ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬಲವರ್ಧನೆ ಮತ್ತು 2 ವರ್ಷದಲ್ಲಿ ಇಲಾಖೆ ಸಾಧನೆಗಳು

ಬೆಂಗಳೂರು.20.ಮೇ.25:- ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಬಲವರ್ಧನೆ, ಶಿಕ್ಷಣ ಸಂಸ್ಥೆಗಳಲ್ಲಿ ಉತ್ಕೃ ಪ್ರತಾ ಕೇಂದ್ರ ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಮುಂದಿನ ನಾಲ್ಕು ವರ್ಷದಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ 2,500 ಕೋಟಿ ರೂ. ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು.

ಈಗ ವಿಶ್ವ ಬ್ಯಾಂಕ್ ಬದಲಾಗಿ ಎಷ್ಯಾ ಬ್ಯಾಂಕ್‌ನೊಂದಿಗೆ ಮಾತುಕತೆ ನಡೆಯುತ್ತಿದೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್‌ಗಳಿಗೆ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸುವುದು ಆದ್ಯತೆಯಾಗಿದೆ ಎಂದು ಡಾ. ಎಂ.ಸಿ.ಸುಧಾಕರ್ ಹೇಳಿದರು

2 ವರ್ಷದಲ್ಲಿ ಇಲಾಖೆ ಸಾಧನೆಗಳು

* ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕ್ರಮವಾಗಿ 8 ಸಾವಿರ ರೂ. ಗೌರವಧನ ಹೆಚ್ಚಳ, ನಿವೃತ್ತಿ

ಸಮಯದಲ್ಲಿ 5 ಲಕ್ಷ ರೂ.ಗಳ ಇಡುಗಂಟು

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ವಿಶೇಷವಾಗಿ ಸಿಇಟಿಯಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಸಾಕಷ್ಟು ವಿಧಾನದಲ್ಲಿ ಉನ್ನತೀಕರಿಸುವ ಮೂಲಕ ವಿದ್ಯಾರ್ಥಿಗಳ ತಾಂತ್ರಿಕ ಸಮಸ್ಯೆಗೆ ಪರಿಹಾರ,

* ಪಾರದರ್ಶಕವಾಗಿ ಸಿಇಟಿ ನಡೆಸಲು ವೆಬ್ ಕಾಸ್ಟಿಂಗ್ ವ್ಯವಸ್ಥೆ ಜಾರಿ, ಸೀಟು ಬ್ಲಾಕಿಂಗ್, ಖಾಸಗಿ ಕಾಲೇಜುಗಳು ಯದ್ವಾತದ್ವಾ ಶುಲ್ಕ ಪಡೆಯುವುದನ್ನು ನಿಯಂತ್ರಿಸಲು ಹಾಗೂ ನಕಲು ಅಭ್ಯರ್ಥಿಗಳ ಹಾವಳಿ ತಡೆಗೆ ಫೇಸ್ ರೆಕಾಗ್ನಿಷನ್, ಮೊಬೈಲ್ ಆ್ಯಪ್, ಬಾಟ್‌ಬಾಟ್ ಹಲವು ಸುಧಾರಣೆ,

* ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಇಂಗ್ಲೆಂಡ್‌ ಪ್ರತಿಷ್ಠಿತ ವಿವಿಯಲ್ಲಿ ‘ಜೆವೆನಿಂಗ್ ಕರ್ನಾಟಕ ಮಾಸ್ಟರ್ಸ್ ಫೆಲೋಶಿಪ್

ಶಿಕ್ಷಣ ಇಲಾಖೆಯ ಬೋಧಕರಿಗೆ ಬೋಧನೆ ಮತ್ತು ಕಲಿಕೆಯನ್ನು ಉತ್ತಮಪಡಿಸಲು 3 ವರ್ಷದೊಳಗೆ ಪುನರ್‌ಮನನ ತರಬೇತಿ.

ವಿದ್ಯಾರ್ಥಿಗಳಿಗೆ ಮಾರುಕಟ್ಟೆ ಆಧಾರಿತ ಕೌಶಲ ತರಬೇತಿ ಒದಗಿಸಿ ಉದ್ಯೋಗಕ್ಕೆ ಸಜ್ಜುಗೊಳಿಸಲು ಕೈಗಾರಿಕೆಗಳ ಸಹಭಾಗಿತ್ವದಲ್ಲಿ ‘ಇಂಟರ್ನ್‌ಶಿಪ್ ಪ್ರೋಗ್ರಾಂ’ ಹಾಗೂ ವಿಶೇಷ ತರಬೇತಿ ಯೋಜನೆ. ಇದನ್ನು 44 ಕಾಲೇಜುಗಳಲ್ಲಿ ಆರಂಭ

prajaprabhat

Recent Posts

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 3000 ಕ್ಕೂ ಹೆಚ್ಚು ಬೋಧಕರ ಹುದ್ದೆಗಳು ಖಾಲಿ.!

* ರಾಜ್ಯದಲ್ಲಿ ಸರಿಸುಮಾರು 3000 ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇದ್ದು, ಬೆಂಗಳೂರು.14.ಜೂನ್.25:-ವಿಶ್ವ ವಿದ್ಯಾಲಯಗಳಲ್ಲಿ ನುರಿತ ಖಾಯಂ ಪ್ರಾಧ್ಯಾಪಕರೇ…

54 minutes ago

ರಾಜ್ಯದ ವಿಕಲಚೇತನ ವ್ಯಕ್ತಿಗಳ  ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು.14.ಜೂನ್.25:- ಪ್ರಸ್ತಕ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಪ್ರಸ್ತಕ ಸಾಲಿನಲ್ಲಿ ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ…

1 hour ago

ಕೇಂದ್ರ ಶಿಕ್ಷಣ ಯೋಜನೆ – ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ (P M VIDYALXMI SCHEMES) ಯೋಜನೆ

ಹೊಸ ದೆಹಲಿ.14.ಜೂನ್.25:- (PM VIDYALAXMI SCHEMES) ಕೇಂದ್ರ ಶಿಕ್ಷಣ ಯೋಜನೆ - ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ (ಪಿಎಂ-ವಿದ್ಯಾಲಕ್ಷ್ಮಿ) ಯೋಜನೆ "ಪಿಎಂ…

2 hours ago

ಗುತ್ತಿಗೆ ಮೀಸಲು ಜಾರಿಗೆ ವಿಧೇಯಕ ವಿಂಗಡಣೆ

ಬೆಂಗಳೂರು.14.ಜೂನ್.25:- ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ತಿದ್ದುಪಡಿ ವಿಧೇಯಕವನ್ನೇ ವಿಂಗಡಿಸುವ ಗಂಭೀರ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದೆ.…

2 hours ago

ಸೊಸೈಟಿಗಳು ಹಾಗೂ ಟ್ರಸ್ಟ್‌ಗಳಿಂದ  ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಅಹ್ವಾನ

ಶಿವಮೊಗ್ಗ.14.ಜೂನ್.25:-  ಸೊಸೈಟಿಗಳು ಹಾಗೂ ಟ್ರಸ್ಟ್‌ಗಳಿಂದ ಖಾಸಗಿ ಕೃಷಿ ವಿಜ್ಞಾನಗಳ ಕಾಲೇಜುಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಹಾಗೂ ಕರ್ನಾಟಕದ ಸೊಸೈಟಿ ನೊಂದಣಿ…

3 hours ago

ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಸಿಬ್ಬಂದಿಗಳಿಗೆ ‘ನಿವೃತ್ತಿ ವೇತನ ಹೆಚ್ಚಳ ಸರ್ಕಾರ ಆದೇಶ.!

ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಎಂಬಂತೆ ನಿವೃತ್ತಿ ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ…

3 hours ago