ರಾಜ್ಯ ಸರ್ಕಾರವು 2025-26 ನೇ ಸಾಲಿನ ಪೂರ್ಣ ವರ್ಷಕ್ಕಾಗಿ ವೆಚ್ಚ ಮಾಡಲು ಅನುಮತಿ ನೀಡಿ ಆದೇಶ ಪ್ರಕಟಿಸಿದೆ.

ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ವತಿಯಿಂದ 01ನೇ ಏಪ್ರಿಲ್ 2025 ರಿಂದ 31ನೇ ಮಾರ್ಚ್ 2026ರ ವರೆಗಿನ ಅವಧಿಯ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ರಾಜ್ಯ ವಿಧಾನ ಮಂಡಲವು ಅನುಮೋದಿಸಿದೆ ಮತ್ತು ದಿನಾಂಕ 26ನೇ ಮಾರ್ಚ್ 2025 ರಂದು ಕರ್ನಾಟಕ ರಾಜ್ಯಪಾಲರ ಒಪ್ಪಿಗೆಯನ್ನು ಪಡೆದ ಈ ಧನವಿನಿಯೋಗ ವಿಧೇಯಕವನ್ನು ದಿನಾಂಕ 26ನೇ ಮಾರ್ಚ್, 2025 ರ ವಿಶೇಷ ಕರ್ನಾಟಕ ರಾಜ್ಯಪತ್ರದಲ್ಲಿ 2025 ರ ಕರ್ನಾಟಕ ಅಧಿನಿಯಮ ಸಂಖ್ಯೆ 21 ಎಂದು ಪ್ರಕಟಿಸಲಾಗಿದೆ.

ಈ ಅಧಿಕೃತ ಜ್ಞಾಪನಕ್ಕೆ ಲಗತ್ತಿಸಿದ ಅನುಸೂಚಿಯಲ್ಲಿ ಸೂಚಿಸಿರುವಷ್ಟು ಅನುದಾನ ವಿನಿಯೋಗಗಳನ್ನು ಈ ಅಧಿನಿಯಮವು ಅಧಿಕೃತಗೊಳಿಸುತ್ತದೆ.

2. ಆದ್ದರಿಂದ, ಕಾಲಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ಅನುಸೂಚಿಯಲ್ಲಿನ 5ನೇ ಕಾಲಂನಲ್ಲಿ ಸೂಚಿಸಿದ ಮೊತ್ತಕ್ಕಿಂತ ಮೀರದ ಮೊತ್ತವನ್ನು ದಿನಾಂಕ 1ನೇ ಏಪ್ರಿಲ್ 2025 ರಿಂದ 31ನೇ ಮಾರ್ಚ್ 2026 ರವರೆಗಿನ ಅವಧಿಗೆ, ಅನುಸೂಚಿಯ 2ನೇ ಅಂಕಣದಲ್ಲಿರುವ ಸೇವೆಗಳು ಮತ್ತು ಉದ್ದೇಶಕ್ಕಾಗಿ ಭರಿಸಲು ಇಲಾಖಾ ಮುಖ್ಯಸ್ಥರು ಮತ್ತು ಅಂದಾಜು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

ಅನುಸೂಚಿಯ 5ನೇ ಕಾಲಂನಲ್ಲಿ ತಿಳಿಸಿರುವ ಮೊತ್ತದ ವಿವರಗಳನ್ನು ಆಯವ್ಯಯ ದಸ್ತಾವೇಜುಗಳೊಂದಿಗೆ ಒದಗಿಸಿದ “ಸಂಕ್ಷಿಪ್ತ ಅನುದಾನಗಳ ಅಭಿಯಾಚನೆ ಮತ್ತು ಪ್ರಕೃತ ವಿನಿಯೋಗ 2025-26” ರ ಭಾಗ-I ರಲ್ಲಿ ತಿಳಿಸಲಾಗಿದೆ.

ಕೆಲವೊಂದು ಪ್ರಕರಣಗಳಲ್ಲಿ “ಬೇಡಿಕೆ’ಯು ಒಂದಕ್ಕಿಂತ ಹೆಚ್ಚಿನ ಮುಖ್ಯ ಲೆಕ್ಕಶೀರ್ಷಿಕೆ ಮತ್ತು ಮುಖ್ಯ ಲೆಕ್ಕಶೀರ್ಷಿಕೆಯ ಒಂದು ಭಾಗವನ್ನು ಒಳಗೊಂಡಿರುವುದನ್ನು ಗಮನಿಸಬಹುದು, ಯಾವುದೇ ಒಂದು ಮುಖ್ಯ ಲೆಕ್ಕಶೀರ್ಷಿಕೆಯು ಒಂದಕ್ಕಿಂತ ಹೆಚ್ಚಿನ “ಬೇಡಿಕೆಗಳನ್ನು ಒಳಗೊಂಡಿದ್ದಲ್ಲಿ, ಆ ಮುಖ್ಯ ಲೆಕ್ಕಶೀರ್ಷಿಕೆಯ ಬೇಡಿಕೆವಾರು ವಿವರಗಳನ್ನು ಸಂಕ್ಷಿಪ್ತ ಅನುದಾನಗಳ ಅಭಿಯಾಚನೆ ಮತ್ತು ಪ್ರಕೃತ ವಿನಿಯೋಗಗಳು 2025-26 ರ ಭಾಗ- II” ರಲ್ಲಿ ನಮೂದಿಸಲಾಗಿದೆ.

3. ಜಿಲ್ಲಾ ಪಂಜಾಯತಿಗಳಿಗೆ ಸಂಬಂಧಿಸಿದ ಆಯವ್ಯಯ ಅನುದಾನಗಳು ಸಂಬಂಧಪಟ್ಟ ಅನುದಾನ ಅಭಿಯಾಚನೆಗಳಲ್ಲಿ ಸೇರಿರುತ್ತದೆ. ಅಭಿಯಾಚನೆಗಳಲ್ಲಿ ಸೂಚಿಸಿರುವ ಮೊತ್ತಕ್ಕಿಂತ ವೆಚ್ಚವು ಅಧಿಕವಾಗಿಲ್ಲವೆಂದು ಖಾತ್ರಿ ಮಾಡಿಕೊಳ್ಳುವ ಜವಾಬ್ದಾರಿಯು ಇಲಾಖಾ ಮುಖ್ಯಸ್ಥರದ್ದಾಗಿರುತ್ತದೆ. ಇವರು ಜಿಲ್ಲಾ ಪಂಚಾಯತ್‌ನ ಕ್ಷೇತ್ರ ಇಲಾಖೆಯಿಂದ ಮಾಸಿಕ ವರದಿಯನ್ನು ಪಡೆದುಕೊಂಡು ವೆಚ್ಚವನ್ನು ನಿಯಂತ್ರಿಸಬೇಕಾಗಿದೆ.

4. ಎಲ್ಲಾ ಇಲಾಖಾ ಮುಖ್ಯಸ್ಥರು ಮತ್ತು ವೆಚ್ಚವನ್ನು ನಿಯಂತ್ರಿಸಲು ಜವಾಬ್ದಾರರಾಗಿರುವ ಇತರ ಅಧಿಕಾರಿಗಳು ಯಾವುದೇ ಒಂದು ಬೇಡಿಕೆಯಡಿ ರಾಜಸ್ವ ಶೀರ್ಷಿಕೆಯಿಂದ ಬಂಡವಾಳ (ಸಾಲಗಳು ಸೇರಿ) ಶೀರ್ಷಿಕೆಗೆ ಹಾಗೂ ಬಂಡವಾಳ ಶೀರ್ಷಿಕೆಯಿಂದ ರಾಜಸ್ವ ಶೀರ್ಷಿಕೆಗೆ ಹಣವನ್ನು ಮರು ಹೊಂದಾಣಿಕೆ ಮಾಡತಕ್ಕದ್ದಲ್ಲ.

ಸರ್ಕಾರ ಮರುಹೊಂದಾಣಿಕೆಗೆ ಮಂಜೂರಾತಿ ನೀಡದ ಹೊರತು ಯಾವುದೇ ಘಟಕದಲ್ಲಿ ಉಳಿತಾಯದಿಂದ ಮರು ಹೊಂದಾಣಿಕೆಯನ್ನು ನಿರೀಕ್ಷಿಸಿ ಅಧಿಕ ವೆಚ್ಚವನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ.

ವೆಚ್ಚವನ್ನು ಮಾಡಲು ಜವಾಬ್ದಾರರಾದ ಇಲಾಖಾ ಮುಖ್ಯಸ್ಥರು ಹಾಗೂ ಇತರರು ಆರ್ಥಿಕ ವರ್ಷದ ಕೊನೆಯಲ್ಲಿ ವೆಚ್ಚವು ಬೃಹತ್ ಪ್ರಮಾಣದಲ್ಲಾಗದೇ, ವರ್ಷದ ಎಲ್ಲಾ ತಿಂಗಳಲ್ಲೂ ಸಮನಾಗಿ ಹಂಚುವಂತೆ ನೋಡಿಕೊಳ್ಳತಕ್ಕದ್ದು ಹಾಗೂ ಆಯವ್ಯಯ ವ್ಯಪಗತವಾಗಬಾರದೆಂಬ ಉದ್ದೇಶದಿಂದ ವರ್ಷಾಂತ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ವೆಚ್ಚ ಮಾಡುವುದನ್ನು ತಡೆಯುವುದು.

ಹೊಸ ಸೇವೆ ನಿಯಮಗಳ ಆದೇಶ ಸಂಖ್ಯೆ ಎಫ್.ಡಿ 14 ಬಿಪಿಎ 2015, ದಿನಾಂಕ:06-08-2015 ರನ್ವಯ ಯಾವುದೇ “ಹೊಸ ಸೇವೆಗಳ” ಬಗ್ಗೆ ಸಾದಿಲ್ವಾರು ನಿಧಿಯಿಂದ ಅಥವಾ ಪೂರಕ ಅಂದಾಜಿನ ಮೂಲಕ ಆರ್ಥಿಕ ಇಲಾಖೆಯು ಹಣ ಬಿಡುಗಡೆ ಮಾಡದ ಹೊರತು ಯಾವುದೇ ವೆಚ್ಚವನ್ನು ಮಾಡಬಾರದು.

5. ಕರ್ನಾಟಕ ಆರ್ಥಿಕ ಸಂಹಿತೆ / ಸಾದಿಲ್ವಾರು ವೆಚ್ಚದ ಕೈಪಿಡಿ / ಆಯವ್ಯಯ ಕೈಪಿಡಿ ನಿಯಮಗಳ ಅನ್ವಯ ಹಾಗೂ ಆದೇಶ ಸಂಖ್ಯೆ: ಆಇ 08 ಟಿ.ಎಫ್.ಪಿ 2023, ದಿನಾಂಕ:28.10.2024 ರಲ್ಲಿ ಇಲಾಖಾ ಮುಖ್ಯಸ್ಥರಿಗೆ ನೀಡಿರುವ ಅಧಿಕಾರಿ ಪ್ರತ್ಯಾಯೋಜನೆಯನ್ವಯ ಹಾಗೂ ಆರ್ಥಿಕ ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ತ್ರೈಮಾಸಿಕ ಕಂತುಗಳ ಬಿಡುಗಡೆ ಅಧಿಕಾರದ ಆದೇಶಗಳನ್ವಯ ಅನುದಾನದ ಬಿಡುಗಡೆ | ವೆಚ್ಚಗಳನ್ನು ಮಾಡತಕ್ಕದ್ದು.

prajaprabhat

Recent Posts

UGC-NET ಜೂನ್ 2025 ರ ಪರೀಕ್ಷಾ ವೇಳಾಪಟ್ಟಿ ಮತ್ತು  ನೋಂದಣಿ

ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…

1 hour ago

ಬೀದರ್‌’ನಲ್ಲಿ ಮೀನು ನುಂಗಿ ರೋಗ ಗುಣಮುಖ ವಿಶಿಷ್ಟ ಆಚರಣೆ

ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…

3 hours ago

ಉತ್ತರಾಖಂಡದಲ್ಲಿ ಸೇನಾ ಸನ್ನದ್ಧತೆಯನ್ನು ಪರಿಶೀಲಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಐಬೆಕ್ಸ್ ತರಾನಾ 88.4 ಎಫ್‌ಎಂ ಅನ್ನು ಉದ್ಘಾಟಿಸಿದರು.

ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…

5 hours ago

ಮಿಥಿ ನದಿ ಹೂಳೆತ್ತುವ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ.

ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…

5 hours ago

ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ಪ್ರಾರಂಭಿಸಿದೆ

ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…

5 hours ago

ಭೂಕುಸಿತದಿಂದ ಹಾನಿಗೊಳಗಾದ ಚಾಟೆನ್‌ನಿಂದ ಸಿಕ್ಕಿಬಿದ್ದ ಸ್ಥಳೀಯರು ಮತ್ತು ಟ್ಯಾಕ್ಸಿ ಚಾಲಕರನ್ನು ಸಿಕ್ಕಿಂ ಸರ್ಕಾರ ವಿಶೇಷ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ

ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…

5 hours ago