ಡಿ.21:- ರೈತ ಬಾಂಧವರಿಗೆ ಈಗ ಸರ್ಕಾರ ಹೊಸಾ (ಫ್ರೂಟ್ಸ್ ಐಡಿ ) ಹೊಸಾ ನಿಯಮ ಜಾರಿಯಲಿ ತರಲಾಗುತ್ತಿದೆ. ಸರಕಾರ ವಿವಿಧ ಯೋಜನೆಗಳು ತರಲಾಗುತ್ತಿದೆ ಈ ಯೋಜನೆಗಳ ಸೌಲಭ್ಯ ಪಡೆಯಲು ಫ್ರೂಟ್ಸ್ ಐಡಿ ಅತಿ ಆವಶಕ್.
ರೈತ ಮಿತರರಿಗೆ ಸರ್ಕಾರದ ವಿವಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಎಲ್ಲಾ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ಜೊತೆಗೆ ಬರ ಪರಿಹಾರ, ಬೆಳೆ ವಿಮೆ, ವಿವಿಧ ಯೋಜನೆಯಡಿ ಯಂತ್ರೋಪಕರಣಗಳ ಸಹಾಯಧನ ಪಡೆಯಲು ಹೀಗೆ ಅನೇಕ ಯೋಜನೆಯ ಸೌಲಭ್ಯ ಪಡೆಯಲು ರೈತರಿಗೆ ಎಫ್ಐಡಿ (ಫ್ರೂಟ್ಸ್ ಐಡಿ) ಕಡ್ಡಾಯವಾಗಿದೆ ಎಂದು ಬೀದರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತಿ ಮುಖ್ಯ ಎಫ್.ಐ.ಡಿ ಎಂದರೇ ಕೃಷಿ ಇಲಾಖೆಯಿಂದ ರಾಜ್ಯದ ಎಲ್ಲಾ ರೈತರ ವಿವರವನ್ನು ವಿವಿಧ ಸೌಲಭ್ಯ ನೀಡಲು ಡಿಜಿಟಲ್ ರೂಪದಲ್ಲಿ ದಾಖಲಿಸುವಂತಹ ವ್ಯವಸ್ಥೆಯಾಗಿದೆ. ಇದರಲ್ಲಿ ಕೃಷಿ ಜಮೀನಿನ ಮಾಹಿಯನ್ನು ನೀಡಲಾಗುತ್ತದೆ. ಈ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಾಗ ರೈತರಿಗೆ ಎಫ್.ಐ.ಡಿ ನಂಬರ್ ಲಭ್ಯವಾಗುತ್ತದೆ. ಇಲ್ಲಿ ಒಮ್ಮೆ ಎಫ್.ಐ.ಡಿ ನಂಬರ್ ಪಡೆದರೆ, ಈ ರೈತರ ಸಂಪೂರ್ಣ ಜಮೀನಿನ ಮಾಹಿತಿ ಇಲ್ಲಿ ಸಿಗುತ್ತದೆ.
ಫ್ರೂಟ್ಸ್ ಐಡಿ ಹೇಗೆ ಮಾಡಿಸುವುದು: ಫ್ರೂಟ್ಸ್ ಐಡಿ ಮಾಡಿಸದಿರುವ ರೈತರು ಕೂಡಲೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಎಲ್ಲಾ ಜಮೀನುಗಳ ಪಹಣಿ, ಆಧಾರ್ ಮತ್ತು ಜಾತಿ ಪ್ರಮಾಣ ಪತ್ರ, ಫೋಟೋ ಹಾಗೂ ಬ್ಯಾಂಕ್ ಪಾಸ್ಪುಸ್ತಕ ಕೊಟ್ಟು ಫ್ರೂಟ್ಸ್ ಐಡಿ ಮಾಡಿಸಬೇಕು.
ಇದರಿಂದ ಎನ್ಡಿಆರ್ಎಫ್, ಎಸ್ ಡಿಆರ್ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ಹಣ ಪಡೆದುಕೊಳ್ಳಲು ಹಾಗೂ ಕೃಷಿ ಇಲಾಖೆಯ ಇತರೆ ಸವಲತ್ತು ಪಡೆಯಲು ಸಹಾಯಕವಾಗಲಿದೆ.
ಫ್ರೂಟ್ಸ್ ಐಡಿಯಿಂದ ಪ್ರಯೋಜನವೇನು: ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ವೈಯುಕ್ತಿಕ ಮತ್ತು “ಭೂ” ದಾಖಲಾತಿಗಳನ್ನು ನೀಡಿ, ಆಧಾರ್ ಆಧಾರಿತ ನೋಂದಣಿ ಮಾಡಿಕೊಂಡು ಫ್ರೂಟ್ಸ್ಐ.ಡಿ. ಪಡೆದು, ಎಲ್ಲಾ ಇಲಾಖೆಗಳಲ್ಲೂ ಕೂಡ ಫ್ರೂಟ್ಸ್ ಬಳಸಿ, ವಿವಿಧ ಸವಲತ್ತು ಪಡೆಯಬಹುದಾಗಿರುತ್ತದೆ.
ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯುವುದರೊಂದಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಆಹಾರ ಪದಾರ್ಥಗಳ ಖರೀದಿಯಲ್ಲಿ, ಅತಿವೃಷ್ಠಿ ಮತ್ತು ಅನಾವೃಷ್ಠಿ ಸಂದರ್ಭದಲ್ಲಿ ಪರಿಹಾರ ನೀಡಲು, ಬೆಳೆ ಸಮೀಕ್ಷೆಗಾಗಿ, ಬೆಳೆ ವಿಮೆ ಪರಿಹಾರ ನೀಡಲು ಈ ಮಾಹಿತಿಯನ್ನು ಬಳಸಬಹುದಾಗಿದೆ.
ಐಡಿ ಮಾಡಿಸಲು ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ, ಫೋಟೋ, ರೇಷನ್ ಕಾರ್ಡ್, ಜಮೀನಿನ ಎಲ್ಲಾ ಸರ್ವೆ ನಂಬರ್ನ ಪಹಣಿ/ಪಟ್ಟಾ ಪುಸ್ತಕ ನಕಲು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರ ಆರ್.ಡಿ.ಸಂಖ್ಯೆ ಇರುವ ಜಾತಿ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ರೈತರ ಮೊಬೈಲ್ ಸಂಖ್ಯೆ.
ಕಾರಣ ರೈತಬಾಂಧವರು ಫ್ರೂಟ್ಸ್ ಐಡಿ ಪಡೆದು ಸರ್ಕಾರದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.
ಈ ಫ್ರೂಟ್ ಐ ಡಿ ಕ್ರೈಷಿ ಇಲಾಖೆ ವತಿಯಿಂದ ಪಡೆಯಲು ಸದೆತೆ..
source www.prajaprabhat.com
ಬೀದರ.15.ಜೂನ್.25:- ಸಾರ್ವಜನಿಕರು ತಮ್ಮ ಮೊಬೈಲ್ ಪೋನ್ಗಳು ಕಳೆದುಹೋದ ಅಥವಾ ಕಳ್ಳತನವಾದ್ದಲ್ಲಿ ಅನ್ಲೈನ್ ಮೂಲಕವೇ ಕೆಎಸ್ಪಿ ವೆಬ್ಸೈಟ್ನಲ್ಲಿ ಹೋಗಿ e-Lost Reports…
ಬೀದರ.15.ಜೂನ್25:- ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಅವರು ಜೂನ್.15 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ…
ಮೆರವಣಿಗೆಯೊಂದಿಗೆ ಆಚರಿಸುತ್ತದೆ ಅಮೆರಿಕವನ್ನು ಬಲಪಡಿಸುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ಶನಿವಾರ ವಾಷಿಂಗ್ಟನ್, ಡಿಸಿಯಲ್ಲಿ ಯುಎಸ್ ಸೈನ್ಯವು ತನ್ನ 250 ನೇ…
ಇಂದು ಮಾರ್ಚ್ 31, 2026 ರ ವೇಳೆಗೆ ಭಾರತವು ನಕ್ಸಲ್ ವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ…
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಸೈಪ್ರಸ್ಗೆ ಆಗಮಿಸಿದ್ದಾರೆ. ಅವರನ್ನು ಲಾರ್ನಾಕಾ ಅಂತರಾಷ್ಟ್ರೀಯ…
ಗುಜರಾತ್ನ ಅಹಮದಾಬಾದ್ ವಿಮಾನ ಅಪಘಾತದಲ್ಲಿ, ಇಲ್ಲಿಯವರೆಗೆ ಒಟ್ಟು 32 ಮೃತರ ಡಿಎನ್ಎ ಮಾದರಿಗಳನ್ನು ಹೊಂದಾಣಿಕೆ ಮಾಡಲಾಗಿದ್ದು, 14 ಮೃತದೇಹಗಳನ್ನು ಅವರ…