ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಕೂಡಲೇ ಪಾವತಿಸಲು ಗ್ರಾಹಕರಲ್ಲಿ ಮನವಿ


ಬೀದರ.13.ಮೇ.25:- ಕೆಲ ತಿಂಗಳುಗಳಿoದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಕೂಡಲೇ ಬಾಕಿ ಪಾವತಿಸಬೇಕೆಂದು ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಮನವಿ ಮಾಡಿದ್ದು, ನಗರದ ಹಲವಾರು ಬಡಾವಣೆಗಳ ನೂರಾರು ಗ್ರಾಹಕರು ಕೆಲ ತಿಂಗಳುಗಳಿAದ ಬಾಕಿ ಇರಿಸಿಕೊಂಡಿದ್ದು, ಅಂಥವರು ಪಾವತಿಸಬೇಕು. ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂಥ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಬಡಾವಣೆಗಳ ವಿವರ: ಬೀದರ ನಗರದ ಗುಂಪಾ, ಮೈಲೂರ್, ಸಿ.ಎಮ್.ಸಿ ಕಾಲೋನಿ, ಸಿದ್ರಾಮಯ್ಯಾ ಲೇಔಟ್ , ಚಿಟ್ಟಾ ಕ್ರಾಸ್, ಚಿದ್ರಿ, ವಿದ್ಯಾನಗರ ಕಾಲೋನಿ, ಹಾರೂರಗೇರಿ, ಬಸವನಗರ, ರಾಂಪೂರೆ ಕಾಲೋನಿ, ಕೆ.ಇ.ಬಿ.ಕಾಲೋನಿ, ನಂದಿ ಕಾಲೋನಿ , ಗಾಂಧಿ ಗಂಜ, ಮಂಗಲ್ ಪೇಟ್, ಗವಾನ್ ಚಾಕ್, ಎಸ್.ಪಿ. ಮನೆ ಹತ್ತಿರ , ನಯಕಮಾನ್ , ಶಾಪೂರ್ ಗೇಟ್ ಎರಿಯಾ, ಶಹಾಗಂಜ, ಅಂಬೇಡ್ಕರ್ ಚೌಕ್, ಭೀಮನಗರ, ನೌಬಾದ್, ಪ್ರತಾಪನಗರ, ಮಾಧವ ನಗರ, ಶಿವನಗರ, ಸಿದ್ದಾಥ9 ಕಾಲೇಜು, ನವದಗೇರಿ, ಚಿಕ್ಕಪೇಟ್, ಮಣಿಗೆ ಲೇಔಟ್, , ಜೇಲ್ ಕಾಲೋನಿ, ಕೆ.ಎಚ್.ಬಿ. ಕಾಲೋನಿ, ಗುರುನಗರ, ದೇವಿ ಕಾಲೋನಿ, ಓಲ್ಡ್ ಆದಶ ಕಾಲೋನಿ, ನ್ಯೂ ಆದರ್ಶ ಕಾಲೋನಿ, ರಾಮನಗರ, ಜ್ಯೋತಿ ಕಾಲೋನಿ, ಯಲ್ಲಾಲಿಂಗ್ ಕಾಲೋನಿ, ಆಟೋನಗರ, ಕೆ.ಆಯ್.ಡಿ.ಬಿ. ಲೇಔಟ್, ಲಾಡಗೇರಿ, ಹೂಗೇರಿ, ಮೋಹನ ಮಾರ್ಕೆಟ್, ಅಕ್ಕಾಮಹಾದೇವಿ ಕಾಲೋನಿ, ಗುನ್ನಳ್ಳಿ, ಗೋರನಳ್ಳಿ, ಹನುಮಾನ ನಗರ, ಮೈಲೂರ್ ಕ್ರಾಸ್, ಎಡನ್ ಕಾಲೋನಿ, ನರಸಿಂಗ್ ಝರನಾ ಮುಂತಾದ ಪ್ರದೇಶಗಳಲ್ಲಿನ ಗ್ರಾಹಕರು ಬಾಕಿ ಇರಿಸಿಕೊಂಡಿದ್ದಾರೆ.
ಈ ಗ್ರಾಹಕರು ತಮ್ಮ ಬಿಲ್ ಬಾಕಿಯನ್ನು ನಿಗದಿತ ದಿನಾಂಕದoದು ಅಥವಾ ಅದಕ್ಕೂ ಮೊದಲು ಪಾಲವತಿಸಲು ಕೋರಲಾಗಿದೆ.


ಒಂದು ತಿಂಗಳಿಗಿoತ ಹೆಚ್ಚು ಕಾಲ ಬಾಕಿ ಪಾವತಿಸದ ಗ್ರಾಹಕರಿಗೆ ಸಂಪರ್ಕ ಕಡಿತಗೊಳಿಸುವ ನೋಟಿಸ್ ನೀಡಿ ನಂತರ ಸಂಪರ್ಕವನ್ನು ಕೊನೆಗೊಳಿಸಲಾಗುತ್ತದೆ.

ಆ ಬಳಿಕ 1976 ಬಾಕಿ ವಸೂಲಾತಿ ಕಾಯ್ದೆಯ ಕೆ.ಇ.ಆರ್.ಸಿ ಸೆಕ್ಷನ್ (4) ರ ಮಾನ ದಂಡಗಳ ಪ್ರಕಾರ ಫಾಮ9 ಎ ಮತ್ತು ಫಾರ್ಮ (ಬಿ) ನೀಡಲಾಗುತ್ತದೆ. ಅಲ್ಲದೇ ಸೆಕ್ಷನ್ 6 ರ ಅನ್ವಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಬಾಕಿ ವಸೂಲಾತಿ ಕಾಯ್ದೆ 1976 ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾಯ್ದೆಯು ಜೆಸ್ಕಾಂಗೆ ಆಸ್ತಿ ಮುಟ್ಟುಗೋಲಿಗೆ ಅಧಿಕಾರ ನೀಡುತ್ತದೆ.


ಮೇ 31 ರೊಳಗೆ ಬಿಲ್ ಬಾಕಿ ಮೊತ್ತ ಪಾವತಿಸದಿದ್ದರೇ ಅಂತಹ ಗ್ರಾಹಕರಿಗೆ (ವೈಯಕ್ತಿಕ) ಹೆಸರು ಆರ್ ಆರ್. ನಂ. ಬಾಕಿ ಮೊತ್ತದ ವಿವರಗಳನ್ನು ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದಲ್ಲದೇ 1976 ರ ಬಾಕಿ ಮರೂ ಪಾವತಿ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

prajaprabhat

Recent Posts

ರಾಜ್ಯದ್ಯಂತ್ 6,598 ಗ್ರಾಮ ಪಂಚಾಯತ’ಗಳಲಿ ಗ್ರಾಮ ಗ್ರಂಥಾಲಯಗಳು ಮಂಜೂರು.

ಬೆಂಗಳೂರು.23.ಜೂನ್.25:- ರಾಜ್ಯದ್ಯಂತ್ 6,598 ಗ್ರಾಮ ಪಂಚಾಯತ'ಗಳಲಿ ಗ್ರಾಮ ಗ್ರಂಥಾಲಯಗಳು ಮಂಜೂರು. ಕೇಂದ್ರ ಸರ್ಕಾರದ ನೆರವಿನೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು…

21 minutes ago

ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ‘AI’ ಫೇಸ್ ರೆಕಗ್ನಿಷನ್ ಹಾಜರಾತಿ ಕಡ್ಡಾಯ.ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.23.ಜೂನ್.25:- 2025-26  ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಮಕ್ಕಳ ಹಾಜರಾತಿಗೆ ಅತ್ಯಾಧುನಿಕ (Face Recognition Attendance ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು,…

46 minutes ago

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಭಾಗಿಯಾಗುವ ಬಗ್ಗೆ ಅಮೆರಿಕ ನಿರ್ಧಾರ ವಿಳಂಬ ಮಾಡಿದ ನಂತರ ಕಚ್ಚಾ ತೈಲ ಬೆಲೆಗಳು ಕಡಿಮೆಯಾಗುತ್ತವೆ

ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆಯ ಬಗ್ಗೆ ನಿರ್ಧಾರವನ್ನು ಶ್ವೇತಭವನ ವಿಳಂಬ ಮಾಡಿದ ನಂತರ ಇಂದು ಕಚ್ಚಾ ತೈಲ ಬೆಲೆಗಳು ಕಡಿಮೆಯಾದವು.…

6 hours ago

ಮೇ 2025 ರಲ್ಲಿ ಪ್ರಮುಖ ವಲಯಗಳು ದಾಖಲೆಯ ವಿಸ್ತರಣೆಯನ್ನು ಕಂಡಿವೆ.

ದೇಶದ ಕೈಗಾರಿಕಾ ಉತ್ಪಾದನೆಯ ಸುಮಾರು ಐದನೇ ಎರಡರಷ್ಟು ಪಾಲನ್ನು ಹೊಂದಿರುವ ಭಾರತದ ಮೂಲಸೌಕರ್ಯ ಉತ್ಪಾದನೆಯು, ಒಂದು ವರ್ಷದ ಹಿಂದಿನ ಇದೇ…

6 hours ago

ಭಾರತದ ವಿದೇಶಿ ವಿನಿಮಯ ಸಂಗ್ರಹವು 2.2 ಬಿಲಿಯನ್ ಡಾಲರ್‌ಗಳಿಗೂ ಹೆಚ್ಚಾಗಿದೆ

ಜೂನ್ 13 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 2.2 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚಾಗಿ, 698 ಶತಕೋಟಿ…

6 hours ago

ಆರ್ಥಿಕ ವಲಯದ ಜಂಟಿ ಕಣ್ಗಾವಲುಗಾಗಿ ಐಎನ್ಎಸ್ ಟೆಗ್ ಮಾರಿಷಸ್‌ಗೆ ಆಗಮಿಸಿದೆ

ಮಾರಿಷಸ್ ರಾಷ್ಟ್ರೀಯ ಕರಾವಳಿ ಕಾವಲು ಪಡೆಯ (NCG) ಹಡಗುಗಳು ಮತ್ತು ವಿಮಾನಗಳೊಂದಿಗೆ ಮಾರಿಷಸ್ ವಿಶೇಷ ಆರ್ಥಿಕ ವಲಯದ ಜಂಟಿ ಕಣ್ಗಾವಲು…

6 hours ago