ರಾಜ್ಯದ್ಯಂತ್ 6,598 ಗ್ರಾಮ ಪಂಚಾಯತ’ಗಳಲಿ ಗ್ರಾಮ ಗ್ರಂಥಾಲಯಗಳು ಮಂಜೂರು.

ಬೆಂಗಳೂರು.23.ಜೂನ್.25:- ರಾಜ್ಯದ್ಯಂತ್ 6,598 ಗ್ರಾಮ ಪಂಚಾಯತ’ಗಳಲಿ ಗ್ರಾಮ ಗ್ರಂಥಾಲಯಗಳು ಮಂಜೂರು. ಕೇಂದ್ರ ಸರ್ಕಾರದ ನೆರವಿನೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ರಾಜ್ಯಾಧ್ಯಂತ ಹೊಸದಾಗಿ 6,598 ‘ಗ್ರಾಮ ಗ್ರಂಥಾಲಯ’ಗಳನ್ನು ತೆರೆಯಲು ಮುಂದಾಗಿದೆ.

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ನೀಡುವ ಹಣಕಾಸು ನೆರವು ಯೋಜನೆಯ (ಎಸ್‌.ಎ.ಎಸ್‌.ಸಿ.ಐ) ‘ಮಕ್ಕಳು ಮತ್ತು ಹದಿಹರೆಯದವರಿಗಾಗಿ ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ’ ಕಾರ್ಯಕ್ರಮದಡಿ 31 ಜಿಲ್ಲೆಗಳಲ್ಲಿ ‘ಗ್ರಾಮ ಗ್ರಂಥಾಲಯ’ಗಳನ್ನು ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಪ್ರತಿ ಗ್ರಂಥಾಲಯಕ್ಕೆ ತಲಾ ₹2 ಲಕ್ಷ ಮೊತ್ತದ ಪುಸ್ತಕಗಳನ್ನು ‘ನ್ಯಾಷನಲ್‌ ಬುಕ್‌ ಟ್ರಸ್ಟ್‌ ಇಂಡಿಯಾ’ದಿಂದ ಖರೀದಿಸಲಾಗಿದ್ದು, ಆಯಾ ಜಿಲ್ಲಾ ಪಂಚಾಯಿತಿಗಳಿಗೆ ಪುಸ್ತಕಗಳು ಸರಬರಾಜಾಗಿವೆ. 2,040 ಕನ್ನಡ, 627 ಇಂಗ್ಲಿಷ್‌ ಹಾಗೂ 20 ಕಲಿಕಾ ವಿಜ್ಞಾನ ಪುಸ್ತಕಗಳು ಸೇರಿ ಒಟ್ಟು 2,687 ಕೃತಿಗಳು ಪ್ರತಿ ಗ್ರಂಥಾಲಯಕ್ಕೆ ಶೀಘ್ರದಲ್ಲೇ ಹಂಚಿಕೆಯಾಗಲಿವೆ.

ಮಕ್ಕಳ ಕತೆ, ವಿಜ್ಞಾನ ಮತ್ತು ವೈಜ್ಞಾನಿಕ ಚಟುವಟಿಕೆ, ಜೀವನ ಚರಿತ್ರೆ, ಮಕ್ಕಳು ಮತ್ತು ಸಮುದಾಯಕ್ಕಾಗಿ ಚಟುವಟಿಕೆಗಳು ಸೇರಿದಂತೆ ವೈವಿಧ್ಯಮಯ ವಿಷಯಗಳ ಪುಸ್ತಕಗಳು ಗ್ರಂಥಾಲಯಗಳಿಗೆ ಸಿಗಲಿವೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಮತ್ತು ಡಿಜಿಟಲ್ ಕೌಶಲ ಬೆಳೆಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಗ್ರಂಥಾಲಯಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಒದಗಿಸುತ್ತದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.

ಕಂಪ್ಯೂಟರ್‌, ಪೀಠೋಪಕರಣ:

ನೂತನ ಗ್ರಾಮ ಗ್ರಂಥಾಲಯಗಳಿಗೆ ₹1 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್‌ ಮತ್ತು ಯುಪಿಎಸ್‌ ಹಾಗೂ ₹1 ಲಕ್ಷ ವೆಚ್ಚದಲ್ಲಿ ಪಿಠೋಪಕರಣಗಳ ಸೌಲಭ್ಯಗಳು ದೊರಕಲಿವೆ. ಪೀಠೋಪಕರಣಗಳನ್ನು ಖರೀದಿಸಲು ಪಂಚಾಯತ್‌ ರಾಜ್‌ ಆಯುಕ್ತಾಲಯದಿಂದ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆದೇಶಿಸಿದೆ.



ಕಟ್ಟಡಗಳ ನವೀಕರಣ:

‘ಹೊಸ ಗ್ರಂಥಾಲಯಗಳಿಗೆ ಗುರುತಿಸಲಾದ ಕಟ್ಟಡಗಳಿಗೆ ಅಗತ್ಯವಿರುವ ದುರಸ್ತಿ, ನವೀಕರಣ, ವಿದ್ಯುತ್‌ ಮತ್ತು ಇಂಟರ್‌ನೆಟ್‌ ಸಂಪರ್ಕ, ಕುಡಿಯುವ ನೀರು, ಫ್ಯಾನ್‌ ಸೇರಿ ಮೂಲಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲದಿಂದ ಅಥವಾ ಲಭ್ಯವಿರುವ ಇತರೆ ಅನುದಾನಗಳನ್ನು ಬಳಸಿ ಕಲ್ಪಿಸಬೇಕು’ ಎಂದು ಪಂಚಾಯತ್‌ ರಾಜ್‌ ಆಯುಕ್ತಾಲಯದ ಆಯುಕ್ತರು ಆದೇಶಿಸಿದ್ದಾರೆ.

– ಲಕ್ಷ್ಮಿ ಪಿ. ಉಪ ಕಾರ್ಯದರ್ಶಿ (ಅಭಿವೃದ್ಧಿ) ಮಂಡ್ಯ ಜಿಪಂಮಂಡ್ಯ ಜಿಲ್ಲೆಯಲ್ಲಿ 257 ಕಟ್ಟಡಗಳನ್ನು ಗುರುತಿಸಿದ್ದೇವೆ. ಪುಸ್ತಕ ಮತ್ತು ಪೀಠೋಪಕರಣಗಳನ್ನು ಶೀಘ್ರದಲ್ಲೇ ಗ್ರಾಮ ಗ್ರಂಥಾಲಯಗಳಿಗೆ ಹಂಚಿಕೆ ಮಾಡುತ್ತೇವೆ.

prajaprabhat

Recent Posts

8000 ಕಾನ್‌ಸ್ಟೆಬಲ್‌, 500 PSI ಶೀಘ್ರ ಭರ್ತಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೊಪ್ಪಳ.23.ಜೂನ್.25:- ರಾಜ್ಯದಲ್ಲಿ  ಖಾಲಿಯಿರುವ 8,000 ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ.…

20 minutes ago

ಒಳಮೀಸಲಾತಿ ಜಾತಿ ಸಮೀಕ್ಷೆ ಕಾಲಾವಧಿ ಜೂ.30 ವರೆಗೆ.

ಬೆಂಗಳೂರು.23.ಜೂನ್.25:- ಒಳಮೀಸಲಾತಿ ಜಾರಿಗಾಗಿ ವೈಜ್ಞಾನಿಕ ದತ್ತಾಂಶ ನೀಡಲು ನ್ಯಾ.ಎಚ್.ಎನ್. ನಾಗಮೋಹನ್‍ದಾಸ್ ಏಕ ಸದಸ್ಯ ಆಯೋಗದ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಪರಿಶಿಷ್ಟ ಜಾತಿಯ…

2 hours ago

14,582 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಗ್ರೂಪ್ 'ಬಿ' ಮತ್ತು ಗ್ರೂಪ್ 'ಸಿ' ಕೇಂದ್ರ ಸರ್ಕಾರದ  STAFF SALECTION COMMISSION ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ-ಕೇರಳ ಪ್ರದೇಶ,…

3 hours ago

ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ‘AI’ ಫೇಸ್ ರೆಕಗ್ನಿಷನ್ ಹಾಜರಾತಿ ಕಡ್ಡಾಯ.ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.23.ಜೂನ್.25:- 2025-26  ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಮಕ್ಕಳ ಹಾಜರಾತಿಗೆ ಅತ್ಯಾಧುನಿಕ (Face Recognition Attendance ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು,…

4 hours ago

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಭಾಗಿಯಾಗುವ ಬಗ್ಗೆ ಅಮೆರಿಕ ನಿರ್ಧಾರ ವಿಳಂಬ ಮಾಡಿದ ನಂತರ ಕಚ್ಚಾ ತೈಲ ಬೆಲೆಗಳು ಕಡಿಮೆಯಾಗುತ್ತವೆ

ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆಯ ಬಗ್ಗೆ ನಿರ್ಧಾರವನ್ನು ಶ್ವೇತಭವನ ವಿಳಂಬ ಮಾಡಿದ ನಂತರ ಇಂದು ಕಚ್ಚಾ ತೈಲ ಬೆಲೆಗಳು ಕಡಿಮೆಯಾದವು.…

9 hours ago

ಮೇ 2025 ರಲ್ಲಿ ಪ್ರಮುಖ ವಲಯಗಳು ದಾಖಲೆಯ ವಿಸ್ತರಣೆಯನ್ನು ಕಂಡಿವೆ.

ದೇಶದ ಕೈಗಾರಿಕಾ ಉತ್ಪಾದನೆಯ ಸುಮಾರು ಐದನೇ ಎರಡರಷ್ಟು ಪಾಲನ್ನು ಹೊಂದಿರುವ ಭಾರತದ ಮೂಲಸೌಕರ್ಯ ಉತ್ಪಾದನೆಯು, ಒಂದು ವರ್ಷದ ಹಿಂದಿನ ಇದೇ…

9 hours ago