ರಾಜ್ಯ ಸರ್ಕಾರ ಅರಣ್ಯ ಮತ್ತು ಪರಿಸರ ಇಲಾಖೆಯೆಲ್ಲಿ ನಿರ್ದೇಶಕ ಹುದ್ದೆ ಖಾಸಗಿ ಮಹಾವಿದ್ಯಾಲಯ ಅಧ್ಯಾಪಕರಿಗೆ ಐಕೆ ಮಾಡಲಾಗಿವೆ, ತಾಂತ್ರಿಕ ಕೋಶದ ನಿರ್ದೇಶಕ ಸ್ಥಾನಕ್ಕೆ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರೊಬ್ಬರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ತಾಂತ್ರಿಕ ಕೋಶದ ಮುಖ್ಯಸ್ಥರಾಗಿದ್ದ ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ಅಧಿಕಾರಿ ಆರ್.ಗೋಕುಲ್ ಅವರನ್ನು ವರ್ಗಾವಣೆ ಮಾಡಿ, ಆ ಜಾಗಕ್ಕೆ ಬಿಎಂಎಸ್ ಕಾಲೇಜಿನ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಸಿ.ಟಿ. ಪುಟ್ಟಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ನೇಮಕಾತಿ ಸಂಬಂಧ ಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಹೊರಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಅರಣ್ಯ ಮತ್ತು ಪರಿಸರ ಇಲಾಖೆ ಸೂಚಿಸಿದೆ.
ಸರ್ಕಾರದ (ಪರಿಸರ) ಪ್ರಧಾನ ಕಾರ್ಯದರ್ಶಿ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಈ ತಾಂತ್ರಿಕ ಕೋಶದ ನಿರ್ದೇಶಕರು ‘ರಾಜ್ಯ ತಜ್ಞರ ಮೌಲ್ಯ ನಿರ್ಣಯ ಸಮಿತಿ’ (ಎಸ್ಇಎಸಿ) ರಾಜ್ಯ ಪರಿಸರ ಪರಿಣಾಮ ಮೌಲ್ಯ ನಿರ್ಣಯ ಪ್ರಾಧಿಕಾರ (ಎಸ್ಇಐಎಎ) ಹಾಗೂ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ (ಕೆಎಸ್ಸಿ ಝಡ್ಎಂಎ) ಸದಸ್ಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಾರೆ.
ಪರಿಸರ ಕಾಯ್ದೆಗಳನ್ನು ಅನ್ವಯಿಸಿ ಅನುಷ್ಠಾನಗೊಳಿಸುವ ಯಾವುದೇ ಯೋಜನೆಗಳನ್ನು ಜಾರಿಗೊಳಿಸಲು, ಕೈಗಾರಿಕೆಗಳನ್ನು ಸ್ಥಾಪಿಸಲು ತಜ್ಞರ ಮೌಲ್ಯಮಾಪನ ಸಮಿತಿ, ಪ್ರಾಧಿಕಾರಗಳಿಂದ ಅನುಮತಿ, ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ.
ಪರಿಸರ ಸಂಬಂಧಿ ಯೋಜನೆಗಳ ಅನುಷ್ಠಾನ, ಕೈಗಾರಿಕೆ ಮತ್ತಿತರ ಯೋಜನೆಗಳಿಂದ ಆಗುವ ಜಲ, ವಾಯು, ಶಬ್ದ ಮಾಲಿನ್ಯದ ಪರಿಶೀಲನೆ, ಅಧ್ಯಯನ, ಮೌಲ್ಯಮಾಪನ ನಡೆಸುವ ಅಧಿಕಾರ ಹೊಂದಿರುವ ಈ ಎಲ್ಲ ಅಂಗ ಸಂಸ್ಥೆಗಳಿಗೆ ತಾಂತ್ರಿಕ ಕೋಶ ತಾಂತ್ರಿಕ ನೆರವು ನೀಡುತ್ತದೆ. ನಿರ್ದೇಶಕರ ಕಾರ್ಯಕ್ಕೆ ವೈಜ್ಞಾನಿಕ ಹಿನ್ನೆಲೆ ಇರುವ ನಾಲ್ವರು ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಮೂವರು ತಜ್ಞರು ನೆರವಾಗುತ್ತಾರೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಬರುವ ಪ್ರಸ್ತಾವ ಗಳನ್ನು ಪರಿಶೀಲಿಸಿ, ಮುಂದಿನ ಕ್ರಮಕ್ಕಾಗಿ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ (ಕೆಎಸ್ಸಿಝಡ್ಎಂಎ) ಕಳುಹಿಸುವ ಕಾರ್ಯವನ್ನೂ ತಾಂತ್ರಿಕ ಕೋಶ ನಿರ್ವಹಿಸುತ್ತದೆ.
ತಾಂತ್ರಿಕ ಕೋಶದ ನಿರ್ದೇಶಕ ಸ್ಥಾನವು ಸರ್ಕಾರದ ಹೆಚ್ಚುವರಿ ಅಥವಾ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸಮನಾದುದು. ಈ ಸ್ಥಾನದ ಅಧಿಕಾರಿಗಳು ಲಭ್ಯ ಇಲ್ಲದೇ ಇದ್ದಾಗ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳನ್ನು ನಿಯೋಜನೆ ಮಾಡಬಹುದು.
ಭಾರತದ ವಿಶ್ವವಿದ್ಯಾಲಯಗಳ ಕಾಯ್ದೆಯ ಅನ್ವಯ ಸ್ಥಾಪಿತವಾದ ವಿಶ್ವವಿದ್ಯಾಲಯಗಳು ಅಥವಾ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿಗಳು, ಅಧಿಕಾರಿಗಳನ್ನು ನೇಮಿಸಬಹುದು. ‘ಹಲವು ವರ್ಷ ಈ ಸ್ಥಾನದಲ್ಲಿ ಬೆಂಗಳೂರು ಐಐಎಸ್ಸಿಯ ವಿಜ್ಞಾನಿ ಬಾಲಕೃಷ್ಣೇಗೌಡ ಕಾರ್ಯನಿರ್ವ ಹಿಸಿದ್ದರು. ಇದಕ್ಕೂ ಮೊದಲು ಹಾಗೂ ನಂತರ ಹಲವು ಐಎಫ್ಎಸ್ ಅಧಿಕಾರಿಗಳು ಈ ಹುದ್ದೆಯಲ್ಲಿದ್ದರು. ಖಾಸಗಿ ಕಾಲೇಜೊಂದರ ಅಧ್ಯಾಪಕರಿಗೆ ಇಂತಹ ಉನ್ನತ ಹುದ್ದೆ ನೀಡಿರುವುದು ಸರಿಯಲ್ಲ.
ನಾವು ಆಕ್ಷೇಪ ವ್ಯಕ್ತಪಡಿಸುವ ವರೆಗೂ ಈ ವಿಷಯ ಇಲಾಖೆಯ ಸಚಿವರಿಗೇ ಗೊತ್ತಿರಲಿಲ್ಲ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಬಯಸದ ಐಎಫ್ಎಸ್ ಅಧಿಕಾರಿ.ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ಸಮ-ಸಿ.ಟಿ. ಪುಟ್ಟಸ್ವಾಮಿ, ನಿರ್ದೇಶಕ, ತಾಂತ್ರಿಕ ಕೋಶ (ಪರಿಸರ)ನಿಯಮಗಳಿಗೆ ಅನುಗುಣವಾಗಿಯೇ ಸ್ವಂತ ವೇತನಶ್ರೇಣಿಯ ಆಧಾರದ ಮೇಲೆ ಸರ್ಕಾರ ನಿರ್ದೇಶಕ ಸ್ಥಾನಕ್ಕೆ ನೇಮಿಸಿದೆ. ಲೋಪ ಆಗಿಲ್ಲ.
ಬೆಂಗಳೂರು.09.ಜೂನ್.25:- ಕೇಂದ್ರೀಯ ವಿಶ್ವವಿದ್ಯಾಲಯ ಹೈದರಾಬಾದ್ ತೆಲಂಗಾಣಾ ರೋಹಿತ್ ಬೇಮುಲ ಅವರಮೇಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ, ಜಾತಿ ದೌರ್ಜನ್ಯವನ್ನು…
ಮಿರೇ ಅಸೆಟ್ ಫೌಂಡೇಷನ್ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…
ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…
ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್ನಲ್ಲಿ…
ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…
ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…