ಚಾಮರಾಜನಗರ.18.ಜೂನ್.25:- ಯಳಂದೂರು: ಸರಕಾರಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಕಡು ಬಡವರ ಮಕ್ಕಳಿರುವುದರಿಂದ ಪಂಚಾಯತಿಯ ಅನುದಾನವನ್ನು ಸದ್ಬಳಿಕೆ ಮಾಡಿಕೊಂಡು ಚೇರ್, ಆಟಿಕೆ ಸಾಮಾನುಗಳು ಹಾಗೂ ಸುಸಜ್ಜಿತ ಆಟದ ಮೈದಾನವನ್ನು ಮಾಡಿ ಹಾಗೂ ಗ್ರಾಮದ ಪ್ರಮುಖ ಸರ್ಕಲ್ ಗಳಿಗೆ ಹೈಮಾಸ್ಟ್ ದೀಪವನ್ನು ಅಳವಡಿಸಿರುವ ಯುವ ನಾಯಕ ಕೆಸ್ತೂರು ಗ್ರಾಮಪಂಚಾಯತಿ ಸದಸ್ಯ ಗುರುಲಿಂಗಯ್ಯ ಮಾದರಿ ಗ್ರಾಮಪಂಚಾಯತಿ ಸದಸ್ಯರಾಗಿದ್ದಾರೆ.
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಗ್ರಾಮಪಂಚಾಯತಿ ಸದಸ್ಯ ಗುರುಲಿಂಗಯ್ಯ ರವರು ನಾಲ್ಕನೇ ವಾರ್ಡ್ ನ ಸದಸ್ಯರಾಗಿದ್ದಾರೆ ತುಂಬಾ ಸರಳವಾದ ಜೀವನವನ್ನು ಮಾಡುತ್ತಿದ್ದಾರೆ ಇವರ ಉದ್ದೇಶ ಸರಕಾರಿ ಶಾಲೆ ಮತ್ತು ಅಂಗನವಾಡಿಗಳ ಅಭಿವೃದ್ಧಿ ಜೊತೆಗೆ ಕಡುಬಡವರ ಮಕ್ಕಳಿಗೆ ಬುಕ್ , ನೋಟ್ ಹಾಗೂ ಪೆನ್ನುಗಳನ್ನು ನೀಡಿ ಪ್ರೋತ್ತಾಹಿಸುತ್ತ ಬಂದಿದ್ದಾರೆ.
ಸರಕಾರ ಗ್ರಾಮಪಂಚಾಯತಿಗಳಿಗೆ ಅಭಿವೃದ್ಧಿಗೋಸ್ಕರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಗ್ರಾಮಗಳು ಅಭಿವೃದ್ಧಿ ಹೊಂದುತ್ತದೆ ಈ ಗುರಿಯನ್ನು ಇಟ್ಟುಕೊಂಡು ಕೆಸ್ತೂರು ಗ್ರಾಮಪಂಚಾಯತಿ ಸದಸ್ಯನಾಗಿ ಸೇವೆಸಲ್ಲಿಸುತ್ತಿದ್ದೇನೆಂದು ಗುರುಲಿಂಗಯ್ಯ ಮಾತನಾಡುತ್ತಿದ್ದಾರೆ.
ಗ್ರಾಮದ ಅಂಬೇಡ್ಕರ್ ಭವನ ಮತ್ತು ಲ್ಯಾಂಡ್ ಆರ್ಮಿ ಭವನದ ಮುಂದೆ ಹೈಮಾಸ್ಟ್ ದೀಪಗಳನ್ನು 15 ನೇ ಹಣಕಾಸಿನ ಹಣ ಬಳಸಿ ಅಳವಡಿಸಿದ್ದಾರೆ.
ಅದಲ್ಲದೇ ಇವಾಗ ಕೆಸ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 2 ಇಲ್ಲಿನ ಮಕ್ಕಳ ಹಿತದೃಷ್ಟಿಯಿಂದ ಇಂಟರ್ ಲ್ಯಾಕ್ ಕಲ್ಲುಗಳನ್ನು ನಾಲ್ಕು ಲಕ್ಷದ ವೆಚ್ಚದಲ್ಲಿ ಕಾಮಗಾರಿಯನ್ನು ಮಾಡಿಸಿದ್ದಾರೆ ಇವರ ಕಾರ್ಯವನ್ನು ಗ್ರಾಮದ ಜನರು ಶ್ಲಾಘಿಸುತ್ತಿದ್ದಾರೆ ಇವರ ಕಾರ್ಯಕ್ಕೆ ಗ್ರಾಮಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು ಹಾಗೂ ಪಿಡಿಒ ಮಹದೇವಸ್ವಾಮಿರವರು ಸಹಕಾರವನ್ನು ನೀಡಿದ್ದಾರೆ.
ಯಳಂದೂರು ತಾಲ್ಲೂಕಿನ ಯಾವುದೇ ಸರಕಾರಿ ಶಾಲೆಯ ಮೈದಾನದಲ್ಲಿ ಇಂಟರ್ ಲ್ಯಾಕ್ ಕಲ್ಲುಗಳಿಂದ ಮೈದಾನ ನಿರ್ಮಾಣವಾಗಿಲ್ಲ ಆದರೆ ನಮ್ಮ ಶಾಲೆಯ ಆವರಣ ಇಂದು ಇಂಟರ್ ಲ್ಯಾಕ್ ಕಲ್ಲುಗಳಿಂದ ಮೈದಾನ ನಿರ್ಮಾಣವಾಗಿದೆ ಇದಕ್ಕೆ ನಾವು ಹೆಮ್ಮೆ ಪಡಬೇಕಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ.
ಈ ಕಾರ್ಯದಲ್ಲಿ ಗುರುಲಿಂಗಯ್ಯ ರವರಿಗೆ ಮತ್ತೊಬ್ಬ ಸದಸ್ಯ ಜೆ ಪ್ರಸಾದ್ ಕೂಡ ಕೈಜೋಡಿಸಿದ್ದಾರೆ.
ಏನೇ ಆಗಲಿ ಗ್ರಾಮ ಅಭಿವೃದ್ಧಿಯಾಗಬೇಕು ಅಷ್ಟೇ
ವರದಿ.ಪ್ರಸನ್ನಕುಮಾರ್ ಕೆಸ್ತೂರು
UGC Regulations & Guideline... ಯುಜಿಸಿ (ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ) ಅತಿಥಿ ಅಧ್ಯಾಪಕರು ಎಂದರೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲು…
LIC HFL ಅಪ್ರೆಂಟಿಸ್ಷಿಪ್ ಪ್ರೋಗ್ರಾಂ-003) 250 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯು ಪದವೀಧರರಿಗೆ ಭಾರತದ BFSI (ಬ್ಯಾಂಕಿಂಗ್, ಫೈನಾನ್ಶಿಯಲ್…
ಬೆಂಗಳೂರು.18.ಜೂನ್.25:- ರಾಜ್ಯದಲ್ಲಿ ಖಾಲಿಯಿರುವ ಹುದ್ದೆಗಳು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿರುವ KPTCL ನೇಮಕಾತಿ ಖಾಲಿ ಇರುವ 35000 ಸಾವಿರ ನಿಮ್ಮ…
ಗುಲ್ಬರ್ಗಾ.18.ಜೂನ್.25:-ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿ ಇಲ್ಲಿ ಲಿ ⁹óದಶಕಗಳ ಹಿಂದೆಯೇ ಪ್ರಭಾವ ಬಳಸಿಕೊಂಡು, ಇಲ್ಲದ ಹುದ್ದೆಗಳನ್ನು ಸೃಷ್ಟಿಸಿ ಹೊರಗುತ್ತಿಗೆ ಆಧಾರದಲ್ಲಿ ನುಸುಳಿ…
ಪಾಕಿಸ್ತಾನದೊಂದಿಗಿನ ಸಮಸ್ಯೆಗಳನ್ನು ಪರಿಹರಿಸಲು ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಎಂದಿಗೂ ಸ್ವೀಕರಿಸುವುದಿಲ್ಲ ಮತ್ತು ಅದನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ…
ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಕೊಂಡಮೊಡಲು ಅರಣ್ಯ ಪ್ರದೇಶದಲ್ಲಿ ಇಂದು ಭದ್ರತಾ ಸಿಬ್ಬಂದಿ ಮತ್ತು ಶಸ್ತ್ರಸಜ್ಜಿತ ಮಾವೋವಾದಿಗಳ ನಡುವಿನ…