ಪೋಲೀಸ್ ಇಲಾಖೆಯ ಸೇವೆಯು ಸಮಾಜಕ್ಕೆ ಅಮೂಲ್ಯವಾದದ್ದು . ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಪ್ರತಿಯೊಬ್ಬರೂ ಕಾನೂನಿನ ಪ್ರಕಾರ ಉತ್ತಮ ಜೀವನ ಮಾಡಬೇಕೆಂದು ಈ ಇಲಾಖೆಯ ಉದ್ದೇಶವಾಗಿದೆ.
ಒಂದು ಗಾದೆ ಮಾತಿದಿದೆ ನೋಡಿ ಮೇಣದ ಬತ್ತಿ ತಾನು ಉರಿದು ಇನ್ನೊಬ್ಬರಿಗೆ ಬೆಳಕನ್ನು ನೀಡುತ್ತದೆ. ಅಂದರೆ ತನ್ನ ವೈಯಕ್ತಿಕ ಬದುಕನ್ನೆ ಸಮಾಜಕ್ಕೆ ತ್ಯಾಗಮಾಡುತ್ತಾರೆ. ಅಂದರೆ ಕಾನೂನಿನ ಪ್ರಕಾರ ಒಂದು ಸೇವೆಯಾಗಿದೆ. ಇವರ ಸೇವೆಗೆ ಪ್ರತಿಯೊಬ್ಬರೂ ಸಲಾಮ್ ಹೊಡೆಯಬೇಕು. ಆದರೆ ಪೋಲೀಸರ ನೋವು ಕೇಳುವವರು ಯಾರು? ಇಲ್ಲ.
ಪೋಲೀಸ್ ಕೆಲಸಕ್ಕೆ ಸೇರಿದ ಮೇಲೆ ತಂದೆ ತಾಯಿ, ಪತ್ನಿ, ಪತಿ, ಮಕ್ಕಳ ಪ್ರೀತಿಗಳಿಂದ ಶುಭ ಕಾರ್ಯಗಳಿಂದ ವಂಚಿತರಾಗಿ ಸದಾ ಕಾನೂನು ರಕ್ಷಣೆಯಲ್ಲಿ ತೊಡಗಿಕೊಳ್ಳುವುದೇ ಅವರ ಕರ್ತವ್ಯವಾಗಿದೆ.
ತಂದೆ, ತಾಯಿ, ಪತಿ, ಪತ್ನಿ, ಮಕ್ಕಳ ಪ್ರೀತಿಯಿಂದ ದೂರವಿರುತ್ತಾರೆ.ಈ ನೋವಿಗೆ ಎಷ್ಟೇ ಹಣ ನೀಡಿದರು ವ್ಯರ್ಥ. ನಾವು ಅಂದುಕೊಳ್ಳಬಹುದು ಇವರಿಗೆ ಸಂಬಳ ಬರುತ್ತದೆ ಇವರ ಜೀವನ ಚೆನ್ನಾಗಿರುತ್ತದೆ ಅಂತ ಆದರೆ ಸಂಬಳದಿಂದ ದೂರವಾಗಿರುವ ಪ್ರೀತಿ ಸಿಗುವುದಿಲ್ಲ. ಹಣದಿಂದ ಯಾವ ಪ್ರೀತಿಯನ್ನು ಕೊಂಡುಕೊಳ್ಳುವುದಕ್ಕೆ ಆಗೋದಿಲ್ಲ ಬಿಡಿ.
ಪೋಲೀಸರು ತಮ್ಮ ಹಕ್ಕುಗಳನ್ನು ಕೇಳುವುದಕ್ಕೆ ಸಂಘಟನೆ ಮಾಡುವುಂತಿಲ್ಲ. ಪೋಲೀಸರು ತಮ್ಮ ಸಮಸ್ಯೆಗಳ ನಿವಾರಣೆಗೋಸ್ಕರ ಪ್ರತಿಭಟನೆ ಮಾಡುವಂತಿಲ್ಲ. ಇಲ್ಲೇ ಅರ್ಥ ಮಾಡಿಕೊಳ್ಳಿ ಅವರ ನೋವನ್ನು ಕೇಳುವವರು ಯಾರು?
ರಾಜಕಾರಣಿಗಳು ಮೊದಲು ಪೋಲಿಸರ ನೋವನ್ನು ಕೇಳಬೇಕು
ಪೋಲೀಸ್ ಕೆಲಸವನ್ನು ಇಷ್ಟಪಟ್ಟು ಸೇರಿಕೊಂಡವರ ಬಳಿ ಹೋಗಿ ಕೇಳಿ ಪೋಲೀಸ್ ಕೆಲಸ ಹೇಗಿದೆ ಅಂತ? ದಯವಿಟ್ಟು ಪೋಲೀಸ್ ಕೆಲಸಕ್ಕೆ ಮಾತ್ರ ಸೇರಿಕೊಳ್ಳಬೇಡಿ. ಯಾವುದೇ ಸರಕಾರಿ ರಜೆ ಸಿಗುವುದಿಲ್ಲ, ವಾರಕ್ಕೆ ಒಂದು ರಜೆ ಹಾಕಿಕೊಳ್ಳಬಹುದು ಆದರೆ ಗಲಾಟೆಗಳು, ತುರ್ತು ಸಂದರ್ಭ ಬಂದಾಗ ರಜೆಯಲ್ಲಿದ್ದರೂ ಕೂಡ ಹೋಗಿ ಕರ್ತವ್ಯ ಮಾಡಬೇಕು ಅದಲ್ಲದೇ ಇನ್ನೂ ಅನೇಕ ಸಮಸ್ಯೆಗಳಿದೆ ಅದನ್ನು ಹೇಳಿಕೊಳ್ಳಬಾರದು ಏಕೆಂದರೆ ಇಲಾಖೆಗೆ ಕೆಲವೊಂದು ಗೌಪ್ಯವಿರುತ್ತದೆ.
ನಾವು ಸಾರ್ವಜನಿಕರಿಗೆ ರಕ್ಷಣೆ ಕೊಡುತ್ತೇವೆ ಆದರೆ ನಮಗೆ ರಕ್ಷಣೆ ಕೊಡುವವರು ಯಾರು ಇಲ್ಲ. ಇಂದು ಪೋಲಿಸರ ಮೇಲೆಯೇ ಸಾರ್ವಜನಿಕರು ಹಲ್ಲೆ ಮಾಡುತ್ತಿದ್ದಾರೆ. ಪೋಲೀಸರು ಸಾರ್ವಜನಿಕರಿಗೆ ಲಾಠಿಯಲ್ಲಿ ಹೊಡೆದರೆ ಪೋಲೀಸರಿಂದ ದಬ್ಬಾಳಿಗೆ ಅಂತಾರೆ ಅದೇ ಸಾರ್ವಜನಿಕರು ಪೋಲೀಸರ ಮೇಲೆ ಸಾರ್ವಜನಿಕವಾಗಿ ಹೊಡೆದಾಗ ನಾವು ಹೊಡೆಸಿಕೊಳ್ಳಬೇಕು ತಿರುಗಿ ಹೊಡೆದರೆ ಪೋಲಿಸರ ದಬ್ಬಾಳಿಕೆ ಅನ್ನುತ್ತಾರೆ.
ಕೆಲ ರಾಜಕಾರಣಿಗಳು ಕೆಲ ಪುಡಾರಿಗಳನ್ನು ಇಟ್ಟುಕೊಂಡಿದ್ದಾರೆ ಅವರಿಗೂ ನಾವು ಗೌರವ ಕೊಡಬೇಕಂತೆ.
ಸರಿಯಾದ ಸಮಯಕ್ಕೆ ಊಟ ಸಿಗುವುದಿಲ್ಲ, ನೆಮ್ಮದಿಯಾಗಿ ಮಲಗುವುದಕ್ಕೆ ಸಮಯವಿರುವುದಿಲ್ಲ. ಯಾವಾಗಲೂ ಕರ್ತವ್ಯ ಕರ್ತವ್ಯ ಅಂತ ಇರಬೇಕಾಗುತ್ತದೆ. ಆದರೆ ಶಕ್ತಿ ಮೀರಿ ನಾವು ಕರ್ತವ್ಯ ಮಾಡುತ್ತೇವೆ ನಾವು ಕೂಡ ಮನುಷ್ಯರು ನಮಗೂ ಕೂಡ ದೈಹಿಕವಾಗಿ ಸಮಸ್ಯೆ ಇರುತ್ತದೆ. ಒತ್ತಡಗಳಿಂದ ಎಷ್ಟೋ ಪೋಲೀಸರಿಗೆ ಬಿಪಿ ಶುಗರ್ ಬಂದು ಈ ಕೆಲಸನೇ ಬೇಡ ಅನ್ನುತ್ತಿದ್ದಾರೆ.
ರಾಜಕಾರಣಿಗಳ ಸಮಾವೇಶ, ಜಾತ್ರೆಗಳು, ಸಿನಿಮಾ ನಟರ ಕಾರ್ಯಕ್ರಮಗಳಲ್ಲಿ ಪೋಲೀಸರು ರಕ್ಷಣೆಯಲ್ಲಿ ಇದ್ದು ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳಬೇಕು ಆ ಸಮಯದಲ್ಲಿ ಪೋಲೀಸರ ಯೋಗಕ್ಷೇಮ ಕೇಳುವವರು ಯಾರು ಇರುವುದಿಲ್ಲ. ವಿರಾಮವಿಲ್ಲದೆ ಕರ್ತವ್ಯ ಮಾಡಬೇಕು.
ಇನ್ನೂ ಅನೇಕ ಸಮಸ್ಯೆಗಳನ್ನು ಪೋಲೀಸರು ಹೆದರಿಸುತ್ತಾರೆ. ಇವರ ರಕ್ಷಣೆಗೆ ಸರಕಾರಗಳು ಗೃಹ ಇಲಾಖೆಯು ಮೊದಲು ಪೋಲೀಸ್ ಸಿಬ್ಬಂದಿಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ ಬಗೆಹರಿಸುವಂತಹ ಕೆಲಸಕ್ಕೆ ಮುಂದಾಗಬೇಕು.
ಪತ್ರಕರ್ತ ಜೆ.ಪ್ರಸನ್ನಕುಮಾರ್ ಕೆಸ್ತೂರು
ಬೆಂಗಳೂರು.14.ಜೂನ್.25:- ಗೃಹ ಆರೋಗ್ಯ ಯೋಜನೆ' ರಾಜ್ಯಾದ್ಯಂತ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.2025-26ನೇ ಸಾಲಿನ ಆಯವ್ಯಯ ಖಂಡಿಕೆ 143 ರಲ್ಲಿ ಘೋಷಿಸಿರುವಂತೆ…
* ರಾಜ್ಯದಲ್ಲಿ ಸರಿಸುಮಾರು 3000 ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇದ್ದು, ಬೆಂಗಳೂರು.14.ಜೂನ್.25:-ವಿಶ್ವ ವಿದ್ಯಾಲಯಗಳಲ್ಲಿ ನುರಿತ ಖಾಯಂ ಪ್ರಾಧ್ಯಾಪಕರೇ…
ಬೆಂಗಳೂರು.14.ಜೂನ್.25:- ಪ್ರಸ್ತಕ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಪ್ರಸ್ತಕ ಸಾಲಿನಲ್ಲಿ ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ…
ಹೊಸ ದೆಹಲಿ.14.ಜೂನ್.25:- (PM VIDYALAXMI SCHEMES) ಕೇಂದ್ರ ಶಿಕ್ಷಣ ಯೋಜನೆ - ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ (ಪಿಎಂ-ವಿದ್ಯಾಲಕ್ಷ್ಮಿ) ಯೋಜನೆ "ಪಿಎಂ…
ಬೆಂಗಳೂರು.14.ಜೂನ್.25:- ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ತಿದ್ದುಪಡಿ ವಿಧೇಯಕವನ್ನೇ ವಿಂಗಡಿಸುವ ಗಂಭೀರ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದೆ.…
ಶಿವಮೊಗ್ಗ.14.ಜೂನ್.25:- ಸೊಸೈಟಿಗಳು ಹಾಗೂ ಟ್ರಸ್ಟ್ಗಳಿಂದ ಖಾಸಗಿ ಕೃಷಿ ವಿಜ್ಞಾನಗಳ ಕಾಲೇಜುಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಹಾಗೂ ಕರ್ನಾಟಕದ ಸೊಸೈಟಿ ನೊಂದಣಿ…