ಬೋರಳ ಗ್ರಾಮದಲ್ಲಿ ಜೇತವನ ಬುದ್ಧವಿಹಾರ ನಾಮಫಲಕ ಉದ್ಘಾಟನೆ:

ಬೋರಳ ಗ್ರಾಮದಲ್ಲಿ ಜೇತವನ ಬುದ್ಧವಿಹಾರ ನಾಮಫಲಕ ಉದ್ಘಾಟನೆ:

ಔರಾದ: ತಾಲೂಕಿನ ಬೋರಳ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿವಾ೯ಣ ದಿನದ ನಿಮಿತ್ತ ಗ್ರಾಮದ ಗೌತಮ ನಗರದ ಪರಿಸರದಲ್ಲಿರುವ ಜೇತವನ ಬುದ್ಧ ವಿಹಾರಕ್ಕಾಗಿ ಮಿಸಲಿಟ್ಟ ಸ್ಥಳದಲ್ಲಿ ಜೇತವನ ಬುದ್ಧ ವಿಹಾರ ನಾಮಫಲಕವನ್ನು ತಾಲೂಕಿನ ಶಾಸಕರಾದ ಪ್ರಭು ಬಿ ಚವ್ಹಾಣ ಅವರು ಉದ್ಘಾಟಿಸಿದರು. ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬುದ್ಧ ಭಾರತದ ಆದಿಗುರು, ಮಹಾ ತಂದೆ. ಭಾರತದ ಚರಿತ್ರೆಯಲ್ಲಿ ಮಿನುಗುವ ಮಹಾತಾರೆಯಾಗಿದ್ದಾರೆ.

ಆ ಮಹಾತ್ಮನ ವಿಹಾರ ನಿಮಾ೯ಣವಾಗುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಈ ಸ್ಥಳ ಪ್ರಸಿದ್ಧ ಬುದ್ಧವಿಹಾರವಾಗಿ ಬದಲಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕಿನ ತಹಸೀಲ್ದಾರ್ ಮಲಶೆಟ್ಟೀ ಚಿದ್ರೆ ಅವರು ಮಾತನಾಡಿ. ಬಾಬಾಸಾಹೇಬರು ಶಿಕ್ಷಣ ಎಂಬ ಬಹುದೊಡ್ಡ ಅಸ್ತ್ರವನ್ನು ನಮಗೆ ನಿಡಿದ್ದಾರೆ ಇದನ್ನು ಬಳಸಿ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆಯಬೇಕು ಎಂದು ಯುವಕರಿಗೆ ಕಿವಿಮಾತು ಹೇಳಿದರು. ಅವರ ಮಹಾಪರಿನಿವಾ೯ಣ ದಿನದಂದು ಅವರ ಫೋಟೋಗೆ ಪೂಜೆ ಮಾಡಿ ಮನೆಗೆ ಹೊಗೊ ಪರಿಪಾಠ ಹೊಗಬೇಕು. ಈ ದಿನದಂದು ಬಾಬಾಸಾಹೇಬರ ವಿಚಾರಗಳು ಹಾಗೂ ಅವರ ಕನಸು ನನಸು ಮಾಡಲು ಪಣ ತೊಡಬೆಕು ಎಂದು ಹೇಳಿದರು.

ಭಾರತಿಯ ಬೌದ್ಧ ಮಹಾಸಭಾದ ತಾಲೂಕಾ ಅಧ್ಯಕ್ಷರಾದ ಸೋಪಾನ ಡೊಂಗ್ರೆ ಮಾತನಾಡಿ ಬಾಬಾಸಾಹೇಬರು ಭಾರತದ ಭಾಗ್ಯವಿಧಾತಾ ಆಗಿದ್ದಾರೆ ಈ ಮಾತು ಎಲ್ಲರು ತಿಳಿಕೊಳ್ಳಬೇಕಾದ ಅವಶ್ಯಕತೆ ಇದೆ. ಎಲ್ಲಾ ಜಾತಿ, ಎಲ್ಲಾ ಸಮುದಾಯ, ಎಲ್ಲಾ ಧಮ೯ದ ಜನರು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಫಲಾನುಭವಿಗಳಾಗಿದ್ದಾರೆ ಹಾಗಾಗಿ ಬಾಬಾಸಾಹೇಬರನ್ನು ಒಂದು ಜಾತಿಗೆ ಸಿಮಿತ ಮಾಡುವುದು ತಪ್ಪು ಎಂದು ಹೇಳಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ, ಎಜುಕೇಶನ್ ಆಂಡ್ ರಿಸಚ೯ ಸೆಂಟರ್ ಬೋರಳನ ಅಧ್ಯಕ್ಷರಾದ ಶಿವಾಜಿರಾವ್ ಬೋರಳೆ ಅವರು ವಹಿಸಿದರು. ಶಿವಾಜಿರಾವ ಪಾಟಿಲ್ ಮುಂಗನಾಳ, ಶಾಲಿವಾನ ಪನ್ನಾಳೆ, ಧೋಂಡಿಬಾ ನರೋಟೆ, ಪ್ರಕಾಶ ಕೋಟೆ, ನಿವತಿ೯ರಾವ ಪಾಟಿಲ್, ಮೋಹನ ಕಾಂಬ್ಳೆ ಗ್ರಾಮ ಪಂಚಾಯತ್ ಸದಸ್ಯರಾದ ಸಮೃತ್ ಪಾಟಿಲ್,ಬಜರಂಗ್ ಪಾಂಡ್ರೆ,ಮಹಾದೇವ ಮಚಕುರಿ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ರಾಜೆಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ನಂದಾದೀಪ ಬೋರಳೆ ನಿರೂಪಿಸಿದರು.

prajaprabhat

View Comments

Recent Posts

ಉತ್ತರಾಖಂಡದಲ್ಲಿ ಸೇನಾ ಸನ್ನದ್ಧತೆಯನ್ನು ಪರಿಶೀಲಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಐಬೆಕ್ಸ್ ತರಾನಾ 88.4 ಎಫ್‌ಎಂ ಅನ್ನು ಉದ್ಘಾಟಿಸಿದರು.

ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…

2 hours ago

ಮಿಥಿ ನದಿ ಹೂಳೆತ್ತುವ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ.

ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…

2 hours ago

ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ಪ್ರಾರಂಭಿಸಿದೆ

ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…

2 hours ago

ಭೂಕುಸಿತದಿಂದ ಹಾನಿಗೊಳಗಾದ ಚಾಟೆನ್‌ನಿಂದ ಸಿಕ್ಕಿಬಿದ್ದ ಸ್ಥಳೀಯರು ಮತ್ತು ಟ್ಯಾಕ್ಸಿ ಚಾಲಕರನ್ನು ಸಿಕ್ಕಿಂ ಸರ್ಕಾರ ವಿಶೇಷ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ

ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…

2 hours ago

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಣೆ; ಪ್ರತ್ಯೇಕ ಸ್ಥಳಗಳಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯನ್ನು ಐಎಂಡಿ ಮುನ್ಸೂಚನೆ ನೀಡಿದೆ.

ಸಿಕ್ಕಿಂ ಸರ್ಕಾರವು ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ ಸಿಲುಕಿರುವ ಸ್ಥಳೀಯರು, ಪ್ರವಾಸಿ ಟ್ಯಾಕ್ಸಿ ಚಾಲಕರು ಮತ್ತು ಕೆಲವು ಸರ್ಕಾರಿ ಅಧಿಕಾರಿಗಳನ್ನು ವಾಯು…

2 hours ago

ಎನ್‌ಡಿಎಯ 11 ವರ್ಷಗಳ ಪ್ರಯಾಣದ ಪ್ರಮುಖ ಆಧಾರಸ್ತಂಭ ಮಹಿಳಾ ನೇತೃತ್ವದ ಅಭಿವೃದ್ಧಿ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಹೊಸ ದೆಹಲಿ.08.ಜೂನ್.25:-ಅಭಿವೃದ್ಧಿ ಹೊಂದಿದ ಭಾರತದತ್ತ ಮಹಿಳೆಯರು ವಹಿಸಿರುವ ಪರಿವರ್ತನಾತ್ಮಕ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಎತ್ತಿ ತೋರಿಸಿದರು, ಕಳೆದ…

7 hours ago