ಯುಜಿಸಿ’ಯಲ್ಲಿಲ್ಲದ ರೂಲ್ಸ್‌ ಕರ್ನಾಟಕದಲ್ಲಿ: ಶಿಕ್ಷಣ ಇಲಾಖೆಗೆ ಹೈಕೋರ್ಟ್‌ ತರಾಟೆ

ಪದವಿ ಕಾಲೇಜುಗಳ ಪ್ರಾಧ್ಯಾಪಕರ ಪ್ರಮೋಷನ್‌ ನೀಡುವ – ಪದೋನ್ನತಿ ಸಂದರ್ಶನಕ್ಕೆ ಉಚ್ಚನ್ಯಾಯಾಲಯ ಪೂರ್ಣವಿರಾಮ ನೀಡಿದೆ. ಯುಜಿಸಿ ನಿಯಮಾವಳಿ 2018 ಪ್ರಕಾರ ಕಾಲೇಜು ಶಿಕ್ಷಕರ ಸಿಎಎಸ್ ಪ್ರಮೋಷನ್ ಸಂದರ್ಶನ ನಡೆಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಅಲ್ಲದೇ ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಗೆ ತರಾಟೆ ತೆಗೆದುಕೊಂಡಿದೆ. ಈ ಕುರಿತ ಪೂರ್ಣ ವಿವರ ಇಲ್ಲಿ ತಿಳಿಸಲಾಗಿದೆ ನೋಡಿ.

ಕಾಲೇಜು ಶಿಕ್ಷಣ ಇಲಾಖೆಗೆ ಹೈಕೋರ್ಟ್‌ ತರಾಟೆ.
ಪ್ರಾಧ್ಯಾಪಕರ ಪದೋನ್ನತಿ ವಿಷಯದಲ್ಲಿ ಸಂದರ್ಶನಕ್ಕೆ ಬ್ರೇಕ್‌ ಹಾಕಿದ ಹೈಕೋರ್ಟ್‌.
ಏನಿದು ಹಿನ್ನೆಲೆ? ತಿಳಿದುಕೊಳ್ಳಿ.

ವಿಶ್ವವಿದ್ಯಾಲಯ ಧನಸಹಾಯ ಮಂಡಳಿಯ ನಿಯಮಾವಳಿಗಳಲ್ಲೇ ಇರದ ರೂಲ್ಸ್‌ ಕರ್ನಾಟಕದಲ್ಲಿ ಮಾತ್ರ ಜಾರಿಯಲ್ಲಿದ್ದು, ಇದು ಪ್ರಾಧ್ಯಾಪಕರ ವೃತ್ತಿಜೀವನಕ್ಕೆ ಅನಾನುಕೂಲಕರವಾಗಿದೆ. ಸ್ನಾತಕೋತ್ತರ ಪದವಿ ನಂತರ ಎನ್‌ಇಟಿ, ಎಸ್‌ಎಲ್‌ಇಟಿ, ಜೆಆರ್‌ಎಫ್ ಅರ್ಹತೆ ಪಡೆದವರು, ಪಿಹೆಚ್‌ಡಿ ಪಡೆದವರು, ಹತ್ತಾರು ವರ್ಷ ಪ್ರಾಧ್ಯಾಪಕರಾಗಿದ್ದವರು ಬಡ್ತಿ ಪಡೆಯಲಾಗದೆ ಪರದಾಡುವಂತಾಗಿತ್ತು. ಕೊನೆಗೂ ಹೈಕೋರ್ಟ್ ಮಧ್ಯಪ್ರವೇಶದಿಂದ ಈ ನಿಯಮಕ್ಕೆ ಈಗ ಬ್ರೇಕ್ ಬಿದ್ದಿದ್ದು ಬೋಧಕ ವೃಂದದವರು ನಿರಾಳರಾಗಿದ್ದಾರೆ.

ಹೌದು. ಕರ್ನಾಟಕದಲ್ಲಿ 410 ಸರ್ಕಾರಿ ಪದವಿ ಕಾಲೇಜುಗಳಿದ್ದು ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿ 7 ಸಾವಿರಕ್ಕೂ ಹೆಚ್ಚು ಪ್ರಾಧ್ಯಾಪಕರಿದ್ದಾರೆ. ಇವರಿಗೆ 6, 10, 13 ಹಾಗೂ 16 ವರ್ಷ ಸೇವೆ ಸಲ್ಲಿಸಿದಲ್ಲಿ ಬಡ್ತಿ ನೀಡಲಾಗುತ್ತದೆ. ಆದರೆ, ಈ ಬಡ್ತಿ ನೀಡಲು ನಡೆಯುವ ಸಂದರ್ಶನದಲ್ಲಿ ಅನೇಕರು ಅನುತ್ತೀರ್ಣರಾಗುತ್ತಾರೆ. ಇಂತಹವರಿಗೆ ಬಡ್ತಿ ಭಾಗ್ಯವೂ ಇಲ್ಲ. ಆರ್ಥಿಕ ಲಾಭವೂ ಸಿಗುವುದಿಲ್ಲ. ಯುಜಿಸಿ ನಿಯಮಾವಳಿಯಲ್ಲೇ ಇಲ್ಲದ ಇಂಥ ವೃತ್ತಿ ಪದೋನ್ನತಿ ಸಂದರ್ಶನ ಕರ್ನಾಟಕದಲ್ಲಿ ಮಾತ್ರ ಚಾಲ್ತಿಯಲ್ಲಿತ್ತು ಎಂಬುದು ಗಂಭೀರ ವಿಷಯವಾಗಿತ್ತು ಹಾಗೂ ಪ್ರಶ್ನಾರ್ಥಕವಾಗಿತ್ತು.

ವಿಶ್ವವಿದ್ಯಾಲಯ ಧನಸಹಾಯ ಮಂಡಳಿ ಹಾಗೂ ಕರ್ನಾಟಕ ಸರ್ಕಾರ ಅಳವಡಿಸಿ ಕೊಂಡಿರುವ ನಿಯಮಗಳಲ್ಲಿ ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಮಾತ್ರ ಪದೋನ್ನತಿ ನೀಡುವ ಸಂದರ್ಭದಲ್ಲಿ ಸಂದರ್ಶನ ನಡೆಸಲು ಅವಕಾಶವಿದೆ. ಆದರೆ, ಇಲ್ಲಿ ಬೋಧಕರ ಪದೋನ್ನತಿಗೂ ಸಂದರ್ಶನ ನಡೆಸುವುದನ್ನು ರೂಢಿಸಲಾಗಿತ್ತು. ಆ ಮೂಲಕ ಮನಸೋ ಇಚ್ಛೆ ಬಡ್ತಿ ನೀಡಿ ಬೇಡವಾದವರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಪ್ರಾಧ್ಯಾಪಕ ವಲಯದಲ್ಲಿ ಕೇಳಿ ಬಂದಿತ್ತು. ಕೊನೆಗೂ, ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿ ಕಾಲೇಜು ಶಿಕ್ಷಣ ಇಲಾಖೆ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದೆ.

ಪದವಿ ಕಾಲೇಜು ಪ್ರಾಧ್ಯಾಪಕರಿಗೆ ಬಡ್ತಿ (ಪ್ರಮೋಷನ್) ನೀಡುವಾಗ ಯುಜಿಸಿ ನಿಯಮದ ಪ್ರಕಾರ ಆಯ್ಕೆ ಸಮಿತಿ ಆಯಾ ಕಾಲೇಜುಗಳ ಪ್ರಾಂಶುಪಾಲರಿಂದ ಪರ್ಫಾಮೆನ್ಸ್ ಅಪ್ರೈಸಲ್ ರಿಪೋರ್ಟ್ ಪಡೆದು ಪದೋನ್ನತಿ ನೀಡಬೇಕು. ಆದರೆ, ಕರ್ನಾಟಕದಲ್ಲಿ 2021 ರಿಂದ ಬೋಧಕರಿಗೆ ವೃತ್ತಿ ಪದೋನ್ನತಿ ಸಂದರ್ಶನ ನಡೆಸಲಾಗುತ್ತಿದೆ. ಈ ಸಂದರ್ಶನಕ್ಕೆ ಅಂಕ ನಿಗದಿಪಡಿಸಲಾಗಿದೆ. ಅಂಕ ನಿಗದಿಯಲ್ಲೂ ಸಾಮಾಜಿಕ ನ್ಯಾಯ ಪಾಲನೆ ಮಾಡಿಲ್ಲ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹೀಗೆ ಎಲ್ಲರಿಗೂ ಏಕರೂಪದ ಅಂಕ ನಿಗದಿಪಡಿಸಲಾಗಿದೆ ಎಂಬ ಟೀಕೆಯೂ ಇದೆ.

ಪ್ರತಿ ವರ್ಷ ಸಾಮಾನ್ಯವಾಗಿ 300-500 ಪ್ರಾಧ್ಯಾಪಕರಿಗೆ ಪದೋನ್ನತಿ ನೀಡಬೇಕಾಗುತ್ತದೆ. ಪ್ರಮೋಷನ್‌ ಪ್ರಕ್ರಿಯೆಗೆ ಸಲ್ಲಿಕೆಯಾಗುವ ಅರ್ಜಿಗಳ ಸಂಸ್ಕರಣಾ (ಪ್ರೊಸೆಸಿಂಗ್‌ ಪಿರಿಯಡ್) ಅವಧಿ ಆರೆಂಟು ತಿಂಗಳು. ನಂತರ ಪದೋನ್ನತಿ ಆದೇಶ ನೀಡಲಾಗುತ್ತದೆ. ಬಡ್ತಿ ಆದೇಶ ಹೊರಡಿಸಿದ ದಿನಾಂಕದಿಂದಲೇ ಪ್ರಾಧ್ಯಾಪಕರಿಗೆ ಆರ್ಥಿಕ ಲಾಭ ದೊರೆಯುತ್ತದೆ. ಈ ವಿಳಂಬದಿಂದಲೂ ಪ್ರಾಧ್ಯಾಪಕರಿಗೆ ಅನ್ಯಾಯವಾಗುತ್ತಿದೆ. ಸಂದರ್ಶನ ಸಮಿತಿಯಲ್ಲಿ ಪದವಿ ಕಾಲೇಜುಗಳ ಇಬ್ಬರು ಪ್ರಾಚಾರ್ಯರು, ಇಬ್ಬರು ವಿಷಯ ಪರಿಣಿತರು ಇರಬೇಕು ಎಂದಿದೆ. ಆದರೆ, 2021ರಿಂದ ಇವರನ್ನು ಸಮಿತಿಯಲ್ಲಿ ಸೇರಿಸಿಯೇ ಇರಲಿಲ್ಲ. ಕಳೆದ ವರ್ಷ ಸೇರ್ಪಡೆ ಮಾಡಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ 2019ರ ನಂತರ ಕಾಲೇಜು ಶಿಕ್ಷಣ ಇಲಾಖೆ ಪ್ರಾಧ್ಯಾಪಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದಕ್ಕೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಬೀಡು ಬಿಟ್ಟಿರುವ ವಿಶೇಷಾಧಿಕಾರಿಗಳೇ ಕಾರಣ. ಈ ವಿಶೇಷಾಧಿಕಾರಿಗಳು ಶಿಕ್ಷಕ ಸಮುದಾಯದ ಸಾಮೂಹಿಕ ಕಲ್ಯಾಣಕ್ಕಿಂತ ವೈಯಕ್ತಿಕ ಕಾರ್ಯಸೂಚಿಗಳಿಗೆ ಆದ್ಯತೆ ನೀಡುತ್ತಾರೆ. ಉನ್ನತಾಧಿಕಾರಿಗಳನ್ನು ತಪ್ಪುದಾರಿಗೆ ಎಳೆಯುತ್ತಾರೆ. ಹಾಗಾಗಿ ದೋಷಪೂರಿತ ನಿರ್ಧಾರಗಳು ಸೃಷ್ಟಿಯಾಗಿ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ ಎಂದು ಅನೇಕ ಪ್ರಾಧ್ಯಾಪಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ವ್ಯತ್ಯಾಸಗಳಿಂದ ತುಂಬಿದ ಸಿಎಎಸ್: ವೃತ್ತಿ ಪ್ರಗತಿಯೋಜನೆ (ಸಿಎಎಸ್) ನಿಯಮಗಳು 2010 ಮತ್ತು 2018ರ ಪ್ರಕಾರ ವ್ಯತ್ಯಾಸಗಳಿಂದ ತುಂಬಿದೆ. ಯೋಜನೆಯು ಪ್ರಸ್ತುತ ಕಾರ್ಯಗತಗೊಳಿಸಿರುವಂತೆ ನಿಗದಿತ ಸಿಎಎಸ್ ನಿಯಮ ಗಳಿಗೆ ಹೊಂದಿಕೆಯಾಗುವುದಿಲ್ಲ. ಈ ತಪ್ಪು ಹೊಂದಾಣಿಕೆಯಿಂದಾಗಿ ಅರ್ಹ ಶಿಕ್ಷಕರಿಗೆ ಸರಿಯಾದ ಬಡ್ತಿ ಸಿಗುತ್ತಿಲ್ಲ. ಇದು ಹತಾಶೆಗೆ ಕಾರಣವಾಗುತ್ತಿದೆ.

ಇನ್ನೂ ಪದೋನ್ನತಿಗಾಗಿ ನಡೆಸುವ ಸಂದರ್ಶದ ಅಂಕಗಳಲ್ಲೂ ಅಸಂಬದ್ಧ ಹಂಚಿಕೆ ಮಾಡಲಾಗಿದೆ. 4 ಅಂಶಗಳ ಪೈಕಿ ಮೊದಲನೇ ಅಂಶವು ಸಂಶೋಧನಾ ಲೇಖನಗಳು ಪ್ರಕಟವಾಗಿವೆ ಅಥವಾ ಇಲ್ಲ ಎಂದಿದೆ. ಇಲ್ಲ ಎಂದಲ್ಲಿ ಸೊನ್ನೆ ಅಂಕ. ಇದೆ ಎಂದರೆ 5 ಅಂಕ ನೀಡಲೇಬೇಕು. ಆದರೆ, ಆಯ್ಕೆ ಸಮಿತಿ 1.75 ಅಂಕ ಕೊಟ್ಟ ಉದಾಹರಣೆಯೂ ಇದೆ ಎಂಬುದನ್ನು ಹೆಸರು ಹೇಳಲು ಬಯಸದ ಪ್ರಾದ್ಯಾಪಕರು ತಿಳಿಸಿದ್ದಾರೆ.

ನಿಯಮಾವಳಿ 2018 ಪ್ರಕಾರ ಕಾಲೇಜು ಶಿಕ್ಷಕರ ಸಿಎಎಸ್ ಪ್ರಮೋಷನ್ ಸಂದರ್ಶನ ನಡೆಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಯುಜಿಸಿ ನಿಯಮಾವಳಿ 2018 ಪ್ರಕಾರ ಕಾಲೇಜು ಶಿಕ್ಷಕರ ಕರಿಯರ್ ಅಡ್ವಾನ್ಸ್‌ಮೆಂಟ್ ಸ್ಟೀಮ್ (ಸಿಎಎಸ್) ಪ್ರಮೋಷನ್‌ಗಾಗಿ ಸಂದರ್ಶನ ನಡೆಸುವುದು ಅನವಶ್ಯಕ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಡಾ.ಸತ್ಯನಾರಾಯಣಗೌಡ ಮತ್ತು ಇತರರು ಸಲ್ಲಿಸಿದ ರಿಟ್‌ಪಿಟಿಷನ್‌ಗಳ ಮೇಲೆ ತೀರ್ಪು ನೀಡಲಾಗಿದೆ. ಸಿಎಎಸ್ ಪ್ರಮೋಷನ್ ನಿಯಮಗಳಲ್ಲಿ ಸಂದರ್ಶನದ ಪ್ರಸ್ತಾಪವೇ ಇಲ್ಲ. ಆಯ್ಕೆ ಸಮಿತಿಯೂ ಸಂಸ್ಥೆಯ ಮುಖ್ಯಸ್ಥರಿಂದ ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಶಿಫಾರಸು ಮಾಡಬೇಕು. ಆದರೆ, ಯುಜಿಸಿ ನಿಯಮಗಳಲ್ಲಿ ಇಲ್ಲದ ವಿಧಾನಗಳನ್ನು ಕಮಿಟಿ ರೂಪಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಷ್ಟೇ ಅಲ್ಲ, ಡಿಪಾರ್ಟ್‌ಮೆಂಟ್ ಆಫ್ ಕಾಲೇಜಿಯೇಟ್ ಎಜುಕೇಷನ್(ಡಿಸಿಇ) ಅನುಸರಿಸುತ್ತಿರುವ ವ್ಯತ್ಯಾಸವುಳ್ಳ ಪ್ರಮೋಷನ್ ನೀತಿಯನ್ನು ಕೋರ್ಟ್ ಟೀಕಿಸಿದೆ. ಹಿಂದಿನ ವರ್ಷಗಳಲ್ಲಿ ವಿವಿಧ ಬ್ಯಾಚ್‌ಗಳಿಗೆ ವಿಭಿನ್ನ ನಿಯಮಗಳು ಅನ್ವಯಿಸಲಾಗಿತ್ತು.

ಇದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ನಿಯಮಗಳ ಉಲ್ಲಂಘನೆ ಎಂದು ತೀರ್ಪಿನಲ್ಲಿ ತಿಳಿಸಿದೆ. ಡಿಸಿಇಯು ಯುಜಿಸಿ ನಿಯಮಾವಳಿ 2018 ಪ್ರಕಾರ ಪಾರದರ್ಶಕವಾಗಿ ಬಡ್ತಿ ನೀಡಲು ನಿರ್ದೇಶನ ಕೊಟ್ಟಿದೆ .

ಸುನೀಲ್ ಬಿ ಎನ್ ರವರು ಅನುಭವಿ ಬರಹಗಾರರಾಗಿದ್ದು, 2015 ನೇ ವರ್ಷದಿಂದ ತಮ್ಮ ವೃತ್ತಿ ಜೀವನ ಆರಂಭಿಸಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಂತರ ಹಲವು ಡೊಮೈನ್‌ಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ.

ಈ ಎರಡು ಡೊಮೇನ್‌ಗಳಲ್ಲಿನ ಬೆಳವಣಿಗೆ ಹಾಗೂ ಬದಲಾವಣೆ ಕುರಿತು ಲೇಟೆಸ್ಟ್‌ ಮಾಹಿತಿಗಳನ್ನು ರಚಿಸುವ ಮೂಲಕ ಓದುಗರಿಗೆ ಸಹಾಯ ಮಾಡುವ ಹಾಗೂ ಅವರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಸದಾ ಉತ್ಸುಕರಾಗಿ ಕೆಲಸ ಮಾಡುತ್ತಿದ್ದಾರೆ.

prajaprabhat

Recent Posts

ಬೆಂಗಳೂರು ವಿಶ್ವವಿದ್ಯಾಲಯ’ಯಲ್ಲಿ ಅತಿಥಿ ಉಪನ್ಯಾ ಸಕ ಹುದ್ದೆಗೆ ಅರ್ಜಿ ಆಹ್ವಾನ.

ಬೆಂಗಳೂರು.04.ಜುಲೈ.25:- ವಿಶ್ವ ವಿದ್ಯಾಲಯದಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ಮಾನ್ಯತೆ ಪಡೆದ ವಿವಿಯಿಂದ ಪದವಿ, ಸ್ನಾತಕೋತ್ತರ…

6 hours ago

ಅತಿಥಿ ಅಧ್ಯಾಪಕರಿಗೆ ಸರ್ಕಾರ ₹5 ಲಕ್ಷ ಗ್ರಾಚ್ಯುಟಿ Gratuity ರಾಜ್ಯ ಸರ್ಕಾರ ಆದೇಶ. Formate

Gratuity turm and conditions with Formate ಬೆಂಗಳೂರು.02.ಜುಲೈ.25:-ಕರ್ನಾಟಕ ಸರ್ಕಾರವು ಪದವಿ ಕಾಲೇಜುಗಳಲ್ಲಿನ ಅತಿಥಿ ಅಧ್ಯಾಪಕರಿಗೆ 60 ವರ್ಷ ತುಂಬಿದ…

8 hours ago

ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ.

ಬೆಂಗಳೂರು.03.ಜುಲೈ.25:- ರಾಜ್ಯ ಸರ್ಕಾರ ವತಿಯಿಂದ ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಲಾಗಿದೆ. ಈ…

8 hours ago

ರಾಜ್ಯದ ಸರ್ಕಾರ UPSC,KPSC Free Coaching Classes ತರಬೇತಿಗೆ ಅರ್ಜಿ ಆಹ್ವಾನ

ರಾಜ್ಯ ಸರಕಾರ 2025-26ನೇ ಸಾಲಿಗೆ ವಿವಿಧ ಪರೀಕ್ಷೆ ಪೂರ್ವ ತರಬೇತಿ ಪಡೆಯಲು ಅರ್ಜಿ ಆಹ್ವಾನ ನೀಡಲಾಗಿದೆ.ಯುಪಿಎಸ್‍ಸಿ, ಕೆಎಎಸ್ ಗೆಜೆಟೆಡ್ ಪ್ರೊಬೇಷನರ್…

8 hours ago

ಜುಲೈ 16 ರಂದು ಕೆಸ್ತೂರು ಹಾಲು ಉತ್ಪಾದಕರ ಆಡಳಿತ ಮಂಡಳಿ ಚುನಾವಣೆ.

ಚಾಮರಾಜನಗರ.03.ಜುಲೈ.25:- ಮಹಿಳಾ ಮೀಸಲು ಸ್ಥಾನಗಳಿಗೆ ನಡೆಯಲಿದ್ದು. ಜುಲೈ 16 ರಂದು ಕೆಸ್ತೂರು ಹಾಲು ಉತ್ಪಾದಕರ ಆಡಳಿತ ಮಂಡಳಿ ಚುನಾವಣೆ.ಯಳಂದೂರು: ತಾಲ್ಲೂಕಿನ…

10 hours ago

ಅತಿಥಿ ಉಪನ್ಯಾಸಕರ ಯಥಾ ಸ್ಥಿತಿ ಕರ್ತವ್ಯದಲ್ಲಿ ಮುಂದುವರೆಸಬೇಕು: ಡಾ.ಟಿ.ದುರುಗಪ್ಪ

ಬಳ್ಳಾರಿ.03.ಜುಲೈ.25:- ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹತೆ ಹೊಂದಿದವರು. ಅನರ್ಹತೆ ಹೊಂದಿರುವರೆಂದು…

13 hours ago