ಯಾದಗಿರಿ.14.ಜೂನ್.25:- ಕೊಕಲ್ಯಾಣ ಕರ್ಣಾಟಕ ಆಭಿವೃದ್ಧಿ ಹೇಗೆ ಸಾಧ್ಯ ಅಧಿಕಾರಿಗಳು ಹಣವನ್ನು ಖರ್ಚು ಮಾಡುವುದಿಲ್ಲ ಎನ್ನುವ ಸಿದ್ದರಾಮಯ್ಯನವರ ಮಾತನ್ನು ಮುರಿದು, ಕಪ್ಪು ಚುಕ್ಕೆಯನ್ನು ತೊಳೆದು ಜನರ ಸೌಲಭ್ಯಕ್ಕೆ ಅನುಗುಣವಾಗಿ ಕೆಲಸಗಳನ್ನು ಕೈಗೊಂಡು ಸರ್ಕಾರದ ಮಂತ್ರಿಗಳು ಮತ್ತು ಇಲ್ಲಿನ ಅಧಿಕಾರಿಗಳು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಸೇರಿ ಲಕ್ಷಾಂತರ ಜನರನ್ನು ಸೇರಿಸಿದ್ದಕ್ಕಾಗಿ ವಿಶೇಷ ಧನ್ಯವಾದಗಳು ಸಲ್ಲಿಸುವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇಂದು ಶನಿವಾರ ಯಾದಗಿರಿಯಲ್ಲಿ ಆರೋಗ್ಯ ಆವಿಷ್ಕಾರ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ದಯವಿಟ್ಟು ಕಕ ಅನುದಾನದ ಹಣವನ್ನು ಬೇಗ ಖರ್ಚು ಮಾಡಿ, ಮತ್ತೆ ಸಿದ್ದರಾಮಯ್ಯನವರನ್ನು ಹಣ ಕೇಳಬೇಕು. ನಾನು ನೀನು ಎಂದು ಕಚ್ಚಾಡಿದರೆ, ಯಾವ ಕೆಲಸಗಳು ಆಗುವುದಿಲ್ಲ, 5000 ಕೋಟಿ ಹಣವನ್ನು ಉಪಯೋಗಿಸಿ, ಖರ್ಚು ಮಾಡಿ ತೋರಿಸಬೇಕು ಎಂದರು.
ಶಿಕ್ಷಕರ ಕೊರತೆ ಕಾರಣ, ಏಳು ಜಿಲ್ಲೆಗಳ ಫಲಿತಾಂಶದಲ್ಲಿ ಕೊನೆಯ ಸ್ಥಾನಗಳಲ್ಲಿದೆ. ಇಲ್ಲಿನ ಶೈಕ್ಷಣಿಕ ಭಡ್ತಿ ಹೆಚ್ಚಾಗಲಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನೌಕರಿಗಳ ಭಡ್ತಿ ಸರ್ಕಾರದ ಮಟ್ಟದಲ್ಲಿ ಹೆಚ್ವಾಗಬೇಕು. ನಮಗೆ, ನಿಮಗೆ ಆರ್ಥಿಕ ತೊಂದರೆ ಇಲ್ಲ ಎಂದು ಹೇಳಿದರು.
ಆರ್ಥಿಕ ಅನುಮತಿ ಸಿಎಂ ಅವರ ಕೈಯಲ್ಲಿಯೇ ಇರುವುದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಕ್ಯಾಬಿನೆಟ್ ಪ್ರಸ್ತಾಪ ಮಾಡಿ ಎಂದು ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯನವರಿಗೆ ತಿಳಿಸಿದರು.
ಯಾವ ಜನರಿಗೆ ಸಮಸ್ಯೆ ಇದೆ, 15, 18 ಪ್ರತಿಶತ ಜನರಿಗಾಗಿ 82 ಪ್ರತಿಶತ ಜನರ ಮಕ್ಕಳಿಗೆ ನ್ಯಾಯ ಕೊಡಿಸದೆ ಹೋದರೆ, ನಮ್ಮನಿಮ್ಮ ಮಕ್ಕಳು ಬೀದಿ ಪಾಲಾಗುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರನ್ನು ಸಿಂಗಾಪುರ ಮಾಡಿಕೊಳ್ಳಿ ಪರವಾಗಿಲ್ಲ, ನಮ್ಮ ಕಲಬುರಗಿಯನ್ನು ಮೈಸೂರು, ಬೆಂಗಳೂರು ಮಾಡಿ ಸಾಕು. ಸಿದ್ದರಾಮಯ್ಯನ ಮೈಸೂರು, ಶಿವಕುಮಾರ್ ಅವರ ಬೆಂಗಳೂರಿನ ರೀತಿ ಕಲಬುರಗಿ, ಕಲ್ಯಾಣ ಕರ್ನಾಟಕವನ್ನು ಮಾಡಿ ಎಂದು ಖರ್ಗೆ ಅವರು ನಗೆ ಚಟಾಕಿ ಹಾರಿಸಿದರು.
2025-26 ನೇ ಶೈಕ್ಷಣಿಕ ಸಾಲಿಗೆ NMMS ವಿದ್ಯಾರ್ಥಿ ವೇತನಕ್ಕಾಗಿ, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)…
ಚಿಕ್ಕಮಗಳೂರು.15.ಜೂನ್.25:- ರಾಜ್ಯ ಸರಕಾರ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಖಾಸಗಿ ಕಾಲೇಜುಗಳಂತೆ…
ಬೀದರ.14.ಜೂನ್.25:- ಬೀದರ ತೋಟಗಾರಿಕೆ ಮಹಾವಿದ್ಯಾಲಯ, ರಿವರ್ಡ ಯೋಜನೆ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಬೀದರ, ರಾಷ್ಟ್ರೀಯ ಪರೀಕ್ಷೆ ಮತ್ತು ಅಂಶಶೋಧನಾ ಪ್ರಯೋಗಾಲಯಗಳ…
ಬೀದರ.14.ಜೂನ್.25:-ದಿನಾಂಕ: 15-06-2025 ರಿಂದ 17-06-2025 ರವರೆಗೆ ಸಿ.ಆರ್.ಪಿ/ಬಿ.ಆರ್.ಪಿ/ಇ.ಸಿ.ಓ/ತಾಂತ್ರಿಕ ಸಹಾಯಕರು ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳಿಗೆ ಹಾಗೂ ಗ್ರೂಪ್-ಬಿ ವೃಂದದ ಸಮನಾಂತರ…
ಹೊಸ ದೆಹಲಿ.14.ಜೂನ್.25:- UGC NET 2025 ಪರೀಕ್ಷೆಯನ್ನು ಜೂನ್ 25 ರಿಂದ ಜೂನ್ 29, 2025 ರವರೆಗೆ ದೇಶಾದ್ಯಂತ ವಿವಿಧ…
ಕೊಪ್ಪಳ. ಜೂನ್. 14.( ಕರ್ನಾಟಕ ವಾರ್ತೆ):- ಕಾನೂನು. ನ್ಯಾಯ. ಮಾನವ ಹಕ್ಕುಗಳು. ಸಂಸದೀಯ ವ್ಯವಹಾರ. ಶಾಸನ ರಚನೆ ಹಾಗೂ ಪ್ರವಾಸೋದ್ಯಮ…