ಚಾಮರಾಜನಗರ.11.ಮೇ.25:- ಯಳಂದೂರು: ತಾಲ್ಲೂಕಿನ ಪ್ರಸಿದ್ದಯಾತ್ರ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರವಾದ ಬಿಳಿಗಿರಿರಂಗನ ಬೆಟ್ಟದಲ್ಲಿ ಶನಿವಾರ ಮಹಾ ಬ್ರಹ್ಮರಥೋತ್ಸವವು ಭಾರೀ ಜನಸ್ತೋಮದೊಂದಿಗೆ ವಿಜೃಂಭಣೆಯಿಂದ ಜರುಗಿತು.
ರಥವನ್ನು ವಿವಿಧ ಹೂ ಗಳಿಂದ ಹಾಗೂ ಬಣ್ಣ ಬಣ್ಣದ ಬಟ್ಟೆಯ ತೋರಣಗಳಿಂದ, ಬಾಳೆದಿಂಡು, ಕಬ್ಬುಗಳಿಂದ ಹಾಗೂ ಹೊಂಬಾಳೆಗಳನ್ನು ಇಟ್ಟು ಅಲಂಕರಿಸಿದರು.
ನೋಡುಗರನ್ನು ತನ್ನತ್ತ ಸೆಳೆಯುತ್ತಿತ್ತು.
ಶ್ರೀರಂಗನಾಥಸ್ವಾಮಿಯ ಮೂರ್ತಿಯನ್ನು ಗಿರಿಯಿಂದ ವಿವಿಧ ಹೂ, ಹೊಂಬಾಳೆಗಳಿಂದ ಅಲಂಕರಿಸಿ ಹೊತ್ತು ತಂದು ರಥದೊಳಗೆ ಕೂರಿಸಿದರು.
ಮಹಾ ರಥಕ್ಕೆ ಶಾಸಕ ಎ ಆರ್ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಪೋಲೀಸ್ ವರಿಷ್ಠಾಧಿಕಾರಿ ಕವಿತಾ ರವರು ವಿವಿಧ ಪೂಜೆ ಕೈಂಕರ್ಯಗಳನ್ನು ನೆರವೇರಿಸಿ ಚಾಲನೆ ನೀಡಿದರು
ಇಲ್ಲಿನ ವಿಶೇಷವೆಂದರೆ ಗರುಡು ರಥ ಸುತ್ತಲೂ ಮೂರು ಬಾರಿ ಪ್ರದರ್ಶನ ಮಾಡಿದರೆ ರಥೋತ್ಸವ ಜರುಗುತ್ತದೆ.
ಮಧ್ಯಾಹ್ನ 11.30 ಕ್ಕೆ ಗರುಡ ಪ್ರತ್ಯಕ್ಷವಾಗಿ ಮೂರು ಬಾರಿ ಪ್ರದಕ್ಷಿಣೆ ಮಾಡಿತು ನಂತರ ಭಕ್ತರು ದೇವರಿಗೆ ಘೋಷಣೆ ಗೂಗುತ್ತ ಬ್ರಹ್ಮ ರಥೋತ್ಸವನ್ನು ಎಳೆದರು . ಭಕ್ತರು ಗೋವಿಂದ ಗೋವಿಂದ ಎಂದು ಕೂಗಿ ಎಳೆದರು.
ನವ ದಂಪತಿಗಳು ಹಣ್ಣು ಜವನವನ್ನು ಎಸೆದು ಸಂತಸ ಪಟ್ಟರು.
ಸುಮಾರು 40 ಸಾವಿರಕ್ಕೂ ಹೆಚ್ಚು ಅಂದರೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದರು. ರಥದ ಬೀದಿ ಸಂಪೂರ್ಣವಾಗಿ ಭಾರೀ ಜನರಿಂದ ತುಂಬಿತು.
ಗಿರಿಜನರು ಸಾಂಪ್ರದಾಯಿಕವಾದ ಪೂಜೆ ಸಲ್ಲಿಸಿದರು.
ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಥೋತ್ಸವವು ಮುಕ್ತಾಯಗೊಂಡಿತು. ಭಕ್ತಾದಿಗಳಿಗೆ ಅಲ್ಲಲ್ಲಿ ನೀರುಮಜ್ಜಿಗೆ, ಪಾನಕ, ಕೋಸಂಬರಿ, ವಿತರಣೆ ನಡೆಯಿತು. ಕೆಲವು ಕಡೆ ಅನ್ನಸಂತರ್ಪನೆ ಕೂಡ ನಡೆಯಿತು.
ದೇವಾಲಯದ ಸುತ್ತಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀರಂಗನಾಥಸ್ವಾಮಿಯ ದರುಶನ ಪಡೆದರು. ದೇವಾಲಯದ ಆವರಣದಲ್ಲಿ ಭಕ್ತರು ಹಣ್ಣು ಕಾಯಿ ಇಟ್ಟು ಪೂಜೆಮಾಡಿದರು. ದಾಸಯ್ಯನವರು ಬ್ಯಾಟಮನಿ ಸೇವೆಮಾಡಿ ಶ್ರೀರಂಗನನ್ನು ನೆನೆದರು.
ಭಕ್ತಾದಿಗಳಿಗೆ ಬೆಟ್ಟದ ಮೇಲಿರುವ ದಾಸೋಹದಲ್ಲಿ ಅನ್ನಸಂತರ್ಪನೆ ನಡೆಯಿತು.
ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಮಹೇಶ್, ತಹಶೀಲ್ದಾರ್ ಬಸವರಾಜ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಬಿಳಿಗಿರಿರಂಗನ ಬೆಟ್ಟದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜೆ, ಶ್ರೀನಿವಾಸ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್, ಇನ್ಸ್ ಪೆಕ್ಟರ್ ಆಕಾಶ್, ಪೋಲೀಸ್ ಸಿಬ್ಬಂದಿಗಳಾದ ಜಡೇಸ್ವಾಮಿ,ಸತೀಶ್, ಮಹೇಶ್, ನಂಜುಂಡಸ್ವಾಮಿ, ಹಾಜರಿದ್ದರು
ಪೋಲೀಸ್ ಇಲಾಖೆ. ಅರಣ್ಯ ಇಲಾಖೆ, ಸಾರಿಗೆ ಇಲಾಖೆ, ತುಂಬಾ ಶ್ರಮವಹಿಸಿದರು.
( ಜಾತ್ರೆಯಲ್ಲಿ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳಾದ ಸಾರ್ವಜನಿಕ ಶೌಚಾಲಯ ಕೊರತೆ, ಕುಡಿಯುವ ನೀರಿನ ಕೊರತೆ, ಭಕ್ತಾದಿಗಳಿಗೆ ಅನುಗುಣವಾಗಿ ಬಸ್ ವ್ಯವಸ್ಥೆ ಇಲ್ಲದಿರುವುದು, ರಥೋತ್ಸವ ಮುಗಿದ ಮೇಲೆ ಬಸ್ ಕೊರತೆಯಿಂದ ಜನರು ತಡವಾಗಿ ಬಂದರು.
400 ಕ್ಕೂ ಹೆಚ್ಚು ಪೋಲೀಸ್ ಭದ್ರತೆಯಲ್ಲಿ ಜಾತ್ರೆ ಯಶಸ್ವಿಯಾಗಿ ನಡೆಯಿತು.
ಅಲ್ಲಲ್ಲಿ ನೀರು ಮಜ್ಜಿಗೆ ಪಾನಕ ಕೋಸಂಬರಿ ವಿತರಣೆ ಮಾಡಲಾಯಿತು.
ವರದಿ.ಪ್ರಸನ್ನಕುಮಾರ್ ಕೆಸ್ತೂರು
ಮಿರೇ ಅಸೆಟ್ ಫೌಂಡೇಷನ್ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…
ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…
ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್ನಲ್ಲಿ…
ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…
ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…
ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…