (ಗುನ್ನೆ ನಂ: 158/2018) ರಲ್ಲಿ ದಾಖಲಾದ ಪ್ರಕರಣದಲ್ಲಿ ದಿ: 02-08-2018 ರಂದು ಮಧ್ಯಾಹ್ನ 2 ಗಂಟೆ ಸಮಾರಿಗೆ ಕೊಪ್ಪಳ ಗವಿಮಠ ರಸ್ತೆಯ ಆಗಲಿಕರಣ ಕಾಮಗಾರಿ ನಡೆಯುತ್ತಿರುವಾಗ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬಗಳನ್ನು ಬೇರೆಕಡೆಗೆ ಸ್ಥಳಾಂತರ ಮಾಡುವಾಗ ಜೆ.ಸಿ.ಬಿ ಅಪರೇಟರ್ ಕಮ್ ಮಾಲಿಕನಾದ ಕುಮಾರಸ್ವಾಮಿ ಬಿ. ಇತನು ತಮ್ಮ ಜೆ.ಸಿ.ಬಿ ಕ್ರೆನ್ ಸಂಖ್ಯೆ: ಎಂ.ಹೆಚ್ 06 ಎ.ಬಿ 8475 ವನ್ನು ಅಲಕ್ಷತನ ಹಾಗೂ ದುಡುಕಿನಿಂದ ಚಲಾಯಿಸುವಾಗ ಕ್ರೆನ್ನಿನ ಸರಪಳಿಯಿಂದ ವಿದ್ಯುತ್ ಕಂಬ ಜಾರಿ, ಜೆ.ಸಿ.ಬಿ ಕ್ರೆನ್ ಪಕ್ಕದಲ್ಲಿ ನಿಂತಿದ್ದ ಲೈನ್ಮ್ಯಾನ್ ಕೊಪ್ಪಳದ ಬಸವೇಶ್ವರ ನಗರದ ನಿಂಗಪ್ಪ ತಂದೆ ಮರಿಯಪ್ಪ ಮಾದರನ ತಲೆಯ ಮೇಲೆ ಬಿದ್ದ ಪರಿಣಾಮವಾಗಿ ಲೈನ್ಮ್ಯಾನ್ ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದ ಕಾರಣ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಮೃತ ಲೈನ್ಮ್ಯಾನ್ ನಿಂಗಪನ ಹೆಂಡತಿ ಮರಿಯಮ್ಮ ಮಾದರ ಅವರು ಫಿರ್ಯಾದಿ ಸಲ್ಲಿಸಿದ್ದ ಮೇರೆಗೆ ಮಹಿಳಾ ತನಿಖಾಧಿಕಾರಿಯಾದ ಪಿಎಸ್.ಐ ಫಕೀರಮ್ಮ ಡಬ್ಲೂ. ಅವರು ಗುನ್ನೆ ದಾಖಲಿಸಿ ತನಿಖೆಯನ್ನು ಕೈಗೊಂಡು ಅಪಾದಿತನಾದ ಭಾಗ್ಯನಗರದ ಕುಮಾರಸ್ವಾಮಿ ಬಿ. ತಂದೆ ಸನ್ಯಾಸಿರಾವ್ ಬಿ. ಇತನ ವಿರುದ್ಧ ಅಪಾದನೆ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಯುಕ್ತ ಮುಖ್ಯ ನ್ಯಾಯಿಕ ದಂಡಾಧಿಕಾರಿಯಾದ ಗೌರವನ್ವಿತ ಮಲ್ಕಾರಿ ರಾಮಪ್ಪ ಒಡೆಯರ್ ಸಿ.ಜೆ.ಎಂ ನ್ಯಾಯಾಲಯ ಕೊಪ್ಪಳ ರವರು ಅಪಾದಿತನ ವಿರುದ್ಧ ಭಾ.ದಂ.ಸಂ ಕಲಂ 304(ಎ) ಅಡಿಯಲ್ಲಿ ಅಪಾದನೆ ರಚಿಸಿ ಸಾಕ್ಷಿ ವಿಚಾರಣೆಯನ್ನು ಕೈಗೊಂಡು ವಕೀಲರ ವಾದವನ್ನು ಆಲಿಸಿ ಅಪಾದಿತನಿಗೆ ತಪ್ಪಿಸ್ಥನೆಂದು ತಿರ್ಮಾನಿಸಿ ಅಪಾದಿತನಿಗೆ ಭಾ.ದಂ.ಸಂ ಕಲಂ 304(ಎ) ಅಡಿಯಲ್ಲಿನ ಅಪರಾಧಕ್ಕೆ 2 ವರ್ಷ ಸಾದಾಕಾರಗೃಹ ಶಿಕ್ಷೆ ಮತ್ತು ರೂ. 10,000 ದಂಡವನ್ನು ವಿಧಿಸಿದ ತಿರ್ಪು ಬಹಿರಂಗ ನ್ಯಾಯಾಲಯದಲ್ಲಿ ದಿನಾಂಕ: 06-08-2025 ಘೋಷಣೆ ಮಾಡಿದ್ದಾರೆ.
ಈ ಪ್ರಕರಣದ ಅಭಿಯೋಜನೆಯನ್ನು ರಾಜ್ಯ ಸರ್ಕಾರದ ಪರ ಕೊಪ್ಪಳ ಸಿ.ಜೆ.ಎಂ ನ್ಯಾಯಾಲಯದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ವಸಂತ ಅವರು ವಾದ ಮಂಡಿಸಿದ್ದು, ನ್ಯಾಯಾಲಯಕ್ಕೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಲತೀಪ್ ಪಾಶಾ ಸಿ.ಹೆಚ್.ಸಿ 15, ಗವಿಸಿದ್ದಪ್ಪ ಪಿ.ಸಿ 156, ಮಂಜುನಾಥ ಕಡಗತ್ತಿ ಪಿ.ಸಿ 605 ಇವರು ಸರಿಯಾದ ಸಮಯದಲ್ಲಿ ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸುತ್ತಾರೆ ಕೊಪ್ಪಳ ಸಿ.ಜೆ.ಎಂ ನ್ಯಾಯಾಲಯದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಛೇರಿಯ ಪ್ರಕಟಣೆ ತಿಳಿಸಿದೆ.
ಕೊಪ್ಪಳ.07.ಆಗಸ್ಟ್.25: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ವರಮಹಾಲಕ್ಷ್ಮೀ ಹಬ್ಬದ…
ರಾಯಚೂರು.07.ಆಗಸ್ಟ್.25: ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯ ವಿವಿಧ ವಾರ್ಡ್ಗಳಲ್ಲಿ 2 ವರ್ಷಗಳ ಅವಧಿಗೆ ಸ್ವಚ್ಛ ಭಾರತ್ ಮಿಷನ್ 2.0ನ ಐಇಸಿ…
ರಾಯಚೂರು.07.ಆಗಸ್ಟ್.25: ಜಿಲ್ಲೆಯಲ್ಲಿ ಆಗಸ್ಟ್ 20 ರಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು…
ರಾಯಚೂರು.07.ಆಗಸ್ಟ್ .25: ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆ ಮತ್ತು ಕ್ಲಿನಿಕ್ಗಳು ಕೆಪಿಎಂಇ ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಕೆಪಿಎಂಇ ಕಾಯ್ದೆ…
ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ಯಾದಗಿರಿ, ರಾಯಚೂರ ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ ಶಿಸ್ತಿನ ಸಿಪಾಯಿಗಳ ಶಾಲೆಯಂತಾದ ರಾಯಚೂರಿನ ಕೃಷಿ ವಿಜ್ಞಾನಿಗಳ…
ಬೀದರ.07.ಆಗಸ್ಟ್.25:- ಪ್ರತಿ ವರ್ಷದಂತೆ ಈ ವರ್ಷವು ಆಗಸ್ಟ್.15 ರಂದು ಸ್ವಾತಂತ್ರ್ಯೊತ್ಸವ ದಿನಾಚರಣೆಯನ್ನು ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ…