ಬೀದಿ ಬದಿ ವ್ಯಾಪಾರಿಗಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ

ಬೀದರ.28.ಜೂನ್.25:- ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳು, ಜುಸ್ ಸೆಂಟರ್, ಚಿಕನ್ ಮತ್ತು ಕಬಾಬ್ ಸೆಂಟರ್, ಟಿ ಅಂಗಡಿಗಳು, ಜಿಲೇಬಿ ತಯಾರಕರು, ಚೈನಿಸ್ ಫಾಸ್ಟ ಪುಡ್, ಟೀಫಿನ್ ಸೆಂಟರ್, ಚಾರ್ಟ ಭಂಡಾರ್‍ಗಳ ಇತರೆ ಆಹಾರ ಪದಾರ್ಥಗಳ ಮಾರಾಟಗಾರರಲ್ಲಿ ಆಹಾರದ ತಯಾರಿಕೆ ಮತ್ತು ವಿತರಣೆಯಲ್ಲಿನ ಶುಚಿತ್ವ, ನೈರ್ಮಲ್ಯತೆ ಹಾಗೂ ಗುಣಮಟ್ಟ ಕಾಪಾಡಬೇಕೆಂದು ಜಿಲ್ಲಾ ಅಂಕಿತ ಅಧಿಕಾರಿ ಡಾ.ಸಂತೋಷ ತಿಳಿಸಿದರು.


ಅವರಿಂದು ಆಹಾರ ಸುರಕ್ಷತೆ ಮತ್ತು ಔಷದ ಆಡಳಿತ, ಆಯುಕ್ತರು ಬೆಂಗಳೂರು ಇವರ ಆದೇಶದ ಮೇರೆಗೆ ವಿಶೇಷ ಆಂದೋಲವನ್ನು ಹಮ್ಮಿಕೊಂಡು ಬೀದಿ ಬದಿ ವ್ಯಾಪಾರಸ್ಥರಿಗೆ ಅರಿವು ಮೂಡಿಸಲಾಗುತ್ತಿದೆಂದರು. 


ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮ 2011ರನ್ವಯ ಆಹಾರದ ತಯಾರಿಕೆ ಮತ್ತು ವಿತರಣೆಯಲ್ಲಿನ ಶುಚಿತ್ವ, ನೈರ್ಮಲ್ಯತೆ ಹಾಗೂ ಗುಣಮಟ್ಟ ಕುರಿತು ಅರಿವು ಮೂಡಿಸುವುದು ಮತ್ತು ತಾಲೂಕಾ ಮಟ್ಟದಲ್ಲಿ ಶಿಬಿರಗಳನ್ನು ಏರ್ಪಡಿಸುವುದರ ಮುಖಾಂತರ ಆಹಾರ ಸುರಕ್ಷತೆ ಮತ್ತು ಔಷದ ಆಡಳಿತದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಉಚಿತವಾಗಿ 50 ನೋಂದಣಿ ಮಾಡಿಸುವುದು. (ನೋಂದಣಿಗೆ 100 ರೂ. ಪರವಾನಿಗೆಗೆ 2000 & ತಯಾರಕರಿಗೆ 3000 ರೂ ಮಾತ್ರ) ಪರವಾನಿಗೆ ಹಾಗೂ ನೋಂದಣಿ ಮಾಡಿಸಲು ಬ್ರೋಕರ ಅಥವಾ ಅಧಿಕಾರಿಗಳನ್ನು ಹಣ ನೀಡದೆ ತಾವೆ ಆನ್ ಲೈನ ಮುಂಖಾಂತರ ಪಡೆದುಕೋಳ್ಳಿ ಎಂದು ತೀಳಿಸಲಾಗಿದೆ ಹಾಗೂ ಸ್ವಚ್ಛೆತೆಯನ್ನು ಕಾಪಾಡುವುದು ಅಡುಗೆ ತಯಾರಕರ ವೈದ್ಯಕಿಯ ಪ್ರಮಾಣ ಪತ್ರ ಮತ್ತು ಡ್ರೆಸ್ ಕೋಡ ಹ್ಯಾಂಡ ಗ್ಲೋಸ್, ಕ್ಯಾಪಗಳನ್ನು ಕಡ್ಡಾಯವಾಗಿ ಬಳಕೆ ಮಾಡಲು ತಿಳಿಸಿದರು. 


ಅದೇ ರೀತಿ ಬೀದರ ಜಿಲ್ಲೆಯ ಇಂದು ಎಲ್ಲಾ ತಾಲೂಕುಗಳಿಂದ ಓಟ್ಟು 70 ಬೀದಿ ಬದಿ ವ್ಯಾಪಾರಿಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

prajaprabhat

Recent Posts

ಜುಲೈ.2 ರಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರುಗಳ ಬೀದರ ಜಿಲ್ಲಾ ಪ್ರವಾಸ

ಬೀದರ.28.ಜೂನ್.25:- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರುಗಳಾದ ಶಶಿಧರ್ ಕೋಸಂಬೆ, ಶೇಖರ್‌ಗೌಡ ಜಿ.ರಾಮತ್ನಾಳ್ ಹಾಗೂ ಡಾ.ತಿಪ್ಪೇಸ್ವಾಮಿ ಕೆ.ಟಿ.…

5 hours ago

ಕಾಣೆಯಾದ ವ್ಯಕ್ತಿ ಪತ್ತೆಗಾಗಿ ಮನವಿ

ಬೀದರ.28.ಜೂನ್.25:- ಬೀದರನ ಮುಲ್ತಾನಿ ಕಾಲೋನಿಯ ನಿವಾಸಿಯಾದ ಶೇಖ ಅಜಿರೋದ್ದಿನ್ ತಂದೆ ಶೇಖ ಬೂಲಬುಲ (25) ಇತನು ದಿನಾಂಕ:27-05-2025 ರಂದು ಮನೆಯಿಂದ…

5 hours ago

ಭಾರತ ಸಂಸ್ಕೃತಿಯಲ್ಲಿ ಮಾದಕ ವಸ್ತುಗಳಿಗೆ ನೆಲೆಯಿಲ್ಲ-ಎಂ.ಎಸ್.ಶ್ರೀಧರ್

ಬೀದರ.28.ಜೂನ್.25:- ಭಾರತ ಸಂಸ್ಕೃತಿಯಲ್ಲಿ ಮಾದಕ ವಸ್ತುಗಳಿಗೆ ನೆಲೆಯಿಲ್ಲ ಆದರು ನಮ್ಮ ಈಗಿನ ಯುವ ಪಿಳಿಗೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಇದರಿಂದ…

5 hours ago

ಜಿಲ್ಲೆಯಲ್ಲಿ ನೈಸರ್ಗಿಕ ಕೃಷಿ ಅಭಿಯಾನ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ

ಬೀದರ.28.ಜೂನ್.25:-ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಕೃಷಿ ಕ್ಷೇತ್ರವು ಕಲುಷಿತಗೊಂಡಿರುತ್ತದೆ ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ನೈಸರ್ಗಿಕ…

5 hours ago

ಸ್ವಚ್ಛಂದ ಜೀವನ ನಡೆಸಲು ನಮ್ಮ ಸಂವಿಧಾನದಲ್ಲಿ ಕಾನೂನು ರಚಿಸಲಾಗಿದೆ-ನ್ಯಾ.ಪ್ರಕಾಶ ಬನಸೋಡೆ

ಬೀದರ.28.ಜೂನ್.25:- ಹುಟ್ಟುವ ಮಗುವಿನಿಂದ ಸಾಯುವ ವಯೋವೃದ್ಧದವರೆಗೂ ಸ್ವಚ್ಚಂದ ಜೀವನ ನಡೆಸಲು ನಮ್ಮ ಸಂವಿಧಾನದಲ್ಲಿ ಕಾನೂನು ರಚಿಸಲಾಗಿದೆ ಎಂದು ಹಿರಿಯ ಸಿವಿಲ್…

5 hours ago

ಕರ್ನಾಟಕ ಸಾಹಿತ್ಯ ಅಕಾಡೆಮಿ: ಅರ್ಜಿ ಆಹ್ವಾನ

ಬೀದರ.28ಜೂನ್.25:- ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿ ದಲಿತ ಸಾಹಿತ್ಯ: ಅರ್ಧಶತಮಾನ ಎಂಬ ಹೆಸರಿನಲ್ಲಿ 3 ದಿನಗಳ ಅಧ್ಯಯನ…

5 hours ago