ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಕಡ್ಡಾಯ: ಅತಿಥಿ ಉಪನ್ಯಾಸಕರ ?

ಅತಿಥಿ ಉಪನ್ಯಾಸಕರ ಹುದ್ದೆಗೆ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೂ ಮುನ್ನ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಪಿ) ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ನಿಯಮಾವಳಿ ಅನುಸರಿಸುವಂತೆಹೈಕೋರ್ಟ್ ಉನ್ನತ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಆತ್ಮೀಯ ಅತಿಥಿ ಉಪನ್ಯಾಸಕ ಬಂಧುಗಳೇ,


        ನಮ್ಮ ಈ ಸಮಸ್ಯೆಗಳಿಗೆ ನೇರವಾಗಿ ಸರ್ಕಾರಗಳ ಇಬ್ಬಗೆಯ ನೀತಿಯನ್ನು ಅನಿಸರಿಸುವುದರ ಮೂಲಕ ಒಂದು ಸಮಸ್ಯೆಯನ್ನು ಸೃಷ್ಟಿಸಿದರೆ ಮತ್ತೊಂದೆಡೆ ನಮ್ಮಲ್ಲಿ ಇರುವ ನಾಯಕತ್ವದ ಕೊರತೆಯಿಂದಾಗಿ ಅತಿಥಿ ಉಪನ್ಯಾಸಕರ ಸಮಸ್ಯೆ ದಿನೇ ದಿನೇ ಚಟಿಲವಾಗುತ್ತಿದೆ,  2013 ರಿಂದ 2017ರವರೆಗೆ ಬಿ ರಾಜಶೇಖರ್ ಮೂರ್ತಿ ಅವರ ನಾಯಕತ್ವದ ನೇತೃತ್ವವನ್ನು ವಹಿಸಿದಾಗ ಯಾವುದೇ ಸರ್ಕಾರ ಇದ್ದರೂ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಎಲ್ಲರನ್ನ ಸಮಾನ ರೀತಿಯಲ್ಲಿ ನೋಡುವ ಆದೇಶಗಳನ್ನ ಮಾಡಿಸುವಂತಹ ಒಂದು ದೂರ ದೃಷ್ಟಿ ನಾಯಕತ್ವ ನಮ್ಮಲ್ಲಿತ್ತು, ಆದರೆ ನಮ್ಮಲ್ಲಿ ಹುಟ್ಟಿಕೊಂಡ ಕೆಲ ಸಾಂದರ್ಭಿಕ ನಾಯಕರ ಪಿತೂರಿಗಳಿಂದ ನಮ್ಮ ನೇತೃತ್ವವನ್ನು ವಹಿಸಿರುವಂತಹ ಬಿ ರಾಜಶೇಖರ್ ಮೂರ್ತಿ ನಾಯಕತ್ವಕ್ಕೆ ಅನುಮಾನಗಳನ್ನು ವ್ಯಕ್ತಪಡಿಸಿದಾಗ ಅವರು ಸಂಘಟನೆಯಿಂದ ತಟಸ್ಥರಾದರು.


      ಅಲ್ಲಿಂದ ಇಲ್ಲಿಯವರೆಗೆ ಸರ್ಕಾರದ ಒಡೆದು ಆಳುವ ನೀತಿಗಳಿಂದ ಜೊತೆಗೆ ಕಾಲಕಾಲಕ್ಕೆ ಬದಲಾಗುವ ಆದೇಶಗಳಿಂದ ಸರಿಸುಮಾರು 7,000 ಜನ ಕೆಲಸವನ್ನ ಕಳೆದುಕೊಂಡಿದ್ದಾರೆ ಈಗ ನಮ್ಮಲ್ಲಿಯೇ UGC ಮತ್ತೆ NON UGC* ಎಂಬ ಎರಡು ವರ್ಗಗಳು ಸೃಷ್ಟಿಸಿ ನಮ್ಮಲ್ಲಿಯೇ ಭಿನ್ನಾಭಿಪ್ರಾಯಗಳನ್ನ ಮೂಡಿಸಿದ್ದಲ್ಲದೆ, ಯಾರಿಗೂ ಉದ್ಯೋಗದ ಭದ್ರತೆಯಿಲ್ಲದೆ ಸರ್ಕಾರಗಳು ನಮ್ಮನ್ನ ಬೀದಿ ಪಾಲು ಮಾಡುತ್ತಿದೆ.


ಸಂಗಾತಿಗಳೇ ಈಗಲಾದರೂ ಎಚ್ಚೆತ್ತುಕೊಂಡು ಬಿ ರಾಜಶೇಖರ್ ಮೂರ್ತಿ ಅವರನ್ನ ಮತ್ತೆ ಸಂಘಟನೆಯ ವಿಷಯದಲ್ಲಿ ಅವರಿಗೆ ಮನವೊಲಿಸಿ ಪುನರ್ ಸಂಘಟನೆಯನ್ನು ಬಲಪಡಿಸುವ ಪ್ರಯತ್ನಗಳು ಆಗಬೇಕಾಗಿದೆ,


           ಯಾಕೆಂದರೆ ಬಿ ರಾಜಶೇಖರ ಮೂರ್ತಿ ಅವರು ಜಸ್ಟಿಸ್ ನಾಗಮೋಹನ್ ದಾಸ್ ಅವರ ಆಪ್ತರು ಮತ್ತು ನಾಡೋಜ ಬರಗೂರು ರಾಮಚಂದ್ರಪ್ಪನವರ* ಆತ್ಮೀಯರಾಗಿರುವ ಕಾರಣ ನಮಗೆ ಯಾವುದಾದರೂ ಉದ್ಯೋಗದ ಆಸರೆಯ ವರದಿಯನ್ನು ನೀಡಲಿಕ್ಕೆ ಇವರು ಮನಸ್ಸು ಮಾಡಿಸಿದರೆ ಖಂಡಿತವಾಗಿಯೂ ನಮಗೆ ಉದ್ಯೋಗದ ಭದ್ರತೆ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ನಾವೆಲ್ಲರೂ ಸೇರಿ ಆಲೋಚಿಸಬೇಕಿದೆ, ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಯ ನಾಯಕರುಗಳು ಹಾಗೂ ಅತಿಥಿ ಉಪನ್ಯಾಸಕ ಬಂಧುಗಳು ಸಹಕರಿಸಿ ಯೋಚಿಸಿ ಒಂದು ನಿರ್ಣಯಕ್ಕೆ ಬರಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ…


(2013 ರಿಂದ 2017ರವರೆಗೆ ಆಯಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸುವ ಆದೇಶಗಳನ್ನು ಮಾಡಿಸಿದ್ದು  ಅಂದಿನ ಅತಿಥಿ ಉಪನ್ಯಾಸಕರ ನಾಯಕತ್ವವನ್ನು ವಹಿಸಿದ್ದ ಇದೇ ರಾಜಶೇಖರ್ ಮೂರ್ತಿ ಅವರು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ)*

ಆಯ್ಕೆ ಇದೆ ನಮ್ಮ ಕೈಯಲ್ಲಿ

prajaprabhat

Recent Posts

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

4 minutes ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

8 minutes ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

27 minutes ago

ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆ’ ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…

3 hours ago

ಪರಿಶಿಷ್ಟ ಜಾತಿ ಒಳ ಮೀಸಲಾತಿ’ ಸಮೀಕ್ಷಾ ಅವಧಿ ಜೂನ್ 22 ರವರೆಗೆ ವಿಸ್ತರಣೆ

ಬೆಂಗಳೂರು.09.ಜೂನ್.25:- ನ್ಯಾಯಮೂರ್ತಿ ಡಾ:ಹೆಚ್.ಎನ್.ನಾಗಮೋಹನ್ ದಾಸ್, ಏಕ ಸದಸ್ಯ ಆಯೋಗ ರಾಜ್ಯ ಸರ್ಕಾರದಿಂದ 'ಪರಿಶಿಷ್ಟ ಜಾತಿ ಒಳ ಮೀಸಲಾತಿ' ಸಮೀಕ್ಷಾ ಕಾರ್ಯ…

3 hours ago

ಗ್ರೇಟಾ ಥನ್‌ಬರ್ಗ್ ಅವರ ಸಹಾಯ ದೋಣಿ ಗಾಜಾ ಪ್ರವೇಶಿಸುವುದನ್ನು ತಡೆಯುವುದಾಗಿ ಇಸ್ರೇಲ್ ಭರವಸೆ ನೀಡಿದೆ 08 ಜೂನ್, 2025 ರಾಷ್ಟ್ರೀಯ<br>

ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಸೇರಿದಂತೆ ಅಂತರರಾಷ್ಟ್ರೀಯ ಕಾರ್ಯಕರ್ತರು ಮತ್ತು ಮಾನವೀಯ ನೆರವಿನೊಂದಿಗೆ ಗಾಜಾ ಪಟ್ಟಿಗೆ ಪ್ರವೇಶಿಸುವ ದತ್ತಿ…

4 hours ago