ಫ್ರೀ, ಫ್ರೀ  ಮೇ 1ರಿಂದ ದೇಶವಾಸಿಗಳಿಗೆ ಸಿಗಲಿವೆ 10 ಉಚಿತ್ ಸೇವೆಗಳು, ಕೇಂದ್ರ ಸರಕಾರ

ಹೊಸ ದೆಹಲಿ.27.ಏಪ್ರಿಲ್.25:- ಕೇಂದ್ರ ಸರ್ಕಾರ ದೇಶದ ಜನತೆಗಾಗಿ ಪ್ರತಿವರ್ಷ ಹೊಸ ಹೊಸ ಯೋಜನೆಗಳನ್ನು ನೀಡುತ್ತಿರುತ್ತವೆ. ಹಾಗೆ ಹಳೆಯ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಆದೇಶವನ್ನು ಪ್ರಕಟಿಸುತ್ತಿರುತ್ತವೆ.

2025ರಲ್ಲಿಯೂ ಹಲವು ಯೋಜನೆಗಳನ್ನು ಪರಿಚಯಿಸಲಾಗಿದ್ದು, ಈ ಮೂಲಕ ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶವನ್ನು ಸರ್ಕಾರಗಳು ಹೊಂದಿರುತ್ತವೆ.

ಇದರ ಜೊತೆಗೆ ದೇಶವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿರುತ್ತವೆ. ಉಚಿತ ಪಡಿತರ ವಿತರಣೆ, ವಿದ್ಯುತ್, ಶಿಕ್ಷಣ, ಕೌಶಲ್ಯ ತರಬೇತಿ, ಪಿಂಚಣಿ, ತೆರಿಗೆ ಸೇರಿದಂತೆ ಇನ್ನಿತರ ಸೇವೆಗಳನ್ನು ಒಳಗೊಂಡಿರುತ್ತವೆ.

ಮೇ 1ರಿಂದ ದೇಶದ ಜನತೆಗೆ ಉಚಿತವಾಗಿ ಸಿಗಲಿರುವ ಪ್ರಮುಖ 10 ಸೇವೆಗಳ ಮಾಹಿತಿ ಇಲ್ಲಿವೆ.

1.ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (Free Ration Scheme)
ಪ್ರತಿ ತಿಂಗಳು ದೇಶದ 80 ಕೋಟಿ ಜನರು ಈ ಯೋಜನೆಯಡಿಯಲ್ಲಿ 5 ಕೆಜಿ ಗೋಧಿ ಮತ್ತು 1 ಕೆಜಿ ಬೇಳೆಯನ್ನು ಉಚಿತವಾಗಿ ಪಡೆಯುತ್ತಾರೆ. ಮೋದಿ ಸರ್ಕಾರ ಕೋವಿಡ್ ಕಾಲಘಟ್ಟದಲ್ಲಿ ಈ ಯೋಜನೆಯನ್ನು ತಂದಿತ್ತು. ನಂತರ ಈ ಯೋಜನೆಯನ್ನು ಮುಂದುವರಿಸಿಕೊಂಡು ಬಂದಿದೆ. ಮೇ ತಿಂಗಳಲ್ಲಿಯೂ ಈ ಯೋಜನೆಯ ಲಾಭ ಫಲಾನುಭವಿಗಳಿಗೆ ಸಿಗಲಿದೆ.

2.ಪಿಎಂ ಸೂರ್ಯು ಘರ್ ಉಚಿತ ವಿದ್ಯುತ್ ಯೋಜನೆ
ಈ ಯೋಜನೆಯಡಿ 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯುನಿಟ್‌ ಉಚಿತ ವಿದ್ಯುತನ್ನು ಸೋಲಾರ್ ರೂಫ್‌ ಟಾಪ್ ಸಿಸ್ಟಮ್‌ ಮೂಲಕ ನೀಡಲಾಗುತ್ತದೆ. ಈ ಯೋಜನೆಯಿಂದ ಮನೆಗೆ ವರ್ಷಕ್ಕೆ 15 ರಿಂದ 18,000 ರೂಪಾಯಿ ಉಳಿತಾಯವಾಗುತ್ತದೆ.

3.ಯುನೈಫೈಡ್ ಪೆನ್ಷನ್ ಸ್ಕೀಮ್ (UPS – Unified Pension Scheme)
ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಕನಿಷ್ಠ ಮಾಸಿಕ ಪಿಂಚಣಿ 10,000 ರೂ. ನೀಡಲಾಗುತ್ತದೆ. ನೌಕರರು ತಮ್ಮ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ 10% ರಷ್ಟು ಕೊಡುಗೆ ನೀಡಬೇಕು. ಅಸ್ತಿತ್ವದಲ್ಲಿರುವ NPS ಕವರ್ ಹೊಂದಿರುವ ಉದ್ಯೋಗಿಗಳು ಮತ್ತು ಏಪ್ರಿಲ್ 1, 2025 ರ ನಂತರ ನೇಮಕಗೊಂಡವರು ಅರ್ಹರಾಗಿರುತ್ತಾರೆ. ನಿವೃತ್ತಿಯ ನಂತರ ಈ ಯೋಜನೆಯಿಂದಾಗಿ ಆರ್ಥಿಕ ಭದ್ರತೆ ಸಿಗುತ್ತದೆ.

4.ಜಿಎಸ್‌ಟಿ ವಿನಾಯ್ತಿ (GST Exemption)
ಕೇಂದ್ರ ಸರ್ಕಾರ ಹಲವು ವಸ್ತುಗಳಿಗೆ ಜಿಎಸ್‌ಟಿ ವಿನಾಯ್ತಿಯನ್ನು ನೀಡಿದೆ. ಈ ವಿನಾಯ್ತಿ ಮೇ ತಿಂಗಳಲ್ಲಿಯೂ ಮುಂದುವರಿಯಲಿದೆ. ತಾಜಾ ಹಾಲು, ಮೊಸರು, ಮೊಟ್ಟೆ, ಹಣ್ಣು-ತರಕಾರಿ ಮೇಲೆ ಸಂಪೂರ್ಣ ಜಿಎಸ್‌ಟಿ ವಿನಾಯ್ತಿ ಒದಗಿಸಲಾಗಿದೆ. ಎಲ್‌ಸಿಡಿ, ಎಲ್‌ಇಡಿ ಕಾಂಪೊನೆಟ್ಸ್ ಮೇಲೆ ಶೇ.5ರಷ್ಟು ವಿನಾಯ್ತಿ.

5.ಟಿಡಿಎಸ್ ಲಿಮಿಟ್ ಹೆಚ್ಚಳ (TDS Limit Increase)

ಹಿರಿಯ ನಾಗರಿಕರಗಾಗಿ ಬಡ್ಡಿ ಮೇಲಿನ ಟಿಡಿಎಸ್ ಮಿತಿ 50,000 ರೂ.ಗಳಿಂದ 1,00,000 ರೂ.ಗಳಿಗೆ ಏರಿಕೆ
ಡಿವಿಡೆಂಡ್ ಮೇಲೆ 5 ರಿಂದ 10,000 ರೂ.ಗಳಿಗೆ ಏರಿಕೆ
ವಾರ್ಷಿಕ ಬಾಡಿಗೆ ಮೇಲೆ 2,40,00 ರೂ.ಗಳಿಂದ 6,00,000 ರೂಪಾಯಿಗೆ ಏರಿಕೆ
ಪ್ರೊಫೆಷನಲ್ ಅಥವಾ ಟೆಕ್ನಿಕ್ ಸೇವೆಗಳ ಶುಲ್ಕದ ಮೇಲಿನ ಟಿಡಿಎಸ್ ಮಿತಿ 30 ರಿಂದ 50 ಸಾವಿರಕ್ಕೆ ಏರಿಕೆ
6.ನ್ಯೂ ಸ್ಕಿಲಿಂಗ್ ಪ್ರೋಗ್ರಾಂ (New Skill Training Program)
ಮುಂದಿನ 5 ವರ್ಷಗಳಲ್ಲಿ ಈ ಯೋಜನೆಯಡಿ 20 ಲಕ್ಷ ಯುವಕ/ತಿಯರಿಗೆ ತರಬೇತಿ ನೀಡಲಾಗುವುದು. ಈ ವಿಶೇಷ ತರಬೇತಿಯಿಂದ ಯುವ ಸಮುದಾಯಕ್ಕೆ ಉದ್ಯೋಗ ಪಡೆದುಕೊಳ್ಳಲು ಸಹಾಯವಾಗುತ್ತದೆ. ಸ್ಕೂಲ್-ಕಾಲೇಜ್ ಡ್ರಾಪ್ ಔಟ್, ನಿರುದ್ಯೋಗಿಗಳು ಈ ಯೋಜನೆ ಮೂಲಕ ತರಬೇತಿ ಪಡೆದು ಕುಶಲಕರ್ಮಿಗಳು ಆಗಬಹುದು.

7.ಇನ್‌ಟರ್ನ್‌ಶಿಪ್ ಸ್ಕೀಮ್ (Internship Scheme)
ಮುಂದಿನ 5 ವರ್ಷದಲ್ಲ 1 ಕೋಟಿ ಯುವ ಜನತೆಗೆ ಉಚಿತವಾಗಿ ಇಂಟರ್ನ್‌ಶಿಪ್ ನೀಡಲಾಗುತ್ತದೆ. ಈ ವೇಳೆ ಶಿಷ್ಯವೇತನವನ್ನು ಸಹ ನೀಡಲಾಗುತ್ತದೆ. ಇನ್‌ಟರ್ನ್‌ಶಿಪ್ ಬಳಿಕ ಅಲ್ಲಿಯೇ ಉದ್ಯೋಗ ಸಿಗುವ ಸಾಧ್ಯತೆಗಳಿರುತ್ತವೆ.

8.ಕ್ರೆಡಿಟ್ ಗ್ಯಾರಂಟಿ ಸ್ಕೀಮ್ (Credit Guarantee Scheme)
ಈ ಯೋಜನೆಯಡಿಯಲ್ಲಿ ಯಾವುದೇ MSMEsಗೆ ಯಾವುದೇ ಗ್ಯಾರಂಟಿ ಇಲ್ಲದೇ 100 ಕೋಟಿ ರೂಪಾಯಿವರೆಗೆ ಸಾಲ ದೊರೆಯುತ್ತದೆ. ಈ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ತೇಜನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.

9.ಉಚಿತ ಆರೋಗ್ಯ ವಿಮೆ (Free Health Insurance)
ಈ ಯೋಜನೆಯಡಿ ಹೆಲ್ತ್ ವರ್ಕರ್‌ಗೆ 50 ಲಕ್ಷ ರೂ.ವರೆಗಿನ ಆರೋಗ್ಯ ವಿಮೆ ಸಿಗಲಿದೆ. ಕೋವಿಡ್ 19 ಅಥವಾ ಕರ್ತವ್ಯದಲ್ಲಿದ್ದಾಗ ಮೃತರಾದ್ರೆ ಕುಟುಂಬಕ್ಕೆ ಆರ್ಥಿಕ ನೆರವು ದೊರೆಯಲಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಹೆಲ್ತ್ ವರ್ಕರ್‌ಗೆ ಈ ಯೋಜನೆಯ ಲಾಭ ಸಿಗಲಿದೆ.

10.ಉಜ್ವಲ ಯೋಜನೆ (Ujjwala Yojana)
ಈ ಯೋಜನೆಯಡಿ ಬಡವರಿಗೆ ಉಚಿತವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೆನಕ್ಷನ್ ನೀಡಲಾಗುತ್ತದೆ. ಈ ಯೋಜನೆಯೂ ಮೇ ತಿಂಗಳಲ್ಲಿ ಮುಂದುವರಿಯಲಿದೆ.

prajaprabhat

Recent Posts

ವಿದ್ಯಾರ್ಥಿ ವೇತನ ಕೈಪಿಡಿ: ಮಿರೇ ಅಸೆಟ್ ಫೌಂಡೇಷನ್‌

ಮಿರೇ ಅಸೆಟ್ ಫೌಂಡೇಷನ್‌ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…

1 hour ago

AllA ಅವರ “ಯೋಗ ಸಮಾವೇಶ” ಕಾರ್ಯಾಗಾರ ಇಂದು ಪ್ರಾರಂಭವಾಗಿದೆ

ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…

1 hour ago

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

2 hours ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

2 hours ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

2 hours ago

ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆ’ ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…

4 hours ago