ಯಶಸ್ವಿಯಾಗಿ ನಡದ ಎಕೆಬಿಎಂಎಸ್ ಮಹಿಳಾ ಘಟಕದ ಸಭೆ

ಬೀದರ :  ದಿ.೨೯ ರವಿವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೀದರ ಮಹಿಳಾ ಘಟಕದ ಸಭೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾoಡಿದ  ಜಿಲ್ಲಾ ಅಧ್ಯಕ್ಷ ವೆಂಕಟೇಶ್ ಕುಲಕರ್ಣಿ  ಸಮಾಜಕ್ಕೇ ಸರ್ಕಾರದಿಂದ ಸಿಗುವ ಸೌಲತ್ತು ಪಡೆಯಲು ಸಹಾಯ ನೀಡುವುದಾಗಿ ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಕಚೇರಿ ಉದ್ಘಾಟನಾ ಕಾರ್ಯಕ್ರಮ  ನಡೆಯಲಿದೆ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ಘಟಕದ ಅಧ್ಯಕ್ಷರಾದ ಪ್ರಮೋದಿನಿ ಕುಲಕರ್ಣಿ ಮಾತನಾಡಿ ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದು ಸಂತೋಷದ ವಿಷಯವಾಗಿದೆ. ಆದರೆ ತಮ್ಮ ವೈಯಕ್ತಿಕ ಕೆಲಸದÀ ಜೊತೆ ಸಮಾಜದ ಕೆಲಸ ಮಾಡುವುದು ಅಷ್ಟೆ ಜರುರಿ ಇರುವುದರಿಂದ ಮಹಿಳೆಯರು  ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಕೆಲಸಕ್ಕೆ ಬರಬೇಕು ಎಂದು ಮನವಿ ಮಾಡಿದರು. ಮಹಿಳೆಯರು ಹೆಚ್ಚಿನ ಸಂಖೆಯಲ್ಲಿ ಎಕೆಬಿಎಂಎಸ್ ಸದಸ್ಯತ್ವ ಪಡೆಯಬೇಕು  ಹಾಗೂ ಎಲ್ಲರು ಸೇರಿ ಒಟ್ಟಾಗಿ ಸಮಾಜದ ಅಭಿವೃದ್ದಿ ಕೆಲಸ ಮಾಡೋಣಾ ಎಂದರು. 

ರಾಜ್ಯ ಜಂಟಿ ಕಾರ್ಯದರ್ಶಿ ರಾಜೇಶ್ ಕುಲಕರ್ಣಿ ಹಳ್ಳಿಖೇಡ ಇತ್ತೀಚಿಗೆ ಬೆಂಗಳೂರು ಹೋಗಿದಾಗ . ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಎಸ್ , ರಘುನಾಥ್, ಅಖಿಲ್ ಕರ್ನಾಟಕ ಬ್ರಾಹ್ಮಣ ಮಂಡಳಿಯ ಅಧ್ಯಕ್ಷರಾದ ಜಯಸಿಂಹ ಹಾಗೂ ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ  ದಿನೇಶ್ ಗುಂಡೂರಾವ್ ಅವರ ಜೊತೆ ಬೇಟಿ ಮಾಡಿ  ಅವರ ಜೊತೆ ಚರ್ಚೆಯಾದ ವಿಷಯಗಳ ಬಗ್ಗೆ ವಿವಿರಿಸಿದರು. ಇದೇ ಸಂಧರ್ಭದಲ್ಲಿ  ಹುಮನಾಬಾದ ತಾಲೂಕು ಅಧ್ಯಕ್ಷರಾದ ಶ್ರೀ ಭೀಮರಾವ್ ಕುಲಕರ್ಣಿ, ಹಿರಿಯರಾದ  ದಿನಕರ ಕುಲಕರ್ಣಿ ಮಾತನಾಡಿದರು. ಇದೇ ಸಮಯದಲ್ಲಿ  ರಾಜ್ಯ  ಕಾರ್ಯಕಾರಿಣಿ ಸದಸ್ಯರಾಗಿ  ನೇಮಕಗೊಂಡ ರೇಖಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.


ಈ ಸಭೆಯಲ್ಲಿ ಪ್ರಮುಖರಾದ ಸುಧಾಕರ ರಾವ್ ಪಾಟೀಲ್, ರಘುನಾಥ್ ರಾವ್ ಕುಲಕರ್ಣಿ, ಶ್ರೀ ರಾಮರಾವ್ ಕುಲಕರ್ಣಿ ಶೆಂಬೆಳ್ಳಿ, ದಿನಕರ ರಾವ್ ಕುಲಕರ್ಣಿ ಶೆಂಬೆಳ್ಳಿ, ಅನಿಲ್ ಕುಮಾರ್ ಚಿಕಮನುರ್, ಅಶೋಕ್ ಡಾಕುಳಗಿ, ಪ್ರವೀಣ್ ಜೋಶಿ, ವೆಂಕಟೇಶ್ ಕುಲಕರ್ಣಿ   ಮಾಣಿಕ ಕುಲಕರ್ಣಿ . ಹಣಮಂತ ಕುಲಕರ್ಣಿ ,ಶಾರದ ಕುಲಕರ್ಣಿ , ಸರೋಜಾ ಕುಲಕರ್ಣಿ, ಪುಜಾ ಕುಲಕರ್ಣಿ  ಸೇರಿದಂತೆ ನೂರಾರು ಮಹಿಳೆಯರು  ಉಪಸ್ಥಿತರಿದ್ದರು. .  ಶ್ರೀ ಪ್ರಭಾಕರ ರಾವ್ ಕಾರಮುಂಗಿ ಸಭೆಗೆ  ಬಂದ ಎಲ್ಲರನ್ನೂ ಸ್ವಾಗತಿಸಿದರು. ರಾಮರಾವ ಕುಲರ್ಣಿ ವಂದಿಸಿದರು.

prajaprabhat

Recent Posts

ಗುತ್ತಿಗೆ ನೌಕರರು ಸ್ವಯಂಚಾಲಿತವಾಗಿ ಖಾಯಂ ?

ಬೆಂಗಳೂರು.01.ಜುಲೈ.25:- ಕರ್ನಾಟಕದಲ್ಲಿ, ರಾಜ್ಯ ಸರ್ಕಾರದ ಗುತ್ತಿಗೆ ನೌಕರರು ಸ್ವಯಂಚಾಲಿತವಾಗಿ ಖಾಯಂ ಆಗುವುದಿಲ್ಲ. ಕ್ರಮಬದ್ಧಗೊಳಿಸುವಿಕೆಗೆ ಒಂದು ಪ್ರಕ್ರಿಯೆ ಇದೆ, ಆದರೆ ಅದು…

2 hours ago

ಕಲಬುರಗಿ ಹಸಿರೀಕರಣಗೊಳಿಸುವ ಸಲುವಾಗಿ ಬೃಹತ್‌ ಮಟ್ಟದಲ್ಲಿ ಗಿಡ ನೆಟ್ಟು ಪೋಷಣೆ.

ಕಲಬುರಗಿ.01.ಜುಲೈ.25:- ಕಲಬುರಗಿ ನಗರ ಹಾಗೂ ಜಿಲ್ಲೆಯನ್ನು ಹಸಿರೀಕರಣಗೊಳಿಸುವ ಸಲುವಾಗಿ ಬೃಹತ್‌ ಮಟ್ಟದಲ್ಲಿ ಗಿಡ ನೆಟ್ಟು ಪೋಷಣೆ ಮಾಡುವ ʼವನಮಹೋತ್ಸವʼ ಕಾರ್ಯಕ್ರಮಕ್ಕೆ…

2 hours ago

ಐಎಎಸ್‌, ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು.01.ಜುಲೈ.25:- ರಾಜ್ಯದಲ್ಲಿ ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಯಾಗಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ| ಕೆ.ಜಿ. ಜಗದೀಶ…

11 hours ago

ಕೃಷಿ ಡಿಪ್ಲೋಮಾ : ಪ್ರವೇಶ ಆರಂಭ

ಬೀದರ.01.ಜುಲೈ.25:- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ಆಧೀನದಲ್ಲಿ ಬರುವ ಬೀದರ್ ತಾಲೂಕಿನ ಜನವಾಡಾ ಹತ್ತಿರದ ಕೃಷಿ ಡಿಪ್ಲೋಮಾ ಕಾಲೇಜಿನಲ್ಲಿ ೨೦೨೫-೨೬…

11 hours ago

ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರಕ್ಕೆ ಅರ್ಜಿ ಆಹ್ವಾನ

ಬೀದರ.01.ಜುಲೈ.25:- ಕರ್ನಾಟಕ ಸರ್ಕಾರದ ವತಿಯಿಂದ ನಡೆಯುತ್ತಿರುವ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ಮೈಸೂರು ಇಲ್ಲಿ ಅಂಧ…

11 hours ago

ಕರಾಮುವಿ: ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

ಬೀದರ.01.ಜುಲೈ.25:- ಶಿಕ್ಷಣಕ್ಕಾಗಿ ಹೆಸರುವಾಸಿಯಾಗಿರುವ ಹಾಗೂ  NAAC A+  ಮಾನ್ಯತೆ ಪಡೆದಿರುವ ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ,…

11 hours ago