ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ


ಬೀದರ.13.ಮೇ.12:- ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ತೋಟಗಾರಿಕೆ ಬೆಳೆಗಳ ಮಹತ್ವ, ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಕ್ರಮದ ಬಗ್ಗೆ ಹಾಗೂ ಎಲ್ಲಾ ಶಿಬಿರಾರ್ಥಿಗಳನ್ನು ತಮ್ಮ ಮಕ್ಕಳಂತೆ ಭಾವಿಷಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹೇಳಿದರು.


ಅವರು ರವಿವಾರದಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಅಡಿಯಲ್ಲಿ ಬರುವ ತೋಟಗಾರಿಕೆ ಮಹಾವಿದ್ಯಾಲಯ ಬೀದರನಿಂದ ಚಟ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಏಳು ದಿನದ ರಾಷ್ಟಿçÃಯ ಸೇವಾ ಯೋಜನೆ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಡಾ. ವಿಜಯಮಹಾಂತೇಶ, ಸಹಾಯಕ ಪ್ರಾಧ್ಯಾಪಕರು, ರಾಷ್ಟಿçಯ ಸೇವಾ ಯೋಜನೆ ಅಧಿಕಾರಿಗಳು, ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಇತಿಹಾಸ, ಮಹತ್ವ, ್ತ ಲಾಭ ಮತು ಒಂದು ವಾರದ ಶಿಬಿರದ ವೇಳಾಪಟ್ಟಿ ಹಾಗೂ ಆಯೋಜಿಸಿದ ವಿವಿಧ ಕಾರ್ಯಕ್ರಮಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.


ಈ ಸಂದರ್ಭದಲ್ಲಿ ಚಟ್ನಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವಿ ಮಲ್ಲಪ್ಪ, ಚಟ್ನಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ವಾಚುಸಿಂಗ್, ಡಾ. ಎಸ್.ಎಂ. ಪ್ರಸನ್ನ, ಸಹಾಯಕ ಪ್ರಾಧ್ಯಾಪಕರು, ಡಾ. ದುಷಂತ ಓಲೇಕಾರ, ರಾಷ್ಟಿçÃಯ ಸೇವಾ ಯೋಜನೆ ಅಧಿಕಾರಿಗಳು ತೋ.ಮ.ವಿ., ಬೀದರ ಮತ್ತು ಚಟ್ನಳ್ಳಿ ಗ್ರಾಮದ ಮುಖಂಡರಾದ ಶಂಕ್ರಪ್ಪಾ ಬಿರಾದಾರ, ನಾಗೇಶ, ಘಾಳೆಪ್ಪಾ ಚಟ್ನಳ್ಳಿ, ಓಂಕಾರ, ಅಧ್ಯಕ್ಷರು, ಎಸ್.ಡಿ.ಎಮ್.ಸಿ., ಛೋಟುಮಿಯಾ ಹಾಗೂ ಗ್ರಾ. ಪಂ. ಸದಸ್ಯರುಗಳಾದ ವೀರಶೆಟ್ಟಿ ಪಾಟೀಲ, ಶರಣಪ್ಪಾ ಮುದ್ದಾ ಹಾಗೂ ಇತರರು ಉಪಸ್ಥಿತರಿದ್ದರು.


ಸ್ವಯಂ ಸೇವಕಿ ಭವಾನಿ ಅವರು ಕಾರ್ಯಕ್ರಮ ನಿರೂಪಣೆಯನ್ನು ನಡೆಸಿಕೊಟ್ಟರು, ಅಶ್ವಿನಿ ಇವರು ಎಲ್ಲಾ ಸಭೀಕರನ್ನು ಸ್ವಾಗತಿಸಿದರು. ಅಲೋಕ ಪಾಟೀಲ ಇವರು ವಂದಿಸಿದರು.

prajaprabhat

Recent Posts

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಭಾಗಿಯಾಗುವ ಬಗ್ಗೆ ಅಮೆರಿಕ ನಿರ್ಧಾರ ವಿಳಂಬ ಮಾಡಿದ ನಂತರ ಕಚ್ಚಾ ತೈಲ ಬೆಲೆಗಳು ಕಡಿಮೆಯಾಗುತ್ತವೆ

ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆಯ ಬಗ್ಗೆ ನಿರ್ಧಾರವನ್ನು ಶ್ವೇತಭವನ ವಿಳಂಬ ಮಾಡಿದ ನಂತರ ಇಂದು ಕಚ್ಚಾ ತೈಲ ಬೆಲೆಗಳು ಕಡಿಮೆಯಾದವು.…

3 hours ago

ಮೇ 2025 ರಲ್ಲಿ ಪ್ರಮುಖ ವಲಯಗಳು ದಾಖಲೆಯ ವಿಸ್ತರಣೆಯನ್ನು ಕಂಡಿವೆ.

ದೇಶದ ಕೈಗಾರಿಕಾ ಉತ್ಪಾದನೆಯ ಸುಮಾರು ಐದನೇ ಎರಡರಷ್ಟು ಪಾಲನ್ನು ಹೊಂದಿರುವ ಭಾರತದ ಮೂಲಸೌಕರ್ಯ ಉತ್ಪಾದನೆಯು, ಒಂದು ವರ್ಷದ ಹಿಂದಿನ ಇದೇ…

3 hours ago

ಭಾರತದ ವಿದೇಶಿ ವಿನಿಮಯ ಸಂಗ್ರಹವು 2.2 ಬಿಲಿಯನ್ ಡಾಲರ್‌ಗಳಿಗೂ ಹೆಚ್ಚಾಗಿದೆ

ಜೂನ್ 13 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 2.2 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚಾಗಿ, 698 ಶತಕೋಟಿ…

3 hours ago

ಆರ್ಥಿಕ ವಲಯದ ಜಂಟಿ ಕಣ್ಗಾವಲುಗಾಗಿ ಐಎನ್ಎಸ್ ಟೆಗ್ ಮಾರಿಷಸ್‌ಗೆ ಆಗಮಿಸಿದೆ

ಮಾರಿಷಸ್ ರಾಷ್ಟ್ರೀಯ ಕರಾವಳಿ ಕಾವಲು ಪಡೆಯ (NCG) ಹಡಗುಗಳು ಮತ್ತು ವಿಮಾನಗಳೊಂದಿಗೆ ಮಾರಿಷಸ್ ವಿಶೇಷ ಆರ್ಥಿಕ ವಲಯದ ಜಂಟಿ ಕಣ್ಗಾವಲು…

3 hours ago

ಭಾರತದ 2036 ರ ಒಲಿಂಪಿಕ್ ಬಿಡ್ ಜಾಗತಿಕ ಪರಿಣಾಮ, ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಗುರಿಯಾಗಿರಿಸಿಕೊಂಡಿದೆ: ಕೇಂದ್ರ ಸಚಿವೆ ರಕ್ಷಾ ಖಾಡ್ಸೆ

2036 ರ ಒಲಿಂಪಿಕ್ಸ್ ಅನ್ನು ಆಯೋಜಿಸುವ ಭಾರತದ ಪ್ರಯತ್ನವು ಕೇವಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಳಿಕೆ ನೀಡುವ ಪ್ರಯತ್ನವಲ್ಲ, ಬದಲಾಗಿ ವಿಶ್ವ…

3 hours ago

ಮೇಲ್ಛಾವಣಿ ಸೌರ ಮತ್ತು ನವೀಕರಿಸಬಹುದಾದ ನಾವೀನ್ಯತೆಗಳನ್ನು ಹೆಚ್ಚಿಸಲು ಸರ್ಕಾರ ಸ್ಟಾರ್ಟ್-ಅಪ್ ಸವಾಲನ್ನು ಪ್ರಾರಂಭಿಸಿದೆ

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ರೂಫ್‌ಟಾಪ್ ಸೌರ ಮತ್ತು ವಿತರಣಾ ನವೀಕರಿಸಬಹುದಾದ ಇಂಧನ ನಾವೀನ್ಯತೆಗಳನ್ನು ವೇಗಗೊಳಿಸಲು ನವೀನ ಯೋಜನೆಗಳ…

4 hours ago