ಮೈ ಭಾರತ ಯುವ ಜನರನ್ನು ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೊಂದಾಯಿಸಿಕೊಳ್ಳಲು ಆಹ್ವಾನ


ಬೀದರ.15.ಮೇ.25:- ಯುವ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ ಕಾರ್ಯಕ್ರಮವು ದೇಶದಾದ್ಯಾಂತ ಯುವಕರನ್ನು ಮೈ ಭಾರತ ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೊಂದಾಯಿಸಿಕೊಳ್ಳಲು ಆಹ್ವಾನಿಸಿದೆ ಎಂದು ಬೀದರ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ದೇಶವ್ಯಾಪಿ ಆಹ್ವಾನವು ತುರ್ತು ಪರಿಸ್ಥಿಗಳು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಕಾರಣಕ್ಕಾಗಿ ಮಹತ್ವಪೂರ್ಣ ಪಾತ್ರವಹಿಸಲು ಯುವ ನಾಗರಿಕರನ್ನು ಸಶಕ್ತಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯು ಉತ್ತಮ ತರಬೇತಿ ಪಡೆದ, ಸ್ವಂದಿಸುವ ಆತ್ಮಸ್ಥೆರ್ಯದಿಂದರುವ ಸ್ವಯಂಸೇವಕರ ದಳವನ್ನು ನಿರ್ಮಿಸುವ ಉದ್ದೇಶ ಹೊಂದಿದ್ದು ನೈಸರ್ಗಿಕ ವಿಪತ್ತುಗಳು, ಅಪಘಾತಗಳು, ಸಾರ್ವಜನಿಕ ತುರ್ತು ಪರಿಸ್ಥಿಗಳು ಮತ್ತು ಇತರ ಅನಿರೀಕ್ಷಿತ ಸಂದರ್ಭಗಳಲ್ಲಿ ನಾಗರಿಕ ಆಡಳಿತವನ್ನು ಪೂರಕವಾಗಿರುತ್ತದೆ.

ಪ್ರಸ್ತುತ ಪರಿಸ್ಥಿತಿ ಮತ್ತು ಉದಯೋನ್ಮಖ ಸುರಕ್ಷತಾ ಚಿಂತನೆಗಳನ್ನು ಮನಗಂಡು, ಸಮುದಾಯ ಆಧಾರಿತ ಪ್ರತಿಕ್ರಿಯಾ ವ್ಯವಸ್ಥೆಯನ್ನು ಸ್ಥಾಪಿಸುವ ಅಗತ್ಯತೆಯು ಹೆಚ್ಚಾಗಿದೆ.
ನಾಗರಿಕ ರಕ್ಷಣಾ ಸ್ವಯಂಸೇವಕರು ಈ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಸ್ಥಳೀಯ ಅಧಿಕಾರಿಗಳಿಗೆ ವಿವಿಧ ಸೇವೆಗಳ ಮೂಲಕ ಬೆಂಬಲ ನೀಡುತ್ತಾರೆ.

ಇದರಲ್ಲಿ ರಕ್ಷಣೆ ಮತ್ತು ಸ್ಥಾಳಾಂತರ ಕಾರ್ಯಚರಣೆಗಳು, ಪ್ರಾಥಮಿಕ ಚಿಕಿತ್ಸೆ ಮತ್ತು ತುರ್ತು ಆರೈಕೆ, ಸಂಚಾರ ನಿರ್ವಹಣೆ, ಜನಸಮೂಹ ನಿಯಂತ್ರಣ, ಸಾರ್ವಜನಿಕ ಭದ್ರತೆ, ಮತ್ತು ವಿಪತ್ತು ಪ್ರತಿಕ್ರಿಯೆ ಮತ್ತು ಪುನಶ್ಚೇತನ ಕಾರ್ಯಗಳಲ್ಲಿ ಸಹಾಯ ಮಾಡುವುದು ಒಳಗೊಂಡಿದೆ.

ಸಿದ್ದತೆಯುಳ್ಳ ಮತ್ತು ತರಬೇತಿಯಾದ ನಾಗರಿಕ ಪಡೆ ಇದ್ದು, ಮೈ ಭಾರತ ತನ್ನದಾದ ಕೊಡುಗೆ ನೀಡಲು ಬದ್ದವಾಗಿದೆ. ಮೈ ಭಾರತ ತನ್ನ ಚುರುಕಾದ ಯುವ ಸ್ವಯಂಸೇವಕರ ಜಾಲದೊಂದಿಗೆ ಜೊತೆಗೆ ಎಲ್ಲ ಉತ್ಸಾಹಭರಿತ ಯುವ ನಾಗರಿಕರನ್ನು ಈ ಮಹತ್ವದ ಕಾರ್ಯಕ್ಕಾಗಿ ಮುಂದೆ ಬಂದು ಮೈ ಭಾರತ ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಕರೆ ನೀಡುತ್ತದೆ.

ಈಗಿನ ಮೈ ಭಾರತ ಸ್ವಯಂ ಸೇವಕರು ಮತ್ತು ಜವಾಬ್ದಾರಿ ಮತ್ತು ಶಿಸ್ತುನ್ನು ಬೆಳೆಸುವುದರ ಜೊತೆಗೆ ತುರ್ತು ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯೆ ನೀಡಲು ಅಗತ್ಯವಿರುವ ಜೀವ ಉಳಿಸುವ ಕೌಶಲ್ಯಗಳನ್ನು ಕಲಿಯುವ ಅವಕಾಶವನ್ನು ನೀಡುತ್ತದೆ.


ನೋಂದಣಿ ಪ್ರಕ್ರಿಯೆ ಸುಲಭವಾಗಿದ್ದು ಅಧಿಕೃತ ಮೈ ಭಾರತ ಪೋರ್ಟಲ್ ಮೂಲಕ ಲಭ್ಯವಿದೆ  https://mybharat.gov.in  ಈ ಕಾರ್ಯಕ್ಕಾಗಿ ಯುವಕರು ಮುಂದೆ ಬಂದು ಇತರರು ಸಹ ಭಾಗಿಯಾಗುವಂತೆ ಪ್ರೇರೇಪಿಸಲು ಸಹಕಾರಿಯಾಗಿದೆ, ಇದು ರಾಷ್ಟçದ ಪರಿಯೊಂದು ಘೋಷಣೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ 08482-235360 ಅಥವಾ 9004315246 ಗೆ ಸಂಪರ್ಕಿಸಿ ಎಂದು ಅವರು ತಿಳಿಸಿದ್ದಾರೆ.

prajaprabhat

Recent Posts

ʼರೋಹಿತ್ ವೇಮುಲ ಕೇಂದ್ರಕ್ಕೆ ಪತ್ರ ಬರೆದ ವಿಶ್ವಸಂಸ್ಥೆ.

ಬೆಂಗಳೂರು.09.ಜೂನ್.25:- ಕೇಂದ್ರೀಯ ವಿಶ್ವವಿದ್ಯಾಲಯ ಹೈದರಾಬಾದ್ ತೆಲಂಗಾಣಾ ರೋಹಿತ್ ಬೇಮುಲ ಅವರಮೇಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ, ಜಾತಿ ದೌರ್ಜನ್ಯವನ್ನು…

4 hours ago

ವಿದ್ಯಾರ್ಥಿ ವೇತನ ಕೈಪಿಡಿ: ಮಿರೇ ಅಸೆಟ್ ಫೌಂಡೇಷನ್‌

ಮಿರೇ ಅಸೆಟ್ ಫೌಂಡೇಷನ್‌ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…

12 hours ago

AllA ಅವರ “ಯೋಗ ಸಮಾವೇಶ” ಕಾರ್ಯಾಗಾರ ಇಂದು ಪ್ರಾರಂಭವಾಗಿದೆ

ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…

13 hours ago

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

13 hours ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

13 hours ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

13 hours ago