ಕಲಬುರಗಿ .20.ಮಾರ್ಚ.25:- ಕಲಬುರಗಿ ಜೆಲೆಯ ವಾಡಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಂತರ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಪ್ರತಿಭಟನೆ ಮಾಡಲಾಗಿದೆ. ಮಹಾಬೋಧಿ ದೇವಾಲಯದ ವಿಶೇಷ ಮತ್ತು ಪೂರ್ಣ ಆಡಳಿತ ಬೌದ್ಧರಿಗೆ ಸಿಗಲು ಬೋಧಗಯಾ ದೇವಾಲಯ ಪೂರ್ಣ ಅಧಿಕಾರ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಬೌದ್ಧ ಸಮಾಜದ ವತಿಯಿಂದ ಬುಧವಾರ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿದ ಪ್ರತಿಭಟನಾ ಮೆರವಣಿಗೆ ನಂತರ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಭಂತೆ ಧಮ್ಮಾನಂದ ಮಹಾಥೇರಾ, ‘ಬುದ್ದಗಯಾ ಟೆಂಪಲ್ ಕಾಯ್ದೆ 1949ಅನ್ನು ರದ್ದುಗೊಳಿಸಿ ಮಹಾಬೋಧಿ ಮಹಾ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ವಹಿಸಬೇಕು.
ಕಾಯ್ದೆ 1949ಅನ್ನು ರದ್ದುಗೊಳಿಸಿ ಕೇಂದ್ರ ಒಕ್ಕೂಟ ಮತ್ತು ಬಿಹಾರ ಸರ್ಕಾರ ಈ ವಿಷಯದಲ್ಲಿ ಬೌದ್ಧ ಸಮಾಜದ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ. ಈ ಹೋರಾಟ ದೇಶಾದ್ಯಂತ ಹಬ್ಬಿ ಉಗ್ರರೂಪ ತಾಳುವ ಮೊದಲು ಸರ್ಕಾರಗಳು ಎಚ್ಚೆತ್ತುಕೊಂಡು ಬುದ್ಧಗಯಾದ ಮಹಾಬೋಧಿ ಮಹಾ ವಿಹಾರದ ಪೂರ್ಣ ಅಧಿಕಾರವನ್ನು ಬೌದ್ದರಿಗೆ ನೀಡಬೇಕು’ ಎಂದರು.
ಭಂತೆ ಜ್ಞಾನ ಸಾಗರ ಥೇರಾ ಮಾತನಾಡಿ, ಗೌತಮ ಬುದ್ಧರಿಗೆ ಜ್ಞಾನ ಪ್ರಾಪ್ತಿಯಾದ ಪವಿತ್ರ ಸ್ಥಳವನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಇದು ನಮ್ಮ ಅಸ್ಮಿತೆಯ ವಿಷಯವಾಗಿದೆ ಎಂದರು.
ಕಾಯ್ದೆ 1949ರ ಪ್ರಕಾರ ಬೋಧಗಯಾ ದೇವಾಲಯ ನಿರ್ವಹಣಾ ಸಮಿತಿಯಲ್ಲಿ ಬಿಟಿಎಂಸಿಯ ಅಧ್ಯಕ್ಷರಾಗಿ ಗಯಾ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ 9 ಸದಸ್ಯರಿದ್ದಾರೆ. ಅದರಲ್ಲಿ 4 ಜನ ಹಿಂದೂ ಬ್ರಾಹ್ಮಣರು 4 ಸದಸ್ಯರು ಬೌದ್ಧರು. ಆದರೆ, ಕೆಲವು ವರ್ಷಗಳ ಹಿಂದೆ ಯಾರಾದರೂ ಅಧ್ಯಕ್ಷರಾಗಬಹುದು ಎಂದು ತಿದ್ದುಪಡಿ ಮಾಡಿದರೂ 1949ರಿಂದ ಹಿಂದೂ ಬ್ರಾಹ್ಮಣರನ್ನು ಹೊರತುಪಡಿಸಿ ಬೌದ್ಧರು ಒಮ್ಮೆಯೂ ಅಧ್ಯಕ್ಷರಾಗಿಲ್ಲ.
ಇದು ಬೌದ್ಧರಿಗೆ ಮಾಡಿದ ಅನ್ಯಾಯವಾಗಿದ್ದು ಜೊತೆಗೆ ಸಂವಿಧಾನಕ್ಕೆ ವಿರುದ್ಧವಾಗಿದೆ’ ಎಂದರು.
ಬೌದ್ಧ ಧಮ್ಮಾಚಾರಿ ಜಯದೇವ ಧಮ್ಮಪಾಲ ಗುರೂಜಿ, ಬೌದ್ಧ ಸಮಾಜ ಅಧ್ಯಕ್ಷ ಟೋಪಣ್ಣ ಕೋಮಟೆ, ಪದಾಧಿಕಾರಿಗಳಾದ ಸೂರ್ಯಕಾಂತ ರದ್ದೇವಾಡಿ, ಚಂದ್ರಸೇನ ಮೇನಗಾರ ಮಾತನಾಡಿದರು. ಭಿಕ್ಖುಣಿ ಅರ್ಚಸ್ಮತಿ ಮಾತಾಜಿ, ಭಂತೆ ಶಾಂತಿಪಾಲ, ಬೌದ್ಧ ಸಮಾಜದ ಪದಾಧಿಕಾರಿಗಳಾದ ಸತೀಶ ಬಟ್ಟರ್ಕಿ, ಮಲ್ಲಿಕಾರ್ಜುನ ಕಟ್ಟಿ, ಮಲೇಶಿ ಚುಕ್ಕೇರ, ಮಲ್ಲಿಕಾರ್ಜುನ ತುನ್ನೂರ, ಪಾರ್ವತಿ ರದ್ದೇವಾಡಿ, ಭಾಗಮ್ಮ ತೆಲ್ಕೂರ, ಶಾಂತಾಬಾಯಿ ರಾವೂರ ಸೇರಿದಂತೆ ಇತರರಿದ್ದರು.
ಇಂದು ತಹಶಿಲ್ದಾರ್ ನಾಗಯ್ಯಸ್ವಾಮಿ ಹಿರೇಮಠ ಹಾಗೂ ಪಿಎಸ್ಐ ತಿರುಮಲೇಶ ಕುಂಬಾರ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…
ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…
ಉತ್ತರಾಖಂಡದ ಗರ್ವಾಲ್ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…
ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…
ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…
ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…