ರಾಜ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ವಿಮಾ ಇಲಾಖೆ ವತಿಯಿಂದ Online Service ವಿಸ್ತರಣೆ, ಆದೇಶ.!

ಬೆಂಗಳೂರು.19.ಜೂನ್.25:- ರಾಜ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ವಿಮಾ ಇಲಾಖೆ ವತಿಯಿಂದ Online Service ವಿಸ್ತರಣೆ ಬಗ್ಗೆ ಸರ್ಕಾರದಿಂದ  ಆದೇಶ ಹೊರಡಿಸಲಾಗಿದೆ.

ಸರ್ಕಾರ ವಿಮಾ ಇಲಾಖೆಯ ಸೇವೆಗಳನ್ನು ಗಣಕೀಕರಣಗೊಳಿಸಲಾಗಿದ್ದು, HRMS ಹೆಚ್.ಆರ್.ಎಂ.ಎಸ್., ಮತ್ತು ಖಜಾನೆ -|| ವೇದಿಕೆಗಳ ಮೂಲಕ ವೇತನ ಪಡೆಯುವ ರಾಜ್ಯಸರ್ಕಾರದ ಅಧಿಕಾರಿಗಳು/ನೌಕರರಿಗೆ ಖಜಾನೆ-|| DDO Code ಆಧಾರದ ಮೇಲೆ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಒದಗಿಸಲಾಗುತ್ತಿದೆ.

ಅನ್ಯ ಸೇವೆ/ನಿಯೋಜನೆ ಮೇಲೆ, ನಿಗಮ ಮಂಡಳಿ/ಸ್ಥಳೀಯ ಸಂಸ್ಥೆ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರ ವೇತನವನ್ನು ಹೆಚ್.ಆರ್.ಎಂ.ಎಸ್. ಮತ್ತು ಖಜಾನೆ-|| ವೇದಿಕೆ ಮೂಲಕ ಸೆಳೆಯದಿರುವುದರಿಂದ ಇವರಿಗೆ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತಿರಲಿಲ್ಲ.
ಆದುದರಿಂದ, ಅನ್ಯ ಸೇವೆ/ನಿಯೋಜನೆ ಮೇಲೆ, ನಿಗಮ ಮಂಡಳಿ/ಸ್ಥಳೀಯ ಸಂಸ್ಥೆ ಮತ್ತು ಸ್ನಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರಿಗೆ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಒದಗಿಸಲು ಸಾಧ್ಯವಾಗವಂತೆ NTT DDO Code ಆಧಾರದ ಮೇಲೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು, ಉಲ್ಲೇಖ(1) ರ ಆದೇಶದಲ್ಲಿ ಸರ್ಕಾರದ ಅನುಮತಿ ನೀಡಲಾಗಿರುತ್ತದೆ. ಅದರನ್ವಯ NTT DDO Code ಆಧಾರದ ಮೇಲೆ ಅನ್ಯ ಸೇವೆ/ನಿಯೋಜನೆ ಮೇಲೆ, ನಿಗಮ ಮಂಡಳಿ/ಸ್ಥಳೀಯ ಸಂಸ್ಥೆ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರಿಗೆ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಒದಗಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿರುತ್ತದೆ.

ಪ್ರಸ್ತುತ, NTT DDO Code ಆಧಾರದ ತಂತ್ರಾಂಶವು ಲಭ್ಯವಿದ್ದು, ನಿಗಮ ಮಂಡಳಿ/ಸ್ಥಳೀಯ ಸಂಸ್ಥೆ ಮತ್ತು ಸ್ನಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರು ಅನುಬಂಧ-1 ರಲ್ಲಿ ತಿಳಿಸಿರುವ ಕಾರ್ಯವಿಧಾನಗಳನ್ನು ಪಾಲಿಸಿ, ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

prajaprabhat

Recent Posts

ರಾಜ್ಯ ಸರ್ಕಾರಿ ನೌಕರರ ಮತ್ತು ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ,ಆದೇಶ.!

ಬೆಂಗಳೂರು.20.ಜೂನ್.25:- ರಾಜ್ಯ ಸರ್ಕಾರಿ ನೌಕರರ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ,…

2 hours ago

ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ದಿನಾಂಕ ಖಚಿತ.

ಬೆಂಗಳೂರು .19.ಜೂನ್.25:- ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ದಿನಾಂಕ ಖಚಿತವಾಗಿದ್ದು, ಆಗಸ್ಟ್ 11, 2025 ರಿಂದ ಈ ಕಲಾಪ ಆರಂಭವಾಗಲಿದೆ.…

3 hours ago

ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಯನ್ನು ಮತ್ತೊಮ್ಮೆ ಜಾರಿಗೆ ತರಲಾಗಿದ್ದು, ಆಸಕ್ತ ಶಾಲೆಗಳಿಂದ ಅರ್ಜಿ ಆಹ್ವಾನಿಸಿದೆ.

ಶಿವಮೊಗ.19.ಜೂನ್.25:- ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಯನ್ನು  ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಯುವನೀತಿ 2012…

3 hours ago

ಕಾಲೇಜು ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆಗೆ ಕೌನ್ಸೆಲಿಂಗ್: ಪರಿಷ್ಕೃತ ವೇಳಾಪಟ್ಟಿ ಪ್ರಕಟ ಶೀಘ್ರ

ಬೆಂಗಳೂರು: 2025 ನೇ ಸಾಲಿಗೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸಿಲಿಂಗ್‌ ನಡೆಸುವ…

4 hours ago

ಗುತ್ತಿಗೆ/ಹೊರಗುತ್ತಿಗೆ ನೌಕರರ ಅವಲಂಬಿತರಿಗೆ ಈ ಸೋಲಭ್ಯ ಜಾರಿ. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದಾರೆ.

ಬೆಂಗಳೂರು.19.ಜೂನ್.25:- ರಾಜ್ಯ ಸರಕಾರಿ ಸೇವೆಯಲಿ ಗುತ್ತಿಗೆ/ಹೊರಗುತ್ತಿಗೆ ನೌಕರರ ಅವಲಂಬಿತರಿಗೆ ಈ ಸೋಲಭ್ಯ ಜಾರಿ. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದಾರೆ.…

6 hours ago

ರೈತರಿಗೆ ಸೂಕ್ತವಾಗಿದೆ ಹೆಚ್ಚಿದ ಹೆಚ್ಚಿದ ಉತ್ಪಾದಕತೆ ಮತ್ತು ದಕ್ಷತೆ:<br>ವೇಗವಾದ ಕಾರ್ಯಾಚರಣೆಗಳು:<br>ಟ್ರಾಕ್ಟರ್‌ಗಳು.

ರೈತರಿಗೆ ಸೂಕ್ತವಾಗಿದೆ, ಇದರಲ್ಲಿ ಹೆಚ್ಚಿದ ಉತ್ಪಾದಕತೆ, ಕಡಿಮೆಯಾದ ಕಾರ್ಮಿಕ ವೆಚ್ಚಗಳು ಮತ್ತು ಸಮಯ ಉಳಿತಾಯ ಸೇರಿವೆ. ಅವು ರೈತರಿಗೆ ಹೆಚ್ಚಿನ…

9 hours ago