ರಾಜ್ಯ ಸರ್ಕಾರ ಅನುದಾನಿತ ಶಾಲಾ ಶಿಕ್ಷಕರಿಗೆ ಸಹಿ ಸುದ್ಧಿ `ನಿವೃತ್ತಿ ವೇತನ’ ಹೆಚ್ಚಳ ಮಾಡಿ ಸರ್ಕಾರ ಆದೇಶ.!

ಬೆಂಗಳೂರು.12.ಜೂನ್.25:-ರಾಜ್ಯದ ಖಾಸಗಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ನಿವೃತ್ತಿ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ಸರ್ಕಾರಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಸಿಬ್ಬಂದಿ ಸಂಘ (ರಿ). ಇವರು ಸರ್ಕಾರಕ್ಕೆ ಸಲ್ಲಿಸಿದ ಮನವಿಯ ಅಂಶಗಳನ್ನು ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳುವಂತೆ ಉಲ್ಲೇಖಿತ(1) ರಲ್ಲಿ ಸೂಚಿಸಿದಂತೆ, ಪರಿಶೀಲಿಸಲಾಗಿ ಸದರಿ ನೌಕರರಿಗೆ ಸರ್ಕಾರ ವಿವಿಧ ಹಂತದಲ್ಲಿ/ವರ್ಷಗಳಲ್ಲಿ ರೂ.380/- ರಿಂದ ಪ್ರಾರಂಭಿಸಿ, ಪ್ರಸ್ತುತ ಸರ್ಕಾರದ ಪತ್ರ ಸಂಖ್ಯೆ: ಇಡಿ 08 ಪಿಎಂಸಿ 2016 ಬೆಂಗಳೂರು ದಿನಾಂಕ:28-08-2018ರಲ್ಲಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲೆಗಳ ನಿವೃತ್ತ ಶಿಕ್ಷಕಿಯರಿಗೆ ರೂ.11500/- ಮತ್ತು ಸಹಾಯಕಿಯರಿಗೆ ರೂ.9000/-ಗಳಂತೆ ನೀಡಲಾಗುತ್ತಿದೆ.

ಮುಂದುವರೆದು, ಸರ್ಕಾರದ ದಿನಾಂಕ:-26-05-2025ರ ಆದೇಶದಂತೆ ದಿನಾಂಕ:01.04.1984ರ ಪೂರ್ವದಲ್ಲಿ ಅನುದಾನಕ್ಕೆ ಒಳಪಟ್ಟಿರುವ ಅನುದಾನಿತ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಅನುದಾನಸಹಿತ ಅನುಮೋದನೆಗೊಂಡು ನಿವೃತ್ತರಾಗಿರುವ ಶಾಲಾ ಶಿಕ್ಷಕರ ಸಂಚಿತ ಪಿಂಚಣಿಯನ್ನು ಪ್ರಸ್ತುತ ನೀಡಲಾಗುತ್ತಿರುವ ಮಾಹೆಯಾನ ರೂ.11,500/-ಗಳಿಂದ ರೂ.19,000/-(ರೂ. ಹತ್ತೊಂಭತ್ತು ಸಾವಿರಗಳು ಮಾತ್ರ) ಗಳಿಗೆ ಹಾಗೂ ಶಾಲಾ ಸಹಾಯಕರ ಸಂಚಿತ ಪಿಂಚಣಿಯನ್ನು ಮಾಹೆಯಾನ ರೂ.9,000/-ಗಳಿಂದ ರೂ.15,000/-(ರೂ. ಹದಿನೈದು ಸಾವಿರಗಳು ಮಾತ್ರ) ಗಳಿಗೆ ಭವಿಷ್ಯಾವರ್ತಿಯಾಗಿ ಪರಿಷ್ಕರಿಸಿ ಆದೇಶಿಸಲಾಗಿದೆ. ಸದರಿ ಸರ್ಕಾರದ ಉಲ್ಲೇಖಿತ(2)ರ ಪತ್ರದಂತೆ ಅಗತ್ಯ ಕ್ರಮವಹಿಸಲು ರಾಜ್ಯದ ಎಲ್ಲಾ ಉಪನಿರ್ದೇಶಕರು(ಆ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.

prajaprabhat

Recent Posts

ವಿದ್ಯುತ್ ವ್ಯತ್ಯಯ ಜೂ.15ಕ್ಕೆ

ಬೀದರ.14.ಜೂನ್.25:- 110/33-11ಕೆವಿ ಉಪ ವಿತರಣ ಕೇಂದ್ರ, ಕವಿಪ್ರನಿನಿ ಕೋಳಾರ್ (ಕೆ) ವ್ಯಾಪ್ತಿಯಲ್ಲಿ ಬರುವ 110 ಕೆವಿ ಕೋಳಾರ್ (ಕೆ) ವಿದ್ಯುತ್…

6 minutes ago

ಜೂ.17 ರಂದು ಲೋಕಾಯುಕ್ತ ಅಹವಾಲು ಸಭೆ

ಬೀದರ.14.ಜೂನ್.25:- ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸ್ ಠಾಣೆ ವತಿಯಿಂದ ಜೂನ್.17 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ…

9 minutes ago

ಬೀದರ | ವ್ಯಕ್ತಿ ಕಾಣೆ: ಪತ್ತೆಗಾಗಿ ಮನವಿ

ಬೀದರ14.ಜೂನ್.25:- ಬೀದರನ ಒಂಟಿಗುಡಸಿತಾAಡಾದ ನಿವಾಸಿಯಾದ ಕಿಶನ ಲಕ್ಷö್ಮಣ ರಾಠೋಡ (50) ಇವರು ದಿನಾಂಕ: 07-06-2025 ರಂದು ಮನೆಯಿಂದ ಹೊರಗಡೆ ಹೋಗಿ…

12 minutes ago

ಬೀದರ | ನಾಳೆ ವಿದ್ಯುತ್ ವ್ಯತ್ಯಯ

ಬೀದರ.14.ಜೂನ್.25:- 110/33-11ಕೆವಿ ಉಪ ವಿತರಣಾ ಕೇಂದ್ರ, ಕವಿಪ್ರನಿನಿ ಹಳ್ಳಿಖೇಡ (ಬಿ) ವ್ಯಾಪ್ತಿಯಲ್ಲಿ ಬರುವ 110ಕೆವಿ ಹಳ್ಳಿಖೇಡ (ಬಿ) ವಿದ್ಯುತ್ ಉಪ…

15 minutes ago

ಹುಮನಾಬಾದ | ಜೂ.21 ರಂದು ತ್ರೈಮಾಸಿಕ ಕೆಡಿಪಿ ಸಭೆ

ಬೀದರ.14.ಜೂನ್.25:- ಹುಮನಾಬಾದ ಶಾಸಕ ಡಾ.ಸಿದ್ದು ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಜೂನ್.21 ರಂದು ಬೆಳಿಗ್ಗೆ 11 ಗಂಟೆಗೆ ಹುಮನಾಬಾದ ತಾಲ್ಲೂಕಾ ಪಂಚಾಯತ…

21 minutes ago

ಬೀದರ | ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ<br>ಸದುಪಯೋಗ ಪಡೆಯಲು ಮನವಿ

ಬೀದರ.13.ಜೂನ್.25:- 2025-26 ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು…

26 minutes ago