ಬೀದರಿನಲ್ಲಿ ಇಪಿಎಸ್-೯೫ ಪಿಂಚಣಿದಾರರಿoದ ಪ್ರತಿಭಟನೆ


     ಬೀದರ.26.ಮಾರ್ಚ್25:–ಕಳೆದ ಒಂಭತ್ತು ವರ್ಷಗಳಿಂದ ೭೮ ಲಕ್ಷ ಇಪಿಎಸ್-೯೫ಪಿಂಚಣಿದಾರು ತಮ್ಮ ನ್ಯಾಯೋಚಿತ ಬೇಡಿಕೆಗಳಿಗಾಗಿ ನಿರಂತರವಾಗಿ ಹೋರಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಸಹ ಎರಡು ವರ್ಷಗಳ ಹಿಂದೆ ನೈಜ ವೇತನದ ಮೇರೆಗೆ ಹೆಚ್ಚಿನ ಪಿಂಚಣಿ ನೀಡಲು ಆದೇಶ ನೀಡಿದ್ದರೂ ಸಹ ಎಲ್ಲ ಪಿಂಚಣಿದಾರರು ಏಕೀಕೃತ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಹೆಯಾನ ಕನಿಷ್ಠ ಪಿಂಚಣಿ ೭೫೦೦ ರೂ., ತುಟ್ಟಭತ್ಯೆ ಘೋಷಣೆಯಲ್ಲಿ ಹಾಗೂ ಪಿಂಚಣಿದಾರರಿಗೆ ಉಚಿತ ವೈದ್ಯಕೀಯ ಸೌಲಭ್ಯದಲ್ಲಿ ವಿಳಂಬ ಮತ್ತು ಹೆಚ್ಚಿನ ಪಿಂಚಣಿ ಮಂಜೂರಾತಿಯಲ್ಲಿ ಇಪಿಎಫ್‌ಓ ತೋರುತ್ತಿರುವ ವಿಳಂಬ ನೀತಿ ಮತ್ತು ನಿಷ್ಕಿçÃಯತೆಯನ್ನು ವಿರೋಧಿಸಿ ೨೦೨೫ರ ಮಾರ್ಚ್ ೨೪ ಮತ್ತು ೨೫ರಂದು ದೇಶಾದ್ಯಂತ ಎಲ್ಲ ಇಪಿಎಫ್‌ಓ ಕಚೇರಿಗಳ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಲಾಗಿದೆ.

ಅದೇರೀತಿ ಬೀದರಿನಲ್ಲಿ ಮಾರ್ಚ್ ೨೫ರಂದು ಮಂಗಳವಾರ ಇಪಿಎಸ್-೯೫ ನ್ಯಾಕ್ ವತಿಯಿಂದ ಪ್ರತಿಭಟನೆ ನಡೆಸಿ ಪ್ರಾವಿಡೆಂಟ್ ಫಂಡ್ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಮ್ಮ ಬೇಡಿಕೆಗಳಿಗೆ ಶೀಘ್ರ ಪರಿಹಾರ ಸಿಗದಿದ್ದರೆ ದೆಹಲಿ ಸೇರಿದಂತೆ ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಇಪಿಎಸ್-೯೫ ಪಿಂಚಣಿದಾರರು ಎಚ್ಚರಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಇಪಿಎಸ್ ಪಿಂಚಣಿದಾರರ ಘಟಕದ ಉಪಾಧ್ಯಕ್ಷ ಶಿವಕುಮಾರ ಶೆಟಕಾರ್, ಕಾನೂನು ಸಲಹೆಗಾರ ನರಸಪ್ಪ, ಸಂಯೋಜಕ ಸುರೇಶ ಬಾಬು, ಬಸಯ್ಯ ಸ್ವಾಮಿ, ಸತ್ಯಕುಮಾರ ಮತ್ತಿತರ ಸದಸ್ಯರು ಸೇರಿದಂತೆ ಸುಮಾರು ೬೦ ಸದಸ್ಯರು ಪಾಲ್ಗೊಂಡಿದ್ದರು.

prajaprabhat

Recent Posts

SSC 14,582 ಹುದ್ದೆಗಳಿಗೆ ಅರ್ಜಿ ಆಹ್ವಾನ

ಜೂನ್ 9 ರಂದು 14,582 ಹುದ್ದೆಗಳಿಗೆ SSC CGL 2025 ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು…

51 minutes ago

2000 ವರ್ಷಗಳ ಹಿಂದೆ ಬೌದ್ಧಧರ್ಮದ ಆಗಮನವನ್ನು ಗುರುತಿಸುವ ಪೋಸನ್ ಪೋಯವನ್ನು ಶ್ರೀಲಂಕಾ ಆಚರಿಸುತ್ತಿದೆ.

ಶ್ರೀಲಂಕಾ ಇಂದು ಪವಿತ್ರ ಪೋಸನ್ ಪೋಯ ಹಬ್ಬವನ್ನು ಆಚರಿಸುತ್ತಿದೆ, ಇದು 2,000 ವರ್ಷಗಳ ಹಿಂದೆ ಬೌದ್ಧಧರ್ಮದ ಐತಿಹಾಸಿಕ ಆಗಮನವನ್ನು ಸೂಚಿಸುತ್ತದೆ.…

1 hour ago

ದಕ್ಷಿಣ ಭಾರತದಲ್ಲಿ ಭಾರೀ ಮಳೆ, ಪೂರ್ವ-ಮಧ್ಯ ಭಾರತದಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ: ಐಎಂಡಿ ಮುನ್ಸೂಚನೆ

ಹೊಸ ದೆಹಲಿ.10.ಜೂನ್.25:- ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ಒಳನಾಡು, ಕೇರಳ, ಮಾಹೆ, ಒಡಿಶಾ, ರಾಯಲಸೀಮಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್…

2 hours ago

ಹಣಕಾಸು ಸಚಿವ ಸೀತಾರಾಮನ್ ಅಧ್ಯಕ್ಷತೆಯಲ್ಲಿ 6ನೇ NIIF ಜಿಸಿ ಸಭೆ.

ಹೊಸ ದೆಹಲಿ.10.ಜೂನ್.25:- ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ…

2 hours ago

ಭಾರತೀಯ ಯುವಕರು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಸೃಷ್ಟಿಕರ್ತರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ, ಐಐಟಿಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ: ಲೋಕಸಭಾ ಸ್ಪೀಕರ್

ಹೊಸ ದೆಹಲಿ.10.ಜೂನ್.25:- ಭಾರತವು ತನ್ನ ಯುವ ಪ್ರತಿಭೆ ಮತ್ತು ತಾಂತ್ರಿಕ ನಾವೀನ್ಯತೆಗಳ ಬಲದ ಮೂಲಕ ಸಮಕಾಲೀನ ಸವಾಲುಗಳನ್ನು ಎದುರಿಸುವಲ್ಲಿ ಜಾಗತಿಕ…

2 hours ago

ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದ ಶೆಲ್ ದಾಳಿಯಿಂದ ಹಾನಿಗೊಳಗಾದ 2060 ಮನೆಗಳಿಗೆ ಸರ್ಕಾರ 25 ಕೋಟಿ ನೆರವು ನೀಡಲಿದೆ.

ಹೊಸ ದೆಹಲಿ.10.ಜೂನ್.25:- ಗಡಿ ಪ್ರದೇಶಗಳಲ್ಲಿ ಹಾನಿಗೊಳಗಾದ 2,060 ಮನೆಗಳಿಗೆ ಸರ್ಕಾರ ಹೆಚ್ಚುವರಿ 25 ಕೋಟಿ ರೂಪಾಯಿಗಳನ್ನು ಒದಗಿಸಲಿದೆ. ಆಪರೇಷನ್ ಸಿಂಧೂರ್…

3 hours ago