ರಾಜ್ಯದಲ್ಲಿ ಮತ್ತೆ ಹೊಸ ಜಿಲ್ಲೆಗಳ ರಚನೆ?

ಬೆಂಗಳೂರು.30.ಜೂನ್.25:- ಕೇಂದ್ರ ಸರ್ಕಾರ ರಾಜ್ಯದಲ್ಲಿ ಹೊಸ ಜಿಲ್ಲೆ, ತಾಲೂಕು ರಚನೆಗೆ ಮಾಹಿತಿ ಕೇಳಿದಾರೆ.

ಹೌದು, ಈಗಾಗಲೇ ತುಮಕೂರನ್ನು ಮೂರು ಭಾಗ ಮಾಡಿ ಮಧುಗಿರಿ ಮತ್ತು ತಿಪಟೂರನ್ನು ಜಿಲ್ಲೆ ಮಾಡ್ತೀವಿ ಅಂತಾ ಖುದ್ದು ಸಚಿವ ಕೆ.ಎನ್. ರಾಜಣ್ಣ ಘೋಷಿಸಿದ್ದಾರೆ. ಆದರೆ ಇಂಥದ್ದೊಂದು ನಿರ್ಧಾರ ಕೈಗೊಳ್ಳಲು ಇದೀಗ ಗಡುವು ನಿಗದಿಯಾಗಿದೆ.

ಹಾಗಂತಾ ಇದು ಯಾರೋ ಹೋರಾಟಗಾರರೋ, ಸ್ಥಳೀಯರೋ ನೀಡಿರುವ ಗಡುವಲ್ಲ. ಬದಲಿಗೆ ಕೇಂದ್ರ ಸರ್ಕಾರ ಪ್ರತಿ ರಾಜ್ಯಗಳಿಗೂ ನೀಡಿರುವ ಆದೇಶ.

ಏಪ್ರಿಲ್ 1 ರಿಂದ ದೇಶದಲ್ಲಿ ಜಾತಿ ಗಣತಿಗೆ ಮುನ್ನುಡಿ ಬರೆಯಲಾಗುತ್ತಿದೆ. ಈ ನಿಟ್ಟಿನಲ್ಲಿ, ಯಾವುದೇ ರಾಜ್ಯವಿರಲಿ, ತನ್ನಲ್ಲಿ ಹೊಸ ಜಿಲ್ಲೆ, ತಾಲೂಕು, ಠಾಣೆ ವ್ಯಾಪ್ತಿ ಬದಲಾವಣೆಯಂತಹ ಕೆಲಸಗಳಿದ್ದರೆ ಮುಗಿಸಿಕೊಳ್ಳಿ ಅಂತಾ ಆದೇಶಿಸಿದೆ. ಅಷ್ಟೇ ಅಲ್ಲಾ ಇಂಥದ್ದೇನಾದರೂ ಯೋಜನೆಗಳಿದ್ದರೆ ಅದನ್ನು ಈ ವರ್ಷದ ಡಿಸೆಂಬರ್ 31ರೊಳಗೆ ಮುಗಿಸಿಕೊಳ್ಳಿ ಅಂತಲೂ ಉಲ್ಲೇಖಿಸಿದೆ. ಹೀಗಾಗಿ ರಾಜ್ಯದಲ್ಲಿ ನೂತನ ಜಿಲ್ಲೆಗಳ ರಚನೆ ಆಗೋದಾದರೆ ಅದು ವರ್ಷಾಂತ್ಯದೊಳಗೆ ಆಗಬೇಕಿದೆ.

ಒಂದೆಡೆ ತುಮಕೂರನ್ನು ಮೂರಾಗಿಸುವ ಸಿದ್ಧತೆ ನಡೆಸಿದರೆ ರಾಜ್ಯದ ಅತಿ ದೊಡ್ಡ ಜಿಲ್ಲೆ ಖ್ಯಾತಿಯ ಬೆಳಗಾವಿಯನ್ನೂ ಮೂರು ಭಾಗವಾಗಿಸುವ ಒತ್ತಡವಿದೆ. ಅಷ್ಟೇ ಅಲ್ಲಾ ಧಾರವಾಡವನ್ನೂ ವಿಭಜಿಸಿ 3 ಜಿಲ್ಲೆಗಳನ್ನು ರಚಿಸುವ ಮನಸ್ಸು ಕೆಲವರಿಗಿದೆ. ಹೀಗಾಗಿ ಇಂತಹ ಯಾವ ಬದಲಾವಣೆಗಳಿದ್ದರೂ ಅದು ಈ ವರ್ಷದ ಅಂತ್ಯದ ವೇಳೆಗೆ ಬಗೆಹರಿಯಬೇಕಿದೆ. ಹಾಗಾಗಿ ಹಲವು ದಶಕಗಳ ಕೆಲ ಹೋರಾಟಗಳಿಗೆ ಈ ವರ್ಷ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆಗಳಿವೆ.

prajaprabhat

Recent Posts

ರೈಲ್ವೇ ನೇಮಕಾತಿ ಮಂಡಳಿಯಿಂದ 6,238 ಹುದ್ದೆಗಳ ಭರ್ತಿಗೆ ಅರ್ಜಿ

ಭಾರತಿಯ ರೈಲ್ವೆಯಲ್ಲಿ ನೇಮಕಾತಿ ಮಂಡಳಿ(RRB) ಭಾರತೀಯ ರೈಲ್ವೇಯಲ್ಲಿ 6,238 ವಿವಿಧ ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಜೂನ್ 28 ರಿಂದ…

4 hours ago

‘SSC’ ಯಿಂದ 1075 ಹುದ್ದೆಗಳಿಗೆ ಅರ್ಜಿ ಆಹ್ವಾನ.

Staff Selection Commission ಬ್ಬಂದಿ ಆಯ್ಕೆ ಆಯೋಗ ವತಿಯಿಂದ ವಿವಿಧ, ಹುದ್ದೆಗಳು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ…

8 hours ago

ಕೆಸ್ತೂರು ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ

ಯಳಂದೂರು.30.ಜೂನ್ .25:- ತಾಲ್ಲೂಕಿನ ಕೆಸ್ತೂರು ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ 2024-2025 ನೇ ಸಾಲಿನಲ್ಲಿ ಎಸ್ ಎಸ್…

12 hours ago

ವಾಹನ ಸವಾರರ ಗಮನಕ್ಕೆ: ಜುಲೈ 2ರ ವರೆಗೆ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ!

ಕದಿರೇನಹಳ್ಳಿ ಅಂಡರ್ ಪಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ BWSSB ಕಾಮಗಾರಿ ನಡೆಯುತ್ತಿರುವುದರಿಂದ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದೆ, ಪರ್ಯಾಯ…

12 hours ago

CBSE National Teacher Award 2025: ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ  ಆರಂಭ.

ಹೊಸ ದೆಹಲಿ.30.ಜೂನ್.25:- ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಪ್ರಾರಂಭವಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕ…

13 hours ago

ರೈಲು ಹೊರಡುವ 8 ಗಂಟೆಗಳ ಮೊದಲು ರೈಲ್ವೆ ಇಲಾಖೆಯು ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಲಿದೆ.

ಹೊಸ ದೆಹಲಿ.30.ಜೂನ್.25:- ರೈಲು ನಿರ್ಗಮನಕ್ಕೆ ಎಂಟು ಗಂಟೆಗಳ ಮೊದಲು ಮೀಸಲಾತಿ ಚಾರ್ಟ್‌ಗಳನ್ನು ಸಿದ್ಧಪಡಿಸುವ ಅನುಷ್ಠಾನವನ್ನು ಪ್ರಾರಂಭಿಸಲು ರೈಲ್ವೆ ಸಚಿವ ಅಶ್ವಿನಿ…

13 hours ago