ಬೆಂಗಳೂರು.27.ಜೂನ್.25:- ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಾರ್ವತ್ರಿಕ ವರ್ಗಾವಣೆಗಳ ಬಗ್ಗೆ ಶಿಕ್ಷಣ ಇಲಾಖೆಯು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಸರ್ಕಾರದ
ಉಲ್ಲೇಖಿತ 9 ರ ಆದೇಶದಲ್ಲಿ ವರ್ಗಾವಣೆಯ ಬಗ್ಗೆ ಮಾರ್ಗಸೂಚಿಗಳನ್ನಯ ಉಲ್ಲೇಖ-10ರ ಈ ಕಛೇರಿ ಅಧಿಸೂಚನೆಯಂತೆ ವರ್ಗಾವಣೆ ಹಮ್ಮಿಕೊಂಡು ಮೊದಲನೇ ಸುತ್ತಿನ ವರ್ಗಾವಣೆಯನ್ನು ಜಾರಿಗೊಳಿಸಲಾಗಿದೆ.
ಆದರೆ ಉಲ್ಲೇಖ-11ರಲ್ಲಿ ಸದರಿ ಆದೇಶದಲ್ಲಿ ನಮೂದಿಸಿರುವ ಷರತ್ತುಗಳೊಂದಿಗೆ ಪ್ರಸ್ತುತ 2025-26 ನೇ ಸಾಲಿನಲ್ಲಿ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಸಂಬಂಧಿಸಿದ ವೃಂದದ ಕಾರ್ಯನಿರತ ವೃಂದ ಬಲದ (working strength) ಶೇಕಡ 6 ಕ್ಕೆ ಸೀಮಿತಗೊಳಿಸಿ ದಿನಾಂಕ: 30-06-2025 ರೊಳಗೆ ಪೂರ್ಣಗೊಳಿಸಲು ದಿನಾಂಕ ವಿಸ್ತರಿಸಿ ಆದೇಶಿಸಲಾಗಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ವೇಳಾಪಟ್ಟಿಯನ್ನು ಕೆಳಕಂಡ ಷರತ್ತುಗಳೊಂದಿಗೆ ಹೊರಡಿಸಿದೆ.
1. ಉಲ್ಲೇಖ-09 ಮತ್ತು 10ರ ಎಲ್ಲಾ ಷರತ್ತುಗಳು ಯಥಾ ವತ್ತಾಗಿ ಮುಂದುವರೆಯುತ್ತವೆ.
2. ಈಗಾಗಲೇ ಅರ್ಜಿ ಸಲ್ಲಿಸಿ ವರ್ಗಾವಣೆ ಪಡೆದಿರುವ ಅಥವಾ ಅರ್ಜಿ ಸಲ್ಲಿಸಿ ಕೌನ್ಸಿಲಿಂಗ್ ನಲ್ಲಿ ಗೈರು ಹಾಜರಿ/ತಿರಸ್ಕರಿಸಿದ ನೌಕರರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಂತಹವರನ್ನು ಹೊರತುಪಡಿಸಿ ಉಳಿದ ಆಸಕ್ತರು ನಿಯಮಾನುಸಾರ ಅರ್ಜಿ ಸಲ್ಲಿಸಬಹುದಾಗಿದೆ.
3. ಒಂದೇ ಸ್ಥಳದಲ್ಲಿ ಧೀರ್ಘಾವಧಿ ಸೇವೆ ಸಲ್ಲಿಸಿರುವ ಪ್ರಕರಣಗಳ ಬಗ್ಗೆ ಇಇಡಿಎಸ್ನಿಂದ ಪಡೆದ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದ್ದು ಕಛೇರಿ ಮುಖ್ಯಸ್ಥರು ಇಇಡಿಎಸ್ನ ಸೇವಾ ವಿವರದ ಮಾಹಿತಿಯನ್ನು ಪರಿಶೀಲನೆ ಮಾಡುವುದು ಹಾಗೂ ಆದ್ಯತೆ /ವಿನಾಯಿತಿ ಗುರುತಿಸುವುದು einarnese ಸರ್ಕಾರದಿಂದ/ಇಲಾಖೆಯಿಂದ ವರ್ಗಾವಣಾ ಆದೇಶ ಆಗಿರುವ ಪ್ರಕರಣಗಳನ್ನು ಮತ್ತು ಆಯಾ ಹುದ್ದೆಗಳನ್ನು ಕಡ್ಡಾಯವಾಗಿ ಗುರುತಿಸತಕ್ಕದ್ದು.
4. ಶೇಕಡ. 4ರ ಮಿತಿಯೊಳಗೆ ಕೋರಿಕೆ ವರ್ಗಾವಣೆಗಳಿಗೆ ಕೌನ್ಸಿಲಿಂಗನ್ನು ಆನ್ ಲೈನ್ನಲ್ಲಿ ಮತ್ತು ಶೇಕಡ. 2 ರ ಮಿತಿಯೊಳಗೆ ಸಾರ್ವಜನಿಕ ಹಿತಾಸಕ್ತಿ ವರ್ಗಾವಣೆಗಳನ್ನು ನಡೆಸಲಾಗುವುದು.
ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿ
ಈ ಮೇಲ್ಕಂಡಂತೆ ಸಕ್ಷಮ ಪ್ರಾಧಿಕಾರ ತಮ್ಮ ವ್ಯಾಪ್ತಿಗೆ ಬರುವಂತಹ ನಿಗದಿಪಡಿಸಿರುವ ಸಿಬ್ಬಂದಿ ವರ್ಗದವರ ವರ್ಗಾವಣೆಯ ಬಗ್ಗೆ ಮಾರ್ಗಸೂಚಿಯನ್ವಯ ಈ ಕೆಳಕಂಡ ಪ್ರಕ್ರಿಯೆಯನ್ನು ನಡೆಸಲು ತಿಳಿಸಿದ. ವೇಳಾ ಪಟ್ಟಿಯಲ್ಲಿ ಬದಲಾವಣೆ ಇದ್ದಲ್ಲಿ ವೆಬ್ ಸೈಟ್ ಲ್ಲಿ ಪ್ರಕಟಿಸಲಾಗುವುದು.
ಶ್ವೇತಭವನ: ಆಪರೇಷನ್ 'ಮಿಡ್ನೈಟ್ ಹ್ಯಾಮರ್' ಇರಾನ್ ಪರಮಾಣು ಬೆದರಿಕೆಯನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ, ಪಶ್ಚಿಮ ಏಷ್ಯಾದಲ್ಲಿ ಕದನ ವಿರಾಮ ಮತ್ತು…
ಒಡಿಶಾದ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ 78ನೇ ಸೀನಿಯರ್ ರಾಷ್ಟ್ರೀಯ ಅಕ್ವಾಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ಶಾನ್ ಗಂಗೂಲಿ 400 ಮೀಟರ್…
ಹೊಸ ದೆಹಲಿ.27.ಜೂನ್.25:- 1975 ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯು ದೇಶ ಮತ್ತು ಸಮಾಜದ ನೈತಿಕತೆಯನ್ನು ಮುರಿಯುವ ಗುರಿಯನ್ನು ಹೊಂದಿತ್ತು ಎಂದು…
ಪುರಿಯಲ್ಲಿ.27.ಜೂನ್.25:- ನಡೆಯುವ ರಥೋತ್ಸವ ಎಂದೂ ಕರೆಯಲ್ಪಡುವ ಅತ್ಯಂತ ನಿರೀಕ್ಷಿತ, ಅತಿದೊಡ್ಡ ವಾರ್ಷಿಕ ರಥಯಾತ್ರೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇದು ದೇಶ ಮತ್ತು…
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ದೊಡ್ಡ ಘೋಷಣೆ ಮಾಡಿದೆ. ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನ?*…
ಬೆಂಗಳೂರು.27.ಜೂನ್.25:- ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 34 ತಹಶೀಲ್ದಾರ್ ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತಂತೆ…