ರಾಯಚೂರು.15.ಫೆ.25:- ರಾಯಚೂರು ವಿಶ್ವವಿದ್ಯಾಲಯ ಪಾಲಿಮರ್ ವಿಜ್ಞಾನದಲ್ಲಿ ವಿಶೇಷತೆಯೊಂದಿಗೆ ನೀವು ಆರ್ ಮತ್ತು ಡಿ ಫಾರ್ಮಾಸ್ಯುಟಿಕಲ್ಸ್, ಮೆಟೀರಿಯಲ್ ಸೈನ್ಸ್, ನ್ಯಾನೊಟೆಕ್ನಾಲಜಿ ಮತ್ತು ಗ್ರೀನ್ ರಸಾಯನಶಾಸ್ತ್ರದಲ್ಲಿ ವೈವಿದ್ಯಮಯ ವೃತ್ತಿ ಅವಕಾಶಗಳನ್ನು ಅನ್ವೇಷಿಸಬಹುದಾಗಿದೆ ಎಂದು ಬೆಂಗಳೂರಿನ ಎನ್ಎಮ್ಐಟಿ, ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಡಾ.ಸುನಿತಾ ಎಮ್.ಎಸ್ ಅವರು ವಿಶೇಷ ಉಪನ್ಯಾಸ ನೀಡಿದ್ದಾರೆ.
ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸಾಯನಶಾಸ್ತ್ರ ವಿಭಾಗದಲ್ಲಿ ಶುಕ್ರವಾರ ವಿಶೇಷ ಉಪನ್ಯಾಸ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಶ್ಲೇಷಿತ ಮತ್ತು ನೈಸರ್ಗಿಕ ಪಾಲಿಮರ್ಗಳು ದೈನಂದಿನ ಜೀವನದಲ್ಲಿಅಗತ್ಯ.
ಈ ಎರಡು ಪಾಲಿಮರ್ಗಳನ್ನು ಮಾನೋಮರ್ಗಳೆಂದು ಕರೆಯಲ್ಪಡುವ ಅನೇಕ ಸಣ್ಣ ಅಣುಗಳ ಪಾಲಿಮರಿಕರಣದ ಮೂಲಕ ರಚಿಸಲಾಗುತ್ತದೆ.
ಇಂದು ಆಕರ್ಷಕ ಮತ್ತು ಪ್ರಭಾವಶಾಲಿ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ವಸ್ತುಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಎಮ್.ಎಸ್ಸಿ. ರಸಾಯನಶಾಸ್ತ್ರದ ವಿದ್ಯಾರ್ಥಿಗಳು ಪಾಲಿಮರ್ ವಿಜ್ಞಾನಕ್ಕೆ ನಿಮ್ಮ ಪ್ರಯಾಣವು ಅದ್ಭುತ ಆವಿಷ್ಕಾರಗಳಿಗೆ ಮತ್ತು ಜಗತ್ತಿಗೆ ಪ್ರಭಾವಶಾಲಿ ಕೊಡುಗೆಗಳಿಗೆ ಕಾರಣವಾಗಬಹುದು.
ಈ ಕ್ಷೇತ್ರದಲ್ಲಿ ಅನ್ವೇಶಿಸಲು, ಆವಿಷ್ಕರಿಸಲು ಸುಸ್ಥಿರ ಮತ್ತು ತಾಂತ್ರಿಕವಾಗಿ ಮುಂದುವರಿದ ಭವಿಷ್ಯಕ್ಕಾಗಿ ಪ್ರೋತ್ಸಾಹದಿಂದ ಕೆಲಸಮಾಡಿರೆಂದು ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾವಿವಿಯ ರಸಾಯನಶಾಸ್ತ್ರ ವಿಭಾಗದ ಮುಖಸ್ಥೆ ಹಾಗು ಸಹ ಪ್ರಾಧ್ಯಾಪಕರಾದ ಡಾ.ಲತಾ ಎಮ್.ಎಸ್ ಅವರು ಮಾತನಾಡಿ, ಪಾಲಿಮರ್ ವಿಜ್ಞಾನವು ನಿಮ್ಮ ಜ್ಞಾನ ಮತ್ತು ಸೃಜನಶೀಲತೆ ಭವಿಷ್ಯದ ಪ್ರಗತಿಗೆ ದಾರಿ ಮಾಡಿಕೊಡುತ್ತದೆ.
ಪಾಲಿಮರ್ ವಿಜ್ಞಾನ ಮತ್ತು ಭವಿಷ್ಯವನ್ನು ರೂಪಿಸುವುದರ ಜೊತೆಗೆ ಬೆಳವಣಿಗೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.
ಅತಿಥಿ ಉಪನ್ಯಾಸಕರಾದ ರಸಾಯನಶಾಸ್ತ್ರ ವಿಭಾಗದ ಡಾ.ಬಸವರಾಜ.ಡಿ, ಡಾ.ಯಮನಪ್ಪಗೌಡ, ಪಂಪಾಪತಿ, ಸೈಯದ ಫಜಲುನಿಸಾ ಬೇಗಂ, ಅನಿಲ್ ಚಂದ್ರ, ಐಕ್ಯೂಎಸಿ ಸಂಚಾಲಕ ಅನಿಲ್ ಅಪ್ರಾಳ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಮಧು ಮತ್ತು ಭಾಗ್ಯ ಪ್ರಾರ್ಥಿಸಿದರು, ಶಹಬಾಜ್ ಮತ್ತು ಸನಾ ನಿರೂಪಿಸಿದರು, ಡಿ.ಸುದೀಪ್ ಸ್ವಾಗತಿಸಿದರು, ಹರ್ಷಿಯಾ ಬೇಗಂ ಅತಿಥಿಯನ್ನು ಪರಿಚಯಿಸಿದರು, ಶೃತಿ ವಂದಿಸಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಬೀದರ.09.ಜೂನೆ.25:- ನಾಳೆ ದಿನಾಂಕ 10. ಜೂನ್ ಬೆಳಿಗ್ಗೆ 10.00 ಗಂಟೆಗೆ ಪತ್ರಿಕಾ ಗೋಷ್ಟಿಗೆ ಅವ್ಹಾನ ನಾಳೆ(10/06/2025) ಮಂಗಳವಾರ ಬೆಳಿಗ್ಗೆ 10.00…
ಬೀದರ.09.ಜೂನ್.25:- ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ ಕ್ರೀಡೆಗಳಿಂದ ದೈಹಿಕ, ಬೌದ್ಧಿಕ ಬೆಳವಣಿಗೆಯಾಗುತ್ತದೆ - ರಾಜಶೇಖರ ಜವಳೆ ಕ್ರೀಡೆಗಳಿಂದ…
ಬೀದರ.09.ಜೂನ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ, ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡ ರಸ್ತೆ, ಬೀದರನಲ್ಲಿ ಎರಡು ದಿವಸ…
ಬೀದರ.09.ಜೂನ್.25:- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಬೆಸ್ತ, ಅಂಬಿಗ/ಅAಬಿ, ಗಂಗಾಮತ, ಕಬ್ಬಲಿಗೆ, ಕೋಲಿ, ಮತ್ತು ಇದರ ಉಪಜಾತಿಗಳ ಅಭಿವೃದ್ಧಿಗಾಗಿ…
ಬೀದರ.09.ಜೂನ್.25:- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ…
ಬೀದರ.09.ಜೂನ್.25:- ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಶಿಕ್ಷಣ, ಆರೋಗ್ಯ, ತಲಾ ಆದಾಯ, ಕೃಷಿ, ಹೈನುಗಾರಿಕೆ, ಕೈಗಾರಿಕೆ, ಸೇವಾ ಕ್ಷೇತ್ರ ಹಾಗೂ ಸಾಮಾಜಿಕ…