ಯಳಂದೂರು.12.ಜೂನ.25:- ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತ ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕು
ಸಾರ್ವಜನಿಕ ಕುಂದುಕೊರತೆ ದೂರು ಸ್ವೀಕಾರ ಕಾರ್ಯಕ್ರಮ ಬುಧವಾರ ನಡೆಯಿತು.
ಒಟ್ಟು ನಾಲ್ಕು ದೂರುಗಳ ಬಂದಿರುತ್ತದೆ.ಹೊನ್ನೂರು ಗ್ರಾಮಪಂಚಾಯತಿಯಲ್ಲಿ ಮಾಹಿತಿಗೋಸ್ಕರ ಆರ್ ಟಿ ಐ ಮೂಲಕ ಅರ್ಜಿ ನೀಡಿರುತ್ತೇನೆ ಆದರೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಳಂಬ ಮಾಡುತ್ತಿದ್ದಾರೆ ಎಂದು ಮರಿಸ್ವಾಮಿ ದೂರಿದರು.
ಯೋಜನಾಧಿಕಾರಿ ಚಾಮರಾಜನಗರ ದಿಂದ ಪಟ್ಟಣ ಪಂಚಾಯತಿಗೆ ಆದೇಶ ಪ್ರತಿಯೊಂದು ಬಂದಿರುತ್ತದೆ ಆದರೆ ಪಟ್ಟಣ ಪಂಚಾಯತಿಯವರು ಆದೇಶದ ಪ್ರತಿ ಕೊಡುತ್ತಿಲ್ಲವೆಂದು ವೈ ಎಸ್ ನಾರಾಯಣ್ ಚಾರ್ ದೂರಿದರು.
ಯಳಂದೂರು ಸಬ್ ರಿಜಿಸ್ಟರ್ ಕಛೇರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದರು ರಂಗನಾಥ್, ಶಿವಕುಮಾರ್ ರವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೊನ್ನೂರು ಪುಟ್ಟಸ್ವಾಮಿ ದೂರಿದರು.
ನಬನ
ವೈ ಕೆ ಮೋಳೆ ಗ್ರಾಮದ ಅಂಬೇಡ್ಕರ್ ಪ್ರತಿಮೆ ಮುಂದೆ ಮದ್ಯ ಪ್ರಿಯರು ಕುಡಿದು ಅನೈರ್ಮಲ್ಯ ಉಂಟುಮಾಡುತ್ತಿದ್ದಾರೆಂದು ವೈ ಎನ್ ಪ್ರಕಾಶ್ ದೂರಿದರು.
ಲೋಕಾಯುಕ್ತ ಡಿವೈಎಸ್ ಪಿ. ಜಿ ಎಸ್ ಗಜೇಂದ್ರ ಪ್ರಸಾದ್ ಮಾತನಾಡಿ .
ಅಧಿಕಾರಿಗಳು ಸಾರ್ವಜನಿಕರ ಜೊತೆಗೆ ಸೌಜನ್ಯದಿಂದ ವರ್ತಿಸಬೇಕು ಅವರ ಕೆಲಸವನ್ನು ನಿಗದಿತ ಸಮಯದೊಳಗೆ ಮುಗಿಸಬೇಕು. ದ್ವೇಷಮಾಡಬಾರದು,
ಉತ್ತಮ ಆಡಳಿತ ಮಾಡಿ ಕಾನೂನಿಗೆ ಗೌರವ ಕೊಡಬೇಕು. ಭ್ರಷ್ಟಾಚಾರ ರಹಿತ ವಾತವರಣ ಸೃಷ್ಟಿಯಾಗಬೇಕು, ದಲ್ಲಾಳಿ ಗಳ ಮೂಲಕ ಸಾರ್ವಜನಿಕ ಕೆಲಸವಾಗಬಾರದು ಎಂದರು.
ತಾಲ್ಲೂಕಿನಲ್ಲಿ ಪ್ರಭಾರ ಅಧಿಕಾರಿಗಳು ಹೆಚ್ಚಾಗಿದೆ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುತ್ತದೆ.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಬ್ ಇನ್ಸ್ಪೆಕ್ಟರ್
ಸಿ ಆರ್ ಶಶಿಕುಮಾರ್ ,ಲೋಹಿತ್ ಕುಮಾರ್.
ಕೃಷಿ ಅಧಿಕಾರಿ ಅಮೃತೇಶ್, ಚೆಸ್ಕಾಂ ಅಧಿಕಾರಿ ಲಿಂಗರಾಜು, ಇಂಜನಿಯರ್ ಸಂತೋಷ್, ಅಬಕಾರಿ ಅಧಿಕಾರಿ ಮಹದೇವ್, ತಾಲ್ಲೂಕು ಆರೋಗ್ಯ ಅಧಿಕಾರಿ ತನುಜಾ ಹಾಗೂ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು.13.ಜೂನ್.25:- ರಾಜ್ಯದ ಆರೋಗ್ಯ ಇಲಾಖೆಯಲ್ಲಿ NHM ಅಡಿಯಲ್ಲಿ ನೇಮಕಗೊಂಡ ಆಶಾ ಮೆಂಟರ್ಸ್ ಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 2007-08ನೇ…
ಬೆಂಗಳೂರು.13.ಜೂನ್.25:- ಬೀದರ್ ಬೆಂಗಳೂರು ಮತ್ತೊಂದು ವಿಶೇಷ ಟ್ರೈನ್ ಇದೇ 15 ಜೂನ್ ರಿಂದ ಪ್ರಾರಂಭ ಆಗ್ತಿದೆ. ಈ ಟ್ರೈನ್ ಕರ್ನಾಟಕದ…
ಬೆಂಗಳೂರು.13.ಜೂನ್ .25:- ರಾಜ್ಯ ಸರ್ಕಾರಿ ನೌಕರರಿಗೆ 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯಾದ್ಯಂತ ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ…
ಬಳ್ಳಾರಿ.13.ಜೂನ್.25:- ರಾಜ್ಯದಲ್ಲಿ ಏಕಲವ್ಯ ಮಾದರಿ ಸ್ಕೂಲ್ ಗಳಲ್ಲಿ ಬೇಕಾಗಿರುವ ಶೀಕ್ಷಕರ ಹುದ್ದೆಗಳು ತಾಲ್ಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ…
ಬೆಂಗಳೂರು.13.ಜೂನ್.25:- ರಾಜ್ಯದ ಡಿಸಿಆರ್ಇ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವ ಮತ್ತು…
ಹೊಸ ದೆಹಲಿ.13.ಜೂನ್.25:- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2025-26ರ ಹಣಕಾಸು ವರ್ಷದ ನೇಮಕಾತಿಯ ಭಾಗವಾಗಿ 4,500 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ.…