ಪಿಎಚ್.ಡಿ. ಪ್ರವೇಶಾತಿ ಅಧಿಸೂಚನೆ.!

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ – (ಬೆಳಗಾವಿ),ಪಿಎಚ್.ಡಿ. ಪ್ರವೇಶಾತಿ ಅಧಿಸೂಚನೆ 2024-25 ವಿಷಯ: 2024-25 ನೇ ಸಾಲಿಗೆ ಪಿಎಚ್.ಡಿ. ಪದವಿ ಪ್ರವೇಶಾತಿಗಾಗಿ.13-02-2025.

2024-25ನೇ ಸಾಲಿಗೆ ಪಿಎಚ್.ಡಿ. ಪದವಿ (ಪೂರ್ಣಕಾಲಿಕ ಮತ್ತು ಅರೇಕಾಲಿಕ) ಪ್ರವೇಶಾತಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ವಿವಿಧ ವಿಷಯಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ (UUCMS) ಮೂಲಕ

ಪಿಎಚ್.ಡಿ. ಪದವಿಗಾಗಿ ಲಭ್ಯವಿರುವ ವಿಷಯಗಳು:

ರಸಾಯನಶಾಸ್ತ್ರ,

ವಾಣಿಜ್ಯಶಾಸ್ತ್ರ,

ಗಣಕ ವಿಜ್ಞಾನ,

ಅಪರಾಧಶಾಸ್ತ್ರ ಮತ್ತು ವಿಧಿ ವಿಜ್ಞಾನ,

ಅರ್ಥಶಾಸ್ತ್ರ

ಶಿಕ್ಷಣಶಾಸ್ತ್ರ,

ಇಂಗ್ಲೀಷ್,

ಭೂಗೋಳಶಾಸ್ತ್ರ,

ಇತಿಹಾಸ,

ಕನ್ನಡ,

ಮರಾಠಿ,

ಗಣಿತಶಾಸ್ತ್ರ

ಆಡಳಿತ ವ್ಯವಹಾರ ನಿರ್ವಹಣೆ,

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ,

ಸಮಾಜಕಾರ್ಯ,

ರಾಜ್ಯಶಾಸ್ತ್ರ ಮತ್ತು

ಸಮಾಜಶಾಸ್ತ್ರ.

ಅಭ್ಯರ್ಥಿಗಳು ನಿಗದಿತ ನಮೂನೆಯ (Application-A) ಅರ್ಜಿಯನ್ನು UUCMS ಮೂಲಕ https://ucms.karnataka.gov.in ಭರ್ತಿ ಮಾಡುವುದು. ಭರ್ತಿ ಮಾಡಿದ ಅರ್ಜಿಯ ಒಂದು ಮುದ್ರಿತ ಪ್ರತಿಯನ್ನು ( (Hard copy) ದೃಢಕರಿಸಿದ ಪೂರಕ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ಅಂಚೆ ಮುಖಾಂತರ ದಿನಾಂಕ: 03-03-2025ರೊಳಗೆ ಸಂಬಂಧಪಟ್ಟ ವಿಭಾಗಗಳ ಮುಖ್ಯಸ್ಥರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಭೂತರಾಮನಹಟ್ಟಿ ಬೆಳಗಾವಿ-591156 ಈ ವಿಳಾಸಕ್ಕೆ ಸಲ್ಲಿಸತಕ್ಕದ್ದು,

ಸಾಮಾನ್ಯ ಅಭ್ಯರ್ಥಿಯ ಅರ್ಜಿ ಶುಲ್ಕ ರೂ. 2,200/- ಮತ್ತು ಇತರೇ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.1,100/-ಗಳು, ಶುಲ್ಕದ ಡಿ.ಡಿ/ಚಲನ್ ನ್ನು ಹಣಕಾಸು ಅಧಿಕಾರಿಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಇವರಿಗೆ ಆನ್-ಲೈನ್ ಮೂಲಕ ಭರಿಸಿದ ಮೂಲ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.

ಕೊನೆಯ ದಿನಾಂಕ: 03-03-2025ರ ನಂತರ ಅರ್ಜಿ ಸಲ್ಲಿಸುವವರು ಅರ್ಜಿ ಶುಲ್ಕದೊಂದಿಗೆ ದಂಡ ಶುಲ್ಕ ರೂ.300/-ಗಳನ್ನು ದಿನಾಂಕ: 07-03-2025 ರ ಒಳಗಾಗಿ ಸಲ್ಲಿಸತಕ್ಕದ್ದು.

ಕ್ರ.ಸಂ. ವಿವರ ದಿನಾಂಕ ಸೋಮವಾರ 2 3 ಅರ್ಜಿ ಪಡೆಯುವ ದಿನಾಂಕ 17-02-2025 ವಾರಗಳು [ಅರ್ಜಿ ನಮೂನೆಯನ್ನು UUCMSನಲ್ಲಿ ಭರ್ತಿ ಮಾಡಿ ಡೌನ್‌ಲೋಡ್ ಮಾಡಿಕೊಳ್ಳುವುದು ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 03-03-2025 | ಸೋಮವಾರ ದಂಡ ರೂ. 300/- ಸಹಿತಿ ಕೊನೆಯ ದಿನಾಂಕ 07-03-2025

1. ಅರ್ಹತೆ: ಭಾರತೀಯ/ವಿದೇಶಿ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು (50% ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1/ವಿಕಲಚೇತನ) ಅಥವಾ ತತ್ಸಮಾನ ಪದವಿಯಲ್ಲಿ ಅರ್ಹರಾಗಿರಬೇಕು.

2. ದಂಡ ಸಹಿತ ಕೊನೆಯ ದಿನಾಂಕದ ನಂತರ ಬಂದಂತಹ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಮತ್ತು ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

3. ಅಪೂರ್ಣ ಅರ್ಜಿಗಳು ಮತ್ತು ಸಂಬಂಧಪಟ್ಟ ದಾಖಲೆಗಳು ಇಲ್ಲದಿರುವ ಅರ್ಜಿಯನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರನ್ನು ಸಂಪರ್ಕಿಸುವುದು.

4. ಖಾಲಿ ಇರುವ ಸ್ಥಾನಗಳ ಯಾದಿ: ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸ್ಥಾನಗಳು ಈ ಕೆಳಗಿನಂತಿವೆ:



5. ವಿವಿಧ ವಿಭಾಗಗಳ/ವಿಷಯಗಳ (ಕ್ಯಾಟಗೇರಿ ಪ್ರಕಾರ) ಖಾಲಿ ಇರುವ ಸ್ಥಾನಗಳ ಯಾದಿಯನ್ನು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಅಳವಡಿಸಲಾಗಿದೆ.

6. ಜಾತಿ ಪ್ರಮಾಣ ಪತ್ರ ಮತ್ತು ಶುಲ್ಕ ವಿನಾಯಿತಿ: ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳು ತಹಶೀಲ್ದಾರ ಅಥವಾ ಅಧಿಕೃತ ಅಧಿಕಾರಿ ನೀಡಿರುವ ಜಾತಿ ಪ್ರಮಾಣ ಪತ್ರಗಳನ್ನು ಅರ್ಜಿಯ ಜೊತೆ ಸಲ್ಲಿಸುವುದು.                                 ಆದಾಯ ಪ್ರಮಾಣ ಪತ್ರವು ಪ್ರಸ್ತುತ ಅಧಿಸೂಚನೆ ದಿನಾಂಕಕ್ಕೆ ಅನ್ವಯಿಸಿ 05 ವರ್ಷ ಮೀರಿರಬಾರದು ಹಾಗೂ ಆದಾಯವು 2.5 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು. ಅನ್ಯ ವಿಶ್ವವಿದ್ಯಾಲಯಗಳ ಅಭ್ಯರ್ಥಿಗಳು ಆಯ್ಕೆಯಾದಲ್ಲಿ ಪ್ರವೇಶಾತಿ ಸಂದರ್ಭದಲ್ಲಿ.                                                     2 ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾಮಂಡಳ – ಪಿಎಚ್.ಡಿ. ವಿಭಾಗಕ್ಕೆ ನಿಗದಿತ ದಾಖಲೆಗಳನ್ನು ಸಲ್ಲಿಸಿ ಮತ್ತು ಶುಲ್ಕವನ್ನು ಭರಿಸಿ ಅರ್ಹತಾ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸುವುದು.

7. ಸಾಮಾನ್ಯ ಸೂಚನೆಗಳು:

1. ಅರ್ಜಿಯನ್ನು UUCMS ತಂತ್ರಾಂಶದಲ್ಲಿ ತುಂಬುವುದು. ತಾಂತ್ರಿಕ ತೊಂದರೆ ಉಂಟಾದಲ್ಲಿ Application-A ಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಿಂದ ಪಡೆದು, ಸಂಬಂಧಿತ ವಿಭಾಗದ ಮುಖ್ಯಸ್ಥರಿಗೆ ನಿಗದಿತ ಅವಧಿಯೊಳಗಾಗಿ ಸಲ್ಲಿಸುವುದು.

2. ಮೀಸಲಾತಿ ಬಯಸುವ ಅಭ್ಯರ್ಥಿಗಳು ಸಂಬಂಧಿಸಿದ ಜಾತಿ /ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು, ಇಲ್ಲವಾದಲ್ಲಿ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಸಾಮಾನ್ಯ ಅಭ್ಯರ್ಥಿಗಳೆಂದು

3. ಪೂರ್ಣಕಾಲಿಕ ಪಿಎಚ್.ಡಿ. ಬಯಸುವ ಅಭ್ಯರ್ಥಿಗಳು ಮುಚ್ಚಳಿಕೆ ಪತ್ರವನ್ನು ಸಲ್ಲಿಸತಕ್ಕದ್ದು.

4. ಅರೇಕಾಲಿಕ ಸೀಟು ಬಯಸುವ ಅಭ್ಯರ್ಥಿಗಳು ಪೂರ್ಣಕಾಲಿಕ ಹುದ್ದೆಯಲ್ಲಿರಬೇಕು.

5. ಅರೆಕಾಲಿಕ ಪಿಎಚ್.ಡಿ. ಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣ (NOC)ಪತ್ರವನ್ನು ಸಲ್ಲಿಸುವುದು (ಆಯ್ಕೆಯ ಹಂತದಲ್ಲಿ).

6. ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸತಕ್ಕದ್ದು.

7. ಸರ್ಕಾರಿ/ಅರೇಸರ್ಕಾರಿ ಸೇವೆಯಲ್ಲಿ ಇದ್ದಂತಹ ಅಭ್ಯರ್ಥಿಗಳು ಸಂಬಂಧಪಟ್ಟ ಪ್ರಾಧಿಕಾರದ ಮುಖಾಂತರ ಸಲ್ಲಿಸಕ್ಕದ್ದು.

8. ಅರ್ಜಿಗಳನ್ನು ಸಾರ್ವತ್ರಿಕ ರಜೆ ಹಾಗೂ ಒಂದನೇ ಶನಿವಾರ, ಮೂರನೇ ಶನಿವಾರ ಮತ್ತು ಭಾನುವಾರಗಳಂದು ಹೊರತುಪಡಿಸಿ, ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಆಯಾ ವಿಭಾಗಗಳಲ್ಲಿ ಸ್ವೀಕರಿಸಲಾಗುವುದು.

9. ವಿಶ್ವವಿದ್ಯಾಲಯವು ಸೀಟುಗಳನ್ನು ಭರ್ತಿ ಮಾಡುವ ಮತ್ತು ಮಾಡದೇ ಇರುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತದೆ ಹಾಗೂ ಪ್ರಸ್ತುತ ಜಾಲತಾಣದಲ್ಲಿ ಅಳವಡಿಸಿರುವ Ph.D. ಖಾಲಿ ಸೀಟುಗಳ ಸಂಖ್ಯೆಗಳು ಬದಲಾವಣೆಗಳಿಗೆ ಒಳಪಟ್ಟಿರುತ್ತದೆ.

8. ಸೂಚನೆಗಳು:

1. ಆಯ್ಕೆ ಪಟ್ಟಿಯನ್ನು ಘೋಷಿಸುವ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿಗೆ ಸಮಾನ ಅಂಕಗಳು ಬಂದ ಪಕ್ಷದಲ್ಲಿ ಸ್ನಾತಕ ಪದವಿಯ ಅಂಕಗಳನ್ನು ಪರಿಗಣಿಸಲಾಗುವುದು.

2. ಭಾರತೀಯ ಮತ್ತು ವಿದೇಶಿ ಅಭ್ಯರ್ಥಿಗಳು, FIP/QIP ಅಡಿಯಲ್ಲಿನ ಉಪನ್ಯಾಸಕರು ಹಾಗೂ UGC-JRF/UGC-CSIR-JRF/NET/SLET/GATE/GRE ជ ម ថ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ.

3. ಪ್ರವೇಶ ಪರೀಕ್ಷೆ ತೆಗೆದುಕೊಳ್ಳದ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಸಂದರ್ಶನದ ದಿನ. ಸಮಯ ಹಾಗೂ ಸ್ಥಳವನ್ನು ತಿಳಿಸಲಾಗುವುದು. ಇದನ್ನು ವಿಶ್ವವಿದ್ಯಾಲಯದ ವೆಬ್‌ ಸೈಟ್‌ನಲ್ಲಿ ಹಾಕಲಾಗುವುದು. ಪಿಎಚ್.ಡಿ. ಸಂಶೋಧನಾರ್ಥಿಯಾಗಿ ಪ್ರವೇಶ ಪಡೆಯಲು ಅಗತ್ಯವಿರುವ ಮಾಹಿತಿಗಾಗಿ ಕಾಲಕಾಲಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವೆನ್‌ ಸೈಟ್ www.rcub.ac.in ನಲ್ಲಿ ಅಳವಡಿಸುವ ಮಾಹಿತಿಯನ್ನು ಗಮನಿಸುವುದು,



ಲಗತ್ತುಗಳು:


1. S.S.L.C Marks card.    

2. PUC Marks card  

3. UG Degree Marks card and passing certificate                                                                       

4. PG Degree Marks card and passing certificate

5. Caste and Income Certificate


6. PH/HK Certificate (if applicable)

7. UGC-JRF/UGC-CSIR-JRF/NET/SLET/GATEGRE Certificate (if applicable).  

8. Aadhar Card


9. Photo-2

 10. Candidate Signature copy

prajaprabhat

Recent Posts

ʼರೋಹಿತ್ ವೇಮುಲ ಕೇಂದ್ರಕ್ಕೆ ಪತ್ರ ಬರೆದ ವಿಶ್ವಸಂಸ್ಥೆ.

ಬೆಂಗಳೂರು.09.ಜೂನ್.25:- ಕೇಂದ್ರೀಯ ವಿಶ್ವವಿದ್ಯಾಲಯ ಹೈದರಾಬಾದ್ ತೆಲಂಗಾಣಾ ರೋಹಿತ್ ಬೇಮುಲ ಅವರಮೇಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ, ಜಾತಿ ದೌರ್ಜನ್ಯವನ್ನು…

5 hours ago

ವಿದ್ಯಾರ್ಥಿ ವೇತನ ಕೈಪಿಡಿ: ಮಿರೇ ಅಸೆಟ್ ಫೌಂಡೇಷನ್‌

ಮಿರೇ ಅಸೆಟ್ ಫೌಂಡೇಷನ್‌ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…

13 hours ago

AllA ಅವರ “ಯೋಗ ಸಮಾವೇಶ” ಕಾರ್ಯಾಗಾರ ಇಂದು ಪ್ರಾರಂಭವಾಗಿದೆ

ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…

13 hours ago

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

13 hours ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

13 hours ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

14 hours ago