ಬೀದರ ತಾಲ್ಲೂಕಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಮನೋಹರ ದಂಡೆ ನೇಮಕ

ಬೀದರ್.21.ಮೇ.25:- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೀದರ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಮನೋಹರ ದಂಡೆ ಅವರನ್ನು ನೇಮಕ ಮಾಡಲಾಗಿದೆ.


ಮಹಾಸಭಾದ ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾದ ನರಸಿಂಹ ದಿಕ್ಷಿತ್, ಸುಧಾಕರರಾವ ಪಾಟೀಲ, ಕೇಶವರಾವ ತಳಘಟಕರ  ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ ಹುಮನಾಬಾದ್  ಹಾಗೂ ಜಿಲ್ಲೇಯ ಎಲ್ಲಾ ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರ ಸಮ್ಮುಖದಲ್ಲಿ ಎಲ್ಲರ ಸಮ್ಮತಿಯ ಮೇರೆಗೆ ದಂಡೆ ಅವರನ್ನು ರವಿವಾರದಂದು ಬೀದರ ನಗರದ ರಾಘವೇಂದ್ರ ಮಠದಲ್ಲಿ ನಡೆದ ಜಿಲ್ಲಾ ಸಭೆಯಲ್ಲಿ ನೇಮಕ ಮಾಡಲಾಯಿತು.

ಇದೇ ಸಂಧರ್ಭದಲ್ಲಿ ಮಾತನಾಡಿದ ವೆಂಕಟೇಶ ಕುಲಕರ್ಣಿ ಅವರು  ಇಗಾಗಲೇ ಭಾಲ್ಕಿ, ಚಿಟಗುಪ್ಪ ಹಾಗೂ ಬಸವಕಲ್ಯಾಣದಲ್ಲಿ ತಾಲ್ಲೂಕಾ ಘಟಕ ರಚನೆಯಾಗಿದ್ದು ಇಂದು ಬೀದರನಲ್ಲಿ ಕೂಡಾ ತಾಲ್ಲೂಕಾ ಘಟಕ ರಚನೆಯಾಗುತ್ತಿದ್ದು ಎಲ್ಲರು ಸೇರಿ ಬ್ರಾಹ್ಮಣರ ಸಂಘಟನೆ ಮಾಡಿ ಒಗ್ಗಟಾಗಿ ಕೆಲಸ ಮಾಡೋಣ ಎಂದ ಅವರು ಜಿಲ್ಲೇಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡಿ ರಾಜ್ಯ ಸಂಘವನ್ನು ಬಲಿಷ್ಟ ಮಾಡೋಣ ಅಲ್ಲದೇ ಶೀಘ್ರದಲಿಯೇ ರಾಜ್ಯ ಅಧ್ಯಕ್ಷರನ್ನು ಬೀದರಗೆ ಕರೆಯಿಸಿ ಜಿಲ್ಲಾ ಕಛೇರಿಯನ್ನು ಉದ್ಘಾಟನೆ ಮಾಡೋಣ ಎಂದರು. 

ಇದೇ ಸಮಯದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಂತರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ  ಬೀದರ  ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ನೇಮಕರಾದ ಮನೋಹರ ದಂಡೆ  ಮಾತನಾಡಿ ಎಲ್ಲರು ಸೇರಿ ನನ್ನ ಮೇಲೆ ವಿಶ್ವಾಸ ವಿಟ್ಟು ತಾಲ್ಲುಕಾ ಅಧ್ಯಕ್ಷರಾಗಿ ನೇಮಕ ಮಾಡಿದಕ್ಕೆ ದನ್ಯವಾದ ತಿಳಿಸಿದ ದಂಡೆ ಅವರು ಈ ಮೊದಲು ಕೂಡಾ ನಾನು ಸಮಾಜದ ಒಗ್ಗಟ್ಟಿಗಾಗಿ ಕೆಲಸ ಮಾಡಿದ್ದನೆ ಈಗ ನನ್ನನ್ನು ಅಧ್ಯಕ್ಷ ಮಾಡಿ ನನ್ನ ಜವಾಬ್ದಾರಿ ಹೆಚ್ಚಿಸಿದ್ದಿರಿ  ನಾನು ಅಧ್ಯಕ್ಷ ಪದವಿ ಎನ್ನದೆ  ಇದು ನನ್ನ ಕರ್ತವ್ಯ ಎಂದು ತಿಳಿದು ಸಮಾಜದ ಪರ ನಿರಂತರವಾಗಿ ಕೆಲಸ ಮಾಡುತ್ತೆನೆ ಅದಕ್ಕೆ ಸಮಾಜದ ಹಿರಿಯರ ಸಲಹೆ ಹಾಗೂ ಮಾರ್ಗದರ್ಶನ ಹಾಗೂ ಯುವಕ ಸಹಕಾರ ಬೇಕು ಎಂದು ಮನವಿ ಮಾಡಿದರು.

ಇದೇ ಸಂಧರ್ಭದಲ್ಲಿ ರಾಜೇಶ ಕುಲಕರ್ಣಿ ಪ್ರಾಸ್ತವಿಕವಾಗಿ ಮಾತನಾಡಿದರು ನಂತರ ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾದ ನರಸಿಂಹ ದಿಕ್ಷಿತ್, ಸುಧಾಕರರಾವ ಪಾಟೀಲ, ಕೇಶವರಾವ ತಳಘಟಕg ಮಾತನಾಡಿದರು. ನೂತನವಾಗಿ ಆಯ್ಜೆಯಾದ ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಲಾಯಿತು  ನಂತರ ತಾಲ್ಲೂಕಾ ಘಟಕ ರಚನೆ ಮಾಡಿ ತಾಲ್ಲುಕಾ  ಅಧ್ಯಕ್ಷ ಹಾಗೂ ಪಧಾಧಿಕಾರಿಗಳ ಹೆಸರನ್ನು ಘೋಷಿಸಿ ಅವರನ್ನು ಕೂಡಾ ಸನ್ಮಾನಿಸಿಲಾಯಿತು. ಬಂದತಹ ಎಲ್ಲರನ್ನು ರಾಮರಾವ ಕುಲಕರ್ಣಿ ಶೆಂಬಳ್ಳಿ ಸ್ವಾಗತಿಸಿದರೆ ಪ್ರಭಾಕರ ಕಾರಾಮಂಗಿ ವಂದಿಸಿದರು.

ಕಾರ್ಯಕ್ರಮಕ್ಕು ಮೊದಲು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಬಲಿ ಪಡೆದಿದ್ದರ ವಿರುದ್ದ್ ಖಂಡಿಸಿ ಮೃತರ ಆತ್ಮಕ್ಕೇ ಶಾಂತಿ ಸಿಗಲಿ ಎಂದು ಎರಡು ನಿಮಿಷo ಮೌನಾಚರಣೆ ಮಾಡಲಾಯಿತು. 

ಈ ಸಭೆಯಲ್ಲಿ ಬೀಮಶೇನರಾವ ಕನ್ನಿಹಾಳ, ವೆಂಕಟರಾವ ಕುಲಕರ್ಣಿ ಪ್ರಭಾಕರರಾವ ಕುಲಕರ್ಣಿ ಸೇರಿದಂತೆ ಸಮಾಜದ ಹಿರಿಯರು, ಮಹಿಳೆಯರು ಯುವಕರು ಇದ್ದರು.


ನೂತನ ಪದಾಧಿಕಾರಿಗಳ ಹೆಸರು  ಈ ಕೆಳಗಿನಂತಿವೆ ;


ಗೌರವ  ಜಿಲ್ಲಾ ಅಧ್ಯಕ್ಷರು : ನರಸಿಂಹ ದಿಕ್ಷಿತ್, ಸುಧಾಕರರಾವ ಪಾಟೀಲ, ಕೇಶವರಾವ ತಳಘಟಕರ


ತಾಲ್ಲೂಕಾ ಅಧ್ಯಕ್ಷ :  ಮನೋಹರ ದಂಡೆ


ಉಪಾಧ್ಯಕರು :: ಪ್ರಭಾಕರರಾವ ಕುಲಕರ್ಣಿ ಕಾರಾಮುಂಗಿ,ಕೆ ಸತ್ಯಮುರ್ತಿ,ದಿಪಕ ಮನ್ನಳ್ಳಿ, ಕೆದರ ದೆಶಪಾಂಡೆ,ಡಾ,ಮ ಮಹೇಶ ಪತ್ತಗಿ,ಉದಯಕುಮಾರ  ಜೋಶಿ
ಕಾರ್ಯದರ್ಶಿ : ರಾಮರಾವ ಕುಲಕರ್ಣಿ ಶೆಂಬಳ್ಳಿ, ಅನೀಲಕುಮಾರ ಚಿಕ್ಕಮನುರ


ಸಂಘಟನಾ ರ್ಕಾದರ್ಶಿ  : ಆನಂದ ಗೋರ್ಟಾ,ಗಿರಿಶ ಮೈಲೂರಕರ್ . ಸೌರವ ಮಂಗಲಗಿ , ಭೂಶನ್ ಪಾಠಕ್ ,ವಿಜಯ ದಿಕ್ಷಿತ್,ಗಿರಿಧರ ಜೋಷಿ, ದೇವಿದಾಸ ಜೋಷಿ


ಜಂಟಿ ಕಾರ್ಯದರ್ಶಿ : ಅರವಿಂದ ಕುಲಕರ್ಣಿ ಬಾವಗಿ,ಪ್ರವೀನ ಡೊಂಗೆ,ಸoಜು ಹಿಪ್ಪರಗಿ. ಸುಶೀಲ ಕುಲಕರ್ಣಿ,


ಮಾದ್ಯಮ ವಿಭಾಗ : ಸುನೀಲ ಕುಲಕರ್ಣಿ ಮರಕುಂದಾ
ಖಜಾoಚಿ : ದಿನಕರರಾವ ಕುಲಕರ್ಣಿ


ತಾಲ್ಲೂಕಾ ನಿರ್ದೇಶಕರು : ವೆಂಕಟೇಶ ಕುಲಕರ್ಣಿ, ಪ್ರವಿನ ಜೋಷಿ, ಶ್ರಿಧರ ದಿಕ್ಷಿತ್ ಉತ್ತಮ ದಿಕ್ಷಿತ,ಮಾಣಿಕ ,ಗೋಪಾಲರಾವ, ಹಣಮಂತ, ರಿತಿಕ , ವಿಜಯಕುಮಾರ,ಪ್ರಭಾಕರ ಕುಲಕರ್ಣಿ, ರಾಕೇಶ,ರಾಘವೇಂದ್ರ, ಧನಂಜಯ, ಕಲ್ಯಾಣರಾವ, ಭೀಮಸೇನರಾವ ಕನ್ನಿಹಾಳ,ಕಿಶೋರ, ರಮೇಶ, ಶ್ರಿನಿವಾಸ,ಮಾಣಿಕರಾವ, ರಘುನಾಥರಾವ,ಚಂದ್ರಕಾoತ ಪಾಟೀಲ,


ಮಹಿಳಾ ಘಟಕ  ಅಧ್ಯಕ್ : ಪ್ರಮೋದಿನಿ ಕುಲಕರ್ಣಿ


ಮಹಿಳಾ ಉಪಾಧ್ಯಕ್ಷರು : ರೇಖಾ ಕುಲಕರ್ಣಿ, ಪ್ರಸನ್ನಲಕ್ಷಿö್ಮ ದೆಶಪಾಂಡೆ,ರೇಖಾ, ಪದ್ಮಜಾ,ಅಂಜನಾ ಕುಲಕರ್ಣಿ , ನೀರೋಜಾ ಕುಲಕರ್ಣಿ

prajaprabhat

Recent Posts

ವಿದ್ಯಾರ್ಥಿ ವೇತನ ಕೈಪಿಡಿ: ಮಿರೇ ಅಸೆಟ್ ಫೌಂಡೇಷನ್‌

ಮಿರೇ ಅಸೆಟ್ ಫೌಂಡೇಷನ್‌ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…

7 hours ago

AllA ಅವರ “ಯೋಗ ಸಮಾವೇಶ” ಕಾರ್ಯಾಗಾರ ಇಂದು ಪ್ರಾರಂಭವಾಗಿದೆ

ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…

8 hours ago

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

8 hours ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

8 hours ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

8 hours ago

ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆ’ ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…

11 hours ago