ಬ್ರೀಮ್ಸ್ ಆಸ್ಪತ್ರೆಗೆ ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ

ಬೀದರ.07.ಏಪ್ರಿಲ್.25:- ಮಕ್ಕಳ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ಬ್ರಿಮ್ಸ್ ಆಸ್ಪತ್ರೆಗೆ ಕೇಂದ್ರ ಸರ್ಕಾರವು ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ ನೀಡಿದೆ ಎಂದು ಬೀದರ ಬ್ರೀಮ್ಸ್ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಶಿವಯೋಗಿ ಬಾಳಿ ಅವರು ತಿಳಿಸಿದ್ದಾರೆ.


ಮುಸ್ಕಾನ್ (MusQan) ಮಹತ್ವಕಾಂಕ್ಷಿಯ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಇದರಡಿಯಲ್ಲಿ ನವಜಾತ ಶಿಶುವಿನಿಂದ ಹಿಡಿದು 12 ವರ್ಷದ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಗುರಿ ಹೊಂದಿರುತ್ತದೆ.

ಈ ಕಾರ್ಯಕ್ರಮದಡಿಯಲ್ಲಿ ಮಕ್ಕಳ ವಿಭಾಗದ 04 ವಿಭಾಗಗಳಾದ ಹೊರರೋಗಿ ವಿಭಾಗ/ಒಳ ರೋಗಿ ವಿಭಾಗ, ನವಜಾತ ಶಿಶು ತೀವ್ರ ನಿಗಾ ಘಟಕ ಮತ್ತು ಅಪೌಷ್ಟಿಕ ಮಕ್ಕಳ ಪುರ್ನವಸತಿ ವಿಭಾಗಗಳನ್ನು ರಾಷ್ಟ್ರೀಯ ಮಾನದಂಡಗಳನ್ವಯ, ಬೇರೆ ರಾಜ್ಯದಿಂದ, ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವತಿಯಿಂದ ನಿಯೋಜನೆಗೊಳಿಸಲಾದ ಮೌಲ್ಯಮಾಪಕರು ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ 02 ದಿನಗಳ ಕಾಲ ಮೌಲ್ಯಮಾಪನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿರುತ್ತಾರೆ.

ಕೇಂದ್ರ ಸರ್ಕಾರವು ವರದಿಯನ್ನು ಕೂಲಂಕೂಷವಾಗಿ ಪರೀಶಿಲಿಸಿ ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ ನೀಡಿರುತ್ತದೆ.ಈ ಪ್ರಮಾಣ ಪತ್ರ ಪಡೆಯಲು 70 ಪ್ರತಿಶತ ಅಂಕಗಳು ಬೇಕಾಗಿರುತ್ತದೆ. ಬೀದರ ಜಿಲ್ಲಾ ಆಸ್ಪತ್ರೆಯು ಶೇ.88.68% ರಷ್ಟು ಅಂಕಗಳು ಗಳಿಸಿರುತ್ತವೆ ತಿಳಿಸಿದ್ದಾರೆ.


ಬ್ರಿಮ್ಸ್ ಸಂಸ್ಥೆಯು ಈ ಅಡಿಯಲ್ಲಿ ಬೀದರ ಜನತೆಗೆ ಚಿಕ್ಕಮಕ್ಕಳ ಅಂದರೆ, ಹುಟ್ಟಿದ ನವಜಾತ ಶಿಶುವಿನಿಂದ 12 ವರ್ಷದ ಮಕ್ಕಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನಮ್ಮ ಸಂಸ್ಥೆಯಲ್ಲಿ ಕೊಡಲಾಗುತ್ತದೆ. ಹೊರರೋಗಿ ಮತ್ತು ಒಳರೋಗಿ ವಿಭಾಗದ ಮಕ್ಕಳಿಗೆ ಉಚಿತ ಲಸಿಕೆ, ಮತ್ತು ಅಪೌಷಿಕ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದರ ಸದುಪಯೋಗ ಜಿಲ್ಲೆಯ ಜನತೆ ತೆಗೆದುಕೊಳ್ಳಬೇಕೆಂದರು.


ಮುಸ್ಕಾನ್ (MusQan) ಕಾರ್ಯಕ್ರಮವು ಒಂದು ಮಹತ್ವಕಾಂಕ್ಷಿಯ ರಾಷ್ಟ್ರೀಯ ಕಾರ್ಯಕ್ರಮದಡಿಯಲ್ಲಿ ಈ ಪ್ರಮಾಣಪತ್ರ ಪಡೆಯುವುದಕ್ಕೆ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಶಾಂತಲಾ ಕೌಜಲಗಿ ಅವರ ಪ್ರಯತ್ನ ಸಹಕಾರಿಯಾಗಿರುತ್ತದೆ.


ಈ ಬ್ರಿಮ್ಸ್ ಬೋಧಕ ಆಸ್ಪತ್ರೆಗೆ ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ ಪಡೆದಿದ್ದಕ್ಕಾಗಿ ಸಂಸ್ಥೆಯ ನಿರ್ದೇಶಕಾರದ ಡಾ. ಶಿವಕುಮಾರ ಶೆಟಕಾರ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಹಮ್ಮದ್ ಅಹಮ್ಮದುದ್ದೀನ್ ಹರ್ಷ ವ್ಯಕ್ತಪಡಿಸಿದ್ದಾರೆಂದು ಅವರು ತಿಳಿಸಿದ್ದಾರೆ.

prajaprabhat

Recent Posts

SSC 14,582 ಹುದ್ದೆಗಳಿಗೆ ಅರ್ಜಿ ಆಹ್ವಾನ

ಜೂನ್ 9 ರಂದು 14,582 ಹುದ್ದೆಗಳಿಗೆ SSC CGL 2025 ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು…

13 minutes ago

2000 ವರ್ಷಗಳ ಹಿಂದೆ ಬೌದ್ಧಧರ್ಮದ ಆಗಮನವನ್ನು ಗುರುತಿಸುವ ಪೋಸನ್ ಪೋಯವನ್ನು ಶ್ರೀಲಂಕಾ ಆಚರಿಸುತ್ತಿದೆ.

ಶ್ರೀಲಂಕಾ ಇಂದು ಪವಿತ್ರ ಪೋಸನ್ ಪೋಯ ಹಬ್ಬವನ್ನು ಆಚರಿಸುತ್ತಿದೆ, ಇದು 2,000 ವರ್ಷಗಳ ಹಿಂದೆ ಬೌದ್ಧಧರ್ಮದ ಐತಿಹಾಸಿಕ ಆಗಮನವನ್ನು ಸೂಚಿಸುತ್ತದೆ.…

43 minutes ago

ದಕ್ಷಿಣ ಭಾರತದಲ್ಲಿ ಭಾರೀ ಮಳೆ, ಪೂರ್ವ-ಮಧ್ಯ ಭಾರತದಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ: ಐಎಂಡಿ ಮುನ್ಸೂಚನೆ

ಹೊಸ ದೆಹಲಿ.10.ಜೂನ್.25:- ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ಒಳನಾಡು, ಕೇರಳ, ಮಾಹೆ, ಒಡಿಶಾ, ರಾಯಲಸೀಮಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್…

2 hours ago

ಹಣಕಾಸು ಸಚಿವ ಸೀತಾರಾಮನ್ ಅಧ್ಯಕ್ಷತೆಯಲ್ಲಿ 6ನೇ NIIF ಜಿಸಿ ಸಭೆ.

ಹೊಸ ದೆಹಲಿ.10.ಜೂನ್.25:- ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ…

2 hours ago

ಭಾರತೀಯ ಯುವಕರು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಸೃಷ್ಟಿಕರ್ತರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ, ಐಐಟಿಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ: ಲೋಕಸಭಾ ಸ್ಪೀಕರ್

ಹೊಸ ದೆಹಲಿ.10.ಜೂನ್.25:- ಭಾರತವು ತನ್ನ ಯುವ ಪ್ರತಿಭೆ ಮತ್ತು ತಾಂತ್ರಿಕ ನಾವೀನ್ಯತೆಗಳ ಬಲದ ಮೂಲಕ ಸಮಕಾಲೀನ ಸವಾಲುಗಳನ್ನು ಎದುರಿಸುವಲ್ಲಿ ಜಾಗತಿಕ…

2 hours ago

ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದ ಶೆಲ್ ದಾಳಿಯಿಂದ ಹಾನಿಗೊಳಗಾದ 2060 ಮನೆಗಳಿಗೆ ಸರ್ಕಾರ 25 ಕೋಟಿ ನೆರವು ನೀಡಲಿದೆ.

ಹೊಸ ದೆಹಲಿ.10.ಜೂನ್.25:- ಗಡಿ ಪ್ರದೇಶಗಳಲ್ಲಿ ಹಾನಿಗೊಳಗಾದ 2,060 ಮನೆಗಳಿಗೆ ಸರ್ಕಾರ ಹೆಚ್ಚುವರಿ 25 ಕೋಟಿ ರೂಪಾಯಿಗಳನ್ನು ಒದಗಿಸಲಿದೆ. ಆಪರೇಷನ್ ಸಿಂಧೂರ್…

2 hours ago