ಬೀದರ | ಐದನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ:

ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಸರಿಯಾದ ರೀತಿಯಲ್ಲಿ
ದೊರೆತರೆ ಅವರು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ-ರಮೇಶ ಪಾಟೀಲ್

ಬೀದರ.23.ಮಾರ್ಚ.25: – ಮಕ್ಕಳಿಗೆ ಬುನಾದಿ ಶಿಕ್ಷಣ ಉತ್ತಮವಾಗಿ ದೊರೆಬೇಕಾದದ್ದು ಬಹಳ ಮುಖ್ಯ, ಅಂತಹ ಉತ್ತಮ ಶಿಕ್ಷಣವನ್ನು ಖಾಸಗಿ ಶಾಲೆಗಿಂತ ಗುಣಮಟ್ಟದ ರೀತಿಯಲ್ಲಿ ನಮ್ಮ ಸರ್ಕಾರಿ ಶಾಲೆಗಳು ನೀಡುತ್ತವೆ. ಶಿಕ್ಷಣ ತಜ್ಞರಾದ ಗುರುರಾಜ ಕರ್ಜಗಿ ಸಹ ಬುನಾದಿ ಶಿಕ್ಷಣವು ಸರ್ಕಾರಿ ಶಾಲೆಗಳಲ್ಲಿ ಉತ್ತಮವಾಗಿರುತ್ತದೆ ಎಂದು ಹೇಳುತ್ತಾರೆ. ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಸರಿಯಾದ ರೀತಿಯಲ್ಲಿ ದೊರೆತರೆ ಅವರು ಜೀವನದಲ್ಲಿ ಯಶಸ್ವಿಯಾಗಲು ಸಹಕಾರಿಯಾಗುತ್ತದೆ. ಇಲ್ಲಿಂದ ಶಿಕ್ಷಣ ಪಡೆದು ಸಾಗುತ್ತಿರುವ ಮಕ್ಕಳು ಉನ್ನತ ಹುದ್ದೆಗೆ ಏರಲಿ ಈ ಗ್ರಾಮದ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಲಿ ಎಂದು ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ ಹೇಳಿದರು.

ಅವರು ಶನಿವಾರ ಸೋಲಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಶಾಲಾ ವಾರ್ಷಿಕೋತ್ಸವ ಹಾಗೂ 5ನೇ ತರಗತಿ ವಿದ್ಯಾರ್ಥಿಗಳಿ ಬಿಳ್ಕೋಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಈ ಶಾಲೆಯ ಮುಖ್ಯ ಗುರುಗಳು ಹಾಗೂ ಹಾಗೂ ಶಿಕ್ಷಕರು ಹಗಲಿರುಳು ಶ್ರಮಿಸಿ ಮಕ್ಕಳ ಸಂಖ್ಯೆಯನ್ನು 24 ನಿಂದ 64 ಕ್ಕೆ ಏರಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೆನೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕು ಎನ್ನುವ ಸುದ್ದಿ ಹರಿದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಇವರು ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ.

ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗೆ ಸೇರಿಸಬೇಕು. ನಾನು ಸಹ ಮೂರನೇ ತರಗತಿಯವರೆಗೆ ಇದೇ ಶಾಲೆಯಲ್ಲಿ ಓದಿದ್ದೇನೆ.

ನನ್ನ ಬೆಳವಣಿಗೆಗೆ ಈ ಶಾಲೆಯ ಕೋಡುಗೆ ಅಪಾರ ಇದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಈ ಶಾಲೆಯನ್ನು ಕಿರಿಯ ಪ್ರಾಥಮಿಕ ಹಂತದಿoದ ಹಿರಿಯ ಪ್ರಾಥಮಿಕ ಹಂತಕ್ಕೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ವಾರ್ತಾ ಸಹಾಯಕರಾದ ವಿಜಯಕೃಷ್ಣ ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಯುಗ, ಯಾವುದು ಕೂಡ ಸುಲಭವಾಗಿ ಸಿಗಲ್ಲ, ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರೆ ಸ್ಪರ್ಧೆಗೆ ಇಳಿಯಬೇಕು. ಮಕ್ಕಳು ಭವಿಷ್ಯದಲ್ಲಿ ಯಶಸ್ವಿಯಾಗಲು ತಳಮಟ್ಟದಿಂದ ಶಿಕ್ಷಣದ ಬಗ್ಗೆ ಅರಿವು ಮೂಡಿಸಿಕೊಂಡು ಆಟದೊಂದಿಗೆ ಪಾಠ ಮಾಡಿಕೊಂಡು ಕಲಿತರೆ ಮುಂದೆ ಉನ್ನತ ಹುದ್ದೆಗೆ ಏರಬಹುದು. ನಮ್ಮ ಗ್ರಾಮದಲ್ಲೇ ಶಿಕ್ಷಣ ಪಡೆದವರು ಈಗಾಗಲೇ ನಾಲ್ಕೆöÊದು ಜನ ಡಾಕ್ಟರ್ ಇದ್ದಾರೆ. ಖಾಸಗಿ ಶಾಲೆಗಿಂತ ನಮ್ಮ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಉತ್ತಮವಾಗಿ ಸಿಗುತ್ತದೆ. ನಮ್ಮ ಮಕ್ಕಳು ಚುರುಕಾಗಿದ್ದಾರೆ.

ಆದರೆ ಮಕ್ಕಳಿಗೆ ಇಂಗ್ಲೀಷ ಶಿಕ್ಷಣದ ಕೊರತೆ ಇದೆ. ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಇಂಗ್ಲೀಷ ಕಲಿಕೆಯಾಗಬೇಕು. ಈಗಾಗಲೇ ಕೆಕೆಆರ್‌ಡಿಬಿ ವತಿಯಿಂದ ಕೆಲವು ಶಾಲೆಗಳಲ್ಲಿ ವಿಶೇಷ ಇಂಗ್ಲೀಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ನಮ್ಮ ಗ್ರಾಮದ ಮಕ್ಕಳಿಗೆ ಇಂಗ್ಲೀಷ ಭಾಷಯ ಶಿಕ್ಷಣ ದೋರೆಯಬೇಕು. . ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಇದರಿಂದ ನಿಮಗೆ ಜ್ಞಾನ ದೊರೆಯುತ್ತದೆ. ಇದು ಮುಂದೆ ನಿಮಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅವರು ಶಾಲೆಗೆ ಹತ್ತು ಸಾವಿರ ರೂಪಾಯಿ ದೇಣಿಗೆ ನೀಡಿದರು.

ಗಾದಗಿ ಗ್ರಾಮ ಪಂಚಾಯತ ಅಧ್ಯಕ್ಷ ಪ್ರಕಾಶ ಖಿಂಡಿ ಮಾತನಾಡಿ, ನಮ್ಮ ಶಾಲೆಯ ಮಕ್ಕಳು ಬಹಳ ಚುರುಕಾಗಿದ್ದಾರೆ ಇದರ ಕಾಣಿಕೆಯನ್ನು ಇಲ್ಲಿನ ಶಿಕ್ಷಕರಿಗೆ ಸಲ್ಲುತ್ತದೆ. ಮಕ್ಕಳು ಶೀಲೆಗಳಿದಂತೆ ಅವುಗಳನ್ನು ಮೂರ್ತಿಯಾಗಿ ರೂಪಿಸಿ, ಶಕ್ತಿ ತುಂಬವ ಕೆಲಸ ಇಲ್ಲಿನ ಶಿಕ್ಷಕರ ವೃದ್ಧ ಮಾಡುತ್ತಿದೆ. ಅದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೆನೆ. ಪೊಷಕರು ಎಲ್ಲಾ ಹೊರೆಯನ್ನು ಶಿಕ್ಷಕರ ಮೇಲೆ ಬೀಡಬಾರದರು ತಮ್ಮ ಮಕ್ಕಳ ಕಲಿಕೆ ಬಗ್ಗೆ ನಿಗಾವಹಿಸಬೇಕು. ಖಾಸಗಿ ಶಾಲೆಗಿಂತ ಉತ್ತಮವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಇದು ಸಾಕಷ್ಟು ಖುಷಿ ತಂದಿದೆ. ತಾವು ಮಕ್ಕಳಿಗೆ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಆಗ ನಿಮಗೆ ಇಲ್ಲಿನ ಗುಣಮಟ್ಟದ ಶಿಕ್ಷಣದ ಅರಿವಾಗುತ್ತದೆ. ಉತ್ತಮ ಮಾನವಾಗಿ ರೂಪಿಸುವ ಶಕ್ತಿ ನಮ್ಮ ಸರ್ಕಾರಿ ಶಾಲೆಗೆ ಇದೆ ಎಂದರು.

ಗಾದಗಿ ಸಮೂಹ ಸಂಪನ್ಮೂಲ ವ್ಯಕ್ತಿ ಮಾಣಿಕರಾವ ಪವಾರ ಮಾತನಾಡಿ, ವರ್ಷದಲ್ಲಿ ಮಗುವಿನ ಶೈಕ್ಷಣಿಕ ಹಾಗೂ ಗುಣಾತ್ಮಕ ಬದಲಾವಣೆ ಏನು ಎಂಬುವುದನ್ನು ಪರೀಕ್ಷಿಸುವ ಹಿನ್ನೆಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಆಯೋಜನೆ ಮಾಡಲಾಗುತ್ತದೆ. ಪೋಷಕರು ಪ್ರತಿ ತಿಂಗಳು ಎಸ್.ಡಿ.ಎಂ.ಸಿಯಿoದ ಆಯೋಜನೆ ಮಾಡಲಾಗುವ ಸಭೆಯಲ್ಲಿ ಹಾಜರಾಗಿ ತಮ್ಮ ಮಕ್ಕಳ ಕಲಿಯ ಪ್ರಗತಿ ಹಂತವನ್ನು ಅರಿಯಬೇಕು. ಕೇವಲ ಅಂಕಗಳು ಬಂದರೆ ಸಾಲದು ಎಲ್ಲಾ ರೀತಿ ಮೌಲ್ಯಗಳು ಮಕ್ಕಳಿಗೆ ಬರಬೇಕು, ಅಂತಹ ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಸರ್ಕಾರಿ ಶಾಲೆ ಮಾಡುತ್ತದೆ. ಇತ್ತೀಚೆಗೆ ಮೊಬೈಲ್ ಗೀಳು ಹೆಚ್ಚಾಗಿದೆ ಇದರಿಂದ ಪೋಷಕರು ತಮ್ಮ ಮಕ್ಕಳ ಕಡೆ ಗಮನ ಹರಿಸುತ್ತಿಲ್ಲ. ಪೋಷಕರು ಮೊಬೈಲ್ ನಿಂದ ದೂರವಿದ್ದು ತಮ್ಮ ಮಕ್ಕಳ ಕಡೆಗೆ ಗಮನ ಹರಿಸಬೇಕು.

ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳು ಹಾಗೂ ಗ್ರಾಮದ ಹಿರಿಯರಾದ ಸಂಗಶೇಟ್ಟಿ ಖೇಳಗಿ, ಎಸ್.ಡಿ.ಎಂ.ಸಿ ಅಧ್ಯಕ್ಷ ತಕಾರಾಮ ಮಲ್ಕನೋರ, ಉಪಾಧ್ಯಕ್ಷ ಸುನಿತಾ ನರಸಪ್ಪಾ, ಗ್ರಾಮ ಪಂಚಾಯತ ಸದಸ್ಯರುಗಳಾದ ವೀರಶೇಟ್ಟಿ ಪಾಟೀಲ್, ದೇವಿಂದ್ರ ಜಟನೋರ, ಮಂಜುನಾಥ ಮಲ್ಕನೋರ, ಶಾಲೆಯ ಮುಖ್ಯ ಗುರುಗಳಾದ ಬೀನಾ ಕಾವಳೆ, ಸಹ ಶಿಕ್ಷಕರಾದ ಜ್ಞಾನೇಶ್ವರ ಪವಾರ, ಶಿರೋಮಣಿ, ನಿವೇದಿತಾ, ನೃತ್ಯ ಶಿಕ್ಷಕರಾದ ಗಣೇಶ ಭೈರನಳ್ಳಿ, ಗಣೇಶ ಸ್ವಾಮಿ, ಶಿವಕುಮಾರ ಶಾಪುರೆ, ಗ್ರಾಮದ ಗಣ್ಯರು, ಹಿರಯರು, ಪೊಷಕರು, ಗ್ರಾಮಸ್ಥರು, ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.

prajaprabhat

Recent Posts

2025-26 ಸಾಲಿನ ಪ್ರತಿಷ್ಠತ ಶಾಲೆಗಳಿಗೆ ಆಂಗ್ಲ ಮಧ್ಯಮದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವ ಕುರಿತು ಬೀದರ ಜಿಲ್ಲೆಯ ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ದ ದೂರು.

ಬೀದರ.16.ಜೂನ್.25:- ಈ ಮೇಲ್ಕಂಡ ವಿಷಯಕ್ಕೆ ಸಂಭಂದಿಸಿದಂತೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ದಲಿತ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಷ್ಠ ಶಿಕ್ಷೆಣ ಯೋಜನೆ ಅಡಿಯಲ್ಲಿ…

32 minutes ago

ಲಡಾಖ್‌ನ ಬೇಸಿಗೆ ಕಾರ್ನೀವಲ್ 2025 ಡ್ರಾಸ್‌ನಲ್ಲಿ ಅದ್ಧೂರಿ ಆಚರಣೆಯೊಂದಿಗೆ ಮುಕ್ತಾಯಗೊಂಡಿತು.

ಲಡಾಖ್‌ನಲ್ಲಿ, ಒಂದು ವಾರದ ಬೇಸಿಗೆ ಕಾರ್ನೀವಲ್ 2025 ಇಂದು ಡ್ರಾಸ್‌ನಲ್ಲಿರುವ ಮೇಜರ್ ವಿಶ್ವನಾಥನ್ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ಈ ತಿಂಗಳ 9…

15 hours ago

ಕಳೆದುಹೋದ, ಕಳುವಾದ ಮೊಬೈಲ್ ಫೋನ್‍ಗಳ ಬಗ್ಗೆ CEIR ಪೋರ್ಟಲ್‍ನಲ್ಲಿ ದೂರು ದಾಖಲಿಸಿ-ಎಸ್ಪಿ ಪ್ರದೀಪ ಗುಂಟಿ

ಬೀದರ.15.ಜೂನ್.25:- ಸಾರ್ವಜನಿಕರು ತಮ್ಮ ಮೊಬೈಲ್ ಪೋನ್‍ಗಳು ಕಳೆದುಹೋದ ಅಥವಾ ಕಳ್ಳತನವಾದ್ದಲ್ಲಿ ಅನ್‍ಲೈನ್ ಮೂಲಕವೇ ಕೆಎಸ್‍ಪಿ ವೆಬ್‍ಸೈಟ್‍ನಲ್ಲಿ ಹೋಗಿ e-Lost Reports…

17 hours ago

ಜೂ.15 ರಂದು ಸಮಾಜ ಕಲ್ಯಾಣ ಸಚಿವ<br>*ಡಾ.ಹೆಚ್.ಸಿ.ಮಹಾದೇವಪ್ಪ ಅವರ ಬೀದರ ಜಿಲ್ಲಾ ಪ್ರವಾಸ

ಬೀದರ.15.ಜೂನ್25:- ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಅವರು ಜೂನ್.15 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ…

18 hours ago

ಅಮೆರಿಕ ಸೇನೆಯು 250ನೇ ವಾರ್ಷಿಕೋತ್ಸವ.

ಮೆರವಣಿಗೆಯೊಂದಿಗೆ ಆಚರಿಸುತ್ತದೆ ಅಮೆರಿಕವನ್ನು ಬಲಪಡಿಸುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ. ಶನಿವಾರ ವಾಷಿಂಗ್ಟನ್, ಡಿಸಿಯಲ್ಲಿ ಯುಎಸ್ ಸೈನ್ಯವು ತನ್ನ 250 ನೇ…

20 hours ago

ಕೇಂದ್ರ ಸಚಿವ ಅಮಿತ್ ಶಾ ಅವರಿಂದ 60,000 ಕ್ಕೂ ಹೆಚ್ಚು ಹೊಸ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ನೇಮಕಾತಿ ಪತ್ರ ವಿತರಣೆ

ಇಂದು ಮಾರ್ಚ್ 31, 2026 ರ ವೇಳೆಗೆ ಭಾರತವು ನಕ್ಸಲ್ ವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ…

20 hours ago