ಬೆಂಗಳೂರು.09.ಏಪ್ರಿಲ್.25:- ಕರ್ನಾಟಕ ರಾಜ್ಯದಲ್ಲಿ ಹೊರಗುತ್ತಿಗೆ ನೌಕರರುಗಳು ಏಜೆನ್ಸಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಟಿಪ್ಪಣಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರುಗಳು ಏಜೆನ್ಸಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು, ಅಭಿಪ್ರಾಯ/ಸಲಹೆಗಳನ್ನು ಕೋರಿದ್ದು, ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದಲ್ಲಿ ಕಾರ್ಯನಿವರ್ಹಿಸುತ್ತಿರುವ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಗಳು/ಶೋಷಣೆಯಿಂದ ರಕ್ಷಿಸುವ ಕುರಿತು ಅಭಿಪ್ರಾಯ/ಸಲಹೆಗಳು
1. 2025-26ನೇ ಸಾಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ Consumer Price Index ಆಧಾರದ ಮೇಲೆ ವೇತನ ನಿಗದಿಪಡಿಸುತ್ತಿದ್ದು. ಸದರಿ Consumer Price Index Numbers for Industrial workers ವಿವರ ಕೆಳಕಂಡಂತಿದೆ:-
ಮೇಲ್ಕಂಡ ಕೋಷ್ಟಕದಂತೆ 2018ರ Consumer price index ಆಧಾರದ ಮೇಲೆ 2025-26ನೇ ಸಾಲಿನ ವೇತನವನ್ನು ನಿಗದಿಪಡಿಸಿರುವ ಕಾರ್ಮಿಕ ಇಲಾಖೆಯ ದರಗಳಂತೆ ಸಿಬ್ಬಂದಿಗಳಿಗೆ ವೇತನ ಪಾವತಿಸಲು ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿರುವುದರಿಂದ, ಸದರಿ ದರಗಳಂತೆ ಟೆಂಡರ್ ಕರೆಯಲು 2 ಅಥವಾ 3 ಮಾಹೆಗಳ ಕಾಲಾವಕಾಶ ತೆಗೆದುಕೊಳ್ಳುವುದರಿಂದ, ಕಾಲಕಾಲಕ್ಕೆ ಸಿಬ್ಬಂದಿಗಳಿಗೆ ವೇತನ ಪಾವತಿಯಾಗುತ್ತಿಲ್ಲ ಹಾಗೂ ಸದರಿ ಅವಧಿಯಲ್ಲಿ ಸಿಬ್ಬಂದಿಗಳು PF, EST ಸರಿಯಾಗಿ ಜಮೆಯಾಗುತ್ತಿಲ್ಲ 2
303 20180 Consumer price index espades wheel 2025 20 ಸಾಲಿನ ವೇತನವನ್ನು ನಿಗದಿಪಡಿಸಿರುವುದರಿಂದ ಸಿಬ್ಬಂದಿಗಳ ಜೀವನ ಮಟ್ಟ ಕುಸಿದಿದ್ದು ಜೀವನಾವಶ್ಯಕ ವಸ್ತಗಳ ಬೆಲೆಗಳು ಗಗನಮುಖಿಯಾಗಿರುತ್ತದೆ, ಆದ್ದರಿಂದ ಮಸ್ತು ಬೆಲೆಗಳನ್ನಾಧರಿಸಿ, ಸಿಬ್ಬಂದಿಗಳಿಗೆ ಕನಿಷ್ಟ ಮಾಸಿಕ ರೂ.25,000/- ಗಳನ್ನು ನಿಗದಿಪಡಿಸಬೇಕಾಗಿರುತ್ತದೆ(ಸೇವಾ ತೆರಿಗೆಗಳನ್ನು ಹೊರತುಪಡಿಸಿ).
2. ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿದ್ದು, ಸದರಿ ಸಿಬ್ಬಂದಿಗಳಿಗೂ ಪ್ರಸ್ತುತ ಕೆಲಸಕ್ಕೆ ಸೇರಿದ ಸಿಬ್ಬಂದಿಗಳಿಗೂ ಒಂದೇ ಸಮಾನ ವೇತನ ಪಾವತಿಸುವುದರ ಬದಲಾಗಿ ಈ ಕೆಳಕಂಡ ಕೋಷ್ಟಕದಂತೆ ಸಿಬ್ಬಂದಿಗಳ ಸೇವಾವಧಿಯನ್ನಾಧರಿಸುವುದು ನ್ಯಾಯ ಸಮ್ಮತವಾಗುತ್ತದೆ.
3. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ, ಪದವಿ/ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿರುವ ವಿದ್ಯಾರ್ಥಿಗಳು/ಪದವಿಧರರು ಜೀವನ ನಿರ್ವಹಣೆಗಾಗಿ ಲಭ್ಯವಾಗುವ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರ ಜವಾಬ್ದಾರಿಯುತ ಕಾರ್ಯ ನಿರ್ವಹಣೆಯನ್ನು ಪರಿಗಣಿಸಿ, ಕನಿಷ್ಠ ಗ್ರೂಪ್ ‘ಸಿ’ ಗೆ ನೀಡುವ ದರಗಳಂತೆ ಕೆಲವು ಸೌಲಭ್ಯಗಳನ್ನು ನೀಡಿ ಸೂಕ್ತ ಆದೇಶ ಹೊರಡಿಸಿದ್ದಲ್ಲಿ ಸಿಬ್ಬಂದಿಗಳು ಕೃತಜ್ಞತಾ ಭಾವದಿಂದ ಕಾರ್ಯನಿರ್ವಹಿಸುತ್ತಾರೆ ಎಂಬ ಸಲಹೆ/ಅಭಿಪ್ರಾಯ ನೀಡಲಾಗಿದೆ.
ಬೆಂಗಳೂರು.ಯುಜಿಸಿ ಅತಿಥಿ ಅಧ್ಯಾಪಕರ ಕುರಿತಾದ ಇತ್ತೀಚಿನ ಸುತ್ತೋಲೆಗಳು ಸಾಮಾನ್ಯವಾಗಿ ಅವರ ನೇಮಕಾತಿ, ಅರ್ಹತೆಗಳು ಮತ್ತು ಗೌರವ ಧನಕ್ಕೆ ಸಂಬಂಧಿಸಿದ ವಿಷಯಗಳನ್ನು…
ಅತಿಥಿ ಉಪನ್ಯಾಸಕರ ವೇತನವನ್ನು UGC Eligibility ಯುಜಿಸಿ ಅರ್ಹತೆ ಹೊಂದಿರುವವರಿಗೆ ದಿನಕ್ಕೆ ರೂ. 1750/- ದರದಲ್ಲಿ ತಿಂಗಳಿಗೆ ಗರಿಷ್ಠ ರೂ.…
ಹೊಸ UGC ನಿಯಮವು ಏಕಕಾಲದಲ್ಲಿ ಎರಡು ಪದವಿಗಳನ್ನು ಪಡೆಯಲು ಅವಕಾಶ ನೀಡುತ್ತದೆ - 2025 ಶೈಕ್ಷಣಿಕ ವರ್ಷಕ್ಕೆ ಪೂರ್ಣ ಮಾರ್ಗಸೂಚಿಗಳು…
ಬೀದರ.12.ಜೂನ್.25:- ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತನಾಗಿ ಮಾಡುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ…
ಬೆಂಗಳೂರು.12.ಜೂನ್.25:- ರಜ್ಯದಲ್ಲಿ IAS ಮತ್ತು IPS ಮೂರು ಅಧಿಕಾರಿಗಳ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಸಹಿತ…
ಹೊಸ ದೆಹಲಿ.12.ಜೂನ್.25:- ಇತ್ತೀಚೆಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಕೆಡೆಟ್ಗಳನ್ನು ನವದೆಹಲಿಯಲ್ಲಿ ರಕ್ಷಣಾ ಸಚಿವ…