ಬೀದರನಲ್ಲಿ ಎಕೆಬಿಎಂಎಸ್‌ನಿoದ ಉತ್ತಮ ಕೆಲಸ ನಡೆಯುತ್ತಿದೆ : ಎಸ್. ರಘುನಾಥ.

ಸಚಿವ ದಿನೇಶ ಗುಂಡುರಾವ, ಅಧ್ಯಕ್ಷ ಎ. ಜಯಸಿಂಹರನ್ನು ಭೇಟಿ ಮಾಡಿದ ಬೀದರ ಎಕೆಬಿಎಂಎಸ್ ತಂಡ

ಬೀದರ.28.ಜೂನ್.25:- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಜಿಲ್ಲಾಧ್ಯಕ್ಷರಾದ ವೆಂಕಟೇಶ ಕುಲಕಣ ð ಗುರುವಾರದಂದು ಬೆಂಗಳೂರಿನಲ್ಲಿ ರಾಜ್ಯ ಅಧ್ಯಕ್ಷ ಎಸ್. ರಘೂನಾಥ ಅವರನ್ನು ಭೇಟಿ ಮಾಡಿ  ಜಿಲ್ಲೇಯಲ್ಲೆ  ನಡೆಯುತ್ತಿರುವ ಎಕೆಬಿಎಂಎಸ್ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಬೀದರನಲ್ಲಿ  ಬ್ರಾಹ್ಮಣ ಸಮುದಾಯದವರಿಗೆ  ಸಮುದಾಯ ಭವನಕ್ಕಾಗಿ ಸ್ಥಳ ವಿಕ್ಷಣೆ ಕೂಡಾ ಮಾಡಲಾಗಿದ್ದು ಅದು ತೆಗೆದುಕೊಳ್ಳುವ ಸಮಯದಲ್ಲಿ ತಾವು ಸಹಕರಿಬೇಕು ಅಲ್ಲದೇ ಬೀದರನಲ್ಲಿ   ಎಕೆಬಿಎಂಎಸ್ ಕಛೇರಿ ಉದ್ಘಾಟನೆಗೆ ಬರಬೇಕೆಂದು ಮನವಿ ಮಾಡಿದರು.

ಈ ಸಮಯದಲ್ಲಿ ರಾಜ್ಯ ಅಧ್ಯಕ್ಷ  ಎಸ್ ರಘುನಾಥ ಅವರು ಮಾತನಾಡಿ  ಬೀದರ ಜಿಲ್ಲೇಯಲ್ಲಿ ಉತ್ತಮ ರೀತಿಯಿಂದ ಕೆಲಸ ಮಾಡುತ್ತಿದ್ದು ಇನ್ನೂ ಹೆಚ್ಚಿನ ರೀತಿಯಿಂದ ಕೆಲಸ ಮಾಡಿ ಸಮುದಾಯದ ಅಭಿವೃದ್ದಿಗೆ ಶ್ರಮಿಸಿ ಎಂದ ಅವರು ಕಛೇರಿ ಉದ್ಘಾಟನೆ ಬರುತ್ತೆನೆ ಎಂದು ಭರವಸಿ ನೀಡಿ ನಿಮ್ಮ ಎಲ್ಲಾ ಕೆಲಸಗಳಿಗೂ ರಾಜ್ಯ ಘಟಕ ಸಹಕರಿಸುತ್ತದೆ ಎಂದು ಹೇಳಿದರು.

ನಂತರ ಅಲ್ಲಿಂದ  ಆರೋಗ್ಯ ಮತ್ತು ಕುಟುಂದ ಕಲ್ಯಾಣ ಸಚಿವರಾದ ದಿನೇಶ ಗುಂಡುರಾವ ಅವರನ್ನು ಬೇಟಿ ಮಾಡಿ ಅವರನ್ನು ಸನ್ಮಾನಿಸಿ  ಸಮುದಾಯದ ಅಭಿವೃದ್ದಿಗಾಗಿ ಸಹಕರಿಸಬೇಕೆಂದು ಮನವಿ ಸಲ್ಲಿಸಲಾಯಿತು.

ಸಚಿವ ದಿನೇಶ ಗುಂಡುರಾವ ಮಾತನಾಡಿ  ಬ್ರಾಹ್ಮಣ ಸಮುದಾಯ ಯಾವುದೇ ಕೆಲಸವಿದ್ದರೆ ಹೇಳಿ ಅದನ್ನೂ ಮಾಡುತ್ತೇನೆ ಹಾಗೂ ಸಮುದಾಯದ  ಅಭಿವೃದ್ದಿಗಾಗಿ ನಾನು ಎಲ್ಲಿ ಕರೆದರು ಬರಲು ಸಿದ್ದ ಎಂದು ಭರವಸೆ ನೀಡಿದರು ನಂತರ ಬ್ರಾಹ್ಮಣ ಅಭಿವೃದ್ದಿ ಮಂಡಳಿ ನಿಗಮದ ಅಧ್ಯಕ್ಷರಾದ. ಎ ಜಯಸಿಂಹ ಅವರನ್ನು ಬೇಟಿ ಮಾಡಿ ಸನ್ಮಾನಿಸಿ  ಬೀದರ ಜಿಲ್ಲೇಗೆ ಶವ ವಾಹಿನಿ ( ವೈಕುಂಟ ವಾಹಿನಿ)  ಬ್ರಾಹ್ಮಣ ಅಭಿವೃದ್ದಿ ಮಂಡಳಿಯಿoದ ನೀಡಬೇಕೆಂದು ಹಾಗೂ ಬ್ರಾಹ್ಮಣ ಸಮುದಾಯಕ್ಕೆ  ನಿಗಮದಿಂದ ಹೆಚ್ಚಿನ ಅನುಕೂಲ ಮಾಡಿ ಕೊಡಬೇಕೆಂದು ಮನವಿ ಸಲ್ಲಿಸಲಾಯಿತು. ಶವ ವಾಹಿನಿ ( ವೈಕುಂಟ ವಾಹಿನಿ)   ನೀಡುವುದಾಗಿ ಭರವಸೆ ನೀಡಿದರು.

ಈ  ಎಲ್ಲಾ ಬೇಟಿ ಸಮಯದಲ್ಲಿ ಎಕೆಬಿಎಂಎಸ್  ರಾಜ್ಯ ಜಂಟಿ ಕಾರ್ಯದರ್ಶಿ ರಾಜೇಶ ಕುಲಕಣ ð, ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಷ ಕುಲಕಣ ð ಹಾಗೂ ತಾಲ್ಲೂಕಾ ಅಧ್ಯಕ್ಷ ಮನೋಹರ ದಂಡೆ ಉಪಸ್ಥಿತರಿದ್ದರು.

prajaprabhat

Recent Posts

ಅಭಿ ಪಿಕ್ಚರ್ ಬಾಕಿ ಹೈ; ರಾಹುಲ್ ಗಾಂಧಿ ಹೇಳಿಕೆ ಕುತೂಹಲಕೆ ಕಾರಣ.

ಅಭಿ ಪಿಕ್ಚರ್ ಬಾಕಿ ಹೈ; ಅಣು ಬಾಂಬ್ ಬೆನ್ನಲ್ಲೇ ಕುತೂಹಲ ಮೂಡಿಸಿದ ರಾಹುಲ್ ಹೇಳಿಕೆ ಚುನಾವಣಾ ಆಯೋಗವು 'ಒಬ್ಬ ವ್ಯಕ್ತಿ,…

32 minutes ago

ನವದೆಹಲಿ: ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ NHRC ಎರಡು ವಾರಗಳ ಆನ್‌ಲೈನ್ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಹೊಸ ದೆಹಲಿ.12.ಆಗಸ್ಟ್.25:- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಇಂದು ನವದೆಹಲಿಯಲ್ಲಿ ತನ್ನ ಎರಡು ವಾರಗಳ ಆನ್‌ಲೈನ್ ಅಲ್ಪಾವಧಿಯ ಇಂಟರ್ನ್‌ಶಿಪ್…

38 minutes ago

ಕರಾವಳಿ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತೀಯ ಬಂದರು ಮಸೂದೆ, 2025 ಅನ್ನು ಲೋಕಸಭೆ ಅಂಗೀಕರಿಸಿದೆ.

ಹೊಸ ದೆಹಲಿ.12.ಆಗಸ್ಟ್.25:- ಲೋಕಸಭೆಯು ಭಾರತೀಯ ಬಂದರುಗಳ ಮಸೂದೆ, 2025 ಅನ್ನು ಅಂಗೀಕರಿಸಿದೆ. ಈ ಮಸೂದೆಯು ಬಂದರುಗಳಿಗೆ ಸಂಬಂಧಿಸಿದ ಕಾನೂನನ್ನು ಕ್ರೋಢೀಕರಿಸಲು,…

46 minutes ago

ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ನಾಲ್ಕು ಹೊಸ ಸೆಮಿಕಂಡಕ್ಟರ್ ಯೋಜನೆಗಳಿಗೆ ₹4,594 ಕೋಟಿಗೆ ಸರ್ಕಾರ ಅನುಮೋದನೆ ನೀಡಿದೆ.

ಹೊಸ ದೆಹಲಿ.12.ಆಗಸ್ಟ್.25:- ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಅಂದಾಜು ನಾಲ್ಕು ಸಾವಿರದ 594 ಕೋಟಿ ರೂಪಾಯಿಗಳ ನಾಲ್ಕು ಹೊಸ ಸೆಮಿಕಂಡಕ್ಟರ್…

56 minutes ago

ಕಚ್ಚಾ ತೈಲ ಬೆಲೆ ಇಳಿಕೆ; ಬ್ರೆಂಟ್ ಮತ್ತು $66.31, WTI ಪ್ರತಿ ಬ್ಯಾರೆಲ್‌ಗೆ $63.53

ಹೊಸ ದೆಹಲಿ.12.ಆಗಸ್ಟ್.25:- ಕಚ್ಚಾ ತೈಲ ಬೆಲೆ ಇಂದು ಕುಸಿದಿದೆ. ಕೊನೆಯದಾಗಿ ವರದಿಗಳು ಬಂದಾಗ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 66…

1 hour ago

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಸಂಸತ್ತು ಹಲವು ಬಾರಿ ಮುಂದೂಡಿಕೆ, 18 ರಂದು ಪುನರಾರಂಭ

ಹೊಸ ದೆಹಲಿ.12.ಆಗಸ್ಟ್.25:- ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆ ಮತ್ತು ರಾಜ್ಯಸಭೆ ಹಲವು…

1 hour ago