ಕೊಪ್ಪಳ.20.ಜೂನ.25:-ಕೊಪ್ಪಳ ನಗರದ ಜಿಲ್ಲಾಸ್ಪತ್ರೆಗೆ 2025ರ ಜನವರಿ 16 ರ ಸಂಜೆ ಬಿ ತುಳಸಿ ಗಂಡ ಬಿ ರಾಜು ಎಂಬ 50 ರಿಂದ 55 ವರ್ಷದ ಮಹಿಳೆಯನ್ನು ಯಾರೋ ಚಿಕಿತ್ಸೆಗಾಗಿ ದಾಖಲಿಸಿ ಹೋಗಿದ್ದು, ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೆ 2025ರ ಜನವರಿ 17 ರ ಬೆಳಗಿನ ಜಾವ ಮೃತಪಟ್ಟಿರುತ್ತಾರೆ. ಮಹಿಳೆಯ ವಾರಸುದಾರರು ಪತ್ತೆಯಾಗದ ಕಾರಣ ಮಹಿಳೆಯ ಶವವನ್ನು ಜಿಲ್ಲಾಸ್ಪತ್ರೆಯ ಶಿಥಿಲಾಗಾರದಲ್ಲಿ ಇರಿಸಲಾಗಿದೆ. ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 01/2025 ಕಲಂ 194 ಬಿಎನ್ಎಸ್ಎಸ್ ಅಡಿ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆಯ ಚಹರೆ:
ಮಹಿಳೆಯು ದುಂಡುಮುಖ, ಗೋಧಿ ಮೈಬಣ್ಣ, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಕೂದಲು ಹೊಂದಿದ್ದು, ನೀಲಿ ಬಣ್ಣದ ಡಿಸೈನ್ ಇರುವ ನೈಟಿ ಧರಿಸಿರುತ್ತಾರೆ. ಇತರೆ ಬೇರೆ ಯಾವುದೇ ಗುರುತುಗಳು ಕಂಡು ಬಂದಿರುವುದಿಲ್ಲ.
ಮೇಲ್ಕಂಡ ಚಹರೆಯ ಮಹಿಳೆಯ ಬಗ್ಗೆ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಲ್ಲಿ, ಮೃತಳ ಗುರುತು, ವಿಳಾಸ ಪತ್ತೆಯಾದಲ್ಲಿ ನಗರ ಠಾಣೆ ಪಿಐ: 9480803745, 08539-220333, ನಗರ ಠಾಣೆ ಪಿಎಸ್ಐ: 9611589433, ಕೊಪ್ಪಳ ಕಂಟ್ರೋಲ್ ರೂಂ.08539-230100, 230222, ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.
ಮೈಸೂರು.21.ಜೂನ್.25:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಯುಜಿಸಿ-ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳಿಗೆ ತರಬೇತಿ…
ಬೆಂಗಳೂರು.21.ಜೂನ್.25:- ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ ಸಣ್ಣ ಖೇಲೋ ಇಂಡಿಯಾ ಕೇಂದ್ರಗಳನ್ನು ಪ್ರಾರಂಭಿಸಲು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿದ್ದು…
ಬೀದರ.21.ಜೂನ್.25:- ಗುರುನಾನಕ್ ಪ್ರಥಮ ದರ್ಜೆ ಕಾಲೇಜು ಬೀದರ್ ನ ರಜತ ಮಹೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಅಂತರ ಕಾಲೇಜು ವಿವಿಧ ಕ್ರೀಡಾ…
ಔರಾದ.21.ಜೂನ್.25:- ಸರಕಾರಿ ಪ್ರಥಮ ದರ್ಜೆ ಕಾಲೇಜು ಔರಾದ್ ನಲ್ಲಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ:…
ಬೆಂಗಳೂರು.21.ಜೂನ್.25:- ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಕ್ಕಾಗಿ ಸೇವಾ ಸಿಂಧು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ…
ತಾತ್ಕಾಲಿಕ ಉದ್ಯೋಗಿ ಎಂದರೆ ಶಾಶ್ವತ ಹುದ್ದೆಗೆ ಬದಲಾಗಿ ನಿರ್ದಿಷ್ಟ, ಸಾಮಾನ್ಯವಾಗಿ ಅಲ್ಪಾವಧಿಯ, ಉದ್ದೇಶ ಅಥವಾ ಯೋಜನೆಗಾಗಿ ನೇಮಕಗೊಂಡ ತಾತ್ಕಾಲಿಕ ಕೆಲಸಗಾರ.…