ಮೊರೆರ ಬೆಟ್ಟಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಮಾಡಲಾಗುವುದು- ಸಚಿವ ಎಚ್.ಕೆ. ಪಾಟೀಲ್

ಕೊಪ್ಪಳ.18.ಜೂನ್.25:- ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲನ ಮೊರೆರ ಬೆಟ್ಟಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಮಾಡಲಾಗುವುದು ಎಂದು ಕಾನೂನು. ನ್ಯಾಯ. ಮಾನವ ಹಕ್ಕುಗಳು. ಸಂಸದೀಯ ವ್ಯವಹಾರ. ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ್ ಹೇಳಿದರು.
ಅವರು ಮಂಗಳವಾರ ಕೊಪ್ಪಳ ಜಿಲ್ಲೆಯ ನಮ್ಮ ಸ್ಮಾರಕ ದರ್ಶನ ಮತ್ತು ಸ್ಮಾರಕಗಳ ಸಂರಕ್ಷಣೆಯ ಪ್ರವಾಸದ ಅಂಗವಾಗಿ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲನ ಮೊರೆರ ಬೆಟ್ಟಕ್ಕೆ ಭೇಟಿ ನೀಡಿ ವೀಕ್ಷಣೆ ನಂತರ ಪತ್ರಕರ್ತರಿಗೆ ಮಾಹಿತಿ ನೀಡಿ ಮಾತನಾಡಿದರು.
ಹಿರೇಬೆಣಕಲ್ ಮೊರೆರ ಬೆಟ್ಟಗಳು ನಮ್ಮ ರಾಷ್ಟ್ರದಲ್ಲಿಯೆ ಪ್ರಾಗೈತಿಹಾಸಿಕ ಸ್ಥಳಗಳಾಗಿದ್ದು, ಇವುಗಳು 5 ರಿಂದ 6 ಸಾವಿರ ವರ್ಷಗಳ ಇತಿಹಾಸ ಹೊಂದಿವೆ. ಇಂತಹ ಸ್ಥಳಗಳು ನಮ್ಮ ದೇಶದಲ್ಲಿ ಎರಡು ಕಡೆ ಮಾತ್ರ ಇದ್ದು ಮೇಘಾಲಯ ರಾಜ್ಯದಲ್ಲಿ ಬಿಟ್ಟರೆ ಅದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಮೊರೆರ ಬೆಟ್ಟಗಳು. ಇವು ಆದಿಮಾನವರು ವಾಸವಾಗಿದ್ದ ಸ್ಥಳಗಳಾಗಿವೆ ಎಂದು ಹೇಳಿದರು.


ಹಿರೇಬೆಣಕಲ್ ಮೋರೆರ ಬೆಟ್ಟಗಳನ್ನು ವಿಶ್ವಪಾರಂಪರಿಕ ತಾಣವಾಗಲು ಏನು ಮಾಡಬೇಕು. ಹೇಗೆ ಮಾಡಬೇಕು ಎಂಬ ಯೋಜನೆ ಆದಷ್ಟು ಬೇಗನೆ ರೂಪಿಸುವುದರ ಜೊತೆಗೆ ಅದರ ರಕ್ಷಣೆ ಹಾಗೂ ಆಕರ್ಷಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಧ್ಬುತವಾದ ಐತಿಹಾಸಿಕ ಸ್ಥಳಗಳು ನೋಡಸಿಗುತ್ತವೆ. ನಮ್ಮ ಇಲಾಖೆಯಿಂದ ಪ್ರಾಚ್ಯ ವಸ್ತುಗಳು ಹಾಗೂ ಸ್ಮಾರಕಗಳನ್ನು ಸಂರಕ್ಷಣೆ ಜೊತೆಗೆ ಅವುಗಳ ಇತಿಹಾಸವನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸ್ಮಾರಕಗಳನ್ನು ದತ್ತು ಪಡೆಯಲು ಸಾರ್ವಜನಿಕರು ಮುಂದೆ ಬಂದರೆ ಅವರಿಗೆ ದತ್ತು ಕೊಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಹಿರೇಬೆಣಕಲನಲ್ಲಿ ಆದಿಮಾನವರು ವಾಸಿಸಿದ ಡಾಲಮಿನ್ಸ್ ಅಂದರೆ ಗದ್ದುಗೆಗಳು. ಅವರ ಸಮಾಧಿಗಳು. ಅವರು ಸುಮಾರು 5 ಸಾವಿರ ವರ್ಷಗಳ ಹಿಂದೆ ಬಿಡಿಸಿದ ಚಿತ್ರಗಳು ಗುಡ್ಡದಲ್ಲಿ ಇಂದು ಉಳಿಯಬೇಕಾದರೆ ಎಂತಹ ಬಣ್ಣ  ಉಪಯೋಗ ಮಾಡಿರಬೇಕು. ಇಂದು ನಾವು ಎಂತಹ ಚಿತ್ರ ಬಿಡಿಸಿದರು ನೂರು ವರ್ಷ ಉಳಿಯುವದಿಲ್ಲ ಎಂದರು.


ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಹಿರೇಬೆಣಕಲ್ ಮೊರೆರ ಬೆಟ್ಟದ ಪ್ರಾಗೈತಿಹಾಸಿಕ ಸ್ಥಳಗಳ ಕುರಿತಾಗಿ ಆಗಸ್ಟ್ ತಿಂಗಳ ಒಳಗಾಗಿ ವಸ್ತು ಪ್ರದರ್ಶನ ಏರ್ಪಡಿಸುವಂತೆ ಪುರಾತತ್ವ.

ಸಂಗ್ರಹಾಲಯಗಳು ಮತ್ತು ಪಾರಂಪರಿಕ ಇಲಾಖೆಯ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು. ಮೊರೆರ ಬೆಟ್ಟಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸುವದಕ್ಕೆ ಸಂಬಂಧಿಸಿದಂತೆ ಇಂಟ್ಯಾಕ್ ಸಂಸ್ಥೆಯವರಿಗೆ ಯೋಜನೆ ರೂಪಿಸಲು  ಜವಾಬ್ದಾರಿ ನೀಡಲಾಗಿದೆ ಎಂದರು.
ಇಂತಹ ಸ್ಥಳಗಳ ಬಗ್ಗೆ ಜಪಾನ್, ಜರ್ಮನಿಯವರಿಗೆ ಮಾಹಿತಿ ನೀಡಿದರೆ ಅವರು 5 ರಿಂದ 6 ತಿಂಗಳಲ್ಲಿ ಇಲ್ಲಿಗೆ ಬಂದು ಬಿಡುತ್ತಾರೆ ಅವರ ಸ್ವಭಾವ ವೈಜ್ಞಾನಿಕ ಮನೋಭಾವದಾಗಿದೆ. ಹಿರೇಬೆಣಕಲ್ ಮೊರೆರ ಬೆಟ್ಟಗಳನ್ನು ಜಾಗತಿಕವಾಗಿ ವಿಶ್ವ ಪಾರಂಪರಿಕ ಸ್ಥಳವನ್ನಾಗಿ ಮಾಡಲು ನಮ್ಮ ಸರ್ಕಾರ ದೃಢ ಹೆಜ್ಜೆ ಇಡಲಿದೆ. ಆದಷ್ಟು ಬೇಗನೆ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಚ್ಯವಸ್ತು ಇಲಾಖೆಯ ಕಛೇರಿಯನ್ನು  ಆರಂಭಿಸಲಾಗುವುದು ಎಂದು ಹೇಳಿದರು.


ಇತಿಹಾಸಕಾರರಾದ ಶರಣಬಸಪ್ಪ ಕೋಳ್ಕರ್ ಅವರು ಮೊರೆರ ಬೆಟ್ಟದ ಕುರಿತು ಸಚಿವರಿಗೆ ಮಾಹಿತಿ ನೀಡಿ ಮಾತನಾಡಿ ಆದಿಮಾನವರು ಜೀವಿಸಿದ ಕುರುವುಗಳು ಹಿರೇಬೆಣಕಲ್ ಮೊರೆರ ಬೆಟ್ಟಗಳಲ್ಲಿ ಸಿಗುತ್ತವೆ. ಇವರ ಅವಧಿಯಲ್ಲಿ ಕಬ್ಬಿಣವನ್ನು ಕಂಡು ಹಿಡಿದ ಕಾರಣ ಇದನ್ನು ಕಬ್ಬಿಣದ ಯುಗ ಎಂದು ಕರೆಯಲಾಗುತ್ತದೆ. ಕ್ರಿ.ಪೂ. 3 ಸಾವಿರ ವರ್ಷಗಳ ಹಿಂದೆ ಮೊರೆರ ಬುಡಕಟ್ಟು ಜನರು ಇಲ್ಲಿ ವಾಸಿಸುತ್ತಿದ್ದರು. ಈ ಜನಾಂಗ ಪುನರ್ ಜನ್ಮದಲ್ಲಿ ನಂಬಿಕೆ ಉಳ್ಳವರಾಗಿದ್ದರು. ಇವರು ಸತ್ತವರಿಗಾಗಿ ದೊಡ್ಡ- ದೊಡ್ಡ ಸಮಾಧಿಗಳನ್ನು ಕಟ್ಟಿಸಿದ್ದರು. ಇಲ್ಲಿ ಈ ಹಿಂದೆ 500 ಇದ್ದ ಮೋರೆರ ಸಮಾಧಿಗಳು ಈಗ 100 ರಿಂದ 200 ಉಳಿದಿವೆ. ಇದು ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ಈ ಹಿಂದೆ ಎರಡು ಸಲ ಸೇರ್ಪಡೆಯಾಗಿತ್ತು. ಬೇಟೆಗಾರಿಕೆ ಪಶುಪಾಲನೆ ಸೇರಿದಂತೆ ಇತರೆ ಹಲವಾರು ಚಿತ್ರಗಳನ್ನು ಅವರು ಬಿಡಿಸಿರುವುದು ಗುಹೆಗಳಲ್ಲಿ  ಇಂದು ಕಾಣಸಿಗುತ್ತವೆ ಎಂದು ಸಚಿವರಿಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್. ಆರ್. ಶ್ರೀನಿವಾಸ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಪುರಾತತ್ವ. ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೆಶಕರಾದ ನಾಗರಾಜ ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಹಿರೇಬೆಣಕಲ್ ಗ್ರಾಮಸ್ಥರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.

prajaprabhat

Recent Posts

ಕಾಲೇಜು ಶಿಕ್ಷಣ ಇಲಾಖೆ ಜೂ.21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ’ ಕಡ್ಡಾಯ.!

ಬೆಂಗಳೂರು.19.ಜೂನ್.25:- ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್/ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಜೂನ್ 21,…

1 hour ago

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 310 ಪ್ರಾಂಶುಪಾಲರ ಹುದ್ದೆಗಳನ್ನು ನೇಮಕಾತಿ ಮೂಲಕ ಭರ್ತಿ ಆದೇಶ.!

ಬೆಂಗಳೂರು.19.ಜೂನ್.25:- ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ  ಪ್ರಥಮ ದರ್ಜೆ ಕಾಲೇಜುಗಳಲ್ಲಿ 310 ಪ್ರಾಂಶುಪಾಲರು (ಯು.ಜಿ.) ಹುದ್ದೆಗಳನ್ನು ನೇರ ನೇಮಕಾತಿ…

2 hours ago

ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಹಳೆಯ ಪಿಂಚಣಿ (OPS) ಯೋಜನೆ ಜಾರಿ ರಾಜ್ಯ ಸರ್ಕಾರದಿಂದ ಆದೇಶ.!

ಬೆಂಗಳೂರು.19.ಜೂನ್.25:- ದಿನಾಂಕ:01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ…

3 hours ago

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ.

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬೆಂಗಳೂರು.19.ಜೂನ್.25:- ರಾಜ್ಯ ಸರ್ಕಾರ ವಿವಿಧ SSLC.PUC ಹಾಗೂ ವಿವಿಧ ಪದವಿಗಳು ಹಾಗೂ ಅನೇಕ ಪ್ರಕಾರದ್…

8 hours ago

ಸರ್ಕಾರಿ ಶಾಲೆ`ಬಿಸಿಯೂಟ ಅಡುಗೆಯವರು, ಸಹಾಯಕಿಯರಿಗೆ ಗೌರವಧನ’ 1 ಸಾವಿರ ರೂ. ಹೆಚ್ಚಳ ಸರ್ಕಾರ ಆದೇಶ.!

ಬೆಂಗಳೂರು.19.ಜೂನ್.25:-2025-26 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-109ರ ಘೋಷಣೆಯಂತೆ ಮಧ್ಯಾಹ್ನ ಉಪಹಾರ ಯೋಜನೆಯಡಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರಿಗೆ ಮತ್ತು…

8 hours ago

ಕೊಪ್ಪಳ ಜಿಲ್ಲಾ ಪಂಚಾಯತ ನೂತನ ಸಿಇಓ ಆಗಿ ವರ್ಣಿತ್ ನೇಗಿ ಅಧಿಕಾರ ಸ್ವೀಕಾರ

ಕೊಪ್ಪಳ.ಜೂನ್.25:- ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಣಿತ್ ನೇಗಿ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಸಿಇಓ…

11 hours ago