ಬಾದಲಗಾಂವನಲ್ಲಿ ಗ್ರಾ. ಪ. ಅವ್ಯವಾರ  15 ಹಣಕಾಸಿನಲ್ಲಿ ಜಮಾ ಆಗಿರುವ ರೂ. 27,72,950/- ಗುಳುಂ.

ಬೀದರ.07.ಮೇ.25:- ಔರಾದ ತಾಲುಕಿನ ಬಾದಲಗಾಂವ ಗ್ರಾಮ್ ಪಂಚಾಯತೆಲಿ ಅವ್ಯವಾರ ನಡೆದಿರುವ ಬಗ್ಗೆ ಮತ್ತು 15 ಹಣಕಾಸಿನಲ್ಲಿ ಜಮಾ ಆಗಿರುವ ರೂ. 27,72,950/- ಜಮಾ ಆಗಿರುತ್ತದೆ ಅದನ್ನು ಕೇವಲ ಒಂದು ದಿವಸದಲ್ಲಿ ಖರ್ಚು ರೂ. 16,93,910/- ತೋರಿಸಿರುವ ಬಗ್ಗೆ ದೂರು.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬರಿಸುವುದೇನೆಂದರೆ ನಾನು ಜಿಲ್ಲಾಪುರ ಗ್ರಾಮದ ಖಾಯಂ ನಿವಾಸಿಯಾದ ಪ್ರಕಾಶ್ ತಂದೆ ಗಂಗಾರಾಮ್ ರವರು ಈ ದೂರು ಪತ್ರದ ಮೂಲಕ ಮನವರಿಕೆ ಮಾಡುವುದೇನೆಂದರೆ, ಈಗಾಗಲೇ ನಮ್ಮ ಗ್ರಾಮ ಪಂಚಾಯತ್ ಬಾದಲಗಾಂವನಲ್ಲಿ ಅವ್ಯವಹಾರ ಮತ್ತು ಇಲ್ಲಸಲ್ಲದ ಮೋಸ ವಂಚನೆಯನ್ನು ಮಾಡುತ್ತ ಹಾಗೂ ಸರ್ಕಾರದಿಂದ ಬರುವ ಸೌಲಭ್ಯಗಳು ಹಾಗೂ ಸಹಾಯಧನ ಹಾಗೂ ಇತರ ಕೆಲಸ ಕಾರ್ಯಗಳ ಚಟುವಟಿಕೆಯ ಬಿಲ್ಲುಗಳನ್ನು ಕೊಳ್ಳೆ ಹೊಡೆದ ಮಾನ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಅವರ ಅಧಿನದಲ್ಲಿ ಈ ಅವ್ಯವರ ನಡೆದಿರುತ್ತದೆ.

ಸದರಿ 2024-25 ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ದಿನಾಂಕ : 24ನೇ-ಏಪ್ರಿಲ್-2025 ರಂದು ರೂ. 27,72,950/- ಜಮಾ ಆಗಿರುತ್ತದೆ. ಆದರೆ ಯಾವುದೇ ಕಾರ್ಯ ಚಟುವಟಿಕೆಗಳನ್ನು ಆಗದೆ ಈ, ಗ್ರಾಮ ಪಂಚಾಯತ್ ಖಾತೆಗೆ ಜಮಾ ಆಗಿರುವ ಮೊತ್ತದಲ್ಲಿ ರೂ. 16,93,910/- ರೂಪಾಯಿಗಳನ್ನು ಖರ್ಚು ವೆಚ್ಚವನ್ನು ತೋರಿಸಿ, ಖಾತೆಯಲ್ಲಿ ಮೊತ್ತವನ್ನು ವಿಡ್ರಾಲ್ ಮಾಡಿಕೊಂಡಿರುತ್ತಾರೆ. ಹಾಗಾಗಿ ತಾವುಗಳು ಈ ಎಲ್ಲಾ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡು ಯಾವ 1 ಕೆಲಸ ಕಾರ್ಯಕ್ಕೆ ಮತ್ತು ಯಾವ ವರದಿಯ ಆಧಾರದ ಮೇಲೆ ಹಣವನ್ನು ವಿಡ್ರಾಲ್ ಮಾಡಲಾಗಿದೆ ಎಂಬುದರ ಬಗ್ಗೆ ತಾವು ಪರಿಶೀಲಿಸಿ, ಹಾಗೂ ತಪ್ಪಿಸ್ಥ ಪಿ.ಡಿ.ಓ. ಹಾಗೂ ಕಾರ್ಯದರ್ಶಿಗೆ ತಾವು ಕಾನೂನಾತ್ಮಕ ಕ್ರಮ ಕೈಗೊಂಡು, ಶಿಕ್ಷೆಗೆ ಗುರಿ ಪಡಿಸುವಂತೆ 4 ಕೋರಿದ್ದೇವೆ.

ಅದೇ ರೀತಿಯಾಗಿ ಪಿ.ಡಿ.ಓ. ಅಧಿಕಾರಿ ಅವರ ಮುಂಬಡ ಮತ್ತು ಯಾವುದೇ ಕಾರ್ಯಚಟುವಟಿಕೆ ಸರ್ಕಾರಿ ಸೌಲತ್ತುಗಳು ಇವರಿಗೆ ನೀಡಬಾರದೆಂದು ಈ ದೂರು ಪತ್ರದ ಮೂಲಕ ತಮಗೆ ತಿಳಿಪಡಿಸಲಾಗಿದೆ. ಮತ್ತು 15ನೇ ಹಣಕಾಸಿನ ಕಾರ್ಯ ಚಟುವಟಿಕೆಗೆ ಬಂದಿರುವ ಮೊತ್ತವನ್ನು ತಮ್ಮ ದೋರಾಲೋಚನೆಯಿಂದ, ಕಳ್ಳ ಸಾಗಾಣಿಕೆಯ ಕಾರ್ಯ ಚಟುವಟಿಕೆಗಳು ಮತ್ತು ಬೋಗಸ್ ಬಿಲ್ಲುಗಳನ್ನು ಹಾಕಿ ಸರಕಾರಕ್ಕೆ ಮತ್ತು ಗ್ರಾಮ ಅಭಿವೃದ್ಧಿಗೆ ವಂಚನೆ ಮಾಡಿರುವಂತಹ ಅನಿಷ್ಠ ಅಧಿಕಾರಿಗಳನ್ನು ತಾವು ಕುಲಂಕುಶವಾಗಿ ಪರಿಶೀಲನೆ ವರದಿಯನ್ನು ಮತ್ತು ಕಾರ್ಯ ಚಟುವಟಿಕೆಗಳ ಸ್ಥಳ ಪರಿಶೀಲನೆಯನ್ನು ಮಾಡುವಂತೆ ವಿಶೇಷ ಅಧಿಕಾರಿಗಳ ನೇಮಕಾತಿ ಮಾಡಿ ಇವರುಗಳ ವಿರುದ್ಧ ತನಿಖೆಯನ್ನು ನಡೆಸುವುದಾಗಿ ತಮ್ಮಲ್ಲಿ ಈ ಪತ್ರದ ಮೂಲಕ ವಿನಂತಿಸಿಕೊಳ್ಳಲಾಗಿದೆ. ಹಾಗೂ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ. ವಂದನೆಗಳೊಂದಿಗೆ,

prajaprabhat

Recent Posts

ʼರೋಹಿತ್ ವೇಮುಲ ಕೇಂದ್ರಕ್ಕೆ ಪತ್ರ ಬರೆದ ವಿಶ್ವಸಂಸ್ಥೆ.

ಬೆಂಗಳೂರು.09.ಜೂನ್.25:- ಕೇಂದ್ರೀಯ ವಿಶ್ವವಿದ್ಯಾಲಯ ಹೈದರಾಬಾದ್ ತೆಲಂಗಾಣಾ ರೋಹಿತ್ ಬೇಮುಲ ಅವರಮೇಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ, ಜಾತಿ ದೌರ್ಜನ್ಯವನ್ನು…

3 hours ago

ವಿದ್ಯಾರ್ಥಿ ವೇತನ ಕೈಪಿಡಿ: ಮಿರೇ ಅಸೆಟ್ ಫೌಂಡೇಷನ್‌

ಮಿರೇ ಅಸೆಟ್ ಫೌಂಡೇಷನ್‌ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…

11 hours ago

AllA ಅವರ “ಯೋಗ ಸಮಾವೇಶ” ಕಾರ್ಯಾಗಾರ ಇಂದು ಪ್ರಾರಂಭವಾಗಿದೆ

ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…

12 hours ago

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

12 hours ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

12 hours ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

12 hours ago