ಬೀದರ | ಪ್ರತಿಯೊಬ್ಬ ರೈತರು ಐದು ಗಿಡ ಮರಗಳನ್ನು ಬೆಳೆಸುವಂತೆ ಸಿದ್ರಾಮಯ್ಯ ಸ್ವಾಮಿ ಕರೆ.!

ಬೀದರ.10.ಏಪ್ರಿಲ್.25:- ಪ್ರತಿಯೊಬ್ಬ ರೈತರು ಸರ್ಕಾರದಿಂದ ನೀಡುವ ಸಬ್ಸಡಿ ದರದಲ್ಲಿ ಬೀಜ, ಗೊಬ್ಬರ ಹಾಗೂ ಯಂತ್ರೋಪಕರಣಗಳು ಪಡೆಯುವ ಸಂದರ್ಭದಲ್ಲಿ ರೈತರು ಐದು ಗಿಡಗಳು (ಮಾವು, ನೆಲ್ಲೆಕಾಯಿ, ಬೇವಿನ, ಸಪೋಟಾ ಜಾಪುಳ) ಹಾಗೂ ಸುತ್ತಮುತ್ತ ಇತರೆ ಮರ ಗೀಡಗಳನ್ನು ಬೆಳೆಸಬೇಕೆಂದು ಬೀದರ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸಿದ್ರಾಮಯ್ಯಾ ಎಸ್.ಸ್ವಾಮಿ ಕರೆ ನೀಡಿದರು.


ಅವರು ಬೀದರ ಸಹಾಯಕ ಕೃಷಿನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಹಾಗೂ ಮುಂಗಾರು ಹಂಗಾಮಿನ ಸಿದ್ಧತೆ ಕುರಿತು ಕರೆದಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶೇ಼ಷವಾಗಿ ಸಿರಿಧಾನ್ಯ ಬೆಳೆಯಲು ಹಾಗೂ ಅದರ ಮಹತ್ವದ ಬಗ್ಗೆ ಸರಕಾರದ ಯೋಜನೆಯ ಸದುಪಯೋಗವನ್ನು ಜಿಲ್ಲೆಯ ರೈತಬಾಂಧವರು ಪಡೆದುಕೊಳ್ಳಬೇಕೆಂದರು.


ಬೀದರ ಸಹಾಯಕ ಕೃಷಿ ನಿರ್ದೇಶಕರಾದ ಅನ್ಸಾರಿ ಎಮ್.ಎ.ಕೆ ಅವರು ಕೃಷಿ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳು ಹಾಗೂ ಕೃಷಿ ಭಾಗ್ಯ ಯೋಜನೆಯ ಕೃಷಿ ಹೊಂಡಗಳ ಪ್ರಚಾರ ಮಾಡಿ ರೈತರಿಗೆ ಪ್ರಯೋಜನೆ ಪಡೆಯುವಂತಾಗಬೇಕು. ಸರ್ಕಾರದ ಸಹಾಯ ಧನ ದಲ್ಲಿ ದೊರೆಯುವ ತುಂತುರು ನೀರಾವರಿ ಘಟಕ, ಕೃಷಿ ಯಾಂತ್ರಿಕರಣ, ಸಮಗ್ರ ಕೃಷಿ ಪದ್ದತಿ, ಬಿತ್ತನೆ ಬೀಜದ ಕುರಿತು ಸಭೆಗೆ ಮಾಹಿತಿ ನೀಡಿದರು.


ತೋಟಗಾರಿಕೆ ಇಲಾಖೆಯಿಂದ ಆರ್.ಕೆ.ವಿ.ವೈ ಯೋಜನೆಯಡಿ ಕೃಷಿಕ್ ಯಾಂತ್ರಿಕರಣ ಶೇಖರಣ ಘಟಕಗಳು ಹಾಗೂ ಎನ್.ಎಚ್.ಎಮ್ ಯೋಜನೆಯಡಿ ಪ್ಯಾಕ್‌ಹೌಸ್, ಸೋಲಾರ ಘಟಕಗಳ ವಿವರವಾದ ಮಾಹಿತಿಯನ್ನು ಸಹಾಯಕ ತೋಟಗಾರಿಕೆ ಅಧಿಕಾರಿ ಸೇವಂತಿ ನೀಡಿದರು. ಹಾಗೂ ತಾಲ್ಲೂಕಿನಲ್ಲಿ 95 ಎಕರೆ ರೇಷ್ಮೆ ಬೆಳೆಯಿದ್ದು 45 ರೈತರು ಫಲಾನುಭವಿಯಾಗಿರುತ್ತಾರೆ. ರೇಷ್ಮೆ ಹುಳು ಸಾಕಾಣಿಕೆ ಸಮಾನ್ಯ ವರ್ಗದ ರೈತರಿಗೆ 75% ಮತ್ತು ಪ.ಜಾತಿ/ಪ.ಪಂಗಡ ರೈತರಿಗೆ 90% ರಂತೆ ಸಹಾಯಧನ ದೊರೆಯುವ ಮಾಹಿತಿಯನ್ನು ರೇಷ್ಮೆ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಕಿರಣಕುಮಾರ ನೀಡಿದರು,
 ಮೀನುಗಾರಿಕೆ ಇಲಾಖೆಯ ಕೃಷಿ ನಿರ್ದೇಶಕರಾದ ರೇಹಮಾನ್ ಮಾತನಾಡಿ, ತಾಲ್ಲೂಕಿನಲ್ಲಿ 28 ಕೆರೆಗಳಿದ್ದು, ಟೆಂಡರ್ ಮತ್ತು ಸಂಸ್ಥೆಗಳ ಮೂಲಕ ಹರಾಜು ಮಾಡಲಾಗಿದೆ, ಮೀನುಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳಾದ ಮೀನುಬಲೆ ಮೀನು ಹೊಂಡದ ಸದುಪಯೋಗ ಪಡೆದುಕೋಳ್ಳಬೇಕೆಂದರು. ಪಶು ಇಲಾಖೆಯಿಂದ ಪ್ರತಿ ವರ್ಷದಲ್ಲಿ ಎರಡು ಬಾರಿಯಂತೆ ಕಾಲು ಬಾಯಿ ರೋಗದ ಲಸಿಕೆ ನೀಡಲಾಗುತ್ತಿದೆಯೆಂದರು. ಹಾಗೂ ಪಶು ಇಲಾಖೆಯಿಂದ ಕೌ-ಮ್ಯಾಟ್, ಚಾಫ್ ಕಟರ್‌ಗಳನ್ನು ಸಹಾಯಧನದಲ್ಲಿ ವಿತರಿಸುವ ಮಾಹಿತಿಯನ್ನು ನೀಡಿದರು.


 ಕೃಷಿ ಸಂಶೋಧನ ಕೇಂದ್ರದ ಮುಖ್ಯಸ್ಥರಾದ ಡಾ. ಭವಾನಿ ಸಿರಿಧಾನ್ಯ ಬೆಳೆಗಳ ಮಹತ್ವದ ಅರಿವು, ಅವುಗಳ ಸೇವನೆಯಿಂದ ಆರೋಗ್ಯದ ವೃದ್ದಿ ಹಾಗೂ ದೈನಂದಿನ ಉಪಹಾರದಲ್ಲಿ ಸಿರಿಧಾನ್ಯ ಬೆಳೆಗಳ ಬಳಕೆಯ ಕುರಿತು ತಿಳಿಸಿದರು.


ಈ ಸಭೆಯಲ್ಲಿ ಸಂಜುಕುಮಾರ ಶರಣಪ್ಪಾ ಖಜಾಂಚಿ, ದಯಾನಂದ ಸ್ವಾಮಿ ಜಿಲ್ಲಾ ಪ್ರತಿ ನಿಧಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಮನ್ಮಥಸ್ವಾಮಿ, ನಂದಕುಮಾರ ಪಾಟೀಲ್, ವೈಜಿನಾಥ ಭುಯ್ಯಾ, ನಾಗಯ್ಯಾ ಸ್ವಾಮಿ, ಮಹಾದೇವ ಸ್ವಾಮಿ, ಅಶೋಕ್ ಬಿರಾದಾರ ಮತ್ತು ನಾಗಯ್ಯಾ ಹೀರೆಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

prajaprabhat

Recent Posts

ನಮ್ಮ ಭಾಷೆಯ ಸೊಗಡ ಅಮೂಲ್ಯವಾಗಿದೆ ಸಾಹಿತಿ ಕೋಡಿ ಉಗನೆ ಮಂಜು.

ಯಳಂದೂರು.13.ಜೂನ್.25:- ಪಟ್ಟಣದ  ಅಂಬೇಡ್ಕರ್ ಭವನದ ಮುಂಭಾಗ ಬುದ್ಧ ಪ್ರಿಯ ಅಶೋಕ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿವೃತ್ತಿ ಪದವಿ ಪೂರ್ವ ಶಿಕ್ಷಣ…

1 hour ago

ಕರ್ನಾಟಕ ‘SSLC’ ಪರೀಕ್ಷೆ -2 ರ ಫಲಿತಾಂಶ ಪ್ರಕಟ, ರಿಸಲ್ಟ್ ಈ ರೀತಿ ಚೆಕ್ ಮಾಡಿ |Karnataka SSLC Exam-2 result

ಬೆಂಗಳೂರು.13.ಜೂನ್.25:- ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ -2 ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಈ ರೀತಿಯಾಗಿ ಫಲಿತಾಂಶ ಚೆಕ್…

2 hours ago

ಆಶಾ ಮಾರ್ಗದರ್ಶಕರ (ASHA Mentors) ಹುದ್ದೆಗಳು ಅಗತ್ಯವಿಲ್ಲವೆಂದು ‘ಕರ್ತವ್ಯದಿಂದ ಮುಕ್ತ’ಗೊಳಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು.13.ಜೂನ್.25:- ರಾಜ್ಯದ ಆರೋಗ್ಯ ಇಲಾಖೆಯಲ್ಲಿ NHM ಅಡಿಯಲ್ಲಿ ನೇಮಕಗೊಂಡ ಆಶಾ ಮೆಂಟರ್ಸ್ ಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 2007-08ನೇ…

3 hours ago

ಬೆಂಗಳೂರಿನಿಂದ ಬೀದರ್‌ಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ: ಕಲ್ಯಾಣ ಕರ್ನಾಟಕದ ಜನತೆಗೆ ಹೊಸ ಸಂಪರ್ಕದ ನೂತನ

ಬೆಂಗಳೂರು.13.ಜೂನ್.25:- ಬೀದರ್ ಬೆಂಗಳೂರು ಮತ್ತೊಂದು ವಿಶೇಷ ಟ್ರೈನ್ ಇದೇ 15 ಜೂನ್ ರಿಂದ ಪ್ರಾರಂಭ ಆಗ್ತಿದೆ. ಈ ಟ್ರೈನ್ ಕರ್ನಾಟಕದ…

4 hours ago

ರಾಜ್ಯಾದ್ಯಂತ ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು.13.ಜೂನ್ .25:- ರಾಜ್ಯ ಸರ್ಕಾರಿ ನೌಕರರಿಗೆ 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯಾದ್ಯಂತ ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ…

4 hours ago

ಅತಿಥಿ ಶಿಕ್ಷಕರ ನೇಮಕಾತಿಗೆ ವಾಕ್ ಇನ್ ಇಂಟರ್ವ್ಯೂ.

ಬಳ್ಳಾರಿ.13.ಜೂನ್.25:- ರಾಜ್ಯದಲ್ಲಿ ಏಕಲವ್ಯ ಮಾದರಿ ಸ್ಕೂಲ್ ಗಳಲ್ಲಿ ಬೇಕಾಗಿರುವ ಶೀಕ್ಷಕರ ಹುದ್ದೆಗಳು ತಾಲ್ಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ…

4 hours ago