ಬೆಂಗಳೂರು.05.ಜುಲೈ .25:- ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಸಂಚರಿಸುವಂತ ಪ್ರಯಾಣಿಕರಿಗೆ ಕೆಲವೊಂದು ಬಸ್ಸುಗಳಲ್ಲಿ ಟಿಕೆಟ್ ದರದಲ್ಲಿ ರೌಂಡಪ್ ಎನ್ನುವ ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿರುವಂತ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವಂತ ಸಾರಿಗೆ ನಿಗಮವು ರೌಂಡಪ್ ವ್ಯವಸ್ಥೆಯನ್ನು ರದ್ದುಗೊಳಿಸುವಂತ ನಿರ್ಧಾರವನ್ನು ಪ್ರಕಟಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಆದೇಶ ಹೊರಡಿಸಿದ್ದು, ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 774/2016 ದಿನಾಂಕ 03-03-2016 ರಲ್ಲಿ ಪ್ರತಿಷ್ಠಿತ ಸಾರಿಗೆಗೆ ಅವತಾರ್ ಕೌಂಟರ್ಗಳಲ್ಲಿ ಮತ್ತು ಇಟಿಎಂ ಯಂತ್ರಗಳಲ್ಲಿ ಚಿಲ್ಲರೆ ಸಮಸ್ಯೆಯಿಂದ ಪ್ರಯಾಣದರವನ್ನು ರೌಂಡ್ ಆಫ್ (Round-off) ಮಾಡಲು ಆದೇಶಿಸಲಾಗಿದೆ ಎಂದಿದೆ.
ಪ್ರಸ್ತುತ, ಸಾರ್ವಜನಿಕ ಪ್ರಯಾಣಿಕರು ಟಿಕೇಟ್ ಕಾಯ್ದಿರಿಸಲು ಕೌಂಟರ್ಗಳಲ್ಲಿ POS ಯಂತ್ರಗಳನ್ನು ಹಾಗೂ ಇಟಿಎಂ ಯಂತ್ರಗಳಲ್ಲಿ UPI ವ್ಯವಸ್ಥೆ ಒದಗಿಸಿರುವುದರಿಂದ ಪ್ರಯಾಣದರವನ್ನು ರೌಂಡ್ ಆಫ್ (Round-off) ಮಾಡುವ ಅವಶ್ಯಕತೆಯಿಲ್ಲದಿರುವುದರಿಂದ, ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 774/2016 ದಿನಾಂಕ 03-03-2016 ನ್ನು ಹಿಂಪಡೆಯಲಾಗಿದೆ ಎಂಬುದಾಗಿ ತಿಳಿಸಿದೆ.
ಉಲ್ಲೇಖ-01 ರಲ್ಲಿನ ಸಾಮಾನ್ಯ ಸ್ಥಾಯಿ ಆದೇಶವನ್ನು ಈ ಕೂಡಲೇ ಜಾರಿಗೆ ಬರುವಂತೆ ಅನೂರ್ಜಿತಗೊಳಿಸಲಾಗಿದೆ. ಈ ಆದೇಶವನ್ನು ಜಾರಿಗೊಳಿಸಿದ ಬಗ್ಗೆ ಅನುಸರಣಾ ವರದಿ ಕಳುಹಿಸುವುದು ಎಂದಿದೆ.
ಮೈಸೂರು.05.ಜುಲೈ.25:- ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ವರ್ಷಕ್ಕೆ ಅತಿಥಿ ಅಧ್ಯಾಪಕರ ಹುದ್ದೆಗೆ, ಯುಜಿಸಿ ಮಾನದಂಡಗಳ ಪ್ರಕಾರ ಅರ್ಹ ಅರ್ಹತೆಗಳನ್ನು ಹೊಂದಿರುವ…
ಬೆಂಗಳೂರು.05.ಜುಲೈ.25:- ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆಯು 2025ನೇ ಸಾಲಿನಲ್ಲಿ 2,492ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದರಲ್ಲಿ…
ಬಾಗಲಕೋಟೆ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಮಕ್ಕಳನ್ನು ಸೆಳೆಯಲು ಭಾರಿ ಪ್ರಯಾಸ ಪಡಬೇಕು. ಆದರೆ, ಬಾಗಲಕೋಟೆಯ ನವನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ…
ಬೆಂಗಳೂರು.05.ಜುಲೈ.25:- ರಾಜ್ಯಾಧ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ-3 ಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ನಿಗಮದ KSRTC ಬಸ್ಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸಲು ಅವಕಾಶ…
ರಾಯಚೂರು.05.ಜುಲೈ.25: ರಾಯಚೂರು ಜಿಲ್ಲೆ ಕಾರಟಗಿ. ತಾಲ್ಲೂಕಿನ ಬೆನ್ನೂರು ಗ್ರಾಮದ 31ನೇ ವಿತರಣಾ ಕಾಲುವೆ ದಾರಿಯ ತೆರವು ಕಾರ್ಯ ನಡೆಯುತ್ತಿದ್ದು, ಇದರಿಂದ…
ಬೆಂಗಳೂರು.04.ಜುಲೈ.25: 26 ನವೆಂಬರ್ 2024 ರಂದು ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂವಿಧಾನ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಡುವುದನ್ನು ಮರೆತಿದ್ದ ಅಧಿಕಾರಿಯನ್ನು…